• Home
  • About Us
  • ಕರ್ನಾಟಕ
Thursday, June 19, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಸಿನಿಮಾ

ಮುನಿಸಿಕೊಂಡ ಮಾಧ್ಯಮಗಳಿಗೆ ದರ್ಶನ್ ಪತ್ರ ಮತ್ತು ಕೆಲವು ಪ್ರಸುತ್ತ ಪ್ರಶ್ನೆಗಳು…!

Any Mind by Any Mind
April 25, 2023
in ಸಿನಿಮಾ
0
ಮುನಿಸಿಕೊಂಡ ಮಾಧ್ಯಮಗಳಿಗೆ ದರ್ಶನ್ ಪತ್ರ ಮತ್ತು ಕೆಲವು ಪ್ರಸುತ್ತ ಪ್ರಶ್ನೆಗಳು…!
Share on WhatsAppShare on FacebookShare on Telegram

ಕನ್ನಡ ಚಿತ್ರರಂಗದ ಮೇರು ಪ್ರತಿಭೆ ದರ್ಶನ್ ತೂಗುದೀಪ ಅಥವಾ ಅಭಿಮಾನಿಗಳ ಡಿ ಬಾಸ್. ದರ್ಶನ್ ಹಾಗೂ ಮಾಧ್ಯಮಗಳ ನಡುವಿನ ಸಂಬಂಧ ಹಳಿಸಿತ್ತು ಎನ್ನುವುದು ಹಳೆಯ ಸುದ್ದಿ. ಈಗಿನ ಹೊಸತೇನು ಎಂದರೆ ದರ್ಶನ್ ಎಲ್ಲಾ ಮಾಧ್ಯಮಗಳ ಸಂಪಾದಕರಿಗೆ ಕ್ಷಮಾಪಣೆ ಪತ್ರ ಬರೆದಿದ್ದಾರೆ ಎನ್ನುವುದು. ಕೆಲವು ತಿಂಗಳುಗಳ ಕೆಳಗೆ ಮಾಧ್ಯಮಗಳ ಬಗ್ಗೆ ದರ್ಶನ್ ಮಾತನಾಡಿದ್ದಾರೆ ಎನ್ನಲಾಗುವ ಒಂದು ಆಡಿಯೋ ವೈರಲ್ ಆಗಿತ್ತು. ಆ ಆಡಿಯೋ ತುಣುಕನ್ನಿಟ್ಟು ಮಾಧ್ಯಮಗಳು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಬಾಯ್ಕಾಟ್ ಮಾಡಿತ್ತು. ಅಲ್ಲಿಂದ ಇಲ್ಲಿವರೆಗೆ ಟಿವಿ ಪರದೆಮೇಲೆ ದರ್ಶನ್ ಅವರ ಮುಖ ತೋರಿಸಲೇ ಬಾರದು ಎನ್ನುವ ಹಠಕ್ಕೆ ಬಿದ್ದು, ಜಿದ್ದು ಸಾಧಿಸಿಕೊಂಡಿತು. ವಾಸ್ತವದಲ್ಲಿ ಮಾಧ್ಯಮಗಳನ್ನು ಖಂಡಂ ತುಂಡಮಾಗಿ ಉಗಿದು ಬೈದವರ ಪಟ್ಟಿ ಸಣ್ಣದೇನಿಲ್ಲ. ಈಗ ಕರ್ನಾಟಕದ ಟಾಪ್ ಲೆವಲ್ ಟಿವಿ ಚಾನೆಲ್ ಗಳ ಉನ್ನತ ಹುದ್ದೆಯಲ್ಲಿರುವ ಹಲವು ಹಿರಿಯ ಪತ್ರಕರ್ತರನ್ನು ಇಲ್ಲಿನ ಅನೇಕ ರಾಜಕಾರಣಿಗಳು ನಕಶಿಕಾಂತ ಬೈದು ಕಳಿಸಿದಿದ್ದೆ. ಅದಾಗಿಯೂ ದರ್ಶನ್ ಧ್ವನಿ ಇದೆ ಎನ್ನಲಾದ ಆಡಿಯೋ ಆಧಾರವಾಗಿಟ್ಟುಕೊಂಡು ಮಾಧ್ಯಮಗಳು ಒಕ್ಕೊರಲಿನಿಂದ ದರ್ಶನ್ ಬಾಯ್ಕಾಟ್ ಮಾಡಿ ಗೆದ್ದಿದೆ.

ADVERTISEMENT

ರಾಬರ್ಟ್ ಬಳಿಕ ತೆರೆ ಕಂಡ ಕ್ರಾಂತಿ ಬಾಕ್ಸ್ ಆಫೀಸ್ ನಲ್ಲಿ ಮಿನಿಮಲ್ ರೆಸ್ಪಾನ್ಸ್ ಪಡೆಯೋದಕ್ಕೂ ಹಿಂದೆ ಬಿದ್ದಿತು. ಅಲ್ಲಿಗೆ ಮಾಧ್ಯಮಗಳು ಗಹಗಹಿಸಿ ನಕ್ಕು, ಮೀಸೆ ತಿರುವಿಕೊಂಡವು. ಅದಾಗಿಯೂ ದರ್ಶನ್ ಹೀಗೊಂದು ಪತ್ರ ಬರೆದು ಮಾಧ್ಯಮಗಳು ಹಾಗೂ ತನ್ನ ನಡುವೆ ಇರುವ ಅಂತರವನ್ನು ಕಡಿತ ಮಾಡುವ ಊಸಾಬಾರಿಗೆ ಕೈಹಾಕಿರಲಿಲ್ಲ. ಆದರೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಸ್ಟಾರ್ ಪ್ರಚಾರಕರ ಜಾಗ ಗಿಟ್ಟಿಸಿಕೊಳ್ಳುವ ರೇಸ್ ನಲ್ಲಿದ್ದ ದರ್ಶನ್ ಗೆ ಹೊಡೆತ ಕೊಟ್ಟಿದ್ದು ಇದೇ ಮಾಧ್ಯಮಗಳು. ಸಿಎಂ ಬೊಮ್ಮಾಯಿ ಒಂದ್ಕಡೆ ಸುದೀಪ್ ಅವರನ್ನು ಅಧಿಕೃತವಾಗಿ ಸ್ಟಾರ್ ಕಾಂಪೇನರ್ ಎಂದು ಘೋಷಿಸಿ ನಂತರದಲ್ಲೇ ದರ್ಶನ್ ಜೊತೆಗೂಡಿ ಪ್ರೆಸ್ ಮಾಡಿ ನಡೆಸಿ ದರ್ಶನ್ ಅವರನ್ನೂ ಸ್ಟಾರ್ ಪ್ರಚಾರಕನಾಗಿ ಘೋಷಿಸುವುದಿತ್ತು. ಆದರೆ ವಿಷಯ ತಿಳಿಯುತ್ತಿದ್ದಂತೆ ಮಾಧ್ಯಮಗಳು ಸಿಎಂ ಬೊಮ್ಮಾಯಿ ಕರೆದಿದ್ದ ಆ ಪತ್ರಿಕಾಗೋಷ್ಠಿಗೆ ಗೈರಾಗಿ ಮತ್ತೊಮ್ಮೆ ತಮ್ಮ ಅಸಹನೆ ತೋರಿದವು. ಇದು ದರ್ಶನ್ ಗೆ ಮತ್ತಷ್ಟು ಮುಖಭಂಗ ಉಂಟು ಮಾಡಿತು. ಅದಾಗಿ ಕೆಲ ದಿನಗಳ ಬಳಿಕ ಈಗ ನಡೆದ ಬೆಳವಣಿಗೆಯೇ ದರ್ಶನ್ ಮಾಧ್ಯಮಗಳಿಗೆ ಬರೆದ ಈ ಕ್ಷಮಾಪಣೆ ಪತ್ರ.

ಅಷ್ಟಕ್ಕೂ ಈ ಪತ್ರ ಬರೆಯುವ ದರ್ದು ದರ್ಶನ್ ಗೇನಿತ್ತು ಎನ್ನುವುದು ಈಗಲೂ ರಾಜಕೀಯ ಹಾಗೂ ಚಿತ್ರರಂಗದಲ್ಲಿರುವ ಹಲವರ ಪ್ರಶ್ನೆ. ಆದರೆ ವಾಸ್ತವ ಏನು ಎಂದರೆ ಈ ಪತ್ರ ಬರೆಯುವ ಐಡಿಯಾ ಕೊಟ್ಟಿದ್ದೇ ರಾಜ್ಯದ ಹಿರಿಯ ಪತ್ರಕರ್ತ ಎಂದೆನಿಸಿಕೊಂಡವರು. ದರ್ಶನ್ ಕರೆದು ಕೂರಿಸಿ ಹೀಗೊಂದು ಪತ್ರ ಬರೆದು ಪೋಸ್ಟ್ ಮಾಡಿದರೆ ಸಾಕು ಅಲ್ಲಿಗೆ ಎಲ್ಲವೂ ತಣ್ಣಗಾಗಲಿದೆ ಎಂದು ಆ ಪತ್ರಕರ್ತರು ದರ್ಶನ್ ಗೆ ಮನವರಿಕೆ ಮಾಡಿದರು. ಹೀಗೆ ಮಾಡೋದರಲ್ಲಿ ಅವರಿಗೇನು ಲಾಭ ಎನ್ನುವುದು ಮತ್ತೊಂದು ಪ್ರಶ್ನೆ. ಇನ್ನೇನು ನಿವೃತ್ತಿ ದಿನಗಳನ್ನು ಎದುರು ನೋಡಿ ಕೂರುತ್ತಿರುವ ಆ ಹಿರಿಯ ಎಂದೆನಿಸಿಕೊಂಡಿರುವ ಪತ್ರಕರ್ತರಿಗೆ ಹೀಗೆ ಮೀಡಿಯೇಟರ್ ಕೆಲಸ ಮಾಡೋದರಿಂದ ಆಡಳಿತಾರೂಢ ಪಕ್ಷದ ಕನಿಕರಕ್ಕೆ ಪಾತ್ರವಾಗಬಹುದೇನೋ ಎನ್ನುವ ಅಭಿಲಾಷೆ. ಯಾಕೆಂದರೆ ಮಾಧ್ಯಮಗಳ ಜೊತೆಗಿನ ದರ್ಶನ್ ಮುನಿಸು ಕೊನೆಗೊಳ್ಳಬೇಕಿರುವುದು ಕೇವಲ ದರ್ಶನ್ ಬೇಡಿಕೆ ಮಾತ್ರ ಅಲ್ಲ. ಬದಲಿಗೆ ಈ ಚುನಾವಣೆ ಹೊತ್ತಲ್ಲಿ ಸುದೀಪ್ ರೀತಿಯಲ್ಲೇ ಸ್ಟಾರ್ ಕಾಂಪೇನರ್ ಆಗಿ ಬಳಸಿಕೊಳ್ಳುವ ಲೆಕ್ಕಾಚಾರ ಆಡಳಿತಾ ರೂಢ ಪಕ್ಷದ್ದು. ಇದೇ ಕಾರಣಕ್ಕೆ ಇದನ್ನು ಬಗೆ ಹರಿಸಲು ಆ ಪಕ್ಷದಿಂದ ನೇಮಕಗೊಂಡವರೇ ಆ ಹಿರಿಯ ಪತ್ರಕರ್ತರು ಎನ್ನುವುದು ಈಗ ರಾಜಕೀಯ, ಚಿತ್ರರಂಗ ಹಾಗೂ ಪತ್ರಿಕಾ ವಲಯದಲ್ಲಿ ನಡೆಯುತ್ತಿರುವ ಬಿಸಿಬಿಸಿ ಚರ್ಚೆ.

ಅದೇನೆ ಇದ್ದರೂ ನಿರ್ಲಕ್ಷಿಸಿ ಬಿಡಬಹುದಾಗಿದ್ದ ವಿಚಾರವೊಂದನ್ನು ಮುಂದಿಟ್ಟುಕೊಂಡು ದರ್ಶನ್ ಎಂಬ ಕನ್ನಡದ ಪ್ರತಿಭೆಯನ್ನು ಎಷ್ಟು ಕುಗ್ಗಿಸಲು ಸಾಧ್ಯವೋ ಅಷ್ಟು ಕುಗ್ಗಿಸುವ ಕೆಲಸ ಈ ಮಾಧ್ಯಮಗಳು ಮಾಡಿವೆ.‌ ತಮ್ಮನ್ನೇ ಒಂದು ಪಕ್ಷಕ್ಕೆ ಮಾರಿಕೊಂಡು ಊರಿಗೆ ಬುದ್ಧಿ ಹೇಳುವ ನಕಲಿ ನೈತಿಕತೆಯ ಮಾಧ್ಯಮಗಳ ಹಿಪೋಕ್ರೆಸಿ ಇಲ್ಲಿಗೆ ಮುಗಿಯುವ ಹಾಗೆ ಕಾಣುವುದಿಲ್ಲ. ಎಲ್ಲದರ ಆಚೆಗೆ ಇಲ್ಲಿ ಧರ್ಮ ಹಾಗೂ ಜಾತಿ ಕೆಲಸ ಮಾಡಿದೆ ಎನ್ನುವುದು ಗಮನಾರ್ಹ

Tags: #actor#darshan#karnatakaassemblyelection#letter#media#politics#pratidhvani#pratidhvanidigital#pratidhvaninews#sandalwood
Previous Post

ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ವಿರುದ್ಧ ಎಫ್​ಐಆರ್..!

Next Post

ಮೋದಿ ಉಪನಾಮ ಪ್ರಕರಣ : ಸೂರತ್​ ಕೋರ್ಟ್​ನ ಆದೇಶ ಪ್ರಶ್ನಿಸಿ ಗುಜರಾತ್​​ ಹೈಕೋರ್ಟ್ ಮೊರೆ ಹೋದ ರಾಹುಲ್​

Related Posts

ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ಬಹು ನಿರೀಕ್ಷಿತ ಸೆಬಾಸ್ಟಿನ್ ಡೇವಿಡ್ ಅವರ “ಪೆನ್ ಡ್ರೈವ್” ಚಿತ್ರ ಜುಲೈ 4 ರಂದು ಬಿಡುಗಡೆ .
Top Story

ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ಬಹು ನಿರೀಕ್ಷಿತ ಸೆಬಾಸ್ಟಿನ್ ಡೇವಿಡ್ ಅವರ “ಪೆನ್ ಡ್ರೈವ್” ಚಿತ್ರ ಜುಲೈ 4 ರಂದು ಬಿಡುಗಡೆ .

by ಪ್ರತಿಧ್ವನಿ
June 18, 2025
0

ಪ್ರಮುಖಪಾತ್ರದಲ್ಲಿ ಕನಸಿನ ರಾಣಿ ಮಾಲಾಶ್ರೀ, "ಬಿಗ್ ಬಾಸ್" ಖ್ಯಾತಿಯ ತನಿಷಾ ಕುಪ್ಪಂಡ ಹಾಗೂ ಕಿಶನ್ ನಟನೆ . ಆರ್ ಹೆಚ್ ಎಂಟರ್ ಪ್ರೈಸಸ್ ಲಾಂಛನದಲ್ಲಿ ಎನ್ ಹನುಮಂತರಾಜು...

Read moreDetails
ನಟಿ ರಚಿತಾ ರಾಮ್‌ ವಿರುದ್ದ ದೂರು ಕೊಟ್ಟ ನಟ ಶ್ರೀನಗರ ಕಿಟ್ಟಿ & ನಾಗಶೇಖರ್..!

ನಟಿ ರಚಿತಾ ರಾಮ್‌ ವಿರುದ್ದ ದೂರು ಕೊಟ್ಟ ನಟ ಶ್ರೀನಗರ ಕಿಟ್ಟಿ & ನಾಗಶೇಖರ್..!

June 17, 2025
ಪುರಿ ಜಗನ್ನಾಥ್‌-ವಿಜಯ್‌ ಸೇತುಪತಿ ಸಿನಿಮಾಗೆ ಸಂಯುಕ್ತ ಮೆನನ್ ಎಂಟ್ರಿ..!

ಪುರಿ ಜಗನ್ನಾಥ್‌-ವಿಜಯ್‌ ಸೇತುಪತಿ ಸಿನಿಮಾಗೆ ಸಂಯುಕ್ತ ಮೆನನ್ ಎಂಟ್ರಿ..!

June 17, 2025
ಕನ್ನಡ ಚಿತ್ರರಂಗಕ್ಕೆ ಬಂದ ಮರಾಠಿ ನಟ ಉಪೇಂದ್ರ ಲಿಮಯೆ…ಕಿಶೋರ್ ಭಾರ್ಗವ್ ನಿರ್ದೇಶನದಲ್ಲಿ ನಟನೆ

ಕನ್ನಡ ಚಿತ್ರರಂಗಕ್ಕೆ ಬಂದ ಮರಾಠಿ ನಟ ಉಪೇಂದ್ರ ಲಿಮಯೆ…ಕಿಶೋರ್ ಭಾರ್ಗವ್ ನಿರ್ದೇಶನದಲ್ಲಿ ನಟನೆ

June 17, 2025
ಪ್ರಭಾಸ್‌ ನಟನೆಯ “ದಿ ರಾಜಾಸಾಬ್” ಚಿತ್ರದ ಟೀಸರ್‌ ಬಿಡುಗಡೆ: ಡಿಸೆಂಬರ್‌ 5ರಂದು ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ತೆರೆಗೆ

ಪ್ರಭಾಸ್‌ ನಟನೆಯ “ದಿ ರಾಜಾಸಾಬ್” ಚಿತ್ರದ ಟೀಸರ್‌ ಬಿಡುಗಡೆ: ಡಿಸೆಂಬರ್‌ 5ರಂದು ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ತೆರೆಗೆ

June 16, 2025
Next Post
ಮೋದಿ ಉಪನಾಮ ಪ್ರಕರಣ : ಸೂರತ್​ ಕೋರ್ಟ್​ನ ಆದೇಶ ಪ್ರಶ್ನಿಸಿ ಗುಜರಾತ್​​ ಹೈಕೋರ್ಟ್ ಮೊರೆ ಹೋದ ರಾಹುಲ್​

ಮೋದಿ ಉಪನಾಮ ಪ್ರಕರಣ : ಸೂರತ್​ ಕೋರ್ಟ್​ನ ಆದೇಶ ಪ್ರಶ್ನಿಸಿ ಗುಜರಾತ್​​ ಹೈಕೋರ್ಟ್ ಮೊರೆ ಹೋದ ರಾಹುಲ್​

Please login to join discussion

Recent News

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ರಂದು ನಡೆದ ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳು
Top Story

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ರಂದು ನಡೆದ ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳು

by ಪ್ರತಿಧ್ವನಿ
June 19, 2025
ಬಮೂಲ್ ಅಧ್ಯಕ್ಷರಾಗಿ ಡಿ.ಕೆ. ಸುರೇಶ್ ಅವಿರೋಧ ಆಯ್ಕೆ
Top Story

ಬಮೂಲ್ ಅಧ್ಯಕ್ಷರಾಗಿ ಡಿ.ಕೆ. ಸುರೇಶ್ ಅವಿರೋಧ ಆಯ್ಕೆ

by ಪ್ರತಿಧ್ವನಿ
June 19, 2025
ರಾಜ್ಯದ ಹಸಿರು ಇಂಧನ ಭವಿಷ್ಯಕ್ಕಿದೆ ಸ್ಪಷ್ಟ ಗುರಿ: ಟಿ.ಡಿ.ರಾಜೇಗೌಡ
Top Story

ರಾಜ್ಯದ ಹಸಿರು ಇಂಧನ ಭವಿಷ್ಯಕ್ಕಿದೆ ಸ್ಪಷ್ಟ ಗುರಿ: ಟಿ.ಡಿ.ರಾಜೇಗೌಡ

by ಪ್ರತಿಧ್ವನಿ
June 19, 2025
ರಾಹುಲ್ ಗಾಂಧಿಗೆ ಜನ್ಮದಿನದ ಶುಭ ಕೋರಿದ ಡಿಸಿಎಂ ಡಿ.ಕೆ. ಶಿವಕುಮಾರ್
Top Story

ರಾಹುಲ್ ಗಾಂಧಿಗೆ ಜನ್ಮದಿನದ ಶುಭ ಕೋರಿದ ಡಿಸಿಎಂ ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
June 19, 2025
ಭಾರತ V/S ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದು ನಾನೇ..!ಡೊನಾಲ್ಡ್ ಟ್ರಂಪ್ !
Top Story

ಭಾರತ V/S ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದು ನಾನೇ..!ಡೊನಾಲ್ಡ್ ಟ್ರಂಪ್ !

by Chetan
June 19, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ರಂದು ನಡೆದ ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ರಂದು ನಡೆದ ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳು

June 19, 2025
ಬಮೂಲ್ ಅಧ್ಯಕ್ಷರಾಗಿ ಡಿ.ಕೆ. ಸುರೇಶ್ ಅವಿರೋಧ ಆಯ್ಕೆ

ಬಮೂಲ್ ಅಧ್ಯಕ್ಷರಾಗಿ ಡಿ.ಕೆ. ಸುರೇಶ್ ಅವಿರೋಧ ಆಯ್ಕೆ

June 19, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada