ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ (Renuka swamy murder case) ಜೈಲು ಪಾಲಾಗಿರುವ ಆರೋಪಿ ನಟ ದರ್ಶನ್(Actor darshan )ಗೆ ಪರಪ್ಪನ ಅಗ್ರಹಾರದಲ್ಲಿ ವಿಚಾರಣಾ ಕೈದಿಯಾಗಿ ನಂಬರ್ 6160 ನೀಡಲಾಗಿದ್ದು ಇದೀಗ ಇದನ್ನೇ ನಟ ದರ್ಶನ್ ಅಂದ ಅಭಿಮಾನಿಗಳು ಟ್ರೆಂಡ್ (Trend) ಆಗಿಸುವ ಪ್ರಯತ್ನ ನಡೆಸಿದ್ದಾರೆ.
![](https://pratidhvani.com/wp-content/uploads/2024/07/IMG_8486.jpeg)
ಈಗಾಗಲೇ ಆಟೋಗಳ(Auto) ಮೇಲೆ ಬೈಕ್ ಗಳ (Bike) ಮೇಲೆ ಕೈದಿ ನಂಬರ್ ಸ್ಟಿಕ್ಕರ್ ಹಾಕಿಸಿ ಕೆಲ ಅಭಿಮಾನಿಗಳು ವಿಡಿಯೋ ಮಾಡಿದ್ರೆ,ಇನ್ನೂ ಕೆಲವರು ಮೈ ಮೇಲೆ ಅಚ್ಚೆ ಹಾಕಿಸಿಕೊಂಡಿದ್ದಾರೆ ಮತ್ತು ಕೆಲ ಅಭಿಮಾನಿಗಳು ಒಂದು ಹೆಜ್ಜೆ ಮುಂದೆ ಹೋಗಿ ಕೈದಿಯ ರೀತಿ ಸ್ಲೇಟ್ ಹಿಡಿದು ಕೈದಿ ನಂಬರ್ 6160 ಅಂತ ಪೋಸ್ ಕೊಟ್ಟಿದ್ದಾನೆ.
![](https://pratidhvani.com/wp-content/uploads/2024/07/IMG_8487-1.jpeg)
ಆದರೆ ಅತಿರೇಕಕ್ಕೆ ಹೋಗಿರುವ ಕೆಲ ದರ್ಶನ್ ಅಭಿಮಾನಿಗಳು ಈ ಫೋಟೋಗಳನ್ನ ಮಾರ್ಫ್ ಮಾಡಿ ಇದಕ್ಕೆ ಕಿಚ್ಚ ಸುದೀಪ್ ರ ಮುಖವನ್ನ ಕೂರಿಸಿ ಕುಚೇಷ್ಟೆ ಮೆರೆದಿದ್ದಾರೆ. ಚಕ್ರವರ್ತಿ ಚಂದ್ರಚೂಡ (Chakravarthy chandrachood) ತಮ್ಮ ಎಕ್ಸ್ (X account) ಖಾತೆಯಲ್ಲಿ ಹಂಚಿಕೊಂಡು ಇದಕ್ಕೆ ವಿಡಂಬನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ.
ಒಟ್ಟಾರೆ ನಟ ದರ್ಶನ್ ಜೈಲು ಪಾಲಾಗಿರುವ ಹಿನ್ನೆಲೆ ಅವರ ಕೆಲ ಅಂದಾಭಿಮಾನಿಗಳ ವರ್ತನೆ ನೆಟ್ಟಿಗರ ಆಕ್ರೋಶಕ್ಕೆ ಟೀಕೆಗಳಿಗೆ ಕಾರಣವಾಗಿದೆ.ಅಭಿಮಾನ ಇರಬೇಕು,ಆದರೆ ಅಂದಾಭಿಮಾನ ಇರಬಾರದು ಎಂದು ದರ್ಶನ್ ಅಭಿಮಾನಿಗಳನ್ನ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.