ಬಾಗಲಕೋಟೆ : ಸಿದ್ದರಾಮಯ್ಯ ಬಾದಾಮಿ ಜನತೆಯನ್ನು ಬಿಟ್ಟು ಓಡಿ ಹೋಗಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ವ್ಯಂಗ್ಯವಾಡಿದ್ದಾರೆ. ಬಾಗಲಕೋಟೆಯ ಬಾದಾಮಿ ಬನಶಂಕರಿ ಲೇಔಟ್ನಲ್ಲಿ ನಡೆದ ಸಮಾವೇಶದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಸಿದ್ದರಾಮಯ್ಯ ಬಾದಾಮಿಗೆ ಎಂದಾದರೂ ಬಂದರೆ ಅವರಿಗೆ ಕಳೆದ 3.5 ವರ್ಷಗಳಲ್ಲಿ ಬಾದಾಮಿ ಹೇಗೆ ಅಭಿವೃದ್ಧಿ ಆಯ್ತು ಎಂದು ಕೇಳಿ ಎಂದಿದ್ದಾರೆ.

ಕಳೆದ 3.5 ವರ್ಷಗಳಲ್ಲಿ ಡಬಲ್ ಎಂಜಿನ್ ಸರ್ಕಾರ ಇದ್ದ ಹಿನ್ನೆಲೆಯಲ್ಲಿ ಬಾದಾಮಿ ಕ್ಷೇತ್ರ ಅಭಿವೃದ್ಧಿಯಾಗಿದೆ ಅನ್ನೋದನ್ನು ಸ್ವತಃ ಸಿದ್ದರಾಮಯ್ಯ ಕೂಡ ಒಪ್ಪಿದ್ದಾರೆ., ಇದಕ್ಕೂ ಮೊದಲು ಬಾದಾಮಿ ಜನತೆ ಮೂಲಭೂತ ಸೌಕರ್ಯಗಳಿಂದ ವಂಚಿತರಾಗೋಕೆ ಯಾವ ಸರ್ಕಾರ ಕಾರಣ ಎಂದು ಸಿದ್ದರಾಮಯ್ಯರನ್ನೇ ಕೇಳಿ ಎಂದು ಹೇಳುವ ಮೂಲಕ ಟಾಂಗ್ ನೀಡಿದ್ರು.
ಇಂದು ಬೆಳಗ್ಗೆ ನಾನು ಬೆಂಗಳೂರಿನಲ್ಲಿ ಜನತಾದರ್ಶನ ಮಾಡಿದೆ. ಅಲ್ಲಿಯೂ ನಿಮ್ಮಂತೆಯೇ ಪ್ರೀತಿ ಸಿಕ್ಕಿತು. ಈ ಬಾರಿ ಜನರು ಬಿಜೆಪಿಯನ್ನು ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ತರುವ ನಿರ್ಧಾರ ಮಾಡಿದ್ದಾರೆ. ಕರ್ನಾಟಕ ನಂಬರ್ 1 ಆಗಬೇಕು ಎಂದರೆ ಬಿಜೆಪಿಗೆ ನಿಮ್ಮ ಮತ ಬೇಕು ಎಂದು ಪ್ರಧಾನಿ ಮೋದಿ ಹೇಳಿದರು.