ಮೈಸೂರು: ಸಚಿವ ವಿ.ಸೋಮಣ್ಣ ಅಭಿಮಾನಿಗಳು,ಬೆಂಬಲಿಗರಿಂದ ಮೈಸೂರಿನ ನಿತ್ಯಾನಂದ ಕಲ್ಯಾಣ ಮಂಟಪದಲ್ಲಿ ಸಭೆಯನ್ನು ಹಮ್ಮಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಸಭೆ ಆರಂಭವಾಗಲಿದೆ.
ಸಚಿವ ಸೋಮಣ್ಣರನ್ನ ಬಿಜೆಪಿಯಲ್ಲೇ ಉಳಿಸಿಕೊಳ್ಳುವ ಸಲುವಾಗಿ ಅಭಿಮಾನಿಗಳು ಸಭೆಯನ್ನು ಹಮ್ಮಿಕೊಂಡಿದ್ದಾರೆ.
ಸೋಮಣ್ಣಗೆ ಬಿಜೆಪಿಯಲ್ಲಿ ಸೂಕ್ತ ಸ್ಥಾನಮಾನ ಕೊಡಬೇಕು ಎಂದು ಹೈಕಮಾಂಡ್ ಗೆ ಒತ್ತಡ ಹಾಕಲು ಸೋಮಣ್ಣ ಅಭಿಮಾನಿಗಳು ಸಭೆ ನಡೆಸುತ್ತಿದ್ದಾರೆ.
ಸಭೆ ನಡಸಿ ಹೈಕಮಾಂಡ್ ಮೇಲೆ ಒತ್ತಡ ಹೇರಲು ಚಿಂತಿಸಿ ಸಭೆ ಕರೆಯಲಾಗಿದೆ. ಸೋಮಣ್ಣ ಸಂಘಟನಾ ಚತುರ. ಹಳೆ ಮೈಸೂರು ಭಾಗಕ್ಕೆ ಮಹಾಶಕ್ತಿ. ಅವರ ಹಿರಿತನದ ಲಾಭ ಬಿಜೆಪಿಗೆ ಸಿಗಬೇಕು. ಪಕ್ಷಕ್ಕೆ ಅವರು ಕೊಟ್ಟ ಕೊಡುಗೆ ವ್ಯರ್ಥವಾಗದಿರಲಿ ಎಂಬುದು ಅಭಿಮಾನಿಗಳ ಅಭಿಪ್ರಾಯ.
ಸೋಮಣ್ಣ ಕಾಂಗ್ರೆಸ್ ಸೇರುತ್ತಾರೆ ಎಂಬ ವದಂತಿ ಬೆನ್ನಲ್ಲೇ ಈ ಸಭೆ ನಡೆಯುತ್ತಿರುವುದು ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಮೈಸೂರು ಭಾಗದ ಪ್ರಮುಖ ಮುಖಂಡರನ್ನ ಒಳಗೊಂಡ ಸಭೆ ಇದಾಗಿದ್ದು, ಕಲ್ಯಾಣ ಮಂಟಪದತ್ತ ಸೋಮಣ್ಣ ಬೆಂಬಲಿಗರು ಆಗಮಿಸುತ್ತಿದ್ದಾರೆ.