ಬೆಂಗಳೂರು : ಇಂದು ಬಂಡಿಪುರದಲ್ಲಿ ಸಫಾರಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅಭಯಾರಣ್ಯದ ಸೌಂದರ್ಯವನ್ನು ಕಣ್ತುಂಬಿಕೊಂಡಿದ್ದಾರೆ. 2 ಗಂಟೆಗಳ ಕಾಲ ಅಭಯಾರಣ್ಯದಲ್ಲಿ ಸಫಾರಿ ನಡೆಸಿದ ಮೋದಿಗೆ ಇಂದು ಒಂದು ಹುಲಿಯೂ ಕಾಣಿಸಿಲ್ಲ ಎನ್ನಲಾಗಿದೆ. ಈ ವಿಚಾರವಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಧಾನಿ ಮೋದಿ ಕಾಲೆಳೆದಿದ್ದಾರೆ.

ಕಣ್ಣಿಗೇನಾದ್ರೂ ಕಂಡು ಬಿಟ್ಟರೆ ಹಿಡಿದು ಮಾರಿ ಬಿಡಬಹುದು ಎಂಬ ಭಯಕ್ಕೆ ಆ ಹುಲಿಗಳು ಯಾವ ಗುಹೆಯ ಒಳಗೆ ಅಡಗಿ ಕೂತಿದ್ಯೋ..? ಅಯ್ಯೋ ಪಾಪ.. ಇನ್ನೇನು ಕೆಲವೇ ದಿನಗಳಲ್ಲಿ ಕನ್ನಡಿಗರು ಬಂಡಿಪುರ ಉಳಿಸಿ ಎಂಬ ಅಂಬಿಯಾನ ಶುರು ಮಾಡುವಂತೆ ಆಗದಿರಲಿ. ಅದೇ ನೀವು ಕರುನಾಡಿಗೆ ಮಾಡುವ ದೊಡ್ಡ ಉಪಕಾರ ಅಂತಾ ಹೇಳುವ ಮೂಲಕ ಸಿದ್ದರಾಮಯ್ಯ ಪ್ರಧಾನಿ ಮೋದಿ ಕಾಲೆಳೆದಿದ್ದಾರೆ.
ಬಂಡಿಪುರದಲ್ಲಿ ಸಫಾರಿ ಪೂರ್ಣಗೊಳಿಸಿದ ಪ್ರಧಾನಿ ಮೋದಿ ಬಳಿಕ ತಮಿಳುನಾಡಿನ ಮಧುಮಲೈನ ಅರಣ್ಯಪ್ರದೇಶದಲ್ಲಿರುವ ತೆಪ್ಪಕಾಡು ಆನೆ ಶಿಬಿರಕ್ಕೂ ವಿಸಿಟ್ ನೀಡಿದ್ರು. ‘ದಿ ಎಲಿಫೆಂಟ್ ವಿಸ್ಪರರ್ಸ್ ಸಾಕ್ಷಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ಪಡೆದಿದ್ದ ಬೆಳ್ಳಿ-ಬೊಮ್ಮ ದಂಪತಿಯನ್ನು ಸನ್ಮಾನಿಸಿದ ಪ್ರಧಾನಿ ಮೋದಿ ಆನೆಗಳಿಗೆ ಕಬ್ಬು ತಿನ್ನಿಸಿದ್ರು.