ಶ್ರೀ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಿಎಂ ಸಿದ್ದರಾಮಯ್ಯ , ಜಾತಿ ಜನಗಣತಿ ವರದಿ ಜಾರಿಯಾಗಬೇಕು ಅಂತಾ ಒತ್ತಾಯ ಕೇಳಿಬರುತ್ತಿವೆ. ನಾವು ಇನ್ನೂ ವರದಿಯನ್ನೇ ಸ್ವೀಕರಿಸಿಲ್ಲ, ಆದರೆ, ವರದಿಯನ್ನೇ ನೋಡದೆ ಅವೈಜ್ಞಾನಿಕವಾಗಿದೆ ಅಂತಾರೆ. ಅಷ್ಟಕ್ಕೂ ವರದಿ ನೋಡದೆ ಅವೈಜ್ಞಾನಿಕ ಅನ್ನೋದು ಯಾಕೆ..? ಎಂದು ಪ್ರಶ್ನಿಸಿದ್ದಾರೆ. ಒಂದು ವೇಳೆ ವರದಿ ಅವೈಜ್ಞಾನಿಕವಾಗಿದ್ದರೆ ಚರ್ಚಿಸಿ ಸರಿಪಡಿಸೋಣ.
![](https://pratidhvani.com/wp-content/uploads/2024/01/IMG-20240131-WA0279-1024x683.webp)
ಜಾತಿ ಸಮೀಕ್ಷೆ ನಡೆಯಲೇಬೇಕು ಅಲ್ವಾ..? ಕೇಂದ್ರದಲ್ಲಿ ನಮ್ಮ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಇಡೀ ದೇಶದಲ್ಲಿ ಜಾತಿ ಸಮೀಕ್ಷೆ ನಡೆಸುತ್ತೇವೆ ಎಂದು ಭರವಸೆ ನೀಡಿದ್ದಾರೆ. ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಶಿವರಾಜ್ ತಂಗಡಗಿ, ಯು.ಬಿ ವೆಂಕಟೇಶ್ ಸೇರಿದಂತೆ ಹಲವರು ಭಾಗಿಯಾಗಿದ್ದರು. ರಾಜ್ಯದಲ್ಲಿ ಜಾತಿಗಣತಿಯನ್ನು ಪ್ರಾರಂಭ ಮಾಡಿದ್ದು ಮೊದಲು ನಾನು ಅನ್ನೋದನ್ನ ಮರೆಯಬಾರದು ಎಂದಿರುವ ಸಿಎಂ ಸಿದ್ದರಾಮಯ್ಯ, ಸಾಮಾಜಿಕ, ಆರ್ಥಿಕ ಪರಿಸ್ಥಿತಿ ಹೇಗಿದೆ ಅಂತಾ ಗೊತ್ತಾದ್ರೆ ತಾನೆ ಕಾರ್ಯಕ್ರಮ ರೂಪಿಸಲು ಅನುಕೂಲ ಎಂದು ಪ್ರಶ್ನಿಸಿದ್ದಾರೆ. ಕಾಂತರಾಜು ಅಧ್ಯಕ್ಷತೆಯಲ್ಲಿ ನಾನೇ ಜಾತಿಗಣತಿ ಸಮೀಕ್ಷೆ ನಡೆಸಿದೆ. 168 ಕೋಟಿ ಅನುದಾನ ಕೊಟ್ಟು ಸಮೀಕ್ಷೆ ಮಾಡಿಸಿದೆ. ಇಡೀ ದೇಶದಲ್ಲೇ ಮೊದಲು ಸಮೀಕ್ಷೆ ನಡೆಸಿರೋದು ನಮ್ಮ ರಾಜ್ಯದಲ್ಲಿ. ಅದೂ ನಾನೂ ಅನ್ನೋದನ್ನ ಮರೆಯಬಾರದು. ಆದರೆ ನಾನು ಈ ಹಿಂದೆ ಸಿಎಂ ಆಗಿದ್ದಾಗ ವರದಿ ಪೂರ್ಣವಾಗಿರಲಿಲ್ಲ. ಅದು ಕುಮಾರಸ್ವಾಮಿ ಸಿಎಂ ಆಗಿದ್ದಾಗ ಪೂರ್ಣವಾಗಿತ್ತು. ಆಗ ಆಯೋಗದ ಸದಸ್ಯರಾಗಿದ್ದ ಗೋಪಾಲ್ರನ್ನ ಕೇಳಿ ಎಂದು ಹೇಳಿದ್ದಾರೆ ಸಿಎಂ.
![](https://pratidhvani.com/wp-content/uploads/2024/01/89716-qfylwbglqu-1526382038-1-1024x538.webp)
ಹೌದಲ್ಲವೇನಯ್ಯ..? ನಾನಿದ್ದಾಗ ವರದಿ ಪೂರ್ಣವಾಗಿತ್ತಾ ಎಂದು ಸಭೆಯಲ್ಲೇ ಕೇಳಿದ್ದಾರೆ ಸಿಎಂ. ಹೆಚ್.ಡಿ ಕುಮಾರಸ್ವಾಮಿಗೆ ಕಾಂತರಾಜ್ ವರದಿ ಕೊಡಲು ಹೋದರು. ಆದರೆ ಆಗ ಅದನ್ನ ಅವರು ಸ್ವೀಕರಿಸಲೇ ಇಲ್ಲ. ಸಚಿವರಾಗಿದ್ದ ಪುಟ್ಟರಂಗಶೆಟ್ಟಿ ವರದಿ ಸ್ವೀಕರಿಸಲು ತಯಾರಾಗಿದ್ದರು. ಆದರೆ ಕುಮಾರಸ್ವಾಮಿ ಹೆದರಿಸಿಬಿಟ್ಟರು. ನಂತರ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಕೂಡ ತೆಗೆದುಕೊಳ್ಳಲಿಲ್ಲ. ಈಗ ಒಂದು ತಿಂಗಳು ಹಾಲಿ ಅಧ್ಯಕ್ಷರ ಆಯೋಗದ ಅವಧಿ ವಿಸ್ತರಿಸಿದ್ದೇವೆ. ವರದಿಯನ್ನು ತೆಗೆದುಕೊಳ್ತೇವೆ. ವರದಿಯಲ್ಲಿ ಏನಾದರೂ ವ್ಯತ್ಯಾಸಗಳಿದ್ದರೆ ಸರಿಪಡಿಸೋಣ ಎಂದಿದ್ದಾರೆ ಸಿಎಂ. ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಸಂವಿಧಾನ ಬದಲಾವಣೆ ಮಾಡಬೇಕು ಎನ್ನುತ್ತವೆ. ಸಂಸದ ಅನಂತಕುಮಾರ್ ಹೆಗಡೆ ಅಂತವರು ಸಂವಿಧಾನ ಬದಲಾಯಿಸೋಕೆ ಹೊರಟಿದ್ದಾರೆ. ನಾನು ಸಿಎಂ ಆಗಿರೋದಕ್ಕೆ ಕಾರಣ ಇದೇ ಸಂವಿಧಾನ. ಸಂವಿಧಾನ ವಿರೋಧ ಮಾಡೋರು ಎಲ್ಲರು ನಮ್ಮ ವೈರಿಗಳು ಎಂದಿದ್ದಾರೆ.
#CMofKarnataja #CasteCensus #Siddaramaiah #INCKarnataka