
ಕಳೆದ ಬಾರಿ ಸ್ಟೀಲ್ ಬ್ರಿಜ್ ನಿರ್ಮಾಣಕ್ಕೆ ಮುಂದಾದಾಗ ಅದಕ್ಕೆ ಸಾಕಷ್ಟು ವಿರೋಧಗಳು ವ್ಯಕ್ತವಾಗಿದ್ವು ಜೊತೆಗೆ ಕಾಂಗ್ರೆಸ್ನವರು ಹಣ ಹೊಡೆದು ಬಿಡುತ್ತಾರೆ, ಡಿಕೆ ಶಿವಕುಮಾರ್ ಲಂಚ ತೆಗೆದು ಕೊಂಡು ಬಿಡುತ್ತಾರೆ ಎಂದು ವಿರೋಧಿಗಳು ಆರೋಪವನ್ನು ಮಾಡಿ ಪ್ರತಿಭಟನೆಯನ್ನು ನಡೆಸಿದ್ದರು, ಆಗ ಆ ಹೋರಾಟಕ್ಕೆ ಮಣಿದು ಸಿಎಂ ಸಿದ್ದರಾಮಯ್ಯ ಅವರು ಆ ಸ್ಟೀಲ್ ಬ್ರಿಡ್ಜ್ ಪ್ರಾಜೆಕ್ಟ್ ಅನ್ನ ಕೈ ಬಿಟ್ಟಿದ್ದರು. ಒಂದು ವೇಳೆ ನಾನು ಅಲ್ಲಿದ್ರೆ ಯಾವ ಹೋರಾಟಕ್ಕೂ ಬಗ್ಗುತಿರಲಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆನಾ ನೀಡಿದ್ದಾರೆ.
ಇದೀಗ ಅವರ ಈ ಹೇಳಿಕೆ ವೈರಲ್ ಆಗ್ತಾ ಇದ್ದು, ಸಾಮಾಜಿಕ ಜಾಲತನದಲ್ಲಿ ವಿವಿಧ ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ,
ಈಗಲೂ ನಾನು ಕೆಲವು ನಿರ್ಧಾರ ಕೈಗೊಳ್ಳುತ್ತೇನೆ. ಪ್ರತಿಭಟನೆ ಮಾಡುವವರು ಸಿದ್ಧರಾಗಲಿ. ನಾನು ಮಾತ್ರ ಕೆಲಸದ ವಿಚಾರದಲ್ಲಿ ಮುಂದೆ ಸಾಗುತ್ತಿರುತ್ತೇನೆ ಎಂಬ ಹೇಳಿಕೆಯನ್ನು ಕೂಡ ನೀಡಿದ್ದಾರೆ

ನಾವು ಪ್ರತಿಮೆಗಿಂತ ಪ್ರಗತಿಯ ಮೇಲೆ ನಂಬಿಕೆ ಇಟ್ಟವರು, ಮಾನವನ ಶ್ರೇಷ್ಠ ಗುಣಗಳಲ್ಲಿ ನಂಬಿಕೆ ಪ್ರಧಾನವಾದದ್ದು ನೀವು ನಿಮ್ಮ ಮೇಲೆ ನಂಬಿಕೆ ಇಟ್ಟಿದ್ದೀರಿ ನಿಮ್ಮ ಆಶೀರ್ವಾದ ನಮ್ಮ ಮೇಲೆ ಇರಲಿ ಹಿಂದಿನ ಸರ್ಕಾರ ಅನೇಕ ಕೆಲಸಗಳನ್ನ ಮಾಡಿವೆ ಅವರ ಆಚಾರ ವಿಚಾರಕ್ಕೆ ತಕ್ಕಂತೆ ಕೆಲಸವನ್ನು ಮಾಡಿದ್ದಾರೆ ಎಂಬ ಹೇಳಿಕೆಯನ್ನು ನೀಡುವ ಮೂಲಕ ಪರೋಕ್ಷವಾಗಿ ಬಿಜೆಪಿಯ ವಿರುದ್ಧ ವ್ಯಂಗ್ಯವಾಡಿದ್ದಾರೆ
ಆದರೆ ನಿನ್ನೆ, 2013ರ ಸಿಎಂ ಸಿದ್ದರಾಮಯ್ಯ ನೇತೃತ್ವ ಸರ್ಕಾರದ ನಿರ್ಧಾರದ ಬಗ್ಗೆ ಮಾತನಾಡಿರುವ ಡಿಸಿಎಂ ಡಿ.ಕೆ ಶಿವಕುಮಾರ್ ಮತ್ತೊಮ್ಮೆ ಸ್ಟೀಲ್ ಬ್ರಿಡ್ಜ್ ಸೇರಿದ ಹಾಗೆ ಹಲವು ಯೋಜನೆಗಳ ಅನುಷ್ಠಾನಕ್ಕೆ ಮುಂದಾಗುವ ಮುನ್ಸೂಚನೆಯನ್ನು ನೀಡಿದ್ದಾರೆ, ಆದರೆ ಈ ಬಾರಿ ಇದಕ್ಕೆ ಯಾವ ರೀತಿಯಾದ ಪ್ರತಿಕ್ರಿಯೆ ವ್ಯಕ್ತವಾಗಲಿದೆ ಅನ್ನೋದನ್ನ ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗಿದೆ..