2023ರ ವಿಧಾನಸಭಾ ಚುನಾವಣೆಗೆ(karnataka assembly election2023) ಇನ್ನು ಕೆಲವೇ ಕೆಲವು ದಿನಗಳು ಬಾಕಿ ಇವೆ. ಈಗಾಗಲೆ ರಾಜ್ಯಾದ್ಯಂತ ಚುನಾವಣಾ(election) ರಣಕಹಳೆ ಮೊಳಗಿದೆ. ಅಲ್ಲದೇ ರಾಜಕೀಯ ನಾಯಕರ ಮಧ್ಯೆ ಮಾತಿನ ಚಕಮಕಿಯೂ ನಡೆಯುತ್ತಿದೆ. ಸುಮಲತಾ ಮಹಾನಾಯಕಿ ಎಂಬ ಹೆಚ್.ಡಿ.ಕುಮಾರಸ್ವಾಮಿ(HD kumaraswamy) ಹೇಳಿಕೆಗೆ ಸಂಸದೆ ಸುಮಲತಾ(sumalata) ಮಂಡ್ಯದ ಹಲಗೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ. ʻಯಾರು ಮಹಾನ್ ನಾಯಕಿ, ನಾಯಕ ಅಂತ ನಾನು ಹೇಳಲ್ಲ. ನಾವು ಕಾರ್ನಲ್ಲಿಯೆ ಓಡಾಡ್ತೀವಿ. ನಾವೇನು ಹೆಲಿಕಾಪ್ಟರ್, ಲ್ಯಾಂಬೋರ್ಗಿನಿಯಲ್ಲಿ ಬಂದು ಮತ ಪ್ರಚಾರ ಮಾಡ್ತಿಲ್ಲ. ಯಾರಿಗೆ ಅದೆಲ್ಲ ವ್ಯವಸ್ಥೆ ಇದ್ಯೋ ಅವರೇ ಯಾರು ಮಹಾನಾಯಕರು. ಸಿಎಂ ಆಗಿದ್ದಾಗ ಪಂಚತಾರಾ ಹೊಟೇಲ್ ನಲ್ಲಿ ಯಾರು ರಾಜಕಾರಣ ಮಾಡಿದ್ದಾರೋ ಅವರೇ ಮಹಾನಾಯಕ ಯಾರೆಂದು ತಿಳ್ಕೋಬೇಕು. ಅವರೆಲ್ಲ ದೊಡ್ಡವರು, ಅವರು ಏನೇ ಹೇಳುದ್ರು ಬೇಜಾರಿಲ್ಲ. ಜಿಲ್ಲೆಯ ಜನರ ಪ್ರೀತಿ ವಿಶ್ವಾಸ ಇರುವಾಗ ಯಾರು ಏನೇ ಹೇಳಿದ್ರು ತೊಂದರೆ ಆಗಲ್ಲ ಅಂತ ಮಾಜಿ ಸಿಎಂ ಕುಮಾರಸ್ವಾಮಿ(HD kumaraswamy) ಹೇಳಿಕೆಗೆ ಸುಮಲತಾ ವ್ಯಂಗ್ಯವಾಡಿದ್ರು.

ಬಳಿಕ ಮಂಡ್ಯದಲ್ಲಿ ಯೋಗಿ ಮಾಡೇಲ್ ಬೇಡ ಎಂಬ ಹೆಚ್.ಡಿ.ಕೆ(HDK) ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಖಂಡಿತಾ ಅವರಿಗೆ ಯುಪಿ ಮಾಡೇಲ್ ಬೇಡ. ಅಕ್ರಮ ಸಮರ್ಥನೆ ಮಾಡ್ಕೊಂಡು ಬರುವವರಿಗೆ ಯುಪಿ ಮಾಡೇಲ್ ಭಯ ಆಗಲ್ವಾ? ಹೆದರಿಕೆ ಆಗೋದಿಲ್ವಾ? ಅಕ್ರಮವನ್ನ ತಡೆಯುತ್ತಿರುವಾಗ ಯುಪಿ(UP) ಮಾಡೇಲ್ ಇಷ್ಟ ಆಗುತ್ತೆ. ಅಕ್ರಮವನ್ನ ಬುಲ್ಡೋಜ್ ಮಾಡಿದ ಚೀಫ್ ಮಿನಿಸ್ಟರ್ ಅಂದ್ರೆ ಅದು ಯೋಗಿ ಆದಿತ್ಯನಾಥ್ ಜೀ.(yogi adithyanath) ಇಲ್ಲಿ ನಡೆಯುತ್ತಿರುವ ಅಕ್ರಮಗಳನ್ನ ಯಾರ್ಯಾರು ಪರ ನಿಂತಿದ್ದಾರೋ, ಅಕ್ರಮದಲ್ಲಿ ತೊಡಗಿ ಕೊಂಡಿದ್ದಾರೋ ಅವರಿಗೆ ಯುಪಿ ಮಾಡೇಲ್ ಭಯ ಆಗಬಹುದು ಅಂತ ಕುಮಾರಸ್ವಾಮಿಗೆ ಮಾತಿನ ಮೂಲಕವೇ ಸುಮಲತಾ(sumalata0 ಕುಟುಕಿದರು. ಇನ್ನು ಮಂಡ್ಯಕ್ಕೆ ಯುಪಿ ನಾಥ ಪರಂಪರೆ ಬೇಡವೆಂಬ ಕುಮಾರಸ್ವಾಮಿ ಟೀಕೆ ವಿಚಾರವಾಗಿ ಮಾತ್ನಾಡಿದ ಸುಮಲತಾ, ʻನಾಥ ಪರಂಪರೆ ಅವರಿಗೆ ಬೇಕೋ ಬೇಡ್ವೋ ಅನ್ನೋದಲ್ಲ. ಜನರಿಗೆ ಬೇಕಾ ಅನ್ನೋದನ್ನ ಕನ್ಸಿಡರ್ ಮಾಡ್ಬೇಕು ಅಂತ ಹೇಳಿದ್ರು.
