ಮೈಸೂರು: ಪ್ರಾಣಿ ವಿನಿಮಯ ಯೋಜನೆ ಅಡಿ ಮೈಸೂರಿನ ಚಾಮರಾಜೇಂದ್ರ ಮೃಗಾಲಯದ ಎರಡೂವರೆ ವರ್ಷದ ಗಂಡು ಜಿರಾಫೆಯನ್ನು ಹಂಪಿ ಮೃಗಾಲಯಕ್ಕೆ ಕಳುಹಿಸಲಾಯಿತು.
![](https://pratidhvani.com/wp-content/uploads/2024/01/WhatsApp-Image-2024-01-18-at-16.46.31-jpeg.webp)
ಹಂಪಿ ಮೃಗಾಲಯಕ್ಕೆ ಜಿರಾಫೆ ನೀಡಬೇಕೆಂಬ ಬಗ್ಗೆ ಹಲವು ವರ್ಷಗಳಿಂದ ಬೇಡಿಕೆ ಇತ್ತು. ಅದರಂತೆ ಕರ್ನಾಟಕ ಮೃಗಾಲಯ ಪ್ರಾಧಿಕಾರದ ಆದೇಶದ ಪ್ರಕಾರ ಚಾಮರಾಜೇಂದ್ರ ಮೃಗಾಲಯದಲ್ಲಿದ್ದ ಒಂಭತ್ತು ಜಿರಾಫೆಗಳ ಪೈಕಿ ಶಂತಕ ಎಂಬ ಹೆಸರಿನ ಎರಡೂವರೆ ವರ್ಷದ ಶಂಕರ ಜಿರಾಫೆಯನ್ನು ಹಂಪಿ ಮೃಗಾಲಯಕ್ಕೆ ಕಳುಹಿಸಿಕೊಡಲಾಗಿದೆ. ವಿಶೇಷ ವಾಹನದ ಮೂಲಕ ಬುಧವಾರ ಬೆಳಗ್ಗೆ 8 ಗಂಟೆ ವೇಳೆಗೆ ಶಂಕರನನ್ನು ಕಳುಹಿಸಲಾಯಿತು. ಈಗಾಗಲೇ ಸುರಕ್ಷಿತವಾಗಿ ಹಂಪಿ ಮೃಗಾಲಯ ತಲುಪಿರುವ ಜಿರಾಫೆಯನ್ನು ನಿಗದಲ್ಲಿ ಇರಿಸಲಾಗಿದೆ.
![](https://pratidhvani.com/wp-content/uploads/2024/01/WhatsApp-Image-2024-01-18-at-16.46.38-jpeg.webp)
ಶಂಕರ ಹೆಸರಿನ ಜಿರಾಫೆ ಮೈಸೂರು ಮೃಗಾಲಯದ ಭರತ ಹಾಗೂ ಲಕ್ಷ್ಮಿ ಜಿರಾಫೆಗೆ ಜನಿಸಿದ್ದು, ಇದೀಗ ಹಂಪಿ ಮೃಗಾಲಯದಲ್ಲಿ ಕಳೆದೊಂದು ವರ್ಷದಿಂದ ಒಂಟಿಯಾಗಿದ್ದ ಹೆಣ್ಣು ಜಿರಾಫೆಗೆ ಜೊತೆಯಾಗಿದ್ದಾನೆ. ಶಂಕರ ಜಿರಾಫೆಯನ್ನು ಹಂಪಿ ಮೃಗಾಲಯಕ್ಕೆ ಕಳುಹಿಸಿದ ಹಿನ್ನೆಲೆಯಲ್ಲಿ ಸದ್ಯ ಮೈಸೂರು ಮೃಗಾಲಯದಲ್ಲಿ 8 ಜಿರಾಫೆಗಳಿದ್ದು, ಪ್ರಾಣಿ ವಿನಿಮಯ ಯೋಜನೆಯಡಿ ಇನ್ನು ಕೆಲವು ಜಿರಾಫೆಗಳನ್ನು ಮುಂದಿನ ದಿನಗಳಲ್ಲಿ ಸ್ಥಳಾಂತರ ಮಾಡುವ ಪ್ರಸ್ತಾವನೆ ಮೃಗಾಲಯ ಪ್ರಾಧಿಕಾರದ ಮುಂದಿದೆ. ಅಲ್ಲದೇ ಪ್ರಾಣಿ ವಿನಿಮಯ ಯೋಜನೆಯಡಿ ಮೈಸೂರು ಮೃಗಾಲಯಕ್ಕೆ ವಿದೇಶದಿಂದ ಆಫ್ರಿಕಾದ ಆನೆ, ಜಾಗ್ವಾರ್, ಚೀತಾ, ಗೊರಿಲ್ಲಾ ಮತ್ತು ಚಿಂಪಾಂಜಿ ತರುವ ಪ್ರಯತ್ನ ನಡೆಯುತ್ತಿದೆ.