• Home
  • About Us
  • ಕರ್ನಾಟಕ
Monday, November 3, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ವಿದೇಶ

ಸಂಯುಕ್ತ ಸರ್ಕಾರಕ್ಕೆ ʼನೊʼ ಎಂದ ಶ್ರೀಲಂಕಾ ವಿಪಕ್ಷ ನಾಯಕರು ; ಆರೋಗ್ಯ ತುರ್ತುಪರಿಸ್ಥಿತಿ ಘೋಷಣೆ

ಪ್ರತಿಧ್ವನಿ by ಪ್ರತಿಧ್ವನಿ
April 5, 2022
in ವಿದೇಶ
0
ಸಂಯುಕ್ತ ಸರ್ಕಾರಕ್ಕೆ ʼನೊʼ ಎಂದ ಶ್ರೀಲಂಕಾ ವಿಪಕ್ಷ ನಾಯಕರು ; ಆರೋಗ್ಯ ತುರ್ತುಪರಿಸ್ಥಿತಿ ಘೋಷಣೆ
Share on WhatsAppShare on FacebookShare on Telegram

ಶ್ರೀಲಂಕಾದಲ್ಲಿ ಉಂಟಾಗಿರುವ ಆರ್ಥಿಕ ಸಮಸ್ಯೆ ನಿವಾರಣೆಗೆ, ಅಧ್ಯಕ್ಷ ಗೋತಬಯ ರಾಜಪಕ್ಸೆ ನೀಡಿರುವ ಸಲಹೆಯನ್ನು ವಿಪಕ್ಷಗಳು ತಿರಸ್ಕರಿಸಿವೆ. ಗೋತಬಯ ಅವರು, ದೇಶದಲ್ಲಿ ‘ಸಂಯುಕ್ತ ಸರ್ಕಾರ’ ರಚಿಸಲು ವಿಪಕ್ಷಗಳಿಗೆ ಆಹ್ವಾನ ನೀಡಿದ್ದರು. ಆದರೆ, ಇದನ್ನು ತಿರಸ್ಕರಿಸಿರುವ ವಿಪಕ್ಷ ನಾಯಕರು ಆಡಳಿತರೂಢ ಸರ್ಕಾರವು ನೆಪ ಮಾತ್ರಕ್ಕೆ ಸಂಯುಕ್ತ ಸರ್ಕಾರ ರಚಿಸುವ ನಾಟಕವಾಡುತ್ತಿದೆ ಎಂದು ಹೇಳಿದ್ದಾರೆ.

ADVERTISEMENT

ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿಕೆಯಾದ ಬಳಿಕ ಮೊತ್ತಮೊದಲ ಪಾರ್ಲಿಮೆಂಟ್ ಅಧಿವೇಶನ ಮಂಗಳವಾರದಿಂದ ಆರಂಭವಾಗಲಿದೆ. ಶ್ರೀಲಂಕಾದೆಲ್ಲೆಡೆ ಪ್ರತಿಭಟನೆಗಳು ತೀವ್ರಗೊಳ್ಳುತ್ತಿದ್ದು, ವಿಪಕ್ಷಗಳು ಕೂಡಾ ಗೋತಬಯ ನೇತೇತ್ವದ ಸರ್ಕಾರದ ರಾಜಿನಾಮೆಗೆ ಆಗ್ರಹಿಸಿವೆ.

ಭಾನುವಾರ ರಾತ್ರಿ ಗೋತಬಯ ರಾಜಪಕ್ಸೆ ಅವರ ಅಣ್ಣ ಮಹಿಂದಾ ರಾಜಪಕ್ಸೆ ಹೊರತಾಗಿ ಎಲ್ಲಾ 26 ಕ್ಯಾಬಿನೆಟ್ ಸಚಿವರು ತಮ್ಮ ಸ್ಥಾನಗಳಿಗೆ ರಾಜಿನಾಮೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸದ್ಯದ ಪರಿಸ್ಥಿತಿಯನ್ನು ನಿಭಾಯಿಸುವ ಸಲುವಾಗಿ ಅಧ್ಯಕ್ಷ ರಾಜಪಕ್ಸೆ ಕೇವಲ ನಾಲ್ಕು ಜನ ಸಚಿವರನ್ನು ನೇಮಿಸಿ ಆದೇಶ ಹೊರಡಿಸಿದ್ದಾರೆ. ಸಂಪೂರ್ಣ ಕ್ಯಾಬಿನೆಟ್ ನಿರ್ಮಾಣಗೊಳ್ಳುವವರೆಗೂ ಈ ನಾಲ್ವರು ಮಾತ್ರ ಸರ್ಕಾರವನ್ನು ಮುನ್ನಡೆಸುವಲ್ಲಿ ರಾಜಪಕ್ಸೆಗೆ ನೆರವಾಗಲಿದ್ದಾರೆ.

ಆಹಾರ, ಇಂಧನ, ಹಾಗೂ ವಿತ್ತೀಯ ಕೊರತೆಯ ಬಳಿಕ ಈಗ ದೇಶದಲ್ಲಿ ಔಷಧಿಗಳ ಕೊರತೆಯೂ ಉಂಟಾಗಿದೆ. ಈ ಕಾರಣಕ್ಕಾಗಿ, ದೇಶದೆಲ್ಲೆಡೆ ‘ಆರೋಗ್ಯ ತುರ್ತುಪರಿಸ್ಥಿತಿ’ಯನ್ನೂ ಘೋಷಿಸಿ ಆದೇಶ ಹೊರಡಿಸಲಾಗಿದೆ.

ದೇಶದ ಕೇಂದ್ರೀಯ ಬ್ಯಾಂಕ್ ಗವರ್ನರ್ ಆಗಿರುವ ಅಜಿತ್ ಕಬ್ರಾಲ್ ಅವರು ಕೂಡಾ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ನೂತನ ಕ್ಯಾಬಿನೆಟ್ ರಚನೆ ವೇಳೆ ನೂತನ ಆಡಳಿತ ಮಂಡಳಿಯನ್ನೂ ರಚಿಸುವಂತೆ ಅವರು ಒತ್ತಾಯಿಸಿದ್ದಾರೆ.

ರಾಜಪಕ್ಸೆ ಕುಟುಂಬದ ಕಳಪೆ ಆಡಳಿತದ ವಿರುದ್ದ ಪ್ರತಿಭಟನೆಗಳು ತೀವ್ರಗೊಳ್ಳುತ್ತಿದ್ದಂತೆಯೇ ದೇಶದೆಲ್ಲೆಡೆ ಸಾಮಾಜಿಕ ಜಾಲತಾಣಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು. ಇದರಿಂದಾಗಿ, ಫೇಸ್ಬುಕ್, ವಾಟ್ಸಾಪ್, ಟ್ವಿಟರ್, ಯೂಟ್ಯೂಬ್ ಸೇರಿದಂತೆ ಹಲವು ಪ್ರಮುಖ ಸಾಮಾಜಿಕ ಜಾಲತಾಣಗಳು ಬಂದ್ ಆಗಿದ್ದವು. ಆದರೆ, ಇದಕ್ಕೆ ತೀವ್ರ ಪ್ರತಿರೋಧ ಉಂಟಾಗುತ್ತಿದ್ದಂತೆಯೇ ಭಾನುವಾರ ಸಂಜೆಯ ವೇಳೆಗೆ ಸಾಮಾಜಿಕ ಜಾಲತಾಣಗಳ ಮೇಲಿನ ನಿರ್ಬಂಧವನ್ನು ವಾಪಸ್ ಪಡೆಯಲಾಗಿತ್ತು.

1948ರಲ್ಲಿ ಸ್ವಾತಂತ್ರ್ಯ ಪಡೆದ ಬಳಿಕ ಶ್ರೀಲಂಕಾವು ಎದುರಿಸುತ್ತಿರುವ ಅತ್ಯಮತ ಕಠಿಣ ಆರ್ಥಿಕ ತುರ್ತುಪರಿಸ್ಥಿತಿ ಇದಾಗಿದೆ. ಅತ್ಯಗತ್ಯ ವಸ್ತುಗಳಾದ ಆಹಾರ ಮತ್ತು ಇಂಧನದ ಬೆಲೆ ಗಗನಕ್ಕೇರಿದ್ದು ಬಡವರ ಪಾಡು ಹೇಳತೀರದಾಗಿದೆ. ಈಗಾಗಲೇ ಭಾರತವು 500 ಮಿಲಿಯನ್ ಡಾಲರ್’ನಷ್ಟು ತೈಲೋತ್ಪನ್ನಗಳನ್ನು ಸಾಲವಾಗಿ ನೀಡಿದ್ದು, ಇನ್ನೂ 1 ಬಿಲಿಯನ್ ಡಾಲರ್ ಸಹಾಯ ಮಾಡುವುದಾಗಿ ಘೋಷಿಸಿದೆ. ಇದರ ನಡುವೆ, ಐಎಂಎಫ್’ನಿಂದಲು ಹಣಕಾಸಿನ ನೆರವು ಪಡೆಯಲು ಶ್ರೀಲಂಕಾ ಸರ್ಕಾರ ಮಾತುಕತೆ ನಡೆಸುತ್ತಿದೆ.

Tags: BJPCongress PartyCovid 19ಆರೋಗ್ಯ ತುರ್ತುಪರಿಸ್ಥಿತಿಬಿಜೆಪಿವಿಪಕ್ಷ ನಾಯಕರುಶ್ರೀಲಂಕಾಸಂಯುಕ್ತ ಸರ್ಕಾರ
Previous Post

ಅವರು ಮೊದಲು ತಮಿಳರಿಗಾಗಿ, ಮುಸ್ಲಿಮರಿಗಾಗಿ ಬಂದರು.. ಈಗ ನನಗಾಗಿ ಬಂದಿದ್ದಾರೆ…!

Next Post

ಚುನಾವಣಾ ವರ್ಷ ಎಂದು ಬೇಕಂತಲೇ ಕೋಮು ವಿಷಯ ಎತ್ತುತ್ತಿದೆ ಬಿಜೆಪಿ : ಸಿದ್ದರಾಮಯ್ಯ

Related Posts

Top Story

Rahul Gandhi: ಚುನಾವಣೆ ಪ್ರಚಾರದ ಬಳಿಕ ನೀರಿಗೆ ಧುಮುಕಿ ಮೀನು ಹಿಡಿದ ರಾಹುಲ್‌..

by ಪ್ರತಿಧ್ವನಿ
November 3, 2025
0

ಬಿಹಾರ ಚುನಾವಣಾ ಪ್ರಚಾರದಲ್ಲಿರುವ (Bihar Election) ರಾಹುಲ್‌ ಗಾಂಧಿ (Rahul Gandhi) ಇಂದು ಬೇಗುಸರೈಯ ಹಳ್ಳಿಯ ಕೊಳದಲ್ಲಿ ಮೀನು (Fishing) ಹಿಡಿದು ಸುದ್ದಿಯಾಗಿದ್ದಾರೆ. ತಮ್ಮ ಭಾಷಣವನ್ನು ಮುಗಿಸಿದ...

Read moreDetails

N Chaluvarayaswami: ಫಿಲಿಪೈನ್ಸ್ ಕೃಷಿವಿ.ವಿಗಳಿಗೆ ಸಚಿವ .ಎನ್ ಚಲುವರಾಯಸ್ವಾಮಿ ಭೇಟಿ

October 16, 2025

Big Breaking: ಹೆಚ್ ಡಿ ದೇವೇಗೌಡ ಆರೋಗ್ಯದಲ್ಲಿ ಏರುಪೇರು..!!

October 7, 2025
ಸರ್ಕಾರ ಸಂಫೂರ್ಣ ಮೌನ , ಸೇನೆ ಸದಾ ಸಿದ್ದ !

ಸರ್ಕಾರ ಸಂಫೂರ್ಣ ಮೌನ , ಸೇನೆ ಸದಾ ಸಿದ್ದ !

October 5, 2025
 ಮೋದಿ ಹಿಟ್ಲರ್‌ ನಂತೆ ಆಡಳಿತ !

 ಮೋದಿ ಹಿಟ್ಲರ್‌ ನಂತೆ ಆಡಳಿತ !

October 2, 2025
Next Post
ಮೇಕೆದಾಟು ಪಾದಯಾತ್ರೆ 2.0| ನಮೋ ನಮೋ ಎಂದು ಜಪಿಸಿದ ಸಿದ್ದರಾಮಯ್ಯ

ಚುನಾವಣಾ ವರ್ಷ ಎಂದು ಬೇಕಂತಲೇ ಕೋಮು ವಿಷಯ ಎತ್ತುತ್ತಿದೆ ಬಿಜೆಪಿ : ಸಿದ್ದರಾಮಯ್ಯ

Please login to join discussion

Recent News

Top Story

CM Siddaramaiah: ಬಿಹಾರ ವಿಧಾನಸಭಾ ಚುನಾವಣೆ: ಪ್ರತಿಪಕ್ಷಗಳ ಮಹಾ ಮೈತ್ರಿಕೂಟ ಗೆಲ್ಲುವ ಭರವಸೆಯಿದೆ..

by ಪ್ರತಿಧ್ವನಿ
November 3, 2025
Top Story

Minister KJ George: ಜಾಗ ನೀಡಿದರೆ ಹೆಚ್ಚುವರಿ ವಿದ್ಯುತ್ ಉಪಕೇಂದ್ರ ಸ್ಥಾಪನೆ..!!

by ಪ್ರತಿಧ್ವನಿ
November 3, 2025
Top Story

CM Siddaramaiah: ಸಾಮಾಜಿಕ ನ್ಯಾಯದ ಹರಿಕಾರ ದೇವರಾಜ ಅರಸು..!!

by ಪ್ರತಿಧ್ವನಿ
November 3, 2025
ಬಿಹಾರ ವಿಧಾನಸಭೆ ಚುನಾವಣೆ: ತೇಜಸ್ವಿ ಯಾದವ್ ಗೆಲುವಿಗೆ ದಾರಿ ಮಾಡಿಕೊಡುತ್ತಾ ಎನ್‌ಡಿಎ..?
Top Story

ಬಿಹಾರ ವಿಧಾನಸಭೆ ಚುನಾವಣೆ: ತೇಜಸ್ವಿ ಯಾದವ್ ಗೆಲುವಿಗೆ ದಾರಿ ಮಾಡಿಕೊಡುತ್ತಾ ಎನ್‌ಡಿಎ..?

by ಪ್ರತಿಧ್ವನಿ
November 3, 2025
ರೇಣುಕಾಸ್ವಾಮಿ ಹತ್ಯೆ ಕೇಸ್: ಆರೋಪಿಗಳ ವಿರುದ್ಧ ದೋಷಾರೋಪಣೆ ನಿಗಧಿ
Top Story

ರೇಣುಕಾಸ್ವಾಮಿ ಹತ್ಯೆ ಕೇಸ್: ಆರೋಪಿಗಳ ವಿರುದ್ಧ ದೋಷಾರೋಪಣೆ ನಿಗಧಿ

by ಪ್ರತಿಧ್ವನಿ
November 3, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

CM Siddaramaiah: ಬಿಹಾರ ವಿಧಾನಸಭಾ ಚುನಾವಣೆ: ಪ್ರತಿಪಕ್ಷಗಳ ಮಹಾ ಮೈತ್ರಿಕೂಟ ಗೆಲ್ಲುವ ಭರವಸೆಯಿದೆ..

November 3, 2025

Minister KJ George: ಜಾಗ ನೀಡಿದರೆ ಹೆಚ್ಚುವರಿ ವಿದ್ಯುತ್ ಉಪಕೇಂದ್ರ ಸ್ಥಾಪನೆ..!!

November 3, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada