ರಾಜ್ಯಾದ್ಯಂತ ಮಳೆ ಕೊರತೆ ಹಿನ್ನಲೆಯಲ್ಲಿ ಬರ ಘೋಷಣೆಗೆ ಪೂರಕವಾಗಿ ಅಗತ್ಯವಿರುವ ಬೆಳೆ ಪರಿಸ್ಥಿತಿ ವಾಸ್ತವ ವರದಿಯನ್ನು ,(ಗ್ರೌಂಡ್ ಟ್ರುಥ್ ವೆರಿಫಿಕೇಷನ್ ರಿಪೋ) ಮಾಸಂತ್ಯದ ಒಳಗೆ ಒದಗಿಸುವಂತೆ ಕೃಷಿ ಸಚಿವ ಚಲುವರಾಯಸ್ವಾಮಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಶುಕ್ರವಾರ (ಆಗಸ್ಟ್ 25) ಇಲಾಖೆಯ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಸಚಿವರು ರ ತೀವ್ರ ಸ್ವರೂಪದ ಸಮಸ್ಯೆ ಎದುರಿಸುತ್ತಿರುವ ಎಲ್ಲಾ ತಾಲ್ಲೂಕುಗಳಲ್ಲಿ ಕೂಡಲೇ ಆಯ್ದ ಗ್ರಾಮಗಳ ಬೆಳೆ ಪರಿಸ್ಥಿತಿ ನೈಜ ವರದಿ ಶೀಘ್ರ ಪಡೆದು ಕ್ರೋಢೀಕರಿಸಿ ಸಲ್ಲಿಸುವಂತೆ ಸೂಚಿಸಿದರು.
ಬರ ಪರಿಸ್ಥಿತಿ ಇರುವುದರಿಂದ ಜಿಲ್ಲಾ ಮಟ್ಟದಲ್ಲಿ ಅಧಿಕಾರಿಗಳು ಕೇವಲ ಕಚೇರಿಯಲ್ಲಿ ಕೂರದೇ ರೈತರ ಜಮೀನಿಗೆ ತೆರಳಿ ಪರಿಸ್ಥಿತಿ ಅವಲೋಕಿಸಿ ಸಲಹೆ, ಸಹಕಾರ ನೀಡವುದರ ಜೊತೆಗೆ ಆತ್ಮವಿಶ್ವಾಸ ತುಂಬುವ ಕೆಲಸ ಮಾಡುವಂತೆ ಕೆಳಹಂತದ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡುವಂತೆ ತಿಳಿಸಿದರು.
ನಿಯೋಜಿತ ನೋಡಲ್ ಅಧಿಕಾರಿಗಳು ಆಗಿಂದಾಗ್ಗೆ ಜಿಲ್ಲೆಗಳಿಗೆ ಭೇಟಿ ನೀಡಿ ಬರ ಪರಿಸ್ಥಿತಿ ,ಇಲಾಖಾ ಯೋಜನೆಗಳ. ಅನುಷ್ಠಾನದ ಬಗ್ಗೆ ಪರಿಶೀಲನೆ ಕೆಳಹಂತದ ಅಧಿಕಾರಿಗಳಿಗೆ ಸಲಹೆ ಸೂಚನೆ ನೀಡಿವಂತೆ ಹಾಗೂ ಕೈಗೊಂಡ ಕೆಲಸದ ಬಗ್ಗೆ ಕಾಲಕಾಲಕ್ಕೆ ತಮಗೆ ವರದಿ ನೀಡುವಂತೆ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸಚಿವ ಚಲುವರಾಯಸ್ವಾಮಿ ಸೂಚನೆ ನೀಡಿದರು..
ರಾಜ್ಯದ 29 ಜಿಲ್ಲೆಗಳಲ್ಲಿ ಆಗಷ್ಟ್ ನಲ್ಲಿ ತೀವೃ ಮಳೆ ಕೊರತೆ ಉಂಟಾಗಿದ್ದು ಸತತ ಮೂರು ವಾರ ಮಳೆ ಬಿದ್ದಿಲ್ಲ. ಬಾಗಕೋಟೆ ,ಗದಗ ತುಮಕೂರು ಬೆಳಗಾವಿ ಸೇರಿ ದಂತೆ ಒಟ್ಟು 4 ಜಿಲ್ಲೆಗಳ 194 ಗ್ರಾಮಗಳಲ್ಲಿ ಬಿತ್ತನೆ ಮಾಡಲು ಸಾಧ್ಯವಾಗಿಲ್ಲ ಹಾಗಾಗಿ 35209 ರೈತರಿಗೆ 35 ಕೋಟಿ ಬೆಳೆ ವಿಮೆಯನ್ನು ಶೀಘ್ರವಾಗಿ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಚಿವರು ಸೂಚನೆ ನೀಡಿದರು..
ಈ ವರ್ಷ 16 ಲಕ್ಷ ರೈತರು ವಿಮೆಗೆ ನೊಂದಣಿ ಮಾಡಿದ್ದಾರೆ. ಈ ಬಾರಿ ವಿಮೆ ನೊಂದಣಿ ಪ್ರಾರಂಭ ತಡವಾದ ಕಾರಣ ಹಾಗೂ ಮಳೆ ಇಲ್ಲದೆ ಬಿತ್ತನೆ ವಿಳಂಬವಾದ ಕಾರಣ ವಿಮೆ ನೊಂದಣಿ ಕಡಿಮೆಯಾಗಿದೆ ಅದರೆ ಎಲಾ ನೋಂದಾಯಿತ ರೈತರಿಗೆ ವಿಮೆ ಕ್ಲೈಮ್ ಸಿಗುವಂತೆ ನೊಡಿಕೊಳ್ಳಿ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದರು
ರೈತರಿಗೆ ನ್ಯಾನೋ ಯೂರಿಯಾ ,ನ್ಯಾನೋ ಡಿ.ಎ.ಪಿ ಬಳಕೆ ಹೆಚ್ಚು ಲಾಭದಾಯಕವಾಗಿರಿವುದರಿಂದ ಒಂದೆರೆಡು ವರ್ಷ ಬೆಳೆಗಳ ಪ್ರಯೋಗ ಮಾಡಿ, ಕೃಷಿ ವಿಶ್ವ ವಿದ್ಯಾನಿಲಯ ಹಂತದಲ್ಲಿಯೂ ಪರೀಕ್ಷೆ ಮಾಡಿ ಫಲಿತಾಂಶ ನೋಡಿದ ನಂತರ ನ್ಯಾನೋ ಯೂರಿಯ ಬಳಕೆ ಬಗ್ಗೆ ಹೆಚ್ಚಿನ ಅರಿವು ಮೂಡಿಸಲು ಕ್ರಮ ವಹಿಸಿ ಎಂದು ಸಚಿವರು ಹೇಳಿದರು.
ಅಂತರ್ಜಲ ವೃದ್ದಿ ,ನೀರಿನ ಸಂಗ್ರಹ ಮಡಿ ಇಂಗಿಸು ಪ್ರಕ್ರಿಯೆ ನಡೆಸಲು ಕೃಷಿ ಭಾಗ್ಯ ಯೋಜನೆಯಡಿ ಹೆಚ್ಚಿನ ಕೃಷಿ ಹೊಂಡಗಳ ನಿರ್ಮಾಣ ಮಾಡಲು ಕ್ರಮವಹಿಸಬೇಕಿದೆ ಎಂದು ಸಚಿವರು ಹೇಳಿದರು.
ಕೇಂದ್ರ ಪುರಸ್ಕೃತ ಯೋಜನೆಗಳು ಹಾಗೂ ಇತರ ಯೋಜನೆಗಳನ್ನು ಸಂಯೋಜಿಸಿ ಇದನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಗೊಳಿಸುವಂತೆ ಸಚಿವರು ತಿಳಿಸಿದರ.
ನವೋದ್ಯಮ ಯೋಜನೆಯಡಿ 300 ಹಾರ್ವೆಸ್ಟರ್ ಹಬ್ ಸ್ಥಾಪಿಸಲು ನಿರ್ಧರಿಸಲಾಗಿದೆ ಈ ಸಾಲಿನಲ್ಲಿ 100 ಹಬ್ ಗಳನ್ನು ಬೇಗ ಸ್ಥಾಪಿಸಿ ರೈತರ ಬಳಕೆಗೆ ಅವಕಾಶ ಕಲ್ಪಿಸಿ ಎಂದು ಚಲುವರಾಯಸ್ವಾಮಿ ಹೇಳಿದರು.
ಕೃಷಿ ಇಲಾಖೆ ಕಾರ್ಯದರ್ಶಿ ಅನ್ಬುಕುಮಾರ್ ಅವರು ಸಭೆಯಲ್ಲಿ ಬರ ನಿರ್ವಹಣೆ ಹಾಗೂ ಕೃಷಿ ಇಲಾಖೆ ಯೋಜನೆಗಳ ಅನುಷ್ಠಾನದ ಬಗ್ಗೆ ಹಲವು ಸಲಹೆ ಸೂಚನೆಗಳನ್ನು ನೀಡಿದರು.
ಕೃಷಿ ಉತ್ಪಾದಕರ ಸಂಘಗಳ ಬಲವರ್ಧನೆ, ವಿಸ್ತರಣೆ, ಅವರ ಉತ್ಪನ್ನಗಳ ಮೌಲ್ಯವರ್ಧನೆಗೆ ಅನುಸರಿದಬೇಕಾಗ ಕ್ರಮಗಳ ಬಗ್ಗೆ ಸಚಿವರ ಗಮನ ಸೇಳೆದ ಕಾರ್ಯದರ್ಶಿಯವರು, ಇದರಲ್ಲಿ ತಳಮಟ್ಟದ ಅಧಿಕಾರಿಗಳ ಪಾತ್ರ ಮಹತ್ವದ್ದು ಎಂದರು..
ಕೃಷಿ ಯಂತ್ರಿಕರಣ ವಿಸ್ತರಣೆ ಜೊತೆಗೆ ಸಹಕಾರಿ ಬೇಸಾಯ ಪದ್ಧತಿ, ಕೃಷಿ ನವೋದ್ಯಮ, ಹಾಗೂ ಕೃಷಿ ಭಾಗ್ಯ ಯೋಜನೆ ಪರಿಣಾಮಕಾರಿ ಅನುಷ್ಟಾನದ ಬಗ್ಗೆ ಅವರು ಸಲಹೆಗಳನ್ನು ನೀಡಿದರು.
ಇಲಾಖೆಯ ಆಯುಕ್ತರಾದ ವೈ.ಎಸ್.ಪಾಟೀಲ್ ರವರು ಇಲಾಖೆಯ ಹವಾಮಾನ, ಮಳೆ,ಬೆಳೆ ಪರಿಸ್ಥಿತಿ, ಇಲಾಖೆ ಯೋಜನೆಗಳ ಅನುಷ್ಠಾನ ಬಗೆಗಿನ ವಿವರಗಳನ್ನು ಸಭೆಗೆ ಮಂಡಿಸಿದರು..
ಕೃಷಿ ಇಲಾಖೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಇಲಾಖೆ ನಿರ್ದೇಶಕರಾದ ಡಾ.ಪುತ್ರ, ಜಲಾನಯನ ಅಭಿವೃದ್ಧಿ ಇಲಾಖೆ ಆಯುಕ್ತ ಗಿರೀಶ್, ನಿರ್ದೇಶಕ ಶ್ರೀನಿವಾಸ್, ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತ ವ್ಯವಸ್ಥಾಪಕ ನಿರ್ದೇಶಕ ದೇವರಾಜು ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.