ಕಬ್ಬಿನ FRP ದರ ಹೆಚ್ಚಳಕ್ಕೆ ಆಗ್ರಹಿಸಿ ಕಳೆದ ಮೂರು ದಿನಗಳಿಂದ ರೈತರು ನಗರದ ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಇನ್ನು ಮೂರು ದಿನಗಳಿಂದ ರೈತರು ಪ್ರತಿಭಟನೆ ನಡೆಸುತ್ತಾಇದ್ದರೂ ಪ್ರತಭಟನಾ ಸ್ಥಳಕ್ಕೆ ಯಾವುದೇ ಅಧಿಕಾರಿ ಅಥವಾ ಜನಪ್ರತಿನಿಧಿಗಳು ಬಾರದೇ ಇದ್ದಕ್ಕೆ ಕುಪಿತಗೊಂಡ ರೈತರು ವಿದಾನ ಸೌದಧ ಕಡೆಗೆ ಉರುಳು ಸೇವೆ ಮಾಡುತ್ತಾ ಹೋದರು.
ಈ ವೇಳೆ ಮಧ್ಯಪ್ರವೇಶಿಸಿದ್ದ ಪೊಲೀಸರು ವಿಧಾನ ಸೌಧದ ಕಡೆ ಹೂರಟ ಚಳುವಳಿ ತಡೆದು ರೈತರನ್ನ ಪೊಲೀಸರು ಸಮಾಧಾನಗೊಳಿಸಿದರು ಆರ್ಬಿಐ ಮುಖ್ಯಸ್ಥರನ್ನು ಕರೆಸಿ ಕೃಷಿ ಸಾಲದ ಸಮಸ್ಯೆಗಳ, ಹಾಗೂ ಕಂದಾಯ ಇಲಾಖೆ ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟವರನ್ನು ಕರೆಸಿ ಸಮಸ್ಯೆ ಬಗೆಹರಿಸುವುದಾಗಿ ಹೇಳಿ ರೈತರನ್ನು ಸಮಾಧಾನ ಮಾಡಿದ್ದರು.
ಕೇಂದ್ರ ಸರ್ಕಾರ ಕಬ್ಬಿನ ಎಫ್ ಆರ್ ಪಿ ದರ ನಿಗದಿ ಮಾಡುವಾಗ ರೈತರ ಕಣ್ಣಿಗೆ ಮಣ್ಣೆರಚುತಿದೆ, ಕಬ್ಬು ಧರ ಏರಿಕೆ ಮಾಡಿದ್ದೇವೆ ಎನ್ನುತಲೆ ಕಳೆದ ನಾಲ್ಕು ವರ್ಷಗಳಿಂದ ಕಬ್ಬಿನಿಂದ ಬರುವ ಸಕ್ಕರೆ ಇಳುವರಿಯನ್ನ 8.5 ರಿಂದ 10.25ಕ್ಕೆ ಏರಿಕೆ ಮಾಡಿದೆ ಇದರಿಂದ ಕಬ್ಬುಬೆಲೆ ಏರಿಕೆ ಮಾಡಲಾಗಿದೆ ಎನ್ನುತ್ತಿದ್ದರು ರೈತರಿಗೆ ಹೆಚ್ಚುವರಿ ಬೆಲೆ ಸಿಗುತ್ತಿಲ್ಲ ,ಸಕ್ಕರೆ ಕಾರ್ಖಾನೆಗಳು ಮಾತ್ರ ಕಟಾವು ಸಾಗಾಣಿಕೆ ವೆಚ್ಚವನ್ನು ಏರಿಕೆ ಮಾಡುತ್ತ ರೈತರನ್ನು ನಷ್ಟ ಸಂಕಷ್ಟಕ್ಕೆ ದುಡುತ್ತಿದ್ದಾರೆ ಇದರಿಂದ ರೈತರಿಗೆ ನೂರಾರು ಕೋಟಿ ರೂ ಮೋಸವಾಗುತ್ತಿದೆ.
ಕೇಂದ್ರ ಸರ್ಕಾರದ ಸಕ್ಕರೆ ನಿಯಂತ್ರಣ ಕಾಯ್ದೆ 1966 ಪ್ರಕಾರ ಕಬ್ಬು ಪೂರೈಕೆ ಮಾಡಿದ ರೈತನಿಗೆ 14 ದಿನದಲ್ಲಿ ಹಣ ಪಾವತಿಸಬೇಕೆಂಬ ಕಾನೂನು ಜಾರಿಯಲ್ಲಿದೆ ವಿಳಂಬವಾದರೆ ಶೇ 15 ಬಡ್ಡಿ ಸೇರಿಸಿ ರೈತರಿಗೆ ಪಾವತಿಸಬೇಕು ಎನ್ನುವ ಕಾನೂನು ಇದ್ದರೂ ಕಾರ್ಖಾನೆಗಳು ಎರಡು ಮೂರು ತಿಂಗಳ ತನಕ ಹಣ ಪಾವತಿಸುತ್ತಿದ್ದಾರೆ ಯಾಕೆ ಸರ್ಕಾರ ಕಾರ್ಖಾನೆಗಳ ಮೇಲೆ ಕ್ರಮ ಕೈಗೊಳ್ಳುತ್ತಿಲ್ಲ,
ಸಕ್ಕರೆ ಕಾರ್ಖಾನೆಗಳಿಂದ ರೈತರಿಗೆ ಕಬ್ಬಿನ ಹಣ ಬಾಕಿ ಇಲ್ಲ ಎನ್ನುತ್ತಾರೆ ಆದರೆ ರೈತರು ಹೇಳುತ್ತಿರುವುದು ಸುಳ್ಳೇ, ಸರ್ಕಾರದ ಪ್ರತಿನಿಧಿ,ಕಾರ್ಖಾನೆ ಪ್ರತಿನಿಧಿ, ಕಬ್ಬು ಬೆಳೆಗಾರ ಸಂಘದ ಪ್ರತಿನಿಧಿ ಒಳಗೊಂಡ ಸಮಿತಿ ರಚಿಸಿ ತನಿಖೆ ನಡೆಸಿ ಶ್ವೇತ ಪತ್ರ ಹೊರಡಿಸಲಿ ಆಗ ರಾಜ್ಯದ ಜನರಿಗೆ ಕಾರ್ಖಾನೆಗಳು ನಡೆಸುವ ವಂಚನೆ ತಿಳಿಯಲಿ ದೇಶದ ಜನರಿಗೆ ಕಬ್ಬು ಬೆಳೆದು ಸಿಹಿ ನೀಡುವ ರೈತ, ರಸ್ತೆಯಲ್ಲಿ ಮಳೆ ಚಳಿಯಲ್ಲಿ ಮಲಗಿ ಕಹಿ ಅನುಭವಿಸಬೇಕೆ, ಇದು ಪ್ರಜಾ ಸರ್ಕಾರಕ್ಕೆ ಶೋಭೆ ತರುತ್ತದೆಯೆ ಎಂದು ರಾಜ್ಯ ಅಧ್ಯಕ್ಷ ಕುರುಬೂರು ಶಾಂತಕುಮಾರ್, ಚಳುವಳಿ ಜಾಗದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬ್ಯಾಂಕುಗಳು ರೈತರನ್ನು ಬಿಕ್ಷುಕರಂತೆ ಕಾಣುತ್ತಿದ್ದಾರೆ, ಕಾನೂನು ನಿಯಮಗಳನ್ನು ಉಲ್ಲಂಗಿಸುತ್ತಿದ್ದಾರೆ ಎಂದು 5 ತಿಂಗಳ ಹಿಂದೆ ಬೆಂಗಳೂರು ರಿಸರ್ವ್ ಬ್ಯಾಂಕ್ ಮುಂದೆ ಚಳುವಳಿ ನಡೆಸಿ ಗಮನ ಸೆಳೆದರು ,ಆರ್ ಬಿ ಐ ಮುಖ್ಯಸ್ಥರು ಸಮಸ್ಯೆ ಬಗೆಹರಿಸದೇ ಇದ್ದ ಕಾರಣ ರೈತರು ಆತ್ಮಹತ್ಯೆ ದಾರಿ ಹಿಡಿದಿದ್ದಾರೆ, ಇದಕ್ಕೆ ಆರ್ಬಿಐ ನಿರ್ಲಕ್ಷ ನೀತಿ ಕಾರಣವಲ್ಲವೇ
ಬಗರ್ ಹುಕುಂ ಸಾಗುವಳಿ ಹತ್ತಾರು ವರ್ಷಗಳಿಂದ ಕೃಷಿ ಮಾಡುತ್ತಿರುವ ರೈತರಿಗೆ ಸಾಗುವಳಿ ಪತ್ರ,ಅರಣ್ಯ ಭೂಮಿಯನ್ನು ವ್ಯವಸಾಯ ಮಾಡುತ್ತಿರುವ ರೈತರಿಗೆ ಸಾಗುವಳಿ ಪತ್ರವನ್ನು ನೀಡದೆ ಸಾಗುವಳಿ ಪತ್ರ ನೀಡದೆ, ಮುಗ್ಧ ಅಮಾಯಕ ಲಕ್ಷಾಂತರ ರೈತರ ಕೃಷಿಯಿಂದ ಒಕ್ಕಲಿಬಿಸುವ ಕಾರ್ಯ ದಿಂದ ರೈತರು ಬೀದಿ ಪಾಲಾಗುತ್ತಿದ್ದಾರೆ ಇದು ಕಂದಾಯ ಸಚಿವ ಅಶೋಕ್ ರವರಿಗೆ ಕಾಣುತ್ತಿಲ್ಲವೇ, ಗ್ರಾಮ ವಾಸ್ತವ್ಯ ಎಂದು ನಾಟಕವಾಡುವುದು ಏಕೆ ಹತ್ತಾರು ವರ್ಷಗಳಿಂದ ವ್ಯವಸಾಯ ಮಾಡುತ್ತಿರುವ ರೈತರಿಗೆ ನ್ಯಾಯನೀಡಬೇಕು ಎಂದು ಒತ್ತಾಯಿಸಿದ್ದಾರೆ.