ಕರ್ನಾಟಕದಲ್ಲಿ ಎಲ್ಲಿಯವರೆಗೆ ಮರಾಠಿಗರ ಮೇಲೆ ಕ್ರಮ ಕೈಗೊಳ್ಳಲ್ವೋ ಅಲ್ಲಿಯವರೆಗೆ ಅವರ ದಬ್ಬಾಳಿಕೆ ನಿಲ್ಲಲ್ಲ ಎಂದು ಕನ್ನಡ ಪರ ಹೋರಾಟಗಾರ ಸಾ.ರಾ ಗೋವಿಂದ್ ಹೇಳಿದ್ದಾರೆ. ಕಳೆದ ಬಾರಿ ಕೂಡ ಸಭೆ ಕರೆದು ಹೋರಾಟಕ್ಕೆ ಮುಂದಾಗಿದ್ದೆವು. ಈ ಬಾರಿಯೂ ನಿಮ್ಮ ಸಲಹೆಗಳನ್ನ ಪಡೆದು ಹೋರಾಟಕ್ಕೆ ಮುಂದಾಗುತ್ತೇವೆ. ಇದೇ ತಿಂಗಳ 18ನೇ ತಾರೀಖು ಮತ್ತೊಂದು ಸಭೆ ಮಾಡಿ ಹೊರಾಟದ ರೂಪುರೇಷೆ ಚರ್ಚಿಸಲಾಗುವುದು ಎಂದಿದ್ದಾರೆ.

ಕಳೆದ ಬಾರಿ ಹೋರಾಟಕ್ಕೆ ಕರೆ ನೀಡಿದಾಗ MES ನಿಷೇಧ ಮಾಡಬೇಕು, ಶಿವಸೇನೆ ಕರ್ನಾಟಕಕ್ಕೆ ಕಾಲಿಡಬಾರದು. ನಾಡ ಹಬ್ಬವನ್ನ ಆಚರಣೆ ಮಾಡುವಾಗ ಕರಾಳ ದಿನವಾಗಿ ಆಚರಣೆ ಮಾಡುತ್ತಿದ್ರು. ಅಂತವರನ್ನ ಗಡಿಪಾರು ಮಾಡುವಂತೆ ಹೇಳಿ ಹೋರಾಟಕ್ಕೆ ಮುಂದಾಗಿದ್ದೆವು. ಆಗ ಸಿಎಂ ಆಗಿದ್ದ ಬಸವರಾಜ್ ಬೊಮ್ಮಯಿ ನಮಗೆ ಆಶ್ವಾಸನೆ ನೀಡಿದ್ರು. MES ಸಂಘಟನೆಯನ್ನ ಗಡಿಪಾರು ಮಾಡುವುದಾಗಿ ತಿಳಿಸಿದ್ರು. ಆದ್ರೆ ಆಗ ಅವರು ಮಾತು ತಪ್ಪಿದ್ದಾರೆ. ಈಗಿರುವ ಸಿಎಂ ಗ್ರಾಮೀಣ ಭಾಗದಿಂದ ಬಂದಿರುವವರು. ನೀವು ಇಂತಹವರ ವಿರುದ್ದ ಕ್ರಮಕೈಗೊಳ್ಳಬೇಕು ಎಂದು ಆಗ್ರಹ ಮಾಡಿದ್ದಾರೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಏನು ಮಾಡುತ್ತಿದೆ ಎಂದು ಸಾ ರಾ ಗೋವಿಂದ್ ಪ್ರಶ್ನೆ ಮಾಡಿದ್ದಾರೆ. ಏನು ಮಾಡದೇ ಇದ್ರೆ ಪ್ರಾಧಿಕಾರ ಯಾಕೆ ಬೇಕು..? ಇಂತಹ ಸಂದರ್ಭದಲ್ಲಿ ಕೈಕಟ್ಟಿಕೊಂಡು ಕೂತರೆ ಏನು ಪ್ರಯೋಜನಾ..? ನೀವು ಕೂಡ ನಮ್ಮ ಜೊತೆ ಬೀದಿಗಿಳಿದು ಹೋರಾಟ ಮಾಡಬೇಕು ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ. ಇದು ರಾಜ್ಯದ ಗೌರವದ ಪ್ರಶ್ನೆ. ಇಡೀ ರಾಜ್ಯದ ಜನ ತಲೆ ತಗ್ಗಿಸುವ ಸಂಗತಿ, ನಮ್ಮ ರಾಜ್ಯದ ಕಂಡಕ್ಟರ್ ಮೇಲಿನ ಹಲ್ಲೆ ಮಾಡ್ತಾರೆ. ನಮ್ಮ ರಾಜ್ಯಕ್ಕೆ ಎಂತಾ ಪರಿಸ್ಥಿತಿ ಬಂದಿದೆ..? ಬೆಳಗಾವಿಯಲ್ಲಿರುವ ಎಲ್ಲಾ ಪಕ್ಷಗಳು ಮರಾಠಿ ಏಜೆಂಟ್ಗಳು. ಅವರಿಗೆ ಕೇವಲ ಕನ್ನಡಿಗರ ವೋಟ್ ಬೇಕಿದೆ ಎಂದಿದ್ದಾರೆ.

ಕನ್ನಡಿಗರಿಗೆ ಅನ್ಯಾಯ ಆದ್ರೆ ಯಾರು ಧ್ವನಿ ಎತ್ತಲ್ಲ, ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿ ಎಲ್ಲಾ ಪಕ್ಷಗಳು ಎಂಇಎಸ್ ಏಜೆಂಟ್ ಆಗಿದ್ದಾರೆ. ಬೆಳಗಾವಿಯಲ್ಲಿ ಕನ್ನಡಿಗರನ್ನ ಉಳಿಸುವ ಕೆಲಸ ಸರ್ಕಾರ ಮಾಡಿಲ್ಲ. ಬೆಳಗಾವಿ ಇವತ್ತು ನಮ್ಮ ಕೈಲಿ ಇಲ್ಲ – ಎಂಇಎಸ್ ಪುಂಡರ ಕೈ ವಶ ಆಗಿದೆ. ಇಷ್ಟೊತ್ತಿಗಾಗಲೇ ಎಂಇಎಸ್ ನ್ನ ಗಡಿಪಾರು ಮಾಡಬೇಕಿತ್ತು. ಆದ್ರೆ ಸರ್ಕಾರ ಇಲ್ಲಿವರೆಗೂ ಕ್ರಮ ತೆಗೆದುಕೊಂಡಿಲ್ಲ. ಕಾಂತಾರ ಸಿನಿಮಾ ನಟ ರಿಷಬ್ ಶೆಟ್ಟಿ ವಿರುದ್ಧ ವಾಟಾಳ್ ಆಕ್ರೋಶ ವ್ಯಕ್ತಪಡಿಸಿದ್ದು, ಶಿವಾಜಿ ಪಾತ್ರದಾರಿ ಸಿನಿಮಾ ಮಾಡ್ತಿರೋದಕ್ಕೆ ಖಂಡನೆ ವ್ಯಕ್ತಪಡಿಸಿದ್ದಾರೆ. ಇದು ಕನ್ನಡಿಗರಿಗೆ ಕೆಟ್ಟ ಸಂದೇಶ ಕೊಡಲು ಹೊರಟಿದ್ದಾರೆ.





