Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಕೋಲಾರದಿಂದ ಹಿಂದೆ ಸರಿದ ಸಿದ್ದರಾಮಯ್ಯ? ರಾಹುಲ್‌ ಸಲಹೆಯೇನು?

ಪ್ರತಿಧ್ವನಿ

ಪ್ರತಿಧ್ವನಿ

March 18, 2023
Share on FacebookShare on Twitter

2023 ರ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಉಳಿದಿರುವ ಹಿನ್ನೆಲೆಯಲ್ಲಿ ರಾಜ್ಯ ರಾಜಕಾರಣದಲ್ಲಿ ಚುರುಕು ಮುಟ್ಟಿದೆ. ಈಗಾಗಲೇ ರಾಜಕೀಯ ಪಕ್ಷಗಳು ಟಿಕೆಟ್‌ ಹಂಚಿಕೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಭಿನ್ನಮತ ಸ್ಪೋಟಗೊಳ್ಳದಂತೆ ಎಲ್ಲಾ ಪ್ರಯತ್ನ ನಡೆಯುತ್ತಿದೆ.

ಹೆಚ್ಚು ಓದಿದ ಸ್ಟೋರಿಗಳು

Chetan Ahimsa : ಕುಸ್ತಿಪಟುಗಳ ಬಗ್ಗೆ ಏಕಿಷ್ಟು ಮೌನ?

Anil Kumble stands in support of wrestlers : ಕುಸ್ತಿಪಟುಗಳ ಬೆಂಬಲಕ್ಕೆ ನಿಂತ ಅನಿಲ್‌ ಕುಂಬ್ಳೆ..!

Water Resources Department : ಜಲ ಸಂಪನ್ಮೂಲ ಇಲಾಖೆ ಅಧಿಕಾರಿಗಳಿಗೆ ಡಿಸಿಎಂ ಡಿಕೆಶಿ ಖಡಕ್ ‌ಸೂಚನೆ

ಈ ನಡುವೆ ಕಾಂಗ್ರೆಸ್‌ ರಾಜ್ಯ ನಾಯಕರು ದಿಲ್ಲಿಯಲ್ಲಿ ಬೀಡು ಬಿಟ್ಟಿದ್ದು, ಟಿಕೆಟ್‌ ಹಂಚಿಕೆ ವಿಚಾರವಾಗಿ ಚರ್ಚಿಸುತ್ತಿದ್ದಾರೆ. ಈಗಾಗಲೇ ಹಾಲಿ ಏಳು ಶಾಸಕರಿಗೆ ಟಿಕೆಟ್‌ ಸಿಗುವುದು ಅನುಮಾನವಾಗಿದ್ದು, ಈ ನಡುವೆ ಕೋಲಾರದಿಂದಲೇ ಸ್ಪರ್ಧಿಸುತ್ತಾರೆ ಎಂದು ಬಿಂಬಿತವಾಗಿದ್ದ ಸಿದ್ದರಾಮಯ್ಯ ಅವರ ಕ್ಷೇತ್ರದಲ್ಲೂ ಮಹತ್ವದ ಬದಲಾವಣೆ ಆಗುವ ಸಾಧ್ಯತೆ ಇದೆ.

ಕೋಲಾರದಲ್ಲಿ ಸಿದ್ದರಾಮಯ್ಯ ವಿರೋಧಿ ಅಲೆ ಇದ್ದು, ವರ್ತೂರು ಪ್ರಕಾಶ್‌ ಪರವಾಗಿ ಅಲೆ ಇದೆ, ಹಾಗಾಗಿ, ಕೋಲಾರದಲ್ಲಿ ಸ್ಪರ್ಧೆಗೆ ನಿಲ್ಲುವುದರ ಬಗ್ಗೆ ಮತ್ತೊಂದು ಬಾರಿ ಯೋಚಿಸಿ ನಿರ್ಧರಿಸಿ ಎಂದು ಸಿದ್ದರಾಮಯ್ಯ ಅವರಿಗೆ ರಾಹುಲ್‌ ಗಾಂಧಿ ಹೇಳಿದ್ದಾರೆಂದು ವರದಿಯಾಗಿದೆ. ಅದಾಗ್ಯೂ, ಕಾಂಗ್ರೆಸ್‌ ಅಧಿಕೃತ ಮೂಲಗಳು ಈ ಸುದ್ದಿಯನ್ನು ಖಚಿತ ಪಡಿಸಿಲ್ಲ.

ಚಾಮುಂಡೇಶ್ವರಿ ಕ್ಷೇತ್ರದಿಂದ ಜಿಟಿ ದೇವೇಗೌಡರ ಎದುರು ಸೋತು, ಬಾದಾಮಿಯಲ್ಲಿ ರಾಮುಲು ಎದುರು ಕಡಿಮೆ ಅಂತರದಲ್ಲಿ ಗೆದ್ದಿದ್ದ ಸಿದ್ದರಾಮಯ್ಯ ಈ ಬಾರಿ ಮತ್ತೆ ಬಾದಾಮಿಯಿಂದ ಕಣಕ್ಕೆ ಇಳಿಯುವುದು ಸಂದೇಹವಿದೆ. ನೇರವಾಗಿ ಆರ್‌ಎಸ್‌ಎಸ್‌ ಜೊತೆಗೆ ಸೈದ್ಧಾಂತಿಕವಾಗಿ ತಿಣುಕಾಡುವ ಸಿದ್ದರಾಮಯ್ಯರನ್ನು ಹೇಗಾದರೂ ಸೋಲಿಸಲು ಸಂಘಪರಿವಾರವೇ ಮುತುವರ್ಜಿ ವಹಿಸಿರುವುದರಿಂದ ಸಿದ್ದುಗೆ ಎಲ್ಲಿ ಸ್ಪರ್ಧಿಸಿದರೂ ಚುನಾವಣೆ ಕಠಿಣವಾಗುವ ಸಾಧ್ಯತೆ ಇದೆ.   

ಸದ್ಯ, ವರುಣಾ ಕ್ಷೇತ್ರದ ಕಡೆಗೆ ಸಿದ್ದರಾಮಯ್ಯ ದೃಷ್ಟಿ ನೆಡಲಿದ್ದಾರ ಎನ್ನುವ ಚರ್ಚೆ ಆರಂಭವಾಗಿದೆ. ಈಗಾಗಲೇ ಯತೀಂದ್ರ ಸಿದ್ದರಾಮಯ್ಯ ಅವರು ತಮ್ಮ ತಂದೆಗಾಗಿ ಸ್ಥಾನ ಬಿಟ್ಟುಕೊಡುವುದಾಗಿ ಹೇಳಿರುವುದರಿಂದ ವರುಣಾ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧಿಸುವ ಸಾಧ್ಯತೆಯನ್ನು ಅಲ್ಲಗೆಳಯಲು ಸಾಧ್ಯವಿಲ್ಲ.

ಅಲ್ಲದೆ, ಪ್ರಿಯಾಂಕಾ ಗಾಂಧಿ ಛೇಂಬರಿನಲ್ಲಿ ಸಿದ್ದರಾಮಯ್ಯ ಜೊತೆ ಚರ್ಚೆ ಮಾಡಿರುವ ರಾಹುಲ್‌ ಗಾಂಧಿ ಸಿದ್ದರಾಮಯ್ಯ ಅವರಿಗೆ ಪರಿಸ್ಥಿತಿಯ ಬಗ್ಗೆ ವಿವರಿಸಿದ್ದಾರೆ ಎನ್ನಲಾಗಿದೆ.

ಬಳಿಕ ಮಾತನಾಡಿರುವ ಸಿದ್ದರಾಮಯ್ಯ, “ಹೈಕಮಾಂಡ್‌ ಸೂಚನೆಯಂತೆ ಯಾವುದೇ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ” ಎಂದು ಹೇಳಿದ್ದಾರೆ.

RS 500
RS 1500

SCAN HERE

Pratidhvani Youtube

Sorry, there was a YouTube error.

don't miss it !

Suresh Gowda v/s Chaluvrayaswamy : ನಾನು ಕಡ್ಡಿ ಅಲ್ಲಾಡಿಸ್ತೀನಿ, ತಾಕತ್ತಿದ್ದರೆ ತಡಿ : ಸುರೇಶ್‌ ಗೌಡ
Top Story

Suresh Gowda v/s Chaluvrayaswamy : ನಾನು ಕಡ್ಡಿ ಅಲ್ಲಾಡಿಸ್ತೀನಿ, ತಾಕತ್ತಿದ್ದರೆ ತಡಿ : ಸುರೇಶ್‌ ಗೌಡ

by ಪ್ರತಿಧ್ವನಿ
May 30, 2023
ಈ ಸರ್ಕಾರ ನ್ಯಾಯಯುತ ಆಳ್ವಿಕೆ ನೀಡುತ್ತದೆಯೇ ?..ಜನಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಿ ಕೆಲವು ಜನವಿರೋಧಿ ಕಾಯ್ದೆಗಳನ್ನೂ ರದ್ದುಪಡಿಸಬೇಕಿದೆ
ಅಂಕಣ

ಈ ಸರ್ಕಾರ ನ್ಯಾಯಯುತ ಆಳ್ವಿಕೆ ನೀಡುತ್ತದೆಯೇ ?..ಜನಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಿ ಕೆಲವು ಜನವಿರೋಧಿ ಕಾಯ್ದೆಗಳನ್ನೂ ರದ್ದುಪಡಿಸಬೇಕಿದೆ

by ನಾ ದಿವಾಕರ
May 26, 2023
ನಿಮ್ಮ ತಕ್ಕಡಿ ಸಮವಾಗಿರಲಿ : ನೂತನ ಸ್ಪೀಕರ್​ಗೆ ಮಾಜಿ ಸಿಎಂ ಬೊಮ್ಮಾಯಿ ಕಿವಿಮಾತು
ರಾಜಕೀಯ

ನಿಮ್ಮ ತಕ್ಕಡಿ ಸಮವಾಗಿರಲಿ : ನೂತನ ಸ್ಪೀಕರ್​ಗೆ ಮಾಜಿ ಸಿಎಂ ಬೊಮ್ಮಾಯಿ ಕಿವಿಮಾತು

by Prathidhvani
May 24, 2023
Water Resources Department : ಜಲ ಸಂಪನ್ಮೂಲ ಇಲಾಖೆ ಅಧಿಕಾರಿಗಳಿಗೆ  ಡಿಸಿಎಂ ಡಿಕೆಶಿ ಖಡಕ್ ‌ಸೂಚನೆ
Top Story

Water Resources Department : ಜಲ ಸಂಪನ್ಮೂಲ ಇಲಾಖೆ ಅಧಿಕಾರಿಗಳಿಗೆ ಡಿಸಿಎಂ ಡಿಕೆಶಿ ಖಡಕ್ ‌ಸೂಚನೆ

by ಪ್ರತಿಧ್ವನಿ
May 30, 2023
PM Bhima Suraksha Yojana : ಏನಿದು ಪ್ರಧಾನಮಂತ್ರಿ ಭಿಮಾ ಸುರಕ್ಷಾ ಯೋಜನೆ..? ಇಲ್ಲಿದೆ ಮಾಹಿತಿ
Top Story

PM Bhima Suraksha Yojana : ಏನಿದು ಪ್ರಧಾನಮಂತ್ರಿ ಭಿಮಾ ಸುರಕ್ಷಾ ಯೋಜನೆ..? ಇಲ್ಲಿದೆ ಮಾಹಿತಿ

by ಪ್ರತಿಧ್ವನಿ
May 26, 2023
Next Post
ಸಿದ್ದರಾಮಯ್ಯ ಕೋಲಾರ ಕ್ಷೇತ್ರದಿಂದ ಹಿಂದೆ ಸರಿಯೋದು ಫಿಕ್ಸ್‌..! ಕಾರಣ ಗೊತ್ತಾ..? Siddaramaiah Withdrawing From Kolar Constituency..?

ಸಿದ್ದರಾಮಯ್ಯ ಕೋಲಾರ ಕ್ಷೇತ್ರದಿಂದ ಹಿಂದೆ ಸರಿಯೋದು ಫಿಕ್ಸ್‌..! ಕಾರಣ ಗೊತ್ತಾ..? Siddaramaiah Withdrawing From Kolar Constituency..?

ʼಕೆ ಜಿ ಎಫ್ʼ ,  ʼಕಾಂತಾರ ʼ ಚಿತ್ರಗಳ ನಂತರ ಭಾರತದಾದ್ಯಂತ ಕನ್ನಡದ ಕೀರ್ತಿ ಪತಾಕೆಯನ್ನು ಮತ್ತೊಮ್ಮೆ ಹಾರಿಸಿದ “ಕಬ್ಜ”..  KABZAA ‘Box Office’ Collection..!

ಬಾಕ್ಸ್‌ಆಫೀಸ್‌ನಲ್ಲಿ ಧೂಳೆಬ್ಬಿಸಿದ ʻಕಬ್ಜʼ.. ಮೊದಲ ದಿನದ ಕಲೆಕ್ಷನ್‌ ಎಷ್ಟು ಗೊತ್ತಾ..?

ಕಾಂಗ್ರೆಸ್‌ ಟೀಕೆ ಬೆನ್ನಲ್ಲೇ ಸೈಲೆಂಟ್‌ ಸುನಿಲನ ಪ್ರಾಥಮಿಕ ಸದಸ್ಯತ್ವ ರದ್ದು ಪಡಿಸಿದ ಬಿಜೆಪಿ

ಕಾಂಗ್ರೆಸ್‌ ಟೀಕೆ ಬೆನ್ನಲ್ಲೇ ಸೈಲೆಂಟ್‌ ಸುನಿಲನ ಪ್ರಾಥಮಿಕ ಸದಸ್ಯತ್ವ ರದ್ದು ಪಡಿಸಿದ ಬಿಜೆಪಿ

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist