• Home
  • About Us
  • ಕರ್ನಾಟಕ
Wednesday, July 23, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ ಅಭಿಮತ

ಏಳು ವಲಸೆ ಕಾರ್ಮಿಕರು, ಏಳು ದಿನ : ಮನೆ ಸೇರಲು ಸಾಗಿದ ದೂರ 1232 ಕಿ.ಮೀ. ಭಾಗ-೨

ನಾ ದಿವಾಕರ by ನಾ ದಿವಾಕರ
December 28, 2021
in ಅಭಿಮತ
0
ಏಳು ವಲಸೆ ಕಾರ್ಮಿಕರು, ಏಳು ದಿನ : ಮನೆ ಸೇರಲು ಸಾಗಿದ ದೂರ 1232 ಕಿ.ಮೀ. ಭಾಗ-೨
Share on WhatsAppShare on FacebookShare on Telegram

ಕೋವಿದ್ 19 ಸಂದರ್ಭದಲ್ಲಿ ಒಕ್ಕೂಟ ಸರ್ಕಾರ ಘೋಷಿಸಿದ ಹಠಾತ್ ಲಾಕ್‍ಡೌನ್ ಕೇವಲ ಅಂಗಡಿ ಮುಗ್ಗಟ್ಟುಗಳನ್ನು, ಉದ್ದಿಮೆಗಳನ್ನು, ಕಚೇರಿಗಳನ್ನು ಮುಚ್ಚಿಸಲಿಲ್ಲ. ಈ ದೇಶದ ಲಕ್ಷಾಂತರ ವಲಸೆ ಕಾರ್ಮಿಕರ ಬದುಕಿನ ಪ್ರವೇಶ ದ್ವಾರಗಳನ್ನೇ ಮುಚ್ಚಿಬಿಟ್ಟಿತ್ತು. ತಮ್ಮ ವೇತನ ಹೆಚ್ಚಳಕ್ಕಾಗಿ ಮುಷ್ಕರ ಹೂಡಿ ಒಂದು ದಿನದ ವೇತನ ಕಳೆದುಕೊಂಡರೆ ಹುಯಿಲೆಬ್ಬಿಸುವ ಮಧ್ಯಮ ವರ್ಗದ ಹಿತವಲಯಗಳಿಗೆ, ದುಡಿಮೆಯ ನೆಲೆ ಕಳೆದುಕೊಳ್ಳುವುದರಿಂದ ಶ್ರಮಜೀವಿಯೊಬ್ಬ ಏನೆಲ್ಲಾ ಅನುಭವಿಸುತ್ತಾನೆ ಎಂದು ಅರ್ಥಮಾಡಿಸುವಲ್ಲಿ ಈ ಕಥನ ಯಶಸ್ವಿಯಾಗುತ್ತದೆ. ಲಾಕ್ ಡೌನ್ ಸಂದರ್ಭದಲ್ಲಿ ಎಷ್ಟು ಮಂದಿ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ಮರಳಿದರು, ಎಷ್ಟು ಜನ ಮನೆ ತಲುಪಿದರು, ಎಷ್ಟು ಮಂದಿ ರಸ್ತೆಯಲ್ಲೇ ಸಾವನ್ನಪ್ಪಿದರು, ಎಷ್ಟು ಜನ ಕಾಣೆಯಾದರು ಈ ಯಾವುದೇ ಮಾಹಿತಿ ಸರ್ಕಾರದ ಬಳಿ ಇಲ್ಲ. ಸಾವಿರಾರು ಕಿಲೋಮೀಟರ್ ದೂರ ನಡೆಯುತ್ತಾ ರಸ್ತೆ ಅಪಘಾತಗಳಿಗೀಡಾಗಿ, ಹಸಿವಿನಿಂದ ಬಳಲಿ, ಆಘಾತಕ್ಕೀಡಾಗಿ ಮಡಿದವರ ಸಂಖ್ಯೆಯೂ ಸರ್ಕಾರದ ಬಳಿ ಇಲ್ಲ. ಪೌರತ್ವವನ್ನು ಸಾಬೀತುಪಡಿಸಲು ಹೊಸ ನೀತಿಯನ್ನೇ ಜಾರಿಗೊಳಿಸಲು ಮುಂದಾಗಿದ್ದ ಒಂದು ಸರ್ಕಾರಕ್ಕೆ, ಈ ದೇಶದಲ್ಲಿ ವಲಸೆ ಕಾರ್ಮಿಕರು ಎಷ್ಟಿದ್ದಾರೆ, ಎಲ್ಲೆಲ್ಲಿದ್ದಾರೆ ಎಂಬ ಮಾಹಿತಿಯೇ ಇಲ್ಲ !!!

ADVERTISEMENT

ಈ ದುರಂತದ ನಡುವೆಯೇ ಲಕ್ಷಾಂತರ ಕಾರ್ಮಿಕರು ಲಾಕ್ ಡೌನ್ ಸಂದರ್ಭದಲ್ಲಿ ಕಾಲ್ನಡಿಗೆಯಲ್ಲಿ ತಮ್ಮ ತವರು ಮನೆಗಳಿಗೆ ತೆರಳಿದರು. ವ್ಯವಸ್ಥೆಯ ದೃಷ್ಟಿಯಲ್ಲಿ ಈ ಕಾಲ್ನಡಿಗೆಯ ಪಯಣಿಗರೂ ಅಪರಾಧಿಗಳಾಗಿಯೇ ಕಂಡರು. ಪೊಲೀಸರ ಲಾಠಿ ಇವರಿಗೇನೂ ವಿನಾಯಿತಿ ನೀಡಲಿಲ್ಲ. ಈ ಏಳು ಮಂದಿ ವಲಸೆ ಕಾರ್ಮಿಕರು ಕೆಲವೊಮ್ಮೆ ಕಾನೂನು ಉಲ್ಲಂಘಿಸುವ ಅಪರಾಧಿಗಳಾಗಿಯೂ ಕಂಡುಬರುತ್ತಾರೆ. ದೂರದ ಊರಿನಲ್ಲಿರುವ ತನ್ನ ಮಗುವಿಗಾಗಿ ಕೊಂಡಿರುವ ಚಪ್ಪಲಿ ಮತ್ತು ಆಟದ ಗೊಂಬೆಗಾಗಿ ಆಶಿಶ್ ಪರದಾಡುವುದನ್ನು ನೋಡಿದಾಗ, “ ಇಲ್ಲ ಸಾರ್, ಮನೆಯಲ್ಲಿ ಅಮ್ಮ ಊಟ ಮಾಡದೆ ನಮಗಾಗಿ ಕಾಯುತ್ತಾ ಅಳುತ್ತಿದ್ದಾರೆ ” ಎಂದು ರೀತೇಶ್ ಅಲವತ್ತುಕೊಂಡರೂ “ ತಾಯ್ಗಂಡ್ರಾ, ನಿಮ್ಮ ಅಮ್ಮಂದಿರಿಗೆ ಗಿರಾಕಿ ಹುಡುಕಿಕೊಂಡು ಹೊರಬಂದಿದ್ದೀರಾ ” ಎಂದು ಅಬ್ಬರಿಸುವ ಪೊಲೀಸರನ್ನು ನೋಡಿದಾಗ, ನಮ್ಮ ದೇಶ ಇನ್ನೂ ನಾಗರಿಕತೆಯ ಹಂತ ತಲುಪಿಲ್ಲ ಎಂದು ಸ್ಪಷ್ಟವಾಗುತ್ತದೆ.

ಪೊಲೀಸರ ಭೀತಿಯ ನಡುವೆಯೇ ನಡೆಯುತ್ತಾ ಹಾದಿ ಸವೆಸುವ ಏಳು ಮಂದಿ ನಡುನಡುವೆ ತಪ್ಪಿಸಿಕೊಳ್ಳುತ್ತಾರೆ, ಅವಿತುಕೊಳ್ಳುತ್ತಾರೆ, ಕಳ್ಳಹಾದಿಯನ್ನು ಹಿಡಿಯುತ್ತಾರೆ, ಅಪಾಯಕಾರಿ ನದಿ ದಾಟುತ್ತಾರೆ. ಈ ಪಯಣದ ನಡುವೆ ಅಲ್ಲಲ್ಲಿ ಮಾನವೀಯತೆಯ ಸ್ಪರ್ಶವನ್ನೂ ಪಡೆಯುತ್ತಾರೆ. ಕೆಲವು ಪೊಲೀಸ್ ಅಧಿಕಾರಿಗಳು, ಲಾರಿ ಚಾಲಕರು, ಪಂಕ್ಚರ್ ಅಂಗಡಿಯವರು ಜೀವ ಭಯದ ನಡುವೆಯೇ ಜೀವ ರಕ್ಷಣೆಗೆ ಮುಂದಾಗುವುದನ್ನು ನೋಡಿದಾಗ ನಮ್ಮ ಕ್ರೂರ ವ್ಯವಸ್ಥೆಯಲ್ಲೂ ಮಾನವೀಯ ತುಡಿತ ಜೀವಂತವಾಗಿದೆ ಎಂದು ಖುಷಿಯಾಗುತ್ತದೆ. ಒಂದೇ ರಾಜ್ಯದವರಾದರೂ ವಿಭಿನ್ನ ಹಿನ್ನೆಲೆಯಿಂದ ಬಂದಿರುವ ಏಳು ಮಂದಿ ವಲಸೆ ಕಾರ್ಮಿಕರು, ದಾರಿಯುದ್ದಕ್ಕೂ ತೋರುವ ಸಮನ್ವಯ, ಸಂಯಮ ಮತ್ತು ಸೌಹಾರ್ದತೆ ನಮ್ಮ ಸಮಾಜದಲ್ಲಿ ಶಿಥಿಲವಾಗುತ್ತಿರುವ ಸಂವೇದನೆಯನ್ನು ಕೊಂಚಮಟ್ಟಿಗಾದರೂ ಬಡಿದೆಬ್ಬಿಸುವಂತೆ ಕಾಣುತ್ತದೆ.

1232 ಕಿಲೋಮೀಟರ್ ದೂರದ ಊರನ್ನು ತಲುಪಲು ತಮ್ಮ ಸೈಕಲ್ಲುಗಳನ್ನು ಆಶ್ರಯಿಸಿದ ಈ ಏಳು ಮಂದಿ ವಲಸೆ ಕಾರ್ಮಿಕರನ್ನು ಪ್ರಾತಿನಿಧಿಕವಾಗಿ ನೋಡಿದಾಗ ಮಾತ್ರ ನಮಗೆ ವಲಸೆ ಕಾರ್ಮಿಕರ ಬವಣೆ ಅರ್ಥವಾಗಲು ಸಾಧ್ಯ. ನಡು ಹಾದಿಯಲ್ಲೇ ನಿರ್ಗಮಿಸಿದ ನೂರಾರು ವಲಸೆ ಕಾರ್ಮಿಕರ ಕುಟುಂಬಗಳಲ್ಲಿ ಇದ್ದಿರಬಹುದಾದ ಹತಾಶೆ, ಆತಂಕ, ವೇದನೆ ಮತ್ತು ನೋವಿನ ಕ್ಷಣಗಳನ್ನು ಈ ಏಳು ಜನರ ಪಯಣದ ಸಂದರ್ಭದಲ್ಲೇ ಗುರುತಿಸಲು ಸಾಧ್ಯ. ಒಂದು ದುರಂತ ಕಥನವನ್ನು ಮನಮುಟ್ಟುವಂತೆ ಲೇಖಕ ವಿನೋದ್ ಕಾಪ್ರಿ ಮಂಡಿಸುತ್ತಾ ಹೋಗುತ್ತಾರೆ. ಈ ವಲಸೆ ಕಾರ್ಮಿಕರ ದಿಟ್ಟತನ, ಧೈರ್ಯ, ಸಾಹಸ ಮತ್ತು ಮನೆ ತಲುಪುವ ಛಲ ಯಾವುದೇ ಶ್ರಮಜೀವಿ ವರ್ಗದಲ್ಲಿ ಕಾಣಬಹುದಾದ ಅಂತಃಶಕ್ತಿಯೇ ಆಗಿದೆ. ಅಧಿಕಾರ ಕೇಂದ್ರಗಳಲ್ಲಿರುವ ಪರಾವಲಂಬಿ ಜೀವಿಗಳಿಗೆ ಈ ಕಾರ್ಮಿಕರ ಬದುಕು ಮತ್ತು ಬವಣೆ ಅರ್ಥವಾದಾಗ ಮಾತ್ರವೇ ಭಾರತ ಒಂದು ಮಾನವೀಯ ದೇಶ ಎನಿಸಿಕೊಳ್ಳುತ್ತದೆ.

ವಲಸೆ ಕಾರ್ಮಿಕರ ಬವಣೆಯನ್ನು ಹೃದಯ ಕಲಕುವಂತೆ ವಿವರಿಸುವ ಅಧ್ಯಾಯ “ಭರವಸೆಯ ನೆಲ ” ಈ ಪಯಣದ ಆರನೆಯ ದಿನ. ಆ ಸಂದರ್ಭದಲ್ಲಿ ಕಾರ್ಮಿಕರು ಅನುಭವಿಸುವ ಹಸಿವಿನ ಯಾತನೆ, ಪೊಲೀಸರ ನಿರ್ದಯಿ ಧೋರಣೆ, ಅಧಿಕಾರಿಗಳ ಅಸಡ್ಡೆ ಮತ್ತು ಆಡಳಿತ ವ್ಯವಸ್ಥೆಯ ಕ್ರೌರ್ಯ , ನಾಗರಿಕತೆಯುಳ್ಳ ಯಾವುದೇ ವ್ಯಕ್ತಿಯನ್ನು ನಾಚಿ ತಲೆ ತಗ್ಗಿಸುವಂತೆ ಮಾಡುತ್ತದೆ. ತಮ್ಮ ಊರುಗಳಿಂದ ಕೇವಲ 50 ಕಿ.ಮೀ ದೂರದಲ್ಲಿದ್ದರೂ ಅನ್ನಾಹಾರಕ್ಕಾಗಿ ಹಾತೊರೆದು, ಬೇಡುವ ವಲಸೆ ಕಾರ್ಮಿಕರ ಪಾಡನ್ನು ಗಮನಿಸಿದಾಗ, ನಮ್ಮ ಪ್ರಭುತ್ವ ಮತ್ತು ಆಡಳಿತ ವ್ಯವಸ್ಥೆ ಬೌದ್ಧಿಕವಾಗಿ ಶಿಲಾಯುಗದಲ್ಲಿದೆ ಎನಿಸುತ್ತದೆ. ಈ ಧೋರಣೆಗೆ, ದುರವಸ್ಥೆಗೆ, ಅಟ್ಟಹಾಸಗಳಿಗೆ ಯಾರು ಕಾರಣ ? ಚುನಾಯಿತ ಸರ್ಕಾರವೇ, ಜನಪ್ರತಿನಿಧಿಗಳೇ, ಆಡಳಿತ ವ್ಯವಸ್ಥೆಯೇ ಅಥವಾ ಇವೆಲ್ಲವನ್ನೂ ನಿಯಂತ್ರಿಸುವ ಪ್ರಭುತ್ವವೇ ?

ಈ ಪ್ರಶ್ನೆ, ಜಿಜ್ಞಾಸೆಗಳ ನಡುವೆಯೇ ರೀತೇಶ್ ಮತ್ತವನ ಆರು ಸಂಗಡಿಗರು ತಮ್ಮ ಊರುಗಳನ್ನು ತಲುಪುತ್ತಾರೆ. ಲಾಕ್ ಡೌನ್ ಮುಗಿದ ನಂತರ ತಮ್ಮ ಕೆಲಸದ ಕ್ಷೇತ್ರಗಳಿಗೆ ಮರಳಿ ಬರುತ್ತಾರೆ. ಆದರೆ 1232 ಕಿಲೋಮೀಟರ್ ಕಾಲ್ನಡಿಗೆ, ಸೈಕಲ್ ಪಯಣದ ಸಂದರ್ಭದಲ್ಲಿ ಈ ವಲಸೆ ಕಾರ್ಮಿಕರು ಕಂಡ ಒಂದು “ ಭಾರತ ” ಎಲ್ಲಿಗೆ ತಲುಪುತ್ತಿದೆ ? ಕೋವಿದ್ ಒಂದು ಸಾಂಕ್ರಾಮಿಕವಾಗಿ ಜನರ ಬದುಕಿಗೆ ಮಾರಕವಾದರೆ, ನಮ್ಮ ಆಡಳಿತ ವ್ಯವಸ್ಥೆಯಲ್ಲಿರುವ ಭ್ರಷ್ಟಾಚಾರ, ದಬ್ಬಾಳಿಕೆ, ಕ್ರೌರ್ಯ, ನಿಷ್ಕ್ರಿಯತೆ ಮತ್ತು ನಿರ್ದಯಿ ಮನೋಭಾವ ಇವೆಲ್ಲವೂ ಶ್ರಮಜೀವಿಗಳ ಬದುಕಿಗೆ ಮಾರಕವಾಗಿಯೇ ಕಾಣುತ್ತದೆ. ವಿನೊದ್ ಕಾಪ್ರಿ ಅವರ ಕ್ಯಾಮರಾ ಕಣ್ಣುಗಳು ಈ ಬದುಕಿನ ಒಂದು ಆಯಾಮವನ್ನು ಹಿಡಿದಿಟ್ಟು ಪುಸ್ತಕದ ರೂಪದಲ್ಲಿ ಹೊರಬಂದಿದೆ.

ರೀತೇಶ್ ಮತ್ತು ಅವನ ಆರು ಮಂದಿ ಸಂಗಡಿಗರ 1232 ಕಿಲೋಮೀಟರ್ ಪಯಣ, ಏಳು ದಿನಗಳ ಬವಣೆ ಈ ದೇಶದ ಕೋಟ್ಯಂತರ ಶ್ರಮಜೀವಿಗಳ ಬದುಕಿಗೆ ಕನ್ನಡಿ ಹಿಡಿದಂತೆಯೇ ಕಾಣುತ್ತದೆ. ಒಳಹೊಕ್ಕು ನೋಟುವ ಮುಕ್ತ ಮನಸ್ಸಿದ್ದವರಿಗೆ ಈ ಅದ್ಭುತ ಕೃತಿ ಕಣ್ತೆರೆಸುತ್ತದೆ. ಪಾಪಪ್ರಜ್ಞೆಯನ್ನು ಬಡಿದೆಬ್ಬಿಸುತ್ತದೆ. ಕಣ್ಣಂಚಿನ ಕಂಬನಿಗಳಲ್ಲೇ ಮತ್ತೊಂದು “ ಭಾರತದ ” ನೈಜ ಚಿತ್ರಣವನ್ನೂ ನೀಡುತ್ತದೆ.

ಈ ಚಿತ್ರಣವನ್ನು ನೀಡಿರುವ ವಿನೋದ್ ಕಾಪ್ರಿ ಮತ್ತು ಕನ್ನಡೀಕರಿಸಿರುವ ಜಿ ಟಿ ಸತೀಶ್ ಅಭಿನಂದನಾರ್ಹರು.

Tags: Covid 19ಕರೋನಾಕೋವಿಡ್-19
Previous Post

ನೈಟ್ ಕರ್ಪ್ಯೂ ಇನ್ನಷ್ಟು ಬಿಗಿಗೊಳಿಲಾಗುವುದು- ನಗರ ಪೊಲೀಸ್ ಆಯುಕ್ತ ಕಮಲ್ ಪಂತ್

Next Post

ಉತ್ತರ ಪ್ರದೇಶ ಚುನಾವಣಾ ಅಖಾಡದಲ್ಲಿ ಪ್ರಿಯಾಂಕಾ ಗಾಂಧಿಯಿಂದ ಮಹಿಳಾ ಅಸ್ತ್ರ ಪ್ರಯೋಗ

Related Posts

Top Story

ಸಿಬಿಎಸ್‌ಇ 2025: 10ನೇ ಮತ್ತು 12ನೇ ತರಗತಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

by ಪ್ರತಿಧ್ವನಿ
January 12, 2025
0

ಕೇಂದ್ರ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) 2025ನೇ ಸಾಲಿನ 10ನೇ ಮತ್ತು 12ನೇ ತರಗತಿಯ ಪರೀಕ್ಷೆಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ಪ್ರಕಾರ, ಪರೀಕ್ಷೆಗಳು ಫೆಬ್ರವರಿ 15,...

Read moreDetails

ಹಿರಿಯ ಸಾಹಿತಿ ನಾಡೋಜಾ ನಾ. ಡಿಸೋಜಾ ನಿಧನ..

January 6, 2025

ಅಭಿಮಾನಿಗಳ ಹಾಗೂ ಚಿತ್ರತಂಡದವರ ಗೆಲುವಿನ ನಗುವನ್ನು ನೋಡಿ ನಾನು ಸಂಭ್ರಮಿಸುತ್ತಿದ್ದೇನೆ .

December 31, 2024

Central Govt: ಕೇಂದ್ರ ಸರ್ಕಾರದಿಂದ ರೈತರಿಗೆ ಸಂತಸದ ಸುದ್ದಿ.. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಣೆ..!!

December 6, 2024

ಉಪೇಂದ್ರ ನಿರ್ದೇಶಿಸಿ, ನಟಿಸಿರುವ “UI” ಚಿತ್ರ ಡಿಸೆಂಬರ್ 20 ರಂದು ಬಿಡುಗಡೆ..

December 3, 2024
Next Post
ಉತ್ತರ ಪ್ರದೇಶ ಚುನಾವಣಾ ಅಖಾಡದಲ್ಲಿ ಪ್ರಿಯಾಂಕಾ ಗಾಂಧಿಯಿಂದ ಮಹಿಳಾ ಅಸ್ತ್ರ ಪ್ರಯೋಗ

ಉತ್ತರ ಪ್ರದೇಶ ಚುನಾವಣಾ ಅಖಾಡದಲ್ಲಿ ಪ್ರಿಯಾಂಕಾ ಗಾಂಧಿಯಿಂದ ಮಹಿಳಾ ಅಸ್ತ್ರ ಪ್ರಯೋಗ

Please login to join discussion

Recent News

Prahlad Joshi: ವ್ಯಾಪಾರಸ್ಥರಿಗೆ ಜಿಎಸ್‌ಟಿ ನೋಟಿಸ್ ಕೇಂದ್ರದ್ದಲ್ಲ: ಪ್ರಹ್ಲಾದ್ ಜೋಶಿ
Top Story

Prahlad Joshi: ವ್ಯಾಪಾರಸ್ಥರಿಗೆ ಜಿಎಸ್‌ಟಿ ನೋಟಿಸ್ ಕೇಂದ್ರದ್ದಲ್ಲ: ಪ್ರಹ್ಲಾದ್ ಜೋಶಿ

by ಪ್ರತಿಧ್ವನಿ
July 22, 2025
ಇ.ಡಿ. ರಾಜಕೀಯ ಅಸ್ತ್ರವಾಗಿ ಬಳಕೆ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಮಹತ್ವದ್ದು: ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್
Top Story

ಇ.ಡಿ. ರಾಜಕೀಯ ಅಸ್ತ್ರವಾಗಿ ಬಳಕೆ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಮಹತ್ವದ್ದು: ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್

by Shivakumar A
July 22, 2025
ಮುಡಾ ಕೇಸ್ ನಲ್ಲಿ ಇ.ಡಿ ಗೆ ಸುಪ್ರೀಂ ಕೋರ್ಟ್ ತರಾಟೆ – ಡಿಕೆ ಬ್ರದರ್ಸ್ ಹೇಳಿದ್ದೇನು..?! 
Top Story

ಮುಡಾ ಕೇಸ್ ನಲ್ಲಿ ಇ.ಡಿ ಗೆ ಸುಪ್ರೀಂ ಕೋರ್ಟ್ ತರಾಟೆ – ಡಿಕೆ ಬ್ರದರ್ಸ್ ಹೇಳಿದ್ದೇನು..?! 

by Chetan
July 22, 2025
ತರುಣ್‌ ಶಿವಪ್ಪ ನಿರ್ಮಾಣದಲ್ಲಿ ರಿಯಲ್‌ ಸ್ಟಾರ್‌ ಉಪೇಂದ್ರ ʼನೆಕ್ಸ್ಟ್‌ ಲೆವೆಲ್‌ʼ ಸಿನಿಮಾ
Top Story

ತರುಣ್‌ ಶಿವಪ್ಪ ನಿರ್ಮಾಣದಲ್ಲಿ ರಿಯಲ್‌ ಸ್ಟಾರ್‌ ಉಪೇಂದ್ರ ʼನೆಕ್ಸ್ಟ್‌ ಲೆವೆಲ್‌ʼ ಸಿನಿಮಾ

by Shivakumar A
July 22, 2025
ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಜುಲೈ 24ಕ್ಕೆ ಮುಂದೂಡಿಕೆ..! 
Top Story

ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಜುಲೈ 24ಕ್ಕೆ ಮುಂದೂಡಿಕೆ..! 

by Chetan
July 22, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Prahlad Joshi: ವ್ಯಾಪಾರಸ್ಥರಿಗೆ ಜಿಎಸ್‌ಟಿ ನೋಟಿಸ್ ಕೇಂದ್ರದ್ದಲ್ಲ: ಪ್ರಹ್ಲಾದ್ ಜೋಶಿ

Prahlad Joshi: ವ್ಯಾಪಾರಸ್ಥರಿಗೆ ಜಿಎಸ್‌ಟಿ ನೋಟಿಸ್ ಕೇಂದ್ರದ್ದಲ್ಲ: ಪ್ರಹ್ಲಾದ್ ಜೋಶಿ

July 22, 2025
ಇ.ಡಿ. ರಾಜಕೀಯ ಅಸ್ತ್ರವಾಗಿ ಬಳಕೆ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಮಹತ್ವದ್ದು: ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್

ಇ.ಡಿ. ರಾಜಕೀಯ ಅಸ್ತ್ರವಾಗಿ ಬಳಕೆ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಮಹತ್ವದ್ದು: ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್

July 22, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada