• Home
  • About Us
  • ಕರ್ನಾಟಕ
Tuesday, January 13, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಸಿನಿಮಾ

ಮುನಿಸಿಕೊಂಡ ಮಾಧ್ಯಮಗಳಿಗೆ ದರ್ಶನ್ ಪತ್ರ ಮತ್ತು ಕೆಲವು ಪ್ರಸುತ್ತ ಪ್ರಶ್ನೆಗಳು…!

Any Mind by Any Mind
April 25, 2023
in ಸಿನಿಮಾ
0
ಮುನಿಸಿಕೊಂಡ ಮಾಧ್ಯಮಗಳಿಗೆ ದರ್ಶನ್ ಪತ್ರ ಮತ್ತು ಕೆಲವು ಪ್ರಸುತ್ತ ಪ್ರಶ್ನೆಗಳು…!
Share on WhatsAppShare on FacebookShare on Telegram

ಕನ್ನಡ ಚಿತ್ರರಂಗದ ಮೇರು ಪ್ರತಿಭೆ ದರ್ಶನ್ ತೂಗುದೀಪ ಅಥವಾ ಅಭಿಮಾನಿಗಳ ಡಿ ಬಾಸ್. ದರ್ಶನ್ ಹಾಗೂ ಮಾಧ್ಯಮಗಳ ನಡುವಿನ ಸಂಬಂಧ ಹಳಿಸಿತ್ತು ಎನ್ನುವುದು ಹಳೆಯ ಸುದ್ದಿ. ಈಗಿನ ಹೊಸತೇನು ಎಂದರೆ ದರ್ಶನ್ ಎಲ್ಲಾ ಮಾಧ್ಯಮಗಳ ಸಂಪಾದಕರಿಗೆ ಕ್ಷಮಾಪಣೆ ಪತ್ರ ಬರೆದಿದ್ದಾರೆ ಎನ್ನುವುದು. ಕೆಲವು ತಿಂಗಳುಗಳ ಕೆಳಗೆ ಮಾಧ್ಯಮಗಳ ಬಗ್ಗೆ ದರ್ಶನ್ ಮಾತನಾಡಿದ್ದಾರೆ ಎನ್ನಲಾಗುವ ಒಂದು ಆಡಿಯೋ ವೈರಲ್ ಆಗಿತ್ತು. ಆ ಆಡಿಯೋ ತುಣುಕನ್ನಿಟ್ಟು ಮಾಧ್ಯಮಗಳು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಬಾಯ್ಕಾಟ್ ಮಾಡಿತ್ತು. ಅಲ್ಲಿಂದ ಇಲ್ಲಿವರೆಗೆ ಟಿವಿ ಪರದೆಮೇಲೆ ದರ್ಶನ್ ಅವರ ಮುಖ ತೋರಿಸಲೇ ಬಾರದು ಎನ್ನುವ ಹಠಕ್ಕೆ ಬಿದ್ದು, ಜಿದ್ದು ಸಾಧಿಸಿಕೊಂಡಿತು. ವಾಸ್ತವದಲ್ಲಿ ಮಾಧ್ಯಮಗಳನ್ನು ಖಂಡಂ ತುಂಡಮಾಗಿ ಉಗಿದು ಬೈದವರ ಪಟ್ಟಿ ಸಣ್ಣದೇನಿಲ್ಲ. ಈಗ ಕರ್ನಾಟಕದ ಟಾಪ್ ಲೆವಲ್ ಟಿವಿ ಚಾನೆಲ್ ಗಳ ಉನ್ನತ ಹುದ್ದೆಯಲ್ಲಿರುವ ಹಲವು ಹಿರಿಯ ಪತ್ರಕರ್ತರನ್ನು ಇಲ್ಲಿನ ಅನೇಕ ರಾಜಕಾರಣಿಗಳು ನಕಶಿಕಾಂತ ಬೈದು ಕಳಿಸಿದಿದ್ದೆ. ಅದಾಗಿಯೂ ದರ್ಶನ್ ಧ್ವನಿ ಇದೆ ಎನ್ನಲಾದ ಆಡಿಯೋ ಆಧಾರವಾಗಿಟ್ಟುಕೊಂಡು ಮಾಧ್ಯಮಗಳು ಒಕ್ಕೊರಲಿನಿಂದ ದರ್ಶನ್ ಬಾಯ್ಕಾಟ್ ಮಾಡಿ ಗೆದ್ದಿದೆ.

ADVERTISEMENT

ರಾಬರ್ಟ್ ಬಳಿಕ ತೆರೆ ಕಂಡ ಕ್ರಾಂತಿ ಬಾಕ್ಸ್ ಆಫೀಸ್ ನಲ್ಲಿ ಮಿನಿಮಲ್ ರೆಸ್ಪಾನ್ಸ್ ಪಡೆಯೋದಕ್ಕೂ ಹಿಂದೆ ಬಿದ್ದಿತು. ಅಲ್ಲಿಗೆ ಮಾಧ್ಯಮಗಳು ಗಹಗಹಿಸಿ ನಕ್ಕು, ಮೀಸೆ ತಿರುವಿಕೊಂಡವು. ಅದಾಗಿಯೂ ದರ್ಶನ್ ಹೀಗೊಂದು ಪತ್ರ ಬರೆದು ಮಾಧ್ಯಮಗಳು ಹಾಗೂ ತನ್ನ ನಡುವೆ ಇರುವ ಅಂತರವನ್ನು ಕಡಿತ ಮಾಡುವ ಊಸಾಬಾರಿಗೆ ಕೈಹಾಕಿರಲಿಲ್ಲ. ಆದರೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಸ್ಟಾರ್ ಪ್ರಚಾರಕರ ಜಾಗ ಗಿಟ್ಟಿಸಿಕೊಳ್ಳುವ ರೇಸ್ ನಲ್ಲಿದ್ದ ದರ್ಶನ್ ಗೆ ಹೊಡೆತ ಕೊಟ್ಟಿದ್ದು ಇದೇ ಮಾಧ್ಯಮಗಳು. ಸಿಎಂ ಬೊಮ್ಮಾಯಿ ಒಂದ್ಕಡೆ ಸುದೀಪ್ ಅವರನ್ನು ಅಧಿಕೃತವಾಗಿ ಸ್ಟಾರ್ ಕಾಂಪೇನರ್ ಎಂದು ಘೋಷಿಸಿ ನಂತರದಲ್ಲೇ ದರ್ಶನ್ ಜೊತೆಗೂಡಿ ಪ್ರೆಸ್ ಮಾಡಿ ನಡೆಸಿ ದರ್ಶನ್ ಅವರನ್ನೂ ಸ್ಟಾರ್ ಪ್ರಚಾರಕನಾಗಿ ಘೋಷಿಸುವುದಿತ್ತು. ಆದರೆ ವಿಷಯ ತಿಳಿಯುತ್ತಿದ್ದಂತೆ ಮಾಧ್ಯಮಗಳು ಸಿಎಂ ಬೊಮ್ಮಾಯಿ ಕರೆದಿದ್ದ ಆ ಪತ್ರಿಕಾಗೋಷ್ಠಿಗೆ ಗೈರಾಗಿ ಮತ್ತೊಮ್ಮೆ ತಮ್ಮ ಅಸಹನೆ ತೋರಿದವು. ಇದು ದರ್ಶನ್ ಗೆ ಮತ್ತಷ್ಟು ಮುಖಭಂಗ ಉಂಟು ಮಾಡಿತು. ಅದಾಗಿ ಕೆಲ ದಿನಗಳ ಬಳಿಕ ಈಗ ನಡೆದ ಬೆಳವಣಿಗೆಯೇ ದರ್ಶನ್ ಮಾಧ್ಯಮಗಳಿಗೆ ಬರೆದ ಈ ಕ್ಷಮಾಪಣೆ ಪತ್ರ.

ಅಷ್ಟಕ್ಕೂ ಈ ಪತ್ರ ಬರೆಯುವ ದರ್ದು ದರ್ಶನ್ ಗೇನಿತ್ತು ಎನ್ನುವುದು ಈಗಲೂ ರಾಜಕೀಯ ಹಾಗೂ ಚಿತ್ರರಂಗದಲ್ಲಿರುವ ಹಲವರ ಪ್ರಶ್ನೆ. ಆದರೆ ವಾಸ್ತವ ಏನು ಎಂದರೆ ಈ ಪತ್ರ ಬರೆಯುವ ಐಡಿಯಾ ಕೊಟ್ಟಿದ್ದೇ ರಾಜ್ಯದ ಹಿರಿಯ ಪತ್ರಕರ್ತ ಎಂದೆನಿಸಿಕೊಂಡವರು. ದರ್ಶನ್ ಕರೆದು ಕೂರಿಸಿ ಹೀಗೊಂದು ಪತ್ರ ಬರೆದು ಪೋಸ್ಟ್ ಮಾಡಿದರೆ ಸಾಕು ಅಲ್ಲಿಗೆ ಎಲ್ಲವೂ ತಣ್ಣಗಾಗಲಿದೆ ಎಂದು ಆ ಪತ್ರಕರ್ತರು ದರ್ಶನ್ ಗೆ ಮನವರಿಕೆ ಮಾಡಿದರು. ಹೀಗೆ ಮಾಡೋದರಲ್ಲಿ ಅವರಿಗೇನು ಲಾಭ ಎನ್ನುವುದು ಮತ್ತೊಂದು ಪ್ರಶ್ನೆ. ಇನ್ನೇನು ನಿವೃತ್ತಿ ದಿನಗಳನ್ನು ಎದುರು ನೋಡಿ ಕೂರುತ್ತಿರುವ ಆ ಹಿರಿಯ ಎಂದೆನಿಸಿಕೊಂಡಿರುವ ಪತ್ರಕರ್ತರಿಗೆ ಹೀಗೆ ಮೀಡಿಯೇಟರ್ ಕೆಲಸ ಮಾಡೋದರಿಂದ ಆಡಳಿತಾರೂಢ ಪಕ್ಷದ ಕನಿಕರಕ್ಕೆ ಪಾತ್ರವಾಗಬಹುದೇನೋ ಎನ್ನುವ ಅಭಿಲಾಷೆ. ಯಾಕೆಂದರೆ ಮಾಧ್ಯಮಗಳ ಜೊತೆಗಿನ ದರ್ಶನ್ ಮುನಿಸು ಕೊನೆಗೊಳ್ಳಬೇಕಿರುವುದು ಕೇವಲ ದರ್ಶನ್ ಬೇಡಿಕೆ ಮಾತ್ರ ಅಲ್ಲ. ಬದಲಿಗೆ ಈ ಚುನಾವಣೆ ಹೊತ್ತಲ್ಲಿ ಸುದೀಪ್ ರೀತಿಯಲ್ಲೇ ಸ್ಟಾರ್ ಕಾಂಪೇನರ್ ಆಗಿ ಬಳಸಿಕೊಳ್ಳುವ ಲೆಕ್ಕಾಚಾರ ಆಡಳಿತಾ ರೂಢ ಪಕ್ಷದ್ದು. ಇದೇ ಕಾರಣಕ್ಕೆ ಇದನ್ನು ಬಗೆ ಹರಿಸಲು ಆ ಪಕ್ಷದಿಂದ ನೇಮಕಗೊಂಡವರೇ ಆ ಹಿರಿಯ ಪತ್ರಕರ್ತರು ಎನ್ನುವುದು ಈಗ ರಾಜಕೀಯ, ಚಿತ್ರರಂಗ ಹಾಗೂ ಪತ್ರಿಕಾ ವಲಯದಲ್ಲಿ ನಡೆಯುತ್ತಿರುವ ಬಿಸಿಬಿಸಿ ಚರ್ಚೆ.

ಅದೇನೆ ಇದ್ದರೂ ನಿರ್ಲಕ್ಷಿಸಿ ಬಿಡಬಹುದಾಗಿದ್ದ ವಿಚಾರವೊಂದನ್ನು ಮುಂದಿಟ್ಟುಕೊಂಡು ದರ್ಶನ್ ಎಂಬ ಕನ್ನಡದ ಪ್ರತಿಭೆಯನ್ನು ಎಷ್ಟು ಕುಗ್ಗಿಸಲು ಸಾಧ್ಯವೋ ಅಷ್ಟು ಕುಗ್ಗಿಸುವ ಕೆಲಸ ಈ ಮಾಧ್ಯಮಗಳು ಮಾಡಿವೆ.‌ ತಮ್ಮನ್ನೇ ಒಂದು ಪಕ್ಷಕ್ಕೆ ಮಾರಿಕೊಂಡು ಊರಿಗೆ ಬುದ್ಧಿ ಹೇಳುವ ನಕಲಿ ನೈತಿಕತೆಯ ಮಾಧ್ಯಮಗಳ ಹಿಪೋಕ್ರೆಸಿ ಇಲ್ಲಿಗೆ ಮುಗಿಯುವ ಹಾಗೆ ಕಾಣುವುದಿಲ್ಲ. ಎಲ್ಲದರ ಆಚೆಗೆ ಇಲ್ಲಿ ಧರ್ಮ ಹಾಗೂ ಜಾತಿ ಕೆಲಸ ಮಾಡಿದೆ ಎನ್ನುವುದು ಗಮನಾರ್ಹ

Tags: #actor#darshan#karnatakaassemblyelection#letter#media#politics#pratidhvani#pratidhvanidigital#pratidhvaninews#sandalwood
Previous Post

ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ವಿರುದ್ಧ ಎಫ್​ಐಆರ್..!

Next Post

ಮೋದಿ ಉಪನಾಮ ಪ್ರಕರಣ : ಸೂರತ್​ ಕೋರ್ಟ್​ನ ಆದೇಶ ಪ್ರಶ್ನಿಸಿ ಗುಜರಾತ್​​ ಹೈಕೋರ್ಟ್ ಮೊರೆ ಹೋದ ರಾಹುಲ್​

Related Posts

ಬಿಗ್‌ ಬಾಸ್‌ನಲ್ಲಿ ಗಿಲ್ಲಿಗೆ ಅನ್ಯಾಯ..? ಕಿಚ್ಚ ಸುದೀಪ್‌, ವಾಹಿನಿ ವಿರುದ್ಧ ಸಿಡಿದೆದ್ದ ಕನ್ನಡಿಗರು..!
Top Story

ಬಿಗ್‌ ಬಾಸ್‌ನಲ್ಲಿ ಗಿಲ್ಲಿಗೆ ಅನ್ಯಾಯ..? ಕಿಚ್ಚ ಸುದೀಪ್‌, ವಾಹಿನಿ ವಿರುದ್ಧ ಸಿಡಿದೆದ್ದ ಕನ್ನಡಿಗರು..!

by ಪ್ರತಿಧ್ವನಿ
January 12, 2026
0

ಬಿಗ್‌ ಬಾಸ್‌ ಕನ್ನಡ ಸೀಸನ್‌ 12(Bigg Boss Kannada 12)  ಈಗ ಫಿನಾಲೆ ಹಂತಕ್ಕೆ ಕಾಲಿಟ್ಟಿದೆ. ಆದರೆ ಫಿನಾಲೆಗೂ ಮುನ್ನವೇ ವೀಕ್ಷಕರ ನಡುವೆ ಭಾರೀ ಚರ್ಚೆ, ಆಕ್ರೋಶ...

Read moreDetails
BBK 12: ಸೂರಜ್ ಸಿಂಗ್‌ಗೆ ಬಿಗ್‌ ಆಫರ್‌: ಧಾರಾವಾಹಿಗೆ ಎಂಟ್ರಿ ಕೊಟ್ಟ ಬಿಗ್ ಬಾಸ್ ಸ್ಪರ್ಧಿ

BBK 12: ಸೂರಜ್ ಸಿಂಗ್‌ಗೆ ಬಿಗ್‌ ಆಫರ್‌: ಧಾರಾವಾಹಿಗೆ ಎಂಟ್ರಿ ಕೊಟ್ಟ ಬಿಗ್ ಬಾಸ್ ಸ್ಪರ್ಧಿ

January 11, 2026
BBK12: ಬಿಗ್‌ ಬಾಸ್‌ ಮನೆಗೆ ಹೈವೋಲ್ಟೇಜ್‌ ಎಂಟರ್‌ಟೈನ್‌ಮೆಂಟ್‌ ತಂದ ಗಿಲ್ಲಿ ಆಟದ ಗುಟ್ಟೇನು..?

BBK12: ಬಿಗ್‌ ಬಾಸ್‌ ಮನೆಗೆ ಹೈವೋಲ್ಟೇಜ್‌ ಎಂಟರ್‌ಟೈನ್‌ಮೆಂಟ್‌ ತಂದ ಗಿಲ್ಲಿ ಆಟದ ಗುಟ್ಟೇನು..?

January 10, 2026
BBK 12: ರಘು, ಗಿಲ್ಲಿ ಜೊತೆ ರಕ್ಷಿತಾ ಆಪ್ತತೆ ವಿವಾದ: ಸುದೀಪ್‌ ನಡೆಗೆ ವೀಕ್ಷಕರ ಅಸಮಾಧಾನ

BBK 12: ರಘು, ಗಿಲ್ಲಿ ಜೊತೆ ರಕ್ಷಿತಾ ಆಪ್ತತೆ ವಿವಾದ: ಸುದೀಪ್‌ ನಡೆಗೆ ವೀಕ್ಷಕರ ಅಸಮಾಧಾನ

January 10, 2026
Toxic: ಟೀಸರ್‌ನಲ್ಲಿ ಹಸಿಬಿಸಿ ದೃಶ್ಯ: ಯಶ್ ʼಟಾಕ್ಸಿಕ್ʼ ಸಿನಿಮಾ ವಿರುದ್ಧ ದೂರು..!

Toxic: ಟೀಸರ್‌ನಲ್ಲಿ ಹಸಿಬಿಸಿ ದೃಶ್ಯ: ಯಶ್ ʼಟಾಕ್ಸಿಕ್ʼ ಸಿನಿಮಾ ವಿರುದ್ಧ ದೂರು..!

January 10, 2026
Next Post
ಮೋದಿ ಉಪನಾಮ ಪ್ರಕರಣ : ಸೂರತ್​ ಕೋರ್ಟ್​ನ ಆದೇಶ ಪ್ರಶ್ನಿಸಿ ಗುಜರಾತ್​​ ಹೈಕೋರ್ಟ್ ಮೊರೆ ಹೋದ ರಾಹುಲ್​

ಮೋದಿ ಉಪನಾಮ ಪ್ರಕರಣ : ಸೂರತ್​ ಕೋರ್ಟ್​ನ ಆದೇಶ ಪ್ರಶ್ನಿಸಿ ಗುಜರಾತ್​​ ಹೈಕೋರ್ಟ್ ಮೊರೆ ಹೋದ ರಾಹುಲ್​

Please login to join discussion

Recent News

Daily Horoscope: ಇಂದು ಈ ರಾಶಿಯವರಿಗೆ ಬಂಪರ್‌ ಲಾಟರಿ..!
Top Story

Daily Horoscope: ಇಂದು ಈ ರಾಶಿಯವರಿಗೆ ಬಂಪರ್‌ ಲಾಟರಿ..!

by ಪ್ರತಿಧ್ವನಿ
January 13, 2026
ಹತ್ತು ವರ್ಷಗಳಲ್ಲಿ ಕಲ್ಯಾಣ ಕರ್ನಾಟಕದಲ್ಲಿ ಅಸಮಾನತೆ ಹೋಗಿ ಸಮಾನತೆ ಬರಲಿದೆ : ಸಿಎಂ ಸಿದ್ದರಾಮಯ್ಯ
Top Story

ಹತ್ತು ವರ್ಷಗಳಲ್ಲಿ ಕಲ್ಯಾಣ ಕರ್ನಾಟಕದಲ್ಲಿ ಅಸಮಾನತೆ ಹೋಗಿ ಸಮಾನತೆ ಬರಲಿದೆ : ಸಿಎಂ ಸಿದ್ದರಾಮಯ್ಯ

by ಪ್ರತಿಧ್ವನಿ
January 12, 2026
ಬೆಂಗಳೂರಿನಲ್ಲಿ ಆಸ್ಟ್ರೇಲಿಯಾದ ನ್ಯೂಸೌತ್ ವೇಲ್ಸ್ ವಿವಿ ಕ್ಯಾಂಪಸ್ ಆರಂಭ: ಎಂ.ಬಿ.ಪಾಟೀಲ
Top Story

ಬೆಂಗಳೂರಿನಲ್ಲಿ ಆಸ್ಟ್ರೇಲಿಯಾದ ನ್ಯೂಸೌತ್ ವೇಲ್ಸ್ ವಿವಿ ಕ್ಯಾಂಪಸ್ ಆರಂಭ: ಎಂ.ಬಿ.ಪಾಟೀಲ

by ಪ್ರತಿಧ್ವನಿ
January 12, 2026
ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಪ್ರತಿ ವರ್ಷ 5 ಸಾವಿರ ಕೋಟಿ ಅನುದಾನ: ಡಿ.ಕೆ. ಶಿವಕುಮಾರ್
Top Story

ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಪ್ರತಿ ವರ್ಷ 5 ಸಾವಿರ ಕೋಟಿ ಅನುದಾನ: ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
January 12, 2026
ಪ್ರಧಾನಿ ಮೋದಿ ಕನಸಿನ ರೇರ್‌ ಅರ್ಥ್‌ ಮ್ಯಾಗ್ನೆಟ್ಸ್‌ ಯೋಜನೆಗೆ ಶರವೇಗ: ಹೆಚ್.ಡಿ. ಕುಮಾರಸ್ವಾಮಿ
Top Story

ಪ್ರಧಾನಿ ಮೋದಿ ಕನಸಿನ ರೇರ್‌ ಅರ್ಥ್‌ ಮ್ಯಾಗ್ನೆಟ್ಸ್‌ ಯೋಜನೆಗೆ ಶರವೇಗ: ಹೆಚ್.ಡಿ. ಕುಮಾರಸ್ವಾಮಿ

by ಪ್ರತಿಧ್ವನಿ
January 12, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Daily Horoscope: ಇಂದು ಈ ರಾಶಿಯವರಿಗೆ ಬಂಪರ್‌ ಲಾಟರಿ..!

Daily Horoscope: ಇಂದು ಈ ರಾಶಿಯವರಿಗೆ ಬಂಪರ್‌ ಲಾಟರಿ..!

January 13, 2026
ಹತ್ತು ವರ್ಷಗಳಲ್ಲಿ ಕಲ್ಯಾಣ ಕರ್ನಾಟಕದಲ್ಲಿ ಅಸಮಾನತೆ ಹೋಗಿ ಸಮಾನತೆ ಬರಲಿದೆ : ಸಿಎಂ ಸಿದ್ದರಾಮಯ್ಯ

ಹತ್ತು ವರ್ಷಗಳಲ್ಲಿ ಕಲ್ಯಾಣ ಕರ್ನಾಟಕದಲ್ಲಿ ಅಸಮಾನತೆ ಹೋಗಿ ಸಮಾನತೆ ಬರಲಿದೆ : ಸಿಎಂ ಸಿದ್ದರಾಮಯ್ಯ

January 12, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada