
ಬೀದರ ಜಿಲ್ಲೆಯ ಜಿಲ್ಲಾಸ್ಪತ್ರೆಯಲ್ಲಿ 2024ರ ಸೆಪ್ಟೆಂಬರ್ 25ರಂದು ರೋಗಿಯೊಬ್ಬರು ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆಗಾಗಿ ಹೋಗಿದ ವೇಳೆ ಚಿಕಿತ್ಸೆಗೆ ವಿಶೇಷ ಪ್ರೋಸ್ಟೆಟೋಮೊಗೆಲ್ಲಿ ವೈದ್ಯರು ಇರುವುದಿಲ್ಲ ಎಂದು ಹೇಳಿ ಚಿಕಿತ್ಸೆಗೆ ಹೋಗಿರುವ ರೋಗಿಗಳಿಗೆ ಎರಡು ಗಂಟೆಗಳ ಕಾಲ ಆಸ್ಪತ್ರೆಯಲ್ಲಿ ಯಾವುದೇ ರೀತಿ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ವಹಿಸಿದ್ದಾರೆ.

ಆಸ್ಪತ್ರೆಯಲ್ಲಿ ಪ್ರೋಸ್ಟೆಟೋಮೊಗೆಲಿ ಆಗುವುದಿಲ್ಲ, ಹೀಗಾಗಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಹೈದ್ರಾಬಾದ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ಕಳುಹಿಸುತ್ತಾರೆ.ಇದು ಖುದ್ದು ವೈದ್ಯ ಸಿಬ್ಬಂದಿ ಖಾಸಗಿ ಆಸ್ಪತ್ರೆಗೆ ಕಳಿಸಿರುತ್ತಾರೆ.
ದಿನಾಂಕ 24-09-2024 ರಂದು ಶಿರೋಮಣಿ ತಂದೆ ಗುಂಡಪ್ಪಾ ಮು.ಅಮದಲಪಾಡ ಅವರಿಗೆ ಮೂತ್ರ ವಿಸರ್ಜನೆ ಮಾಡದ ಕಾರಣ ಸಾಯಂಕಾಲ ಸಂಜೆ 6 ಗಂಟೆ ಸುಮಾರಿಗೆ ಬೀದರ ಜಿಲ್ಲೆ ಬ್ರಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವ ಘಟನೆ ಉದಾಹರಣೆಯಾಗಿದೆ.
ಈ ಆಸ್ಪತ್ರೆಯಲ್ಲಿ ಪ್ರೋಸ್ಟೆಟೋಮೊಗೆಲ್ಲಿ ಇಲ್ಲದೆ ಕಾರಣ ಬೀದರ ಜಿಲ್ಲಾ ಆಸ್ಪತ್ರೆಯಲ್ಲಿ ಮೂತ್ರ ವಿಸರ್ಜನೆ ತೊಂದರೆಯಿಂದ ಬಳಲುತ್ತಿದ್ದ ಬಡ ಕೂಲಿ ಕಾರ್ಮಿಕರು ಬೀದರ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಸಿಗುತ್ತದೆ ಎಂದು ಎಂಬ ನಂಬಿಕೆಯಿಟ್ಟು ಬರುತ್ತಾರೆ. ಆದರೆ ಇಲ್ಲಿ ಬಂದು ನೋಡಿದಾಗ ಬಡವರ ಕರುಳು ಹಿಂಡುವ ಪರಿಸ್ಥಿತಿ ಇದೆ.
ಸಾರ್ವಜನಿಕರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಬ್ರಿಮ್ಸ್ ಆಸ್ಪತ್ರೆಯಲ್ಲಿ ವಿಶೇಷ ತಜ್ಞ ವೈದ್ಯರ ನೇಮಕ ಮಾಡಬೇಕು ಎಂದು ಕರ್ನಾಟಕ ಯುವ ರಕ್ಷಣಾ ವೇದಿಕೆಯ ವತಿಯಿಂದ ಜಿಲ್ಲಾಧಿಕಾರಿಗಳು ಬೀದರ ರವರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ವಿಲ್ಸನ್ ದೊಡ್ಡಮನಿ, ಗುರುದಾಸ ಅಮದಲಪಾಡ ಜಿಲ್ಲಾಧ್ಯಕ್ಷರುಯುವ ಘಟಕ, ಪ್ರಶಾಂತ ಹೀರೆಮನಿ ಜಿಲ್ಲಾ ಉಪಾಧ್ಯಕ್ಷರು, ಗಜ ಸೂರ್ಯ ಚಿತ್ರ ನಟ ಇನ್ನಿತರ ಕಾರ್ಯಕರ್ತರು ಉಪಸ್ಥಿತರಿದ್ದರು.