ರಾಷ್ಟ್ರ ರಾಜಧಾನಿ ದೆಹಲಿ(Delhi)ಯ ಗಡಿಯಲ್ಲಿ ಬೆಂಬಲ ಬೆಲೆಗಾಗಿ ಅನ್ನದಾತರು ಪ್ರತಿಭಟನೆ(Protest) ಮಾಡುತ್ತಿದ್ದಾರೆ. ಆದರೆ ಇತ್ತ ಬೆಂಬಲ ಬೆಲೆ ಘೋಷಣೆ ಆಗಿರುವ ಕೊಬ್ಬರಿ ಮಾರಾಟ ಮಾಡಲು ರೈತರು(Farmers) ಪರದಾಡುತ್ತಿದ್ದಾರೆ. ಕೊಬ್ಬರಿ ಖರೀದಿ ಕೇಂದ್ರದಲ್ಲಿ ನೋಂದಣಿಗಾಗಿ ರಾತ್ರೋ ರಾತ್ರಿ ಕ್ಯೂ ನಿಲ್ಲುವ ಪರಿಸ್ಥಿತಿ ಎದುರಾಗಿದೆ. ಸೋಮವಾರದಿಂದ ನೋಂದಣಿ ಮಾಡಲಾಗುತ್ತದೆ ಎನ್ನುವ ಕಾರಣಕ್ಕೆ ಭಾನುವಾರ ರಾತ್ರಿ 8 ಗಂಟೆಯಿಂದ ಸರದಿ ಸಾಲಿನಲ್ಲಿ ರೈತರು ನಿಲ್ಲುವ ಪರಿಸ್ಥಿತಿ ಎದುರಾಗಿದೆ.
ರಾಜ್ಯದಲ್ಲಿ ಅತಿ ಹೆಚ್ಚು ತೆಂಗು ಬೆಳೆಯುವ ಜಿಲ್ಲೆಗಳಾದ ತುಮಕೂರು(Tumkur), ಮಂಡ್ಯ(Mandya), ಹಾಸನ(Hassan) ಜಿಲ್ಲೆಗಳಲ್ಲಿ ರೈತರು ಆಕ್ರೋಶ ಹೊರ ಹಾಕಿದ್ದಾರೆ. ತುಮಕೂರು ಜಿಲ್ಲೆ, ತಿಪಟೂರು(Tiptur) ಕೊಬ್ಬರಿ ಮಾರುಕಟ್ಟೆ ಕೇಂದ್ರದ ಅನ್ನದಾತರು ಮೊಕ್ಕಾಂ ಹೂಡಿದ್ದರು. ರೈತ ಮಹಿಳೆಯರು ಚಾಪೆ ದಿಂಬು ಸಮೇತ ಸರದಿ ಸಾಲಿನಲ್ಲಿ ನಿಂತಿದ್ದರು. ಕೊಬ್ಬರಿ ಖರೀದಿಸಲು ಮತ್ತೆ ಸರ್ಕಾರ ಮುಂದಾಗಿರೋದ್ರಿಂದ ರೈತರ ನೊಂದಣಿ ಪ್ರಕ್ರಿಯೆ ಸೋಮವಾರ(Monday) ಬೆಳಗ್ಗೆ 8 ಗಂಟೆಯಿಂದ ಪ್ರಾರಂಭ ಅನ್ನೋ ಕಾರಣಕ್ಕೆ ಸರತಿ ಸಾಲು ಅನಿವಾರ್ಯ ಅನ್ನೋ ಮಾತನ್ನು ಹೇಳಿದ್ರು.
![](https://pratidhvani.com/wp-content/uploads/2024/02/farmers-protest-94313328.webp)
ಒಟ್ಟು ಮೂರು ಕಡೆ ಕೊಬ್ಬರಿ ಖರೀದಿ ಕೇಂದ್ರ ಸ್ಥಾಪನೆ ಮಾಡಿದ್ದು, ತಿಪಟೂರು ತಾಲೂಕಿನ ಕೊನೆಹಳ್ಳಿ, ಕರಡಾಳು ಸಂತೆ, ತಿಪಟೂರು ನಗರದ APMC ಆವರಣದಲ್ಲಿ ನೋಂದಣಿ ಮತ್ತು ಖರೀದಿಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಳೆದ ಬಾರಿ ಸರ್ವರ್(Server) ಸಮಸ್ಯೆ ಹಾಗೂ ಕೆಲ ದಲ್ಲಾಳಿಗಳ ಹಾವಳಿಯಿಂದ ನೋಂದಣಿ ಪ್ರಕ್ರಿಯೆಯನ್ನ ಸರ್ಕಾರ ನಿಲ್ಲಿಸಿತ್ತು. ಈಗಲಾದರೂ ಹೆಸರು ನೋಂದಣಿ ಮಾಡಿದರೆ ಕೊಂಚ ಲಾಭ ಸಿಗುವ ನಿರೀಕ್ಷೆ ಇದೆ. ಇಲ್ಲದಿದ್ದರೆ ಮತ್ತೆ ಕನಿಷ್ಟ ಬೆಂಬಲ ಬೆಲೆ ಪಡೆಯಲು ಆಗಲ್ಲ ಎಂದಿದ್ದಾರೆ.
ಅತ್ತ ಹಾಸನದಲ್ಲೂ ರೈತರು ಕೊಬ್ಬರಿ ಖರೀದಿ ನೋಂದಣಿಗೆ ಕಾದು ಕುಳಿತಿದ್ದರು. ನೋಂದಣಿ ಕೇಂದ್ರ(Center)ದ ಮುಂದೆ ಸಾವಿರಾರು ಜನ ರೈತರು ಜಮಾಯಿಸಿದ್ದು, ಒಮ್ಮೆಲೆ ರಾತ್ರೋರಾತ್ರಿ ರೈತರ ಜಮಾವಣೆಯಿಂದ ಗೊಂದಲ ಸೃಷ್ಟಿಯಾಗಿತ್ತು. ಚನ್ನರಾಯಪಟ್ಟಣದ ವ್ಯವಸಾಯ ಸೇವಾ ಮಾರಾಟ ಕೇಂದ್ರದಲ್ಲಿ ರೈತರ ನೂಕುನುಗ್ಗಲು ಉಂಟಾಯ್ತು. ಸ್ಥಳದಲ್ಲಿ ಸೂಕ್ತ ಬಂದೋಬಸ್ತ್ ಇಲ್ಲದ ಕಾರಣ ಅಧಿಕಾರಿಗಳ ವಿರುದ್ಧ ರೈತರು(Farmers) ಆಕ್ರೋಶ ಹೊರಹಾಕಿದರು. ನೋಂದಣಿ ಬರುವ ರೈತರಿಗೆ ಯಾವುದೇ ಸೌಲಭ್ಯವೂ ಇಲ್ಲ. ನಿನ್ನಿಯಿಂದ ಸರತಿ ಸಾಲಿನಲ್ಲಿ ಕಲ್ಲುಗಳನ್ನು ಇಟ್ಟುಕೊಂಡು ಇಲ್ಲೇ ಮಲಗಿದ್ದೇವೆ ಎಂದು ಅನ್ನದಾತರು ಅಳಲು ತೋಡಿಕೊಂಡರು.
ಸರ್ಕಾರ(Government) ಕನಿಷ್ಟ ಬೆಂಬಲ(Minimum Price) ಬೆಲೆ ನೀಡಬೇಕು ಎನ್ನುವುದು ನ್ಯಾಯವಾದ ಆಗ್ರಹ. ಇನ್ನು ಸರ್ಕಾರ ಕನಿಷ್ಟ ಬೆಂಬಲ ಬೆಲೆ ಕೊಡುತ್ತದೆ ಅನ್ನೋ ಕಾರಣಕ್ಕೆ ಈ ರೀತಿ ರೈತರನ್ನು ರಾತ್ರಿ ಪೂರ್ತಿ ಕಾಯಿಸುವುದು. ಒಂದೆರಡು ಕಡೆ ಮಾತ್ರ ನೋಂದಣಿ ಕೇಂದ್ರ ಆರಂಭ ಮಾಡುವುದು ಅನ್ಯಾಯದ ಪರಮಾವಧಿ. ಹೋಬಳಿ ಅಥವಾ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ನೋಂದಣಿಗೆ ಅವಕಾಶ ಕಲ್ಪಿಸಿದರೆ ಜನರು ತಾಲೂಕು ಕೇಂದ್ರಕ್ಕೆ ಬರುವುದು ತಪ್ಪಲಿದೆ. ಇಲ್ಲಿದಿದ್ರೆ ಕನಿಷ್ಟ ಬೆಂಬಲ ಬೆಲೆ ಸಿಕ್ಕರೂ ನೋಂದಣಿಗೆ ಆಗಿರುವ ಶ್ರಮದಿಂದ ರೈತರ(Raitha) ಕಣ್ಣು ಒದ್ದೆಯಾಗುತ್ತದೆ. ಬಾಯಲ್ಲಿ ಸರ್ಕಾರವನ್ನು ಶಪಿಸುತ್ತಾರೆ.
#Farmers #Protest #Government #Karnataka #Tumkur