‘ಬಿಜೆಪಿಯವರು ಸೀಳು ನಾಯಿ’ ಇದ್ದಂಗೆ ಅಂತ ಹೇಳಿರುವ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸಾರಿಗೆ ಸಚಿವ ಬಿ. ಶ್ರೀರಾಮುಲು ಕಿಡಕಾರಿದ್ದು, ಸಿದ್ದರಾಮಯ್ಯ ಭಸ್ಮಾಸುರ ಇದ್ದಹಾಗೆ. ಕೈ ಇಟ್ಟವರೆಲ್ಲರೂ ಭಸ್ಮವಾಗುತ್ತಾರೆ” ಎಂದಿದ್ದಾರೆ.
ಕೊಪ್ಪಳದ ಪಂಪ ಸರೋವರದಲ್ಲಿ ಶ್ರೀ ವಿಜಯಲಕ್ಷ್ಮಿ ದೇವಸ್ಥಾನ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, “ಸಿದ್ದರಾಮಯ್ಯ ಸತ್ಯ ಹರಿಶ್ಚಂದ್ರ ಥರ ಮಾತನಾಡುತ್ತಾರೆ. ವಾಸ್ತವದಲ್ಲಿ ಸಿದ್ದರಾಮಯ್ಯ ನಾಲಿಗೆ ಸೀಳು ನಾಯಿ ಇದ್ದಹಾಗೆ. ಸಿದ್ದರಾಮಯ್ಯ ಎರಡು ತಲೆ ಹಾವು ಇದ್ದಂತೆ. ಅವರಿಗೆ ಖುರ್ಚಿ ಬಿಟ್ಟರೆ ಬೇರೇ ಏನೂ ಕಾಣುತ್ತಿಲ್ಲ” ಎಂದು ಟೀಕಿಸಿದರು.

“ಬಿಜೆಪಿ, ಹಿಂದುತ್ವ ಬಿಟ್ಟರೆ, ಬೇರೆ ಏನೂ ಕಾಣುತ್ತಿಲ್ಲ. ಸಿದ್ದರಾಮಯ್ಯ ಭಸ್ಮಾಸ್ಮುರ ಇದ್ದಹಾಗೆ ಯಾರ ತಲೆ ಇಟ್ಟರೂ ಅವರ ಕಥೆ ಮುಗೀತು. ಈಗಾಗಲೇ ಖರ್ಗೆಯನ್ನು, ಡಾ. ಜಿ. ಪರಮೇಶ್ವರ ಅವರನ್ನು ಮುಗಿಸಿದ್ದಾರೆ. ಶೀಘ್ರದಲ್ಲಿಯೇ ಡಿ. ಕೆ. ಶಿವಕುಮಾರ್ ಅವರನ್ನು ಮುಗಿಸುತ್ತಾರೆ” ಎಂದು ಹೇಳಿದ್ದಾರೆ.