• Home
  • About Us
  • ಕರ್ನಾಟಕ
Friday, December 19, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ರಾಜಸ್ಥಾನ: ಮೀನಾ ಬುಡಕಟ್ಟು ಸಮುದಾಯದ ‘ಕೇಸರೀಕರಣ’ಕ್ಕೆ ಹಿಂದುತ್ವ ಸಂಘಟನೆಗಳ ಯತ್ನ

Shivakumar A by Shivakumar A
July 30, 2021
in ದೇಶ
0
ರಾಜಸ್ಥಾನ: ಮೀನಾ ಬುಡಕಟ್ಟು ಸಮುದಾಯದ ‘ಕೇಸರೀಕರಣ’ಕ್ಕೆ ಹಿಂದುತ್ವ ಸಂಘಟನೆಗಳ ಯತ್ನ
Share on WhatsAppShare on FacebookShare on Telegram

ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ನಿರಂತರವಾಗಿ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ರಾಜಸ್ಥಾನದ ಅಂಬಾಗಢ್ ಕೋಟೆ ಈಗ ಕೇಸರಿ ಪಡೆಗಳ ಕೋಮು ಧ್ರುವೀಕರಣದ ಸರಕಾಗಿ ಬದಲಾಗಿದೆ. ರಾಜಸ್ಥಾನದ ಬುಡಕಟ್ಟು ಜನಾಂಗವಾದ ‘ಮೀನಾ’ ಸಮುದಾಯದ ಅಸ್ಮಿತೆಗೆ ಸಾಕ್ಷಿಯಾಗಿದ್ದ ಈ ಕೋಟೆ ಈಗ ವಿವಾದದ ಕೇಂದ್ರವಾಗಿದೆ.

ADVERTISEMENT

ಮೀನಾ ಪರಿಶಿಷ್ಟ ಪಂಗಡ ಮತ್ತು ವಿಶ್ವ ಹಿಂದು ಪರಿಷತ್ ನೇತೃತ್ವದ ಸಂಘಟನೆಗಳು ಈಗ ಪರಸ್ಪರ ಕಚ್ಚಾಟಕ್ಕೆ ತೊಡಗಿವೆ. ಈ ತಿಂಗಳ ಆರಂಭದಲ್ಲಿ ಯುವ ಶಕ್ತಿ ಮೋರ್ಚಾ (ವಿಶ್ವ ಹಿಂದು ಪರಿಷತ್’ನ  ಅಂಗ ಸಂಸ್ಥೆ)ಯು ಅಂಬಾಗಢ್ ಕೋಟೆಯ ಮೇಲೆ ಭಗವಾ ಧ್ವಜವನ್ನು ಹಾರಿಸಿತ್ತು. ಇದಕ್ಕೆ ಬಿಜೆಪಿಯ ಪರೋಕ್ಷ ಬೆಂಬಲವೂ ಇತ್ತು. ಈ ಕೋಟೆಯು ಮೀನಾ ಸಮುದಾಯದ ದೇವತೆಯಾದ ಅಂಬಾ ಮಾತೆಯ ಮಂದಿರವನ್ನು ಒಳಗೊಂಡಿದೆ.

‘ಜೈ ಶ್ರೀ ರಾಮ್’ ಎಂದು ಬರೆಯಲಾಗಿದ್ದ ಧ್ವಜವನ್ಜು ಅಂಬಾ ಮಾತೆಯ ದೇಗುಲವಿರುವ ಕೋಟೆಯ ಮೇಲಿನ ವಿದ್ಯುತ್ ಕಂಬದ ಮೇಲೆ ಹಾರಿಸಲಾಗಿತ್ತು. ಇದರಿಂದ ಕುಪಿತಗೊಂಡ ಮೀನಾ ಸಮುದಾಯದ ನಾಯಕರು ಕಳೆದ ವಾರ ಭಗವಾ ಧ್ವಜವನ್ನು ತೆರವುಗೊಳಿಸಿದ್ದರು. ಈ ವೇಳೆ ಭಗವಾ ಧ್ವಜ ಭಾಗಶಃ ಹರಿದುಹೋಗಿತ್ತು.

ಭಗವಾ ಧ್ವಜವನ್ನು ಕೋಟೆಯ ಮೇಲೆ ಹಾರಿಸುವುದು ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುತ್ತದೆ ಎಂಬುದು ಮೀನಾ ಜನಾಂಗದ ನಾಯಕರ ವಾದ. ಈ ಕಾರಣಕ್ಕೆ, ಮೀನಾ ಸಮುದಾಯದ ಪಕ್ಷೇತರ ಶಾಸಕರಾದ ರಾಮಕೇಶ್ ಮೀನಾ ಮತ್ತು ಇತರರು ಜುಲೈ 22ರಂದು ಕೋಟೆಯ ಬಳಿ ಜಮಾಯಿಸಿ ಧ್ವಜ ತೆರವುಗೊಳಿಸಿದ್ದರು. ಧ್ವಜಕ್ಕೆ ಹಾನಿಯಾಗಿದ್ದು ಹಿಂದುತ್ವ ಪಡೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಈ ವಿಚಾರದ ಕುರಿತಾಗಿ ಟ್ರಾನ್ಸ್’ಪೋರ್ಟ್ ನಗರದ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿದೆ.

YouTube player

ಇದಾದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಎರಡೂ ಗುಂಪುಗಳ ನಡುವೆ ವಾಗ್ವಾದವೇ ನಡೆದಿದೆ. ಬುಡಕಟ್ಟು ಜನಾಂಗದ ಅಸ್ಮಿತೆಗೆ ಧಕ್ಕೆ ತಂದು ಹಿಂದು ಧರ್ಮವನ್ನು ಹೇರುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಮೀನಾ ಸಮುದಾಯ ಆರೋಪಿಸಿದರೆ, ಭಗವಾ ಧ್ವಜಕ್ಕೆ ಅಪಮಾನ ಮಾಡಲಾಗಿದೆ ಎಂದು ಹಿಂದುತ್ವ ಪಡೆಗಳು ಆರೋಪಿಸಿವೆ.

ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿದಂತೆ, ಕೋಮು ಪ್ರಚೋದಿತ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಚಾನೆಲ್ ಆದ ಸುದರ್ಶನ್ ನ್ಯೂಸ್ ಕೇಸರಿ ಪಡೆಗಳ ಪರವಾಗಿ ಸರಣಿ ವರದಿಗಳನ್ನು ಬಿತ್ತರಿಸಿದೆ. ಇದರೊಂದಿಗೆ ಆಗಸ್ಟ್ ಒಂದರಂದು ಬೃಹತ್ ಸಂಖ್ಯೆಯಲ್ಲಿ ಹಿಂದೂಗಳು ಜಮಾಯಿಸಿ ಭಗವಾ ಧ್ವಜವನ್ನು ಮತ್ತೆ ಹಾರಿಸಬೇಕು ಎಂದು ಕರೆ ಕೊಟ್ಟಿದೆ. ಈ ಕಾರಣಕ್ಕಾಗಿ ಸುದರ್ಶನ್ ನ್ಯೂಸ್ ಹಾಗೂ ಅದರ ಸಂಪಾದಕರಾದ ಸುರೇಶ್ ಚೌವ್ನಾಂಕೆ ವಿರುದ್ದ ರಾಮಗಢ ಪಚ್ವಾರಾ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಮಿನಾ ಸಮುದಾಯವನ್ನು ಅವಹೇಳನ ಮಾಡಲಾಗಿದೆ ಹಾಗೂ ಸಮುದಾಯದ ವಿರುದ್ದ ಜನರನ್ನು ಎತ್ತಿ ಕಟ್ಟುವ ಪ್ರಯತ್ನ ಸುರೇಶ್ ಚೌವ್ಹಾಂಕೆ ಮಾಡಿದ್ದಾರೆಂದು ದೂರಿನಲ್ಲಿ ಹೇಳಲಾಗಿದೆ.

राहुल और प्रियंका जी,आपके गुंडों की अगुवाई में समूचे राजस्थान में हो रहा हिंदुओं का ये महाअपमान ही कांग्रेस के ताबूत में आखिरी कील बनेगा, तुष्टीकरण में अंधी कांग्रेस की तरफ से भगवा ध्वज पर चली हर ईंट का जवाब पत्थर से मिलेगा, इंतजार करिए, जय जय श्रीराम !! pic.twitter.com/JQ9d0NgEk7

— Dr. Shalabh Mani Tripathi (मोदी का परिवार) (@shalabhmani) July 21, 2021

ಟ್ರೈಬಲ್ ಆರ್ಮಿ ಸ್ಥಾಪಕ ಹಂಸರಾಜ್ ಮೀನಾ ಅವರು ಬುಡಕಟ್ಟು ಜನಾಂಗದ ಅಸ್ಮಿತೆಯನ್ನು ಕಿತ್ತುಕೊಂಡು ಸಮುದಾಯವನ್ನು ಕೇಸರೀಕರಣ ಮಾಡುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

“ಆಗಸ್ಟ್ 1ರಂದು ಮೀನಾ ಸಮುದಾಯದ ಜನರಿಗೆ ಅಂಬಾಗಢ ಕೋಟೆಯಲ್ಲಿ ಜಮಾಯಿಸಲು ಸೂಚನೆ ನಿಡಲಾಗಿದೆ. ಅಂದು ಕೋಟೆಯಲ್ಲಿ ಗಿಡ ನೆಟ್ಟು ಭಾರತದ ತ್ರಿವರ್ಣ ಧ್ವಜವನ್ನು ಆರೋಹಣ ಮಾಡಲು ಸೂಚಿಸಲಾಗಿದೆ. ಇದು ಪ್ರಕೃತಿಯ ಪರವಾಗಿ ಹಾಗೂ ದೇಶದ ಪರವಾಗಿ ನಮ್ಮ ಪ್ರೇಮವನ್ನು ತೋರಿಸಲಿದೆ,” ಎಂದು ಅವರು ಹೇಳಿದ್ದಾರೆ.

ಭಾರತೀಯ ಟ್ರೈಬಲ್ ಪಾರ್ಟಿ ಶಾಸಕ ರಾಜಕುಮಾರ್ ರೋಟ್ ಅವರು ‘ದ ವೈರ್’ಗೆ ನೀಡಿರುವ ಹೇಳಿಕೆಯಲ್ಲಿ, ಬುಡಕಟ್ಟು ಜನಾಂಗಗಳ ಕೇಸರೀಕರಣದ ಪ್ರಯತ್ನ ಹೊಸತಲ್ಲ. ಇದೇ ತರಹದ ಪ್ರಯತ್ನ ಕಳೆದ ವರ್ಷ ಉದಯಪುರ ಬಳಿಯ ಸಲುಂಬರ್’ನ ಸೋನಾರ್ ಮಾತಾ ದೇವಾಲಯದಲ್ಲಿಯೂ ನಡೆದಿತ್ತು. ಆರ್ಎಸ್ಎಸ್ ಕಾರ್ಯಕರ್ತರು ಸಾಂಪ್ರದಾಯಿಕ ಬುಡಕಟ್ಟು ಧ್ವಜವನ್ನು ಕೆಳಗಿಳಿಸಿ ಭಗವಾ ಧ್ವಜವನ್ನು ಹಾರಿಸಿದ್ದರು, ಎಂದಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ಲಕ್ಷ್ಮಿಕಾಂತ್ ಭಾರಧ್ವಜ್ ಅವರು, ನಮಗೆ ಅಂಬಾ ಮಾತೆ ಎಂದರೆ ಗೌರವವಿದೆ. ಮೀನಾ ಸಮುದಾಯವು ಹಿಂದೂ ಧರ್ಮದ ಭಾಗವಾಗಿದೆ ಎಂಬುದನ್ನು ಸಾಬೀತುಪಡಿಸುವುದು ನಮ್ಮ ಉದ್ದೇಶವಾಗಿತ್ತು. ಆದರೆ, ಕೆಲವು ಕಾಂಗ್ರೆಸ್ ಬೆಂಬಲಿತ ವಿಘ್ನ ಸಂತೋಷಿಗಳು ಈ ಪ್ರಯತ್ನವನ್ನು ಹಾಳುಗೆಡವುವ ಪ್ರಯತ್ನ ಮಾಡುತ್ತಿದ್ದಾರೆ. ಇದು ಹಿಂದೂಗಳ ಒಗ್ಗಟ್ಟನ್ನು ಮುರಿಯುವ ಕಾಂಗ್ರೆಸ್’ನ ಪ್ರಯತ್ನ ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ ಸರ್ಕರಗಳು, ಪುರಾತತ್ವ ಇಲಾಖೆಯಿಂದ ರಕ್ಷಿಸಲ್ಪಡಬೇಕಾಗಿದ್ದ ಕೋಟೆಯೊಂದು ಇಂದು ಕೋಮು ಧ್ರುವೀಕರಣದ ಕೇಂದ್ರವಾಗಿದೆ. ದೇಶದ ಭವ್ಯ ಇತಿಹಾಸವನ್ನು ಹಾಗೂ ಪರಂಪರೆಯನ್ನು ಸಾರುವ ಕೋಟೆಯನ್ನು ಕೂಡಾ ರಾಜಕೀಯ ಲಾಭದ ಉದ್ದೇಶಕ್ಕಾಗಿ ಕೇಸರೀಕರಣಗೊಳಿಸಲು ಪ್ರಯತ್ನಿಸುತ್ತಿರುವುದು ಖಂಡನೀಯ.

Tags: BJPHindutvajaipurಬಿಜೆಪಿ
Previous Post

ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ರಾಜಕೀಯ ಜೀವನ ಮುಗಿಸಲು ಹೊರಟರೇ ಯಡಿಯೂರಪ್ಪ?

Next Post

ರಾಜ್ಯದಲ್ಲಿ ಮತ್ತೆ ಹೆಚ್ಚಿದ ಕರೋನಾ ಪ್ರಕರಣಗಳು: 3ನೇ ಅಲೆಯ ಮುನ್ಸೂಚನೆಯೇ?

Related Posts

ಶಾಲಾ ಮಕ್ಕಳಿಗೆ ಭಗವದ್ಗೀತೆ ಯಾಕೆ ಬೋಧಿಸಬೇಕು..?: ಕಾರಣ ನೀಡಿದ ಕುಮಾರಸ್ವಾಮಿ
Top Story

ಶಾಲಾ ಮಕ್ಕಳಿಗೆ ಭಗವದ್ಗೀತೆ ಯಾಕೆ ಬೋಧಿಸಬೇಕು..?: ಕಾರಣ ನೀಡಿದ ಕುಮಾರಸ್ವಾಮಿ

by ಪ್ರತಿಧ್ವನಿ
December 18, 2025
0

ನವದೆಹಲಿ: ಶಾಲಾ ಹಂತದಿಂದಲೇ ಭಗವದ್ಗೀತೆಯನ್ನು( Bhagavad Gita) ಮಕ್ಕಳಿಗೆ ಬೋಧಿಸಬೇಕು. ಇದು ಅತ್ಯಂತ ಉತ್ತಮ ಶೈಕ್ಷಣಿಕ ಸುಧಾರಣಾ ಕ್ರಮವಾಗುತ್ತದೆ ಎಂದು ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು...

Read moreDetails
ದೇಶದಲ್ಲಿ ಹಣದುಬ್ಬರ ಪ್ರಮಾಣ ಇಳಿಕೆ..! ಕಾರಣವೇನು?

ದೇಶದಲ್ಲಿ ಹಣದುಬ್ಬರ ಪ್ರಮಾಣ ಇಳಿಕೆ..! ಕಾರಣವೇನು?

December 17, 2025

ರಸ್ತೆ ಅಪಘಾತ ಸಂತ್ರಸ್ತರಿಗೆ 1.5 ಲಕ್ಷದವರೆಗೆ ‘ಉಚಿತ ಚಿಕಿತ್ಸೆ’ ; ಕೇಂದ್ರದಿಂದ ಹೊಸ ಯೋಜನೆ

December 17, 2025

ಕುಂದಾಪುರ ಇಎಸ್‌ಐ ಆಸ್ಪತ್ರೆಗೆ ವೈದ್ಯರ ನೇಮಕಕ್ಕೆ ಕ್ರಮ: ಸಚಿವ ಸಂತೋಷ್‌ ಲಾಡ್‌

December 17, 2025

ದ್ವೇಷ ರಾಜಕಾರಣ ಬಿಜೆಪಿ ಆಸ್ತಿ, ಅವರ ಸುಳ್ಳು ಕೇಸ್ ಗಳಿಗೆ ಆಯುಷ್ಯವಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್..

December 17, 2025
Next Post
ರಾಜ್ಯದಲ್ಲಿ ಮತ್ತೆ ಹೆಚ್ಚಿದ ಕರೋನಾ ಪ್ರಕರಣಗಳು: 3ನೇ ಅಲೆಯ ಮುನ್ಸೂಚನೆಯೇ?

ರಾಜ್ಯದಲ್ಲಿ ಮತ್ತೆ ಹೆಚ್ಚಿದ ಕರೋನಾ ಪ್ರಕರಣಗಳು: 3ನೇ ಅಲೆಯ ಮುನ್ಸೂಚನೆಯೇ?

Please login to join discussion

Recent News

Winter Session 2025: ನನಗೆ ಜೈಲಿನಿಂದ ಯಾವ ಕರೆಗಳು ಬಂದಿಲ್ಲ-ಡಿಸಿಎಂ ಡಿ.ಕೆ ಶಿವಕುಮಾರ್‌
Top Story

Winter Session 2025: ನನಗೆ ಜೈಲಿನಿಂದ ಯಾವ ಕರೆಗಳು ಬಂದಿಲ್ಲ-ಡಿಸಿಎಂ ಡಿ.ಕೆ ಶಿವಕುಮಾರ್‌

by ಪ್ರತಿಧ್ವನಿ
December 18, 2025
ನನಗೆ ಬೆದರಿಕೆ ಹಾಕಲು ಬರಬೇಡಿ-ಡಿ.ಕೆ ಶಿವಕುಮಾರ್‌ಗೆ ವಿಜಯೇಂದ್ರ ಎಚ್ಚರಿಕೆ
Top Story

ನನಗೆ ಬೆದರಿಕೆ ಹಾಕಲು ಬರಬೇಡಿ-ಡಿ.ಕೆ ಶಿವಕುಮಾರ್‌ಗೆ ವಿಜಯೇಂದ್ರ ಎಚ್ಚರಿಕೆ

by ಪ್ರತಿಧ್ವನಿ
December 18, 2025
ಪೊಲೀಸ್ ಸಿಬ್ಬಂದಿ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವಕ್ಕೆ ರಜೆ ನೀಡಿ: ಡಿಜಿಪಿಗೆ ಪತ್ರ!
Top Story

ಪೊಲೀಸ್ ಸಿಬ್ಬಂದಿ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವಕ್ಕೆ ರಜೆ ನೀಡಿ: ಡಿಜಿಪಿಗೆ ಪತ್ರ!

by ಪ್ರತಿಧ್ವನಿ
December 18, 2025
Winter Session 2025: ತೀವ್ರ ವಿರೋಧದ ನಡುವೆಯೂ ದ್ವೇಷ ಭಾಷಣ ತಡೆ ವಿಧೇಯಕ ಅಂಗೀಕಾರ
Top Story

Winter Session 2025: ತೀವ್ರ ವಿರೋಧದ ನಡುವೆಯೂ ದ್ವೇಷ ಭಾಷಣ ತಡೆ ವಿಧೇಯಕ ಅಂಗೀಕಾರ

by ಪ್ರತಿಧ್ವನಿ
December 18, 2025
ಕಂದಾಯ ಸಚಿವರ ಅಕ್ರಮಕ್ಕೆ ಕಾನೂನಿನಲ್ಲಿ ಅವಕಾಶ ಇದೆಯೇ?: ಬಿ.ವೈ ವಿಜಯೇಂದ್ರ
Top Story

ಕಂದಾಯ ಸಚಿವರ ಅಕ್ರಮಕ್ಕೆ ಕಾನೂನಿನಲ್ಲಿ ಅವಕಾಶ ಇದೆಯೇ?: ಬಿ.ವೈ ವಿಜಯೇಂದ್ರ

by ಪ್ರತಿಧ್ವನಿ
December 18, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Winter Session 2025: ನನಗೆ ಜೈಲಿನಿಂದ ಯಾವ ಕರೆಗಳು ಬಂದಿಲ್ಲ-ಡಿಸಿಎಂ ಡಿ.ಕೆ ಶಿವಕುಮಾರ್‌

Winter Session 2025: ನನಗೆ ಜೈಲಿನಿಂದ ಯಾವ ಕರೆಗಳು ಬಂದಿಲ್ಲ-ಡಿಸಿಎಂ ಡಿ.ಕೆ ಶಿವಕುಮಾರ್‌

December 18, 2025
ನನಗೆ ಬೆದರಿಕೆ ಹಾಕಲು ಬರಬೇಡಿ-ಡಿ.ಕೆ ಶಿವಕುಮಾರ್‌ಗೆ ವಿಜಯೇಂದ್ರ ಎಚ್ಚರಿಕೆ

ನನಗೆ ಬೆದರಿಕೆ ಹಾಕಲು ಬರಬೇಡಿ-ಡಿ.ಕೆ ಶಿವಕುಮಾರ್‌ಗೆ ವಿಜಯೇಂದ್ರ ಎಚ್ಚರಿಕೆ

December 18, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada