ಕಾಂಗ್ರೆಸ್ ಸರ್ಕಾರದ (Congress guarantee) ಗ್ಯಾರೆಂಟಿಗಳು ರಾಜ್ಯದ ಜನರ ಪಾಲಿಗೆ ವರವೋ ಶಾಪವೋ ಎಂಬಂತಾಗಿದೆ. ಯಾಕಂದ್ರೆ ದಿನನಿತ್ಯ ರಾಜ್ಯದ ಜನರಿಗೆ ಬೆಲೆ ಏರಿಕೆಯ ಬಿಸಿ ಹೆಚ್ಚಾಗುತ್ತಲೇ ಇದೆ.
ಹೀಗಾಗಿ ಇಂದಿನಿಂದ ರಾಜ್ಯದಲ್ಲಿ ವಿದ್ಯುತ್ ದರ current bill) , ಕಸದ ಸೆಸ್, ವಾಹನದ ಮೇಲಿನ ಟ್ಯಾಕ್ಸ್ ಎಲ್ಲವೂ ಹೆಚ್ಚಳವಾಗಲಿದ್ದು, ರಾಜ್ಯದ ಜನರ ನಿದ್ದೆಗೆಡಿಸಿದೆ.

ಕಳೆದ ಹಲವು ತಿಂಗಳುಗಳಿಂದ ಇದೇ ರೀತಿ ನಿರಂತರವಾಗಿ ದರ ಏರಿಕೆ ಮಾಡ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಪಕ್ಷ ಬಿಜೆಪಿ ಬೀದಿಗಿಳಿಯಲು ನಿರ್ಧರಿಸಿದೆ. ಇಡೀ ದೇಶದಲ್ಲೇ ನಮ್ಮ ರಾಜ್ಯ ದುಬಾರಿಯಾಗಿದೆ. ಅದಕ್ಕೆ ಕಾರಣ ಕಾಂಗ್ರೆಸ್ ಸರ್ಕಾರ ಎಂದು ಆಕ್ರೋಶ ಬಿಜೆಪಿಗರು ಹೊರಹಾಕಿದ್ದಾರೆ.
ಇನ್ನು ಪ್ರಿಲ್ 2ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಕೂಡ ಅಹೋರಾತ್ರಿ ಧರಣಿ ನಡೆಸಲು ಬಿಜೆಪಿ ನಿರ್ಧರಿಸಿದ್ದಾರೆ.