ದಕ್ಷಿಣಕನ್ನಡಲ್ಲಿ (South canera) ಮತ್ತೆ ಕೋಮು ದ್ವೇಷಕ್ಕೆ ಭೀಕರ ಕೊಲೆ ನಡೆದುಹೋಗಿದೆ.ಫಾಜಿಲ್ ಕೊಲೆ ಕೇಸ್ನ ಪ್ರಮುಖ ಆರೋಪಿ ಸುಹಾಸ್ ಶೆಟ್ಟಿ (Suhas shetty) ಮೇಲೆ ಹಂತಕರು ಮಚ್ಚಿನಿಂದ ದಾಳಿ ಮಾಡಿ ಬರ್ಬರವಾ ಕೊಲೆ ಮಾಡಲಾಗಿದೆ.

ಮಂಗಳೂರಿನ (Mangaluru) ಹೊರವಲಯದ ಬಜಪೆ ಕಿನ್ನಿಪದವು ಬಳಿ ನಿನ್ನೆ ರಾತ್ರಿ 8:30ರ ಸುಮಾರಿಗೆ ಈ ಭೀಕರ ಕೊಲೆ ನಡೆದಿದೆ. 2022ರ ಜುಲೈ 28ರಂದು ಸುರತ್ಕಲ್ನ ಫಾಜಿಲ್ ಹತ್ಯೆ ನಡೆದಿತ್ತು.ಆ ಕೊಲೆಗೆ ಪ್ರತೀಕಾರಕ್ಕಾಗಿ ಈಗ ಸುಹಾಸ್ ಶೆಟ್ಟಿ (Usha’s shetty) ಹತ್ಯೆ ನಡೆದಿದೆ ಎನ್ನಲಾಗಿದೆ.
ಈ ಹಿಂದೆ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು (Praveen nettaru) ಹತ್ಯೆಗೆ ಪ್ರತೀಕಾರವಾಗಿ ಫಾಜಿಲ್ ಹತ್ಯೆ ನಡೆದಿತ್ತು, ಇದರಲ್ಲಿ ಸುಹಾಸ್ ಶೆಟ್ಟಿ ಪ್ರಮುಖ ಆರೋಪಿಯಾಗಿದ್ದ. ಸುಹಾಸ್ ಶೆಟ್ಟಿ ಈ ಹಿಂದೆ ಬಜರಂಗದಳದ ಗೋರಕ್ಷಾ ವಿಭಾಗದ ಸದಸ್ಯನಾಗಿದ್ದ.

ಈ ಹತ್ಯೆ ಪ್ರಕರಣದಲ್ಲಿ ಭಾಗಿಯಾದ ನಂತರ ಸುಹಾಸ್ ಗೆ ಸಂಘಟನೆಯಲ್ಲಿ ಯಾವುದೇ ಜವಾಬ್ದಾರಿಯನ್ನು ನೀಡಿರಲಿಲ್ಲ.ಹೀಗಾಗಿ ಈ ಹಿಂದಿನ ಫಾಸಿಲ್ ಹತ್ಯೆಯ ಜಿದ್ದಿಗೆ ಸುಹಾಸ್ ಶೆಟ್ಟಿ ಕೊಲೆ ನಡೆದಿದೆ ಎಂಬ ಚರ್ಚೆ ಜೋರಾಗಿದೆ.






