ಮಂಗಳೂರು: ಹಿಂದೂ ಕಾರ್ಯಕರ್ತರ ಸುಹಾಸ್ ಶೆಟ್ಟಿ ಹತ್ಯೆ ವಿಚಾರವಾಗಿ ಬಿಜೆಪಿ ಶಾಸಕರು ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಒಂದು ವರ್ಗವನ್ನು ಓಲೈಸುವ ನಿಟ್ಟಿನಲ್ಲಿ ಸರ್ಕಾರ ನಡೀತಿದೆ. ಇದಕ್ಕೆ ಪುಷ್ಠಿ ಎಂಬಂತೆ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಗೃಹ ಸಚಿವರು ನಡೆದುಕೊಂಡಿದ್ದಾರೆ. ಎಲ್ಲಾ ಜನಪ್ರತಿನಿಧಿಗಳ ಜೊತೆ ಸಭೆ ಶಾಂತಿ ಕಾಪಾಡುತ್ತಾರೆ ಅಂತ ಅನಿಸಿತ್ತು . ಆದ್ರೆ ಗೃಹ ಸಚಿವರು ಕೇವಲ ಮುಸ್ಲಿಂ ಮುಖಂಡರ ಜೊತೆ ಸಭೆ ನಡೆಸಿದ್ದಾರೆ. ಯಾವ ಶಾಸಕರನ್ನು ಕೂಡ ಕರೆದು ಸಭೆ ಮಾಡಿಲ್ಲ. ಎರಡು ದಿನಗಳ ಹಿಂದೆ ಮುಸ್ಲಿಂ ಪುಂಡರು ಸುಹಾಸ್ ಶೆಟ್ಟಿಯ ಹತ್ಯೆ ಮಾಡಿದ್ರು. ಇಂದು ಅದೇ ಸಮುದಾಯದ ಮುಖಂಡರ ಜೊತೆ ಗೃಹ ಸಚಿವರು ಸಭೆ ನಡೆಸಿದ್ರು. ಇದನೆಲ್ಲ ನೋಡಿದ್ರೆ ನ್ಯಾಯ ಸಿಗತ್ತೆ ಅನಿಸುತ್ತಾ ಎಂದು ಪ್ರಶ್ನಿಸಿದ್ದಾರೆ.

ಗೃಹ ಸಚಿವರ ಮುಂದೆಯೇ ಮುಸ್ಲಿಂ ಮುಖಂಡರು ಏನು ಮಾಡಿದ್ರು ಅಂತ ಮಾದ್ಯಮದಲ್ಲಿ ನೋಡಿದ್ದೇವೆ. ಅವರ ಸ್ಟೇಟ್ಮೆಂಟ್ ನೋಡಿದ್ರೆ ಹಿಂದೂ ಯುವಕರ ಮೇಲೆ ದಬ್ಬಾಳಿಕೆ ಹೆಚ್ಚು ಮಾಡ್ತಾರೆ ಅನಿಸುತ್ತde. ಈ ಜಿಲ್ಲೆಯಲ್ಲಿ ಶಾಂತಿ ತರುವುದನ್ನು ಬಿಟ್ಟು ಅಶಾಂತಿಗೆ ನಾಂದಿ ಹಾಡಿ ಹೋಗಿದ್ದಾರೆ. ಭಾವನೆಗಳ ಜೊತೆ ಚೆಲ್ಲಾಟವಾಡುವ ಕೆಲಸಕ್ಕೆ ರಾಜ್ಯ ಸರ್ಕಾರ ಗೃಹ ಸಚಿವರು ಮುಂದಾಗಿದ್ದಾರೆ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ವಿರುದ್ಧ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಕಿಡಿಕಾರಿದ್ದಾರೆ.

ಸ್ಪೀಕರ್ ಖಾದರ್ ಒಂದು ಧರ್ಮದ ಪರವಾಗಿ ವಾದ ಮಾಡುತ್ತಿದ್ದಾರೆ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ವಾಗ್ದಾಳಿ ಮಾಡಿದ್ದು, ಈ ಹಿಂದೆ ಫಾಜಿಲ್ ಹತ್ಯೆಯಾದಾಗ ಆರೋಪಿಗಳ ಫೋಟೋ ಬಿಡುಗಡೆ ಮಾಡಿದ್ರು. ಎಲ್ಲರಿಗೂ ಮುಖ ಕಾಣುವಂತೆ ಮಾಡಿದ್ರು. ಆದ್ರೆ ಸುಹಾಸ್ ಶೆಟ್ಟಿ ಕೊಲೆ ಆರೋಪಿಗಳ ಫೋಟೋವನ್ನು ಮುಖ ಮುಚ್ಚಿ ಬಿಡುಗಡೆ ಮಾಡಿದ್ದಾರೆ. ಇದರಲ್ಲೇ ಗೊತ್ತಾಗುತ್ತಿದೆ, ಪೊಲೀಸ್ ಇಲಾಖೆ ಸಿದ್ದರಾಮಯ್ಯ ಅಣತಿಯಂತೆ ಖಾದರ್ ಅಣತಿಯಂತೆ ನಡೆಯುತ್ತಿದೆ ಎಂದು. ಪೊಲೀಸ್ ಇಲಾಖೆ ಅವ್ರೆ ಇದರ ಹಿಂದೆ ಇದ್ದಾರೆ ಅಂತ ಅನುಮಾನ ಕಾಡ್ತಿದೆ. ಬಜ್ಪೆ ಪೊಲೀಸರ ಮೇಲು ಅನುಮಾನ ಮೂಡಿದೆ. ಕೊಲ್ಲುವ ಸಮಯದಲ್ಲಿ ಬುರ್ಖಾಧಾರಿ ಮಹಿಳೆಯರು ಇದ್ರು. ಅವರನ್ನು ಯಾಕೆ ಅರೆಸ್ಟ್ ಮಾಡಿಲ್ಲ..? ಇದೆಲ್ಲವೂ ಕೂಡ ನಮಗೆ ಸಂಶಯ ಮೂಡಿಸುತ್ತಿದೆ. ಸಿಸಿಟಿವಿ ನೋಡಿದ್ರೆ ಕೊಲೆ ಹಿಂದೆ 15 ಜನ ಇರುವ ಅನುಮಾನ ಇದೆ ಎಂದಿದ್ದಾರೆ.

ಶಾಸಕ ಡಾ.ವೈ ಭರತ್ ಶೆಟ್ಟಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ವಿಚಾರವಾಗಿ ಮಾತನಾಡಿ, ಸ್ಪೀಕರ್ ಯುಟಿ ಖಾದರ್ ವಿರುದ್ದ ಶಾಸಕ ಡಾ.ವೈ ಭರತ್ ಶೆಟ್ಟಿ ವಾಗ್ದಾಳಿ ಮಾಡಿದ್ದಾರೆ. ಪ್ರಕರಣ ತನಿಖೆ ಹಂತದಲ್ಲಿ ಇರುವಾಗಲೇ ಯುಟಿ ಖಾದರ್ ಫಾಝೀಲ್ ಕುಟುಂಬಕ್ಕೆ ಕ್ಲೀನ್ ಚಿಟ್ ನೀಡಿದ್ದಾರೆ. ಖಾದರ್ ವಿಧಾನಸಭೆ ಯಲ್ಲಿ ಮೇಲೆ ಕೂತು ನಮಗೆಲ್ಲಾ ಪಾಠ ಮಾಡುತ್ತಾರೆ. ಇಲ್ಲಿ ಪ್ರಕರಣದ ಹಾದಿ ತಪ್ಪಿಸುವ ಕೆಲಸ ಮಾಡಿದ್ದಾರೆ. ಯುಟಿ ಖಾದರ್ ಮೊದಲು ರಾಜೀನಾಮೆ ನೀಡಲಿ. ಗೃಹಸಚಿವ ಡಾ.ಜಿ ಪರಮೇಶ್ವರ್ ಮಂಗಳೂರಿಗೆ ಬಂದು ಮುಸ್ಲಿಂ ಮುಖಂಡರ ಸಭೆ ಮಾಡಿದ್ದಾರೆ. ನಾವು ನಿಮ್ಮ ಜೊತೆ ಇದ್ದೇವೆ ಅಂತಾ ಹೇಳಿದ್ದಾರಾ? ಸೌಜನ್ಯ ಕ್ಕಾದರೂ ಶಾಸಕರ ಜೊತೆ ಮಾತನಾಡಿದ್ದಾರಾ? ಅಸ್ತಿತ್ವವೇ ಆಗದ ಆ್ಯಂಟಿ ಕಮ್ಯುನಲ್ ಫೋರ್ಸ್ ಮಾಡಿದ್ದಾರೆ. ಇದು ಆ್ಯಂಟಿ ಕಮ್ಯುನಲ್ ಫೋರ್ಸ್ ಅಲ್ಲ, ಸರ್ಕಾರ ಆ್ಯಂಟಿ ಹಿಂದೂ ಫೋರ್ಸ್ ಎಂದು ವ್ಯಂಗ್ಯವಾಡಿದ್ದಾರೆ.

ಸುಹಾಸ್ ಶೆಟ್ಟಿಯ ಹತ್ಯೆ NIA ತನಿಖೆ ಆಗಬೇಕು ಎಂದು ಶಾಸಕ ಹರೀಶ್ ಪೂಂಜಾ ಹೇಳಿದ್ದಾರೆ. ಸುಹಾಸ್ ಶೆಟ್ಟಿ ಹತ್ಯೆಯಲ್ಲಿ ಹಿಂದುಗಳಿಬ್ಬರು ಇದ್ದಾರೆ ಅಂತ ಹೇಳಿದ್ದಾರೆ. ಇತಿಹಾಸ ತೆಗೆದು ನೋಡಿದ್ರೆ ನಮ್ಮವರೇ ನಮ್ಮವರನ್ನು ಸಂಚು ರೂಪಿಸಿ ಕೊಂದಿರೋದು ಗೊತ್ತಾಗತ್ತೆ, ಮೊಘಲರ ಕಾಲದಿಂದಲೂ ಕೆಲ ಷಂಡ ಹಿಂದೂಗಳು ಈ ರೀತಿ ದುಡ್ಡಿನ ಆಸೆಗೆ ಮಾಡಿದ್ದಾರೆ. ಸುಹಾಸ್ ಹತ್ಯೆ ಕೇಸ್ ನಲ್ಲಿ ಸುಫಾನ್ ಹೆಸರು ಬಂದಿದೆ. ಆತ ಆರೋಪಿಯಾಗಿದ್ದಾನೆ. ಬಜ್ಪೆ ಪೊಲೀಸ್ ಠಾಣೆಯ ಅಧಿಕಾರಿ ರಶೀದ್ ಹಾಗೂ ಸೂಫಾನ್ ಗೆ ಏನು ಸಂಬಂಧ? ಕಳೆದ ಒಂದು ತಿಂಗಳ ಸಿಸಿ ಟಿವಿ ದೃಶ್ಯಗಳನ್ನು ತೆಗೆದು ನೋಡಿದ್ರೆ ಸೂಫಾನ್ ಹಾಗೂ ಅಲ್ಲಿನ ಅಧಿಕಾರಿಗಳ ಸಂಬಂಧ ತಿಳಿಯತ್ತದೆ ಎಂದಿದ್ದಾರೆ.

ಸುಹಾಸ್ ಹತ್ಯೆ ಹಿಂದೆ ಯಾರೆಲ್ಲಾ ಇದ್ರು ಅನ್ನೋದು ತಿಳಿಯಬೇಕು. ಇದು ಈ ಷಂಡ ಕಾಂಗ್ರೆಸ್ ಸರ್ಕಾರದಿಂದ ಆಗಲ್ಲ. NIA ತನಿಖೆ ಇಂದ ಮಾತ್ರ ಸತ್ಯ ಹೊರ ಬರತ್ತದೆ. ಹೀಗಾಗಿ ನಾವು NIA ತನಿಖೆಗೆ ಆಗ್ರಹ ಮಾಡ್ತಿದ್ದೇವೆ. ನಮ್ಮ ಬಿಜೆಪಿ ಅಧ್ಯಕ್ಷರಾದ ವಿಜಯೇಂದ್ರ ಈಗಾಗಲೇ NIA ತನಿಖೆ ಆಗಬೇಕು ಅಂತ ಹೇಳಿದ್ದಾರೆ. ನಮ್ಮ ಜಿಲ್ಲೆಯ ಸಂಸದರು ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ. ಸುಹಾಸ್ ಹತ್ಯೆಗೆ ನ್ಯಾಯ ಸಿಗಲು NIA ತನಿಖೆ ಆಗಲೇಬೇಕು ಎಂದು ಆಗ್ರಹ ಮಾಡಿದ್ದಾರೆ.