• Home
  • About Us
  • ಕರ್ನಾಟಕ
Wednesday, December 24, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ

‘ಇಂಡಿಯಾ’ ಹೆಸರು ಇನ್ಮುಂದೆ ಭಾರತ್’ ಆಗುವ ಸಾಧ್ಯತೆ..! ಕೇಂದ್ರದ ನಿರ್ಧಾರಕ್ಕೆ 2 ಕಾರಣ..

ಕೃಷ್ಣ ಮಣಿ by ಕೃಷ್ಣ ಮಣಿ
September 6, 2023
in ಅಂಕಣ, ಅಭಿಮತ
0
‘ಇಂಡಿಯಾ’ ಹೆಸರು ಇನ್ಮುಂದೆ ಭಾರತ್’ ಆಗುವ ಸಾಧ್ಯತೆ..! ಕೇಂದ್ರದ ನಿರ್ಧಾರಕ್ಕೆ 2 ಕಾರಣ..
Share on WhatsAppShare on FacebookShare on Telegram

ಭಾರತ ಹಾಗು ಇಂಡಿಯಾ ಎರಡೂ ಹೆಸರು ನಮ್ಮ ದೇಶದಲ್ಲಿ ಚಾಲ್ತಿಯಲ್ಲಿದೆ. ಚಕ್ರವರ್ತಿ ಭರತ ವರ್ಷ ಆಳಿದ ದೇಶ ಭಾರತ ಎಂದು ಕರೆಯಲ್ಪಟ್ಟರೆ, ಸಿಂಧೂ ನದಿ ತಟದಲ್ಲಿ ಇರುವ ಪ್ರಾಂತ್ಯ ಆಗಿರುವ ಕಾರಣಕ್ಕೆ ಗ್ರೀಕ್‌ ಭಾಷೆಯಲ್ಲಿ ‘ಸಿಂಧೂ’ ನದಿಗೆ ‘ಇಂಡಸ್’ ಎಂದು ಕರೆದಿದ್ದರು. ‘ಇಂಡಸ್’ ನದಿ ಪಕ್ಕದಲ್ಲಿ ನೆಲೆಸಿದ್ದವರು ‘ಇಂಡಿಯನ್ಸ್’ ಎಂದು ಕರೆದಿದ್ದರು. ಆ ಬಳಿಕ ಇಂಡಿಯನ್ಸ್​ ಇರುವ ರಾಷ್ಟ್ರವನ್ನು ಬ್ರಿಟೀಷರು ಇಂಡಿಯಾ ಎಂದು ಕರೆದರು. ಹೀಗಾಗಿ ಭಾರತವನ್ನು ಇಂಡಿಯಾ ಎಂದು ಕರೆಯಲಾಯ್ತು. ಭಾರತದಲ್ಲಿ ಬ್ರಿಟೀಷರು ಆಡಳಿತ ಶುರುವಾದ ಬಳಿಕ ಈಸ್ಟ್​ ಇಂಡಿಯಾ ಕಂಪನಿ ಎನ್ನುವ ಹೆಸರು ಬಂದಿತ್ತು. ಭಾರತದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲೂ ತನ್ನದೇ ಆದ ಪ್ರಭಾವ ಬೀರಿದ್ದು, ಸಂವಿಧಾನದಲ್ಲೂ ವೀ ದ ಪೀಪಲ್ಸ್‌ ಆಫ್‌ ಇಂಡಿಯಾ ಎಂದು ಪೀಠಿಕೆಯಲ್ಲಿ ಸೇರಿಕೊಂಡಿದೆ.

ADVERTISEMENT
ಭಾರತದ ನಾಗರಿಕತೆ
ಪ್ರಾಚೀನ ಭಾರತ

ಈಗ ಹೆಸರು ಬದಲಾವಣೆ ಚರ್ಚೆ ಆಗ್ತಿರೋದು ಯಾಕೆ..?

ಇಲ್ಲೀವರೆಗೂ ಇಂಡಿಯಾ ಎನ್ನುವ ಹೆಸರನ್ನು ತೆಗೆದು ಭಾರತ್​ ಎಂದು ಮರು ನಾಮಕರಣ ಮಾಡುತ್ತೇವೆ ಎಂದು ಕೇಂದ್ರ ಸರ್ಕಾರವೇ ಆಗಲಿ, ಅಧಿಕೃತ ವ್ಯಕ್ತಿಗಳೇ ಆಗಲಿ ಎಲ್ಲಿಯೂ ಹೇಳಿಕೊಂಡಿಲ್ಲ. ಆದರೆ, ಜಿ-20 ಶೃಂಗಸಭೆಯಲ್ಲಿ ಭಾಗಿಯಾಗಲು ಬರುತ್ತಿರುವ ಅಮೆರಿಕ ಅಧ್ಯಕ್ಷರಿಗೆ ರಾಷ್ಟ್ರಪತಿ ಭವನದಿಂದ ಆಹ್ವಾನ ಪತ್ರಿಕೆ ಹೋಗಿದ್ದು, ಅದರಲ್ಲಿ ಭಾರತ್​ ರಿಪಬ್ಲಿಕ್​ಎಂದು ಮುದ್ರಣ ಮಾಡಲಾಗಿದೆ. ಇದು ಕಣ್ತಪ್ಪಿನಿಂದ ಆಗಿರುವ ಅಚಾತುರ್ಯ ಅಲ್ಲ. ರಿಪಬ್ಲಿಕ್​ ಆಫ್​ ಇಂಡಿಯಾ ಎಂದು ಬರೆಯಬೇಕಿದ್ದ ಜಾಗದಲ್ಲಿ ಭಾರತ್​ ರಿಪಬ್ಲಿಕ್​ ಎಂದು ಬರೆದಿರುವುದು ಉದ್ದೇಶ ಪೂರ್ವಕ ಎನ್ನಲಾಗ್ತಿದೆ. ಮುಂಬರುವ ಲೋಕಸಭಾ ವಿಶೇಷ ಅಧಿವೇಷನದಲ್ಲಿ ಈ ಬಗ್ಗೆ ಸಂವಿಧಾನ ತಿದ್ದುಪಡಿ ಮಾಡಲಾಗುವುದು ಎನ್ನುವ ಮಾಹಿತಿ ಹರಿದಾಡ್ತಿದೆ. ಆದರೆ ಕೇಂದ್ರದ ನಿರ್ಧಾರ ಕಾಂಗ್ರೆಸ್​ ಕಣ್ಣು ಕೆಂಪಾಗುವಂತೆ ಮಾಡಿದೆ.

I.N.D.I.A ಒಕ್ಕೂಟದ ಹೆಸರಿಗೆ ಕೇಸರಿ ಕೌಂಟರ್..

ಭಾರತೀಯ ಜನತಾ ಪಾರ್ಟಿ ಕೇಂದ್ರದಲ್ಲಿ ಸತತ 2ನೇ ಬಾರಿ ಆಡಳಿತ ಚುಕ್ಕಾಣಿ ಹಿಡಿದಿದ್ದು, ಈ ಬಾರಿ ಮೋದಿ ನೇತೃತ್ವದ ಬಿಜೆಪಿಯನ್ನು ಕೆಳಗಿಳಿಸಿ ಮೈತ್ರಿಕೂಟದ ಸರ್ಕಾರ ಅಸ್ತಿತ್ವಕ್ಕೆ ತರುವ ಎಲ್ಲಾ ಪ್ರಯತ್ನಗಳು ನಡೆಯುತ್ತಿವೆ. ಇದೇ ಕಾರಣಕ್ಕೆ ಮೈತ್ರಿಕೂಟ ರಚನೆ ಮಾಡಿಕೊಂಡು I.N.D.I.A ಎಂದು ನಾಮಕರಣ ಮಾಡಿದ್ದಾರೆ. ಒಕ್ಕೂಟ ರಚನೆ ಆದ ಬಳಿಕ ಬೆಂಗಳೂರಿನಲ್ಲಿ ಹೆಸರು ಘೋಷಣೆ ಮಾಡಲಾಯ್ತು. ಅಂದೇ ಇಂಡಿಯಾ ವರ್ಸಸ್​​ ಬಿಜೆಪಿ ಎನ್ನುವ ಘೋಷ ವಾಕ್ಯ ಮೊಳಗಿತ್ತು. ಇದೀಗ ಇಂಡಿಯಾ ವರ್ಸಸ್​​ ಬಿಜೆಪಿ ಅನ್ನೋದನ್ನು ತೊಡೆದು ಹಾಕುವ ಉದ್ದೇಶದಿಂದಲೇ ಇಂಡಿಯಾ ಬದಲು ಭಾರತ್​ ಎಂದು ನಾಮಕರಣಕ್ಕೆ ಮುಂದಾಗಿದ್ದಾರೆ. ಇಂಡಿಯಾ ಒಕ್ಕೂಟ ನೋಡಿ ಪ್ರಧಾನಿ ನರೇಂದ್ರ ಮೋದಿಗೆ ಅಸೂಯೆ ಆಗಿದೆ. ಭಯ ಆಗಿದೆ ಎನ್ನುವ ಚರ್ಚೆಗಳು ಆರಂಭ ಆಗಿದೆ.

ಇಂಡಿಯಾ
ಇಂಡಿಯಾ ಮೈತ್ರಿಕೂಟ ಸದಸ್ಯರು

ಹಿಂದಿ ರಾಷ್ಟ್ರ ಭಾಷೆ ಮಾಡಲು ಕೇಂದ್ರದ ಚಿತಾವಣೆ..

ನಮ್ಮ ದೇಶದಲ್ಲಿ ಯಾವುದೇ ರಾಷ್ಟ್ರೀಯ ಭಾಷೆ ಎನ್ನುವುದು ಅಧಿಕೃತವಾಗಿ ಉಲ್ಲೇಖ ಆಗಿಲ್ಲ. ಪ್ರತಿಯೊಂದು ರಾಜ್ಯಗಳು ಭಾಷೆಯ ಆಧಾರದಲ್ಲೇ ರಚನೆ ಆಗಿದ್ದವು. ಆದರೂ ಹಿಂದಿ ಭಾಷಿಕರ ಪ್ರಭಾವದಿಂದ ಉತ್ತರ ಭಾರತದಲ್ಲಿ ಹಿಂದಿ ಒಂದೇ ಭಾಷೆಯಾಗಿ ಉಳಿದುಕೊಂಡಿದೆ. ಉಳಿದೆಲ್ಲಾ ಭಾಷೆಗಳು ಕಣ್ಮರೆ ಆಗಿವೆ. ಇದೀಗ ದಕ್ಷಿಣ ಭಾರತದಲ್ಲಿ ಮಾತ್ರ ಹಿಂದಿ ಬಳಕೆ ಸಾಧ್ಯವಾಗ್ತಿದೆ. ಇದೇ ಕಾರಣಕ್ಕೆ ಕಳೆದ ಚುನಾವಣೆಯಲ್ಲೂ ಕರ್ನಾಟಕದಲ್ಲಿ ಹಿನ್ನಡೆ ಸಾಧಿಸಿತ್ತು. ಭಾರತ್​​ ಎನ್ನುವುದನ್ನು ತಿದ್ದುಪಡಿ ಮಾಡಿ ಜಾರಿ ಮಾಡಿದ್ರೆ, ಇನ್ಮುಂದೆ ಭಾರತ್​ ಹಿಂದಿ ಭಾಷೆಯ ಪದ, ಅನಿವಾರ್ಯವಾಗಿ ಎಲ್ಲಾ ರಾಜ್ಯಗಳಲ್ಲೂ ಭಾರತ್​ ಎಂದೇ ಬಳಸಬೇಕಾಗುತ್ತದೆ. ಭಾರತದ ಹೆಸರೇ ಹಿಂದಿಯಲ್ಲಿರುವಾಗ ಹಿಂದಿಯಲ್ಲಿ ಯಾಕೆ ವ್ಯವಹಾರರಿಕ ಭಾಷೆ ಆಗಬಾರದು ಅನ್ನೋ ಚರ್ಚೆ ಹುಟ್ಟು ಹಾಕ್ತಾರೆ. ಒಂದು ವೇಳೆ ಹಿಂದಿ ವ್ಯವಹಾರಿಕ ಭಾಷೆ ಆದರೆ, ಬಿಜೆಪಿ ತನ್ನ ಅಜೆಂಡಾಗಳನ್ನು ಉತ್ತರ ಭಾರತದ ಹಾಗೆ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲೂ ಹರಡಲು ಸಾಧ್ಯ ಅನ್ನೋ ಕಾರಣಕ್ಕೆ ಹೀಗೆಲ್ಲಾ ಮಾಡ್ತಿದ್ದಾರೆ ಅನ್ನೋ ಮಾತುಗಳು ಕೇಳಿ ಬರ್ತಿವೆ.

ಕೃಷ್ಣಮಣಿ

Tags: 2024 mp electionBharatBJPCongress PartyIndiaನರೇಂದ್ರ ಮೋದಿ
Previous Post

ವಸಾಹತು ಕಾಲದಿಂದ ಅಮೃತಕಾಲದತ್ತ ಇಸ್ರೋ ನಡಿಗೆ- ಭಾಗ 5

Next Post

ರಾಜಸ್ಥಾನ | ಕೋಟಾದಲ್ಲಿ ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ವಿದ್ಯಾರ್ಥಿಗಳೊಂದಿಗೆ ಸಂವಾದ

Related Posts

Top Story

ರೈತರ ಅಭಿವೃದ್ಧಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಹೆಚ್ಚು ಒತ್ತು ನೀಡಬೇಕು: ಎನ್. ಚಲುವರಾಯಸ್ವಾಮಿ.

by ಪ್ರತಿಧ್ವನಿ
December 23, 2025
0

ಹವಾಮಾನ ವೈಪರೀತ್ಯಗಳು, ಮಾರುಕಟ್ಟೆ ಸಮಸ್ಯೆ ಸೇರಿದಂತೆ ಬೇರೆ ಬೇರೆ ಕಾರಣಗಳಿಂದ ಕೃಷಿಕರು ಸಮಸ್ಯೆ ಎದುರಿಸುತ್ತಿದ್ದು, ಇಂತಹ ವ್ಯತ್ಯಾಸಗಳ ನಡುವೆಯೂ ಕೆಲವು ಕೃಷಿಕರು ಯಶ್ವಸಿಯಾಗಿದ್ದಾರೆ ಎಂದು ಕೃಷಿ ಸಚಿವ...

Read moreDetails

ಜೀವರಕ್ಷಕ ಪ್ರಶಸ್ತಿ ಸ್ವೀಕರಿಸಿದ ಕಾರ್ಮಿಕ ಸಚಿವ ಸಂತೋಷ್‌ ಎಸ್‌ ಲಾಡ್‌

December 23, 2025
ಗ್ರಾಮ ಭಾರತದ ಜೀವನಾಡಿಗೆ ಅರಿವಳಿಕೆ ಮದ್ದು

ಗ್ರಾಮ ಭಾರತದ ಜೀವನಾಡಿಗೆ ಅರಿವಳಿಕೆ ಮದ್ದು

December 23, 2025

ತಂದೆಯಿಂದಲೇ ಗರ್ಭಿಣಿ ಮಗಳ ಹತ್ಯೆ: ಜಿಲ್ಲಾ ಉಸ್ತುವಾರಿ ಸಚಿವ ಖಂಡನೆ

December 22, 2025

ದ್ವೇಷ ಬಿತ್ತುವ ಶಕ್ತಿಗಳ ವಿರುದ್ಧ ಹೋರಾಟ ನಮ್ಮೆಲ್ಲರ ಕರ್ತವ್ಯ- ಮುಖ್ಯಮಂತ್ರಿ ಸಿದ್ದರಾಮಯ್ಯ

December 22, 2025
Next Post
ಜಗದೀಪ್‌ ಧನಕರ್‌

ರಾಜಸ್ಥಾನ | ಕೋಟಾದಲ್ಲಿ ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ವಿದ್ಯಾರ್ಥಿಗಳೊಂದಿಗೆ ಸಂವಾದ

Please login to join discussion

Recent News

ಬೇರುಬಿಟ್ಟ ಚಿಂತನೆಗಳೂ ಸುಡುವ ಹಾಳೆಗಳೂ
Top Story

ಬೇರುಬಿಟ್ಟ ಚಿಂತನೆಗಳೂ ಸುಡುವ ಹಾಳೆಗಳೂ

by ಪ್ರತಿಧ್ವನಿ
December 24, 2025
Top Story

ಮನರೇಗಾ ಯೋಜನೆ ಹತ್ಯೆ ಮಾಡುತ್ತಿರುವ ಕೇಂದ್ರ : ಡಿಸಿಎಂ ಡಿ.ಕೆ.ಶಿವಕುಮಾರ್

by ಪ್ರತಿಧ್ವನಿ
December 23, 2025
Top Story

ರೈತರ ಅಭಿವೃದ್ಧಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಹೆಚ್ಚು ಒತ್ತು ನೀಡಬೇಕು: ಎನ್. ಚಲುವರಾಯಸ್ವಾಮಿ.

by ಪ್ರತಿಧ್ವನಿ
December 23, 2025
Top Story

ಜಾಮೀನು ಅರ್ಜಿ ವಜಾ: ಭೈರತಿ ಬಸವರಾಜುಗೆ ಬಂಧನದ ಭೀತಿ ಶುರು..

by ಪ್ರತಿಧ್ವನಿ
December 23, 2025
Top Story

ಜೀವರಕ್ಷಕ ಪ್ರಶಸ್ತಿ ಸ್ವೀಕರಿಸಿದ ಕಾರ್ಮಿಕ ಸಚಿವ ಸಂತೋಷ್‌ ಎಸ್‌ ಲಾಡ್‌

by ಪ್ರತಿಧ್ವನಿ
December 23, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಬೇರುಬಿಟ್ಟ ಚಿಂತನೆಗಳೂ ಸುಡುವ ಹಾಳೆಗಳೂ

ಬೇರುಬಿಟ್ಟ ಚಿಂತನೆಗಳೂ ಸುಡುವ ಹಾಳೆಗಳೂ

December 24, 2025

ಮನರೇಗಾ ಯೋಜನೆ ಹತ್ಯೆ ಮಾಡುತ್ತಿರುವ ಕೇಂದ್ರ : ಡಿಸಿಎಂ ಡಿ.ಕೆ.ಶಿವಕುಮಾರ್

December 23, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada