ಈ ಬಾರಿಯ ಮಳೆಗಾಳದ ಆರಂಭದಲ್ಲೇ ಮಹಾಮಾರಿ ಕೊರೋನಾ (Covid 19) ರಾಜ್ಯ ಸೇರಿದಂತೆ ದೇಶಾದ್ಯಂತ ಭೀತಿ ಸೃಷ್ಟಿಸಲು ಆರಂಭಿಸಿದೆ. ಕರ್ನಾಟಕ (Karnataka) ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ದಿನೇ ದಿನೇ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ.

ಇಂದು ದೇಶದಲ್ಲಿ ಕೊರೊನಾ ಸಕ್ರಿಯ ಕೇಸ್ ಗಳ ಸಂಖ್ಯೆ ಬರೊಬ್ಬರಿ 2,710 ಕ್ಕೆ ಏರಿಕೆಯಾಗಿದೆ. ಇಡೀ ದೇಶದಲ್ಲೇ ಹೋಲಿಕೆ ಮಾಡಿದಾಗ ಕೇರಳ (Kerala), ಮಹಾರಾಷ್ಟ್ರದಲ್ಲಿ (Maharashtra) ಹೆಚ್ಚಿನ ಕೊರೊನಾ ಸಕ್ರಿಯ ಕೇಸ್ ಗಳು ಪತ್ತೆಯಾಗಿದೆ. ದಕ್ಷಿಣ ಭಾರತದ ಬಹುತೇಕ ಕೇಸ್ ಗಳು ಈ ಭಾಗದಲ್ಲೇ ದಾಖಲಾಗಿವೆ.
ಇದಕ್ಕೆ ಕಾರಣವೆಂದರೆ ವಿದೇಶಗಳಿಗೆ ಹೋಗಿ ಬರುವ ಜನರ ಸಂಖ್ಯೆ ಕೇರಳದಲ್ಲಿ ಹೆಚ್ಚಾಗಿರುವ ಕಾರಣ, ಟ್ರಾವೆಲ್ ಹಿಸ್ಟರಿ ಇರುವ ಅನೇಕರಲ್ಲಿ ಕೊರೊನಾ ಪಾಸಿಟಿವ್ ರಿಪೋರ್ಟ್ ದಾಖಲಾಗಿದೆ. ಹೀಗಾಗಿ ಕೇರಳದಲ್ಲಿ ಕೊರೊನಾ ಸಕ್ರಿಯ ಕೇಸ್ ಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ.

ಇನ್ನು ಕರ್ನಾಟಕದಲ್ಲೂ ದಿನೇ ದಿನೇ ಕೇಸ್ ಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಅಗತ್ಯ ಮುಂಜಾಗ್ರತಾ ಕ್ರಮ, ಟೆಸ್ಟ್ ಗಳ ಸಂಖ್ಯೆಯಲ್ಲಿ ಹೆಚ್ಚಳ ಸೇರಿದಂತೆ ಒಂದಷ್ಟು ಕ್ರಮಣಗಳನ್ನು ಕೈಗೊಳ್ಳಲಾಗಿದ್ದು, ಕೇರಳದಿಂದ ರಾಜ್ಯಕ್ಕೆ ಆಗಮಿಸುವವರ ಮೇಲೆ ಸರ್ಕಾರ ಈಗಿಂದಲೇ ಕಣ್ಣಿಡಬೇಕಿದೆ.