
ಬೀದರ: ಕೇಂದ್ರ ಬಿ.ಜೆ.ಪಿ. ಸರ್ಕಾರ ಸಂವಿಧಾನ ಸಂಸ್ಥೆಗಳ ದುರುಪಯೋಗ ಕರ್ನಾಟಕ ಬಹುಸಂಖ್ಯಾ ಹೊಂದಿದ ಮುಖ್ಯಮಂತ್ರಿ. ಸಿದ್ಧರಾಮಯ್ಯನವರ ಸರ್ಕಾರ ದುರ್ಬಲಗೊಳಿಸಲು ಮುಡಾ ಪ್ರಕರಣದಲ್ಲಿ ಚುನಾಯಿತ ಸರಕಾರ ಪತನಗೊಳಿಸಲು ಬಿ.ಜೆ.ಪಿ-ಜೆಡಿಎಸ್ ನಡೆಸಿರುವ ಷಡ್ಯಂತ್ರ ಖಂಡಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ರಿ) ರಾಜ್ಯ ಹಾಗೂ ಜಿಲ್ಲಾ ಸಮಿತಿ ಬೀದರ ವತಿಯಿಂದ ದಿನಾಂಕ: 06-11-2024 ರಂದು ಬೆಳಿಗ್ಗೆ 11:30 ಗಂಟೆಗೆ ಅಂಬೇಡ್ಕರ್ ಭವನ ಜನವಾಡ ರಸ್ತೆ ಬೀದರದಿಂದ ಜಿಲ್ಲಾಧಿಕಾರಿಗಳ ಕಛೇರಿಯ ವರೆಗೆ ಅರೆ ಬೆತ್ತಲೆ ಮೆರವಣಿಗೆ.
ಸಂವಿಧಾನಿಕ ಸಂಸ್ಥೆಗಳಾದ ಇಡಿ., ಐ.ಟಿ., ಸಿಬಿಐ ರಾಜಭವನಗಳನ್ನು ರಾಜಕೀಯ ಉದ್ದೇಶಗಳಿಗಾಗಿ ದುರ್ಬಳಕೆ ಮಾಡಿಕೊಳ್ಳಬಾರದು ಅಪರಾಧಗಳ ತನಿಖಾ ಸಂಸ್ಥೆಗಳಿಗಾಗಿಯೇ ಉಳಿಯಬೇಕೆಂದು ಹಾಗೂ ನೈತಿಕತೆ ಎಂಬ ಗೂಟಕ್ಕೆ ಕಟ್ಟಿ ಬಲಿ ಹಾಕುವ ರಾಜಕೀಯ ಸಂಚಿಗೆ ಸಿದ್ಧರಾಮಯ್ಯನವರು ಒಳಗಾಗದಂತೆ ಪ್ರಜಾಪ್ರಭುತ್ವವಾದಿಗಳು ಜಾಗೃತವಾಗಬೇಕಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯದ ದಲಿತ ಸಂಘರ್ಷ ಸಮಿತಿ ದಿನಾಂಕ: 06-11-2024 ರಂದು ಬೆಳಿಗ್ಗೆ 11:30 ಗಂಟೆಗೆ ರಾಜ್ಯಾದ್ಯಂತ ಎಲ್ಲಾ ಜಿಲ್ಲ ಕೇಂದ್ರಗಳಲ್ಲಿ “ಅರೆ ಬೆತ್ತಲೆ ಮೆರವಣಿಗೆ” ಹಮ್ಮಿಕೊಳ್ಳಲಾಗಿದೆ.
ನಂತರ ಘನವೆವೆತ್ತ ರಾಷ್ಟçಪತಿಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ನೀಡಲಾಗುವುದು ಈ ಕಾರ್ಯಕ್ರಮದಲ್ಲಿ ನಾಡಿನ ಸಮಸ್ತ ನಾಗೀಕರು ಮತ್ತು ಪ್ರಗತಿಪರರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಐತಿಹಾಸಿಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ರಾಜ್ಯ ಸಂಘಟನಾ ಸಂಚಾಲಕರಾದ ಮಾರುತಿ ಬೌದ್ಧೆ,ಜಿಲ್ಲಾ ಸಂಘಟನಾ ಸಂಚಾಲಕರಾದ ರಾಜಕುಮಾರ ವಾಘಮಾರೆ ಹಾಗೂ ಜಿಲ್ಲಾ ಸಂಚಾಲಕರಾದ ಅರುಣ ಪಟೇಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ