• Home
  • About Us
  • ಕರ್ನಾಟಕ
Saturday, June 28, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಸವಾಲಿನ ಸಮರಕ್ಕೆ ಮುಂದಾದ ಸಮೀರ್ ವಾಂಖೆಡೆ ಮತ್ತು ನವಾಬ್ ಮಲಿಕ್

Shivakumar A by Shivakumar A
October 28, 2021
in ದೇಶ
0
ಸವಾಲಿನ ಸಮರಕ್ಕೆ ಮುಂದಾದ ಸಮೀರ್ ವಾಂಖೆಡೆ ಮತ್ತು ನವಾಬ್ ಮಲಿಕ್
Share on WhatsAppShare on FacebookShare on Telegram

NCB ಅಧಿಕಾರಿ ಸಮೀರ್ ವಾಂಖೆಡೆ ಹಾಗೂ NCP ನಾಯಕ ನವಾಬ್ ಮಲಿಕ್ ನಡುವಿನ ಸಮರ ಈಗ ಪರಸ್ಪರ ಸವಾಲೆಸೆಯುವ ಮಟ್ಟಕ್ಕೆ ಏರಿದೆ. ಸಮೀರ್ ವಾಂಖೆಡೆ ನಕಲಿ ಜಾತಿ ಪ್ರಮಾಣ ಪತ್ರ ನೀಡಿ ಸರ್ಕಾರಿ ನೌಕರಿ ಪಡೆದಿದ್ದಾರೆ ಎಂದು ಮಲಿಕ್ ಆರೋಪಿಸಿದ್ದರೆ, ಅದಕ್ಕೆ ಪೂರಕ ದಾಖಲೆ ನೀಡಿ ಎಂದು ವಾಂಖೆಡೆ ಸವಾಲೆಸಿದ್ದಾರೆ. 

ADVERTISEMENT

ಸಮೀರ್ ಮದುವೆ ಕುರಿತ ಸಾಕ್ಷ್ಯಾಧಾರಗಳನ್ನು ಬಿಡುಗಡೆ ಮಾಡಿರುವ ಮಲಿಕ್, ಡಾ. ಶಬಾನಾ ಖುರೇಶಿ ಅವರೊಂದಿಗಿನ ಮದುವೆಯ ‘ನಿಖಾಹ್ ನಾಮ’ವನ್ನು ಟ್ವಿಟರ್’ನಲ್ಲಿ ಪೋಸ್ಟ್ ಮಾಡಿದ್ದಾರೆ. ರೂ.33,000‘ಮೆಹೆರ್’ ನೀಡಿ ಸಮೀರ್ ದಾವುದ್ ವಾಂಖೆಡೆ ಅವರು ಶಬಾನಾ ಖುರೇಶಿ ಅವರೊಂದಿಗೆ ವಿವಾಹವಾಗಿದ್ದರು. ಇವರ ವಿವಾಹಕ್ಕೆ ಸಾಕ್ಷಿಯಾಗಿ ಸಮೀರ್ ವಾಂಖೆಡೆ ಅಕ್ಕ ಯಾಸ್ಮಿನ್ ದಾವುದ್ ವಾಂಖೆಡೆಯ ಪತಿ ಅಜೀಜ್ ಖಾನ್ ನಿಖಾಹ್ ನಾಮದಲ್ಲಿ ಸಹಿಯನ್ನೂ ಹಾಕಿದ್ದರು ಎಂದು ಮಿಲ್ ಹೇಳಿದ್ದಾರೆ. 

Meher amount was Rs.33000. Witness no 2 was Aziz Khan Husband of Yasmin Dawood Wankhede elder sister of Sameer Dawood Wankhede.

— Nawab Malik نواب ملک नवाब मलिक (@nawabmalikncp) October 27, 2021

“ನಾನು ಬಿಡುಗಡೆ ಮಾಡಿರುವ ನಿಖಾಹ್ ನಾಮ ಅಥವಾ ಜನ್ಮ ಪ್ರಮಾಣ ಪತ್ರ ನಕಲಿಯಾಗಿದ್ದಲ್ಲಿ ನಾನು ರಾಜಕೀಯ ತೊರೆಯುತ್ತೇನೆ. ನನ್ನ ಸ್ಥಾನಕ್ಕೆ ರಾಜಿನಾಮೆ ನೀಡುತ್ತೇನೆ. ಆದರೆ, ಸಮೀರ್ ವಾಂಖೆಡೆ ಬಳಿ ರಾಜಿನಾಮೆಯನ್ನು ನಾನು ಕೇಳುವುದಿಲ್ಲ. ಕಾನೂನಿನನ್ವಯ ಅವರು ಕೆಲಸ ಕಳೆದುಕೊಳ್ಳಲಿದ್ದಾರೆ,” ಎಂದು ಮಲಿಕ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. 

ಸಮೀರ್ ವಾಂಖೆಡೆ ಅವರು ಸುಳ್ಳು ಪ್ರಕರಣ ದಾಖಲಿಸಿ ಅಮಾಯಕರಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಕುರಿತು NCB ಮುಖ್ಯಸ್ಥರಿಗೆ ಅನಾಮಧೇಯ ಅಧಿಕಾರಿಯಿಂದ ಪತ್ರ ಬಂದಿತ್ತು. ಈ ಪತ್ರ ಬಹಿರಂಗಗೊಂಡ ಮರುದಿನವೇ, ಮಲಿಕ್ ಅವರು ನಿಖಾಹ್ ನಾಮವನ್ನು ಬಹಿಂಗಪಡಿಸಿ ಸಮೀರ್ ವಾಂಖೆಡೆಯನ್ನು ಮುಜುಗರಕ್ಕೀಡು ಮಾಡುವ ಪ್ರಯತ್ನ ಮಾಡಿದ್ದಾರೆ. 

ನಾನು ಹುಟ್ಟಿನಿಂದಲೇ ಹಿಂದು- ಸಮೀರ್

ಮಲಿಕ್ ಅವರ ಆರೋಪಗಳಿಗೆ ಉತ್ತರಿಸಿರುವ ಸಮೀರ್ ವಾಂಖೆಡೆ, ನಾನು ದಲಿತ ಹಿಂದೂ ಕುಟುಂಬದಲ್ಲಿ ಹುಟ್ಟಿದವನು. ನಾನು ಇವತ್ತಿಗೂ ಹಿಂದೂ. ನಾನೂ ಮತಾಂತರಗೊಂಡಿಲ್ಲ. ಭಾರತವೊಂದು ಜಾತ್ಯಾತೀತ ರಾಷ್ಟ್ರ ಇದರ ಬಗ್ಗೆ ನನಗೆ ಅಭಿಮಾನವಿದೆ, ಎಂದಿದ್ದಾರೆ. 

ನನ್ನ ತಂದೆ ಹಿಂದೂ, ನನ್ನ ತಾಯಿ ಮುಸ್ಲಿಂ. ನಾನು ಮುಸ್ಲಿಂ ಸಂಪ್ರದಾಯದ ಪ್ರಕಾರ ವಿವಾಹವಾಗಬೇಕೆಂದು ತಾಯಿಯ ಆಸೆಯಾಗಿತ್ತು. ಅದೇ ತಿಂಗಳು, ವಿಶೇಷ ವಿವಾಹ ಕಾಯ್ದೆಯಡಿ ನನ್ನ ಮದುವೆಯನ್ನು ನೋಂದಣಿ ಮಾಡಲಾಗಿತ್ತು. ಬಳಿಕ ಕಾನೂನಾತ್ಮಕವಾಗಿ ವಿಚ್ಛೇದನ ಪಡೆದಿದ್ದೇವೆ, ಎಂದು ಹೇಳಿದ್ದಾರೆ. 

“ನಾನು ಬೇರೆ ಧರ್ಮಕ್ಕೆ ಮತಾಂತರವಾಗಿದ್ದರೆ ಅದಕ್ಕೆ ಪೂರಕವಾದ ದಾಖಲೆಗಳನ್ನು ನವಾಬ್ ಮಲಿಕ್ ನೀಡಬೇಕು. ಒಂದು ವೇಳೆ ಅವರು ದಾಖಲೆ ನೀಡಿದರೆ, ವಿಶೇಷ ವಿವಾಹ ಕಾಯ್ದೆಯಡಿ ನನ್ನ ಮದುವೆ ನೋಂದಣಿಯಾದ ದಾಖಲೆಗಳನ್ನು ನನ್ನ ತಂದೆ ಬಿಡುಗಡೆ ಮಾಡಲಿದ್ದಾರೆ,” ಎಂದು ಮಲಿಕ್ ಅವರಿಗೆ ಸವಾಲೆಸೆದಿದ್ದಾರೆ. 

ಸಮೀರ್ ವಿರುದ್ದ ತನಿಖೆಯಿಲ್ಲ ಎಂದ NCB:

ಅನಾಮಧೇಯ ವ್ಯಕ್ತಿ ಪತ್ರ ಬರೆದು ದೂರು ನೀಡಿರುವ ವಿಚಾರದ ಕುರಿತು ಸಮೀರ್ ವಾಂಖೆಡೆ ವಿರುದ್ದ ಯಾವುದೇ ರೀತಿಯ ತನಿಖೆ ಕೈಗೊಳ್ಳುವುದಿಲ್ಲ ಎಂದು NCB ಮಹಾ ನಿರ್ದೇಶಕರಾದ ಎಸ್ ಎನ್ ಪ್ರಧಾನ್ ಹೇಳಿದ್ದಾರೆ. ಪತ್ರದಲ್ಲಿ ಯಾರ ಸಹಿಯೂ ಇರದ ಕಾರಣ ದೂರನ್ನು ಊರ್ಜಿತಗೊಳಿಸಲು ಸಾದ್ಯವಿಲ್ಲ ಎಂದು ಹೇಳಿದ್ದಾರೆ. 

ಇದಕ್ಕೆ ಪ್ರತಿಕ್ರಿಯಿಸಿದನವಾಬ್ ಮಲಿಕ್NCB ಮೊದಲು ತನಿಖೆ ನಡೆಸುವುದಾಗಿ ಹೇಳಿತ್ತು. ಆ ಬಳಿಕ ತನಿಖೆ ನಡೆಸುವುದಿಲ್ಲ ಎಂದು ಹೇಳಿದೆ. ಇದರಿಂದಾಗಿ ಸಂಪೂರ್ಣ NCB ಮೇಲೆ ಸಂದೇಹ ಪಡುವಂತಾಗಿದೆ, ಎಂದಿದ್ದಾರೆ. 

“ಎಲೆಕ್ಟ್ರಾನಿಕ್ ಆಧಾರದ ಮೇಲೆ ತನಿಖೆ ನಡೆಸುವುದಾಗಿ NCB ಹೇಳುತ್ತಲೇ ಬಂದಿದೆ. ಸಮೀರ್ ವಾಂಖೆಡೆ, ಪ್ರಭಾಕರ್ ಸೈಲ್, ಕಿರಣ್ ಗೋಸಾವಿ, ಹಾಗೂ ಸಮೀರ್ ವಾಂಖೆಡೆ ಡ್ರೈವರ್ ಮಾನೆ ಅವರ ಕಾಲ್ ರೆಕಾರ್ಡ್ಸ್ NCB ಪಡೆದರೆ ಎಲ್ಲಾ ಸಂದೇಹಗಳು ನಿವಾರಣೆಯಾಗುವುದು,” ಎಂದು ಮಲಿಕ್ ಹೇಳಿದ್ದಾರೆ. 

ಸಮೀರ್ ವಾಂಖೆಡೆ ಪರ ಸೋಶಿಯಲ್ ಮೀಡಿಯಾ ಅಭಿಯಾನ: 

ನವಾಬ್ ಮಲಿಕ್ ಮತ್ತು ಸಮೀರ್ ವಾಂಖೆಡೆ ನಡುವಿನ ಸವಾಲಿನ ಸಮರಕ್ಕೆ ಸಾಮಾಜಿಕ ಜಾಲತಾಣವೂ ಸಾಥ್ ನೀಡಿದೆ. ನಾರ್ಕೋಟಿಕ್ಸ್ ಬ್ಯೂರೋ ಕಚೇರಿ ಎದುರು ಸಮೀರ್ ಪರ ಹಲವಾರು ಜನರು ಬೆಂಬಲ ಸೂಚಿಸಿದ ಘಟನೆಯು ನಡೆದಿದೆ. ನವಾಬ್ ಮಲಿಕ್, ಅವರು ಸಮೀರ್ ವಾಂಖೆಡೆ ವಿರುದ್ದ ಸುಳ್ಳು ದಾಖಲೆಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿ ಸಮೀರ್ ಪರ #supportSameervankhede ಅಭಿಯಾನವನ್ನೂ ನಡೆಸಲಾಗುತ್ತಿದೆ. 

In favour of #SameerWakhede fans at @narcoticsbureau headquarters pic.twitter.com/lB0z6L2iqG

— Atulkrishan (@iAtulKrishan1) October 26, 2021
Tags: Aryan KhanBJPCongress PartyDrugs rownavaabmaliksameerwankhedeಬಿಜೆಪಿ
Previous Post

ಬಿಜೆಪಿ ಶಕ್ತಿ ಬಗ್ಗೆ ತಿಳಿಯದಿರುವುದೇ ರಾಹುಲ್‌ ಸಮಸ್ಯೆ, ಜನರ ಕೋಪ ಬಿಜೆಪಿಯನ್ನು ಸೋಲಿಸಲು ಸಾಕಾಗುವುದಿಲ್ಲ– ಪ್ರಶಾಂತ್‌ ಕಿಶೋರ್

Next Post

ಏನಿದು ಪೆಗಾಸಸ್ ಸ್ಪೈವೇರ್ ವಿವಾದ: ಈ ವೈರಸ್ ಹೇಗೆ ಕಾರ್ಯನಿರ್ವಹಿಸುತ್ತೇ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

Related Posts

ನವ ಭಾರತದ ಪ್ರಾಚೀನ ಸಮಾಜಗಳ ನಡುವೆ
Top Story

ನವ ಭಾರತದ ಪ್ರಾಚೀನ ಸಮಾಜಗಳ ನಡುವೆ

by ಪ್ರತಿಧ್ವನಿ
June 28, 2025
0

----ನಾ ದಿವಾಕರ---- ಡಿಜಿಟಲ್‌ ಯುಗದಲ್ಲೂ ಅಮಾನವೀಯ ಸಾಂಪ್ರದಾಯಿಕತೆ ಜೀವಂತವಾಗಿರುವುದು ದುರಂತ 2047ರ ವೇಳೆಗೆ ಪೂರ್ಣ ವಿಕಾಸದ ಕನಸು ಕಾಣುತ್ತಿರುವ ಡಿಜಿಟಲ್‌ ಭಾರತ ತಾನು ಪರಿಭಾವಿಸಿಕೊಂಡಿರುವ ʼಪ್ರಗತಿ-ಆಧುನಿಕತೆ-ನಾಗರಿಕತೆʼಯ ಪರಿಕಲ್ಪನೆಗಳನ್ನು...

Read moreDetails

DK Shivakumar:ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಯೋಜನಾ ಪ್ರಾಧಿಕಾರ ಸೇರಿ ಕೆಂಪೇಗೌಡ ಪ್ರತಿಮೆ ಜಾಗ ಅಭಿವೃದ್ಧಿ ಪಡಿಸಿ

June 27, 2025

HD Kumarswamy: ಜನರನ್ನೇ ಸುಲಿದು ಪಂಚ ಗ್ಯಾರಂಟಿ ಕೊಡುತ್ತಿದ್ದಾರೆ: ಹೆಚ್.ಡಿ. ಕುಮಾರಸ್ವಾಮಿ

June 27, 2025

ಕೆಂಪೇಗೌಡರು ದಕ್ಷ ಹಾಗೂ ದೂರದೃಷ್ಟಿಯಿದ್ದಂತಹ ಆಡಳಿತಗಾರ: ಮುಖ್ಯಮಂತ್ರಿ ಸಿದ್ದರಾಮಯ್ಯ

June 27, 2025
ಕಾಂಗ್ರೆಸ್ ಒಳಗೆ ಸೆಪ್ಟೆಂಬರ್‌ನಲ್ಲಿ ಕ್ರಾಂತಿಯಾಗಲಿದೆ..?! – ಗೃಹ ಸಚಿವ ಪರಮೇಶ್ವರ್ ಏನಂದ್ರು ..?! 

ಕಾಂಗ್ರೆಸ್ ಒಳಗೆ ಸೆಪ್ಟೆಂಬರ್‌ನಲ್ಲಿ ಕ್ರಾಂತಿಯಾಗಲಿದೆ..?! – ಗೃಹ ಸಚಿವ ಪರಮೇಶ್ವರ್ ಏನಂದ್ರು ..?! 

June 27, 2025
Next Post
ಏನಿದು ಪೆಗಾಸಸ್ ಸ್ಪೈವೇರ್ ವಿವಾದ: ಈ ವೈರಸ್ ಹೇಗೆ ಕಾರ್ಯನಿರ್ವಹಿಸುತ್ತೇ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಏನಿದು ಪೆಗಾಸಸ್ ಸ್ಪೈವೇರ್ ವಿವಾದ: ಈ ವೈರಸ್ ಹೇಗೆ ಕಾರ್ಯನಿರ್ವಹಿಸುತ್ತೇ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

Please login to join discussion

Recent News

ನವ ಭಾರತದ ಪ್ರಾಚೀನ ಸಮಾಜಗಳ ನಡುವೆ
Top Story

ನವ ಭಾರತದ ಪ್ರಾಚೀನ ಸಮಾಜಗಳ ನಡುವೆ

by ಪ್ರತಿಧ್ವನಿ
June 28, 2025
Top Story

DK Shivakumar:ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಯೋಜನಾ ಪ್ರಾಧಿಕಾರ ಸೇರಿ ಕೆಂಪೇಗೌಡ ಪ್ರತಿಮೆ ಜಾಗ ಅಭಿವೃದ್ಧಿ ಪಡಿಸಿ

by ಪ್ರತಿಧ್ವನಿ
June 27, 2025
Top Story

HD Kumarswamy: ಜನರನ್ನೇ ಸುಲಿದು ಪಂಚ ಗ್ಯಾರಂಟಿ ಕೊಡುತ್ತಿದ್ದಾರೆ: ಹೆಚ್.ಡಿ. ಕುಮಾರಸ್ವಾಮಿ

by ಪ್ರತಿಧ್ವನಿ
June 27, 2025
Top Story

Rangitharanga: “ರಂಗಿತರಂಗ” ಮತ್ತೆ ತೆರೆಗೆ: ಹಳೆಯ ನೆನಪುಗಳನ್ನು ಮೆಲುಕು ಹಾಕಿದ ಚಿತ್ರತಂಡ

by ಪ್ರತಿಧ್ವನಿ
June 27, 2025
Top Story

KJ George: ರಾಜ್ಯದ ಎಲ್ಲ ಸೌರ ವಿದ್ಯುತ್‌ ಘಟಕಗಳಲ್ಲಿ ಬ್ಯಾಟರಿ ಸ್ಟೋರೇಜ್‌ ವ್ಯವಸ್ಥೆ: ಜಾರ್ಜ್‌

by ಪ್ರತಿಧ್ವನಿ
June 27, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ನವ ಭಾರತದ ಪ್ರಾಚೀನ ಸಮಾಜಗಳ ನಡುವೆ

ನವ ಭಾರತದ ಪ್ರಾಚೀನ ಸಮಾಜಗಳ ನಡುವೆ

June 28, 2025

DK Shivakumar:ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಯೋಜನಾ ಪ್ರಾಧಿಕಾರ ಸೇರಿ ಕೆಂಪೇಗೌಡ ಪ್ರತಿಮೆ ಜಾಗ ಅಭಿವೃದ್ಧಿ ಪಡಿಸಿ

June 27, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada