• Home
  • About Us
  • ಕರ್ನಾಟಕ
Wednesday, July 2, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ

ಸಬ್ಕಾ ಸಾಥ್ˌ ಶಿರ್ಫ್ ದೋ ಕಾ ವಿಕಾಸ್..!

ಡಾ | ಜೆ.ಎಸ್ ಪಾಟೀಲ by ಡಾ | ಜೆ.ಎಸ್ ಪಾಟೀಲ
April 15, 2023
in ಅಂಕಣ
0
ಸಬ್ಕಾ ಸಾಥ್ˌ ಶಿರ್ಫ್ ದೋ ಕಾ ವಿಕಾಸ್..!
Share on WhatsAppShare on FacebookShare on Telegram

~ಡಾ. ಜೆ ಎಸ್ ಪಾಟೀಲ.

ADVERTISEMENT

ಸಿಂಹಾಸನದಲ್ಲಿ ಗಜ ಗಾಂಭೀರ್ಯದಲ್ಲಿ ವಿರಾಜಮಾನ್ ಮಹಾರಾಜ ತನ್ನ ಮಂತ್ರಿಯನ್ನು ಕುರಿತು ಹೀಗೆ ಪ್ರಶ್ನಿಸುತ್ತಾನೆ:

ಮಹಾರಾಜ: ರಾಜ್ಯದಲ್ಲಿ ಎಲ್ಲರೂ ಸೌಖ್ಯವೇ ಮಂತ್ರಿ?

ಮಂತ್ರಿ : ಎಲ್ಲ ಜನರು ಸುಖವಾಗಿದ್ದಾರೆ ಪ್ರಭು. ಪ್ರತಿಯೊಬ್ಬ ನಾಗರಿಕನು ಗರಿಷ್ಠ ತೆರಿಗೆ ಪಾವತಿಸಿ ಕನಿಷ್ಠ ಗಾಳಿ ಉಸಿರಾಡುತ್ತಿದ್ದಾನೆ.

ಮಹಾರಾಜ : ಮಂತ್ರಿ ˌ ಜನರು ಮೊದಲು ತೆರಿಗೆ ಕಟ್ಟುತ್ತಿದ್ದಾರೊ ಅಥವ ಉಸಿರಾಡುತ್ತಿದ್ದಾರೊ?

ಮಂತ್ರಿ: ಇಲ್ಲ ಮಹಾರಾಜˌ (ನಗುತ್ತ) ಜನರು ಮೊದಲು ತೆರಿಗೆ ಕಟ್ಟಿ ಆಮೇಲೆ ಉಸಿರಾಡುತ್ತಿದ್ದಾರೆ. ನಿಮ್ಮ ರಾಜ್ಯದಲ್ಲಿ ಮೊದಲು ಉಸಿರಾಡುವುದು ಸಾಧ್ಯವೇ ಪ್ರಭು!? (ಸೆಕ್ಯೂರಿಟಿ ಕಡೆಗೆ ಕೈಮಾಡಿ) ನಿಮ್ಮ ರಾಜ್ಯದಲ್ಲಿ ಈ ರೀತಿಯ ಜನರು ಇರುವಾಗ ಜನರು ತೆರಿಗೆ ಕಟ್ಟದೆ ಉಸಿರಾಡುವುದು ಹೇಗೆ ಸಾಧ್ಯ ಪ್ರಭು?

ಮಹಾರಾಜ: ಈ ರೀತಿಯ ಜನರು ಅಂದರೇನು ಮಂತ್ರಿ?

ಮಂತ್ರಿ: ಮಹಾರಾಜˌ ಈ ಸೆಕ್ಯೂರಿಟಿ ಗಾರ್ಡ್ ನನ್ನು ಸೆಕ್ಯೂರಿಟಿ ಎಡ್ವೈಜರ್ ಎಂದು ಕರೆಯುವ ತಮ್ಮ ಅದ್ಭುತ ಕಲೆ ಜಗತ್ತಿನಲ್ಲಿ ಯಾರಲ್ಲೂ ಇಲ್ಲ. ಸಣ್ಣ ಕೆಲಸˌ ಹುದ್ದೆಯ ಹೆಸರು ದೊಡ್ಡದು, ಆತ ಮುಂದೆಂದೂ ಬಡ್ತಿ ˌ ಇನ್ಕ್ರಿಮೆಂಟ್ ಕೇಳಲು ಸಾಧ್ಯವೇಯಿಲ್ಲ.

ಮಹಾರಾಜ: ಮಂತ್ರಿ, ನಿಮ್ಮೊಳಗೆ ಆ ಕೌಟಿಲ್ಯನಿಗಿಂತ ಶ್ರೇಷ್ಠ ಅರ್ಥಶಾಸ್ತ್ರಜ್ಞನಿದ್ದಾನೆ ನೋಡಿ. ಅಂದ್ಹಾಗೆˌ ರಾಜ್ಯದಲ್ಲಿ ಮಾಧ್ಯಮಗಳು ಹೇಗೆ ಕಾರ್ಯ ನಿರ್ವಹಿಸುತ್ತಿವೆ ಮಂತ್ರಿ?

ಮಂತ್ರಿ: ಮಾಧ್ಯಮಗಳು ಬಹಳ ಚನ್ನಾಗಿ ಕೆಲಸ ಮಾಡ್ತಿವೆ ಪ್ರಭು. ಅವು ಸತ್ಯವನ್ನೇ ಪ್ರಸಾರ ಮಾಡ್ತಿವೆ. ಅವುಗಳನ್ನು ನೀವು ಶಂಖಗಳಾಗಿ ಪರಿವರ್ತಿಸಿದ್ದಿರಿ. ನೀವು ಊದಿದಾಗಲೇ ಅವುಗಳ ಧ್ವನಿ ಹೊರಡುತ್ತದೆ ಪ್ರಭು.

ಮಹಾರಾಜ: ದೇಶದ ಆರ್ಥಿಕತೆ ಹೇಗಿದೆ ಮಂತ್ರಿ?

ಮಂತ್ರಿ: ದೇಶದ ಆರ್ಥಿಕತೆಯ ಸಂಕೇತವಾಗಿರುವ ಮತ್ತು ತಮ್ಮನ್ನು ರಾಜ ಸಿಂಹಾಸನದ ಮೇಲೆ ತಂದು ಪ್ರತಿಷ್ಠಾಪಿಸಿರುವ ಇಬ್ಬರು ಕುಬೇರೋದ್ಯಮಿಗಳ ಆರ್ಥಿಕ ಸ್ಥಿತಿ ದ್ವಿಗುಣವಾಗಿದೆ ಪ್ರಭು.

ಮಹಾರಾಜ: (ಸಿಟ್ಟಿನಿಂದ ತನ್ನ ಬಿಳಿ ಗಡ್ಡದ ಮೇಲೆ ಕೈಯಾಡಿಸುತ್ತ) ಕೇವಲ ದ್ವಿಗುಣವಾಗಿದೆಯೆ ಮಂತ್ರಿ? ನಾನು ಅಧಿಕಾರದ ಗದ್ದುಗೆ ಏರಿದರೆ ಅವರ ಆರ್ಥಿಕತೆಯನ್ನು ಹತ್ತು ಪಟ್ಟು ಹೆಚ್ಚಿಸುತ್ತೇನೆಂದು ಆಶ್ವಾಸನೆ ಕೊಟ್ಟಿದ್ದೇನೆ.

ಮಂತ್ರಿ: ಆದರೆ ಮಹಾರಾಜˌ ತಮ್ಮ ಶರವೇಗದ ಆರ್ಥಿಕ ಪ್ರಗತಿಯ ಪಥದಲ್ಲಿ ದೇಶದ ರೈತರು ಟ್ರ್ಯಾಕ್ಟರ್ ಗಳನ್ನು ತಂದು ನಿಲ್ಲಿಸದಿದ್ದರೆ ದೇಶದ ಆ ಇಬ್ಬರು ಕುಬೇರರ ಆರ್ಥಿಕತೆ ಈಗಾಗಲೇ ಹತ್ತು ಪಟ್ಟು ಹೆಚ್ಚುತ್ತಿತ್ತು.

ಮಹಾರಾಜ: ಅದು ಹೇಗೆ ಮಂತ್ರಿ?

ಮಂತ್ರಿ: ಪ್ರಭುˌ ಕೃಷಿ ಮಸೂದೆ ಅಂಗಿಕಾರಗೊಳ್ಳುವ ಮೊದಲೆ ಆ ಇಬ್ಬರು ಕುಬೇರೋದ್ಯಮಿಗಳು ಅಸಂಖ್ಯಾತ ಗೋದಾಮುಗಳನ್ನು ಕಟ್ಟಿಸಿ ರಾಜ್ಯದ ಆಹಾರ-ಧಾನ್ಯ ಮಾರುಕಟ್ಟೆ ವಶಪಡಿಸಿಕೊಳ್ಳಲು ಸಿದ್ದಗೊಂಡಿದ್ದರು. ಆ ರಾಜದ್ರೋಹಿ ರೈತರು ನಿಮ್ಮ ಯೋಜನೆಗೆ ಎಳ್ಳು-ನೀರು ಬಿಟ್ಟರು.

ಮಹಾರಾಜ: ಇದರಿಂದ ನನ್ನ ಭಕ್ತರು ನನ್ನ ಮೇಲಿಟ್ಟಿರುವ ಶ್ರದ್ಧೆಗೆ ಕೊರತೆಯಾಗಿದೆಯೆ ಮಂತ್ರಿ?

ಮಂತ್ರಿ: ಇಲ್ಲ ಪ್ರಭು. ಭಕ್ತರು ತಮ್ಮ ಮೇಲಿಟ್ಟಿರುವ ಶ್ರದ್ಧೆಯಲ್ಲಿ ಸಾಸಿವೆ ಕಾಳಿನಷ್ಟೂ ಕಡಿಮೆಯಾಗಿಲ್ಲ. ಏಕೆಂದರೆˌ ೧೦೦೦ ರೂಪಾಯಿ ನೋಟು ನಿಷೇಧಿಸಿ ೨೦೦೦ ರೂಪಾಯಿ ನೋಟು ಜಾರಿಗೆ ತರುವ ಮೂಲಕ ಕಪ್ಪು ಹಣ ಕೊನೆಗೊಳಿಸಬಹುದೆಂದು ಭಕ್ತರ ತಲೆಯಲ್ಲಿ ಗಿಡ ನೆಟ್ಟವರು ತಮ್ಮನ್ನು ಬಿಟ್ಟರೆ ಜಗತ್ತಿನಲ್ಲಿ ಬೇರೆ ಯಾರೂ ಇಲ್ಲ ಪ್ರಭು.

ಮಹಾರಾಜ್: (ಟಿವಿ ನೋಡುತ್ತ) ಇದೇನಿದು ಮಂತ್ರಿ ˌ ಒಬ್ಬ ಯುವಕ ಚಪ್ಪಲಿ ಕೊರಳಲ್ಲಿ ನೇತಾಕಿಕೊಂಡು ಬರಿಗಾಲಲ್ಲಿ ಓಡುತ್ತಿರುವುದನ್ನು ಟಿವಿಯವರು ಏಕೆ ತೋರಿಸುತ್ತಿದ್ದಾರೆ? ನನ್ನನ್ನು ಬಿಟ್ಟು ಟಿವಿಯಲ್ಲಿ ಬೆರೆಯವರನ್ನು ತೋರಿಸಬಾರದೆಂದು ಮಾಧ್ಯಮದವರಿಗೆ ತಿಳಿಸಿಲ್ಲವೆ?

ಮಂತ್ರಿ: ಆತ ಒಬ್ಬ ಯುವ ಸೆಲೆಬ್ರಿಟಿ ಪ್ರಭು. ಯಾವುದೊ ಉತ್ಪನ್ನಗಳ ಜಾಹಿರಾತಿನಲ್ಲಿ ನಟಿಸಿದ್ದಾನೆ. ಆತ ತಾನು ಯಾವತ್ತು ಉಪಯೋಗಿಸದ ವಸ್ತುಗಳ ಕುರಿತೇ ಹೆಚ್ಚು ಜಾಹಿರಾತು ನೀಡ್ತಾನೆ. ನೀವು ಹೇಗೆ ನಿಮ್ಮ ಭಾಷಣದಲ್ಲಿ ಸತ್ಯವನ್ನು ಪ್ರತಿಪಾದನೆ ಮಾಡ್ತಿರಿ ಮತ್ತು ಅದನ್ನು ಯಾವತ್ತು ಪಾಲಿಸುವುದಿಲ್ಲವೊ ಥೇಟ್ ಅದೇ ರೀತಿ ಆ ಸೆಲೆಬ್ರಿಟಿ ಪ್ರಭು!

ಮಹಾರಾಜ: ಅರ್ಥವಾಯಿತು ಬಿಡಿ ಮಂತ್ರಿ!

~ಡಾ. ಜೆ ಎಸ್ ಪಾಟೀಲ.

Tags: Adani GroupAdanistocksissueamithshahBJPBJP GovtbjpkarnatakaCongress Partycongress vs bjp vs jdsGautam AdaniindanewsIndialatestnewslivenewsModiನರೇಂದ್ರ ಮೋದಿಬಿಜೆಪಿ
Previous Post

ʻಕಬ್ಜʼ ಸಕ್ಸಸ್ ಬೆನ್ನಲ್ಲೇ ಮತ್ತೊಂದು ಸಿನಿಮಾ ಅನೌನ್ಸ್‌ ಮಾಡಿದ ಆರ್.ಚಂದ್ರು..!

Next Post

BJP ಪಕ್ಷಕ್ಕೆ ಮಾಜಿ ಸಿಎಂ ಜಗದೀಶ್​ ಶೆಟ್ಟರ್​ ಡೆಡ್​​ಲೈನ್​.. ದಾರಿ ಎತ್ತಣ..?

Related Posts

Top Story

CM Siddaramaiah: ಬಿಜೆಪಿ ಹಗಲುಗನಸು ಕಾಣುತ್ತಿದೆ: ಸಿ.ಎಂ.ಸಿದ್ದರಾಮಯ್ಯ

by ಪ್ರತಿಧ್ವನಿ
July 2, 2025
0

ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಏನು ಸಾಕ್ಷಿ ಗುಡ್ಡೆಯನ್ನು ಬಿಟ್ಟುಹೋಗಿದ್ದಾರೆ? :ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ ಸರ್ಕಾರದಲ್ಲಿ ಅಧಿಕಾರ ಬದಲಾವಣೆ ಬಗ್ಗೆ ಬಿಜೆಪಿ ಹಗಲು ಗನಸು ಕಾಣುತ್ತಿದೆ. ಬಿಜೆಪಿಯವರು ಸುಳ್ಳನ್ನು ಮಾತ್ರ...

Read moreDetails

Mitra: “ಮಹಾನ್” ಚಿತ್ರದಲ್ಲಿ ಮಿತ್ರ. .

July 2, 2025

Kannada Cinema: ಯಶೋಧರ ನಿರ್ದೇಶನದದಲ್ಲಿ ಅಭಿಮನ್ಯು ನಾಯಕನಾಗಿ ನಟಿಸಿರುವ ನೂತನ ಚಿತ್ರದ ಶೀರ್ಷಿಕೆ ಅನಾವರಣ .

July 2, 2025

Mallikarjun Kharge: ಸಂಚಲನ ಸೃಷ್ಟಿಸಿದ ಮಲ್ಲಿಕಾರ್ಜುನ್ ಖರ್ಗೆ. ಶೀಘ್ರವೇ ಸಿಎಂ ಸಿದ್ದರಾಮಯ್ಯ ರಾಜೀನಾಮೆ.

July 1, 2025

Ravichandran: ಈ ವಾರ ತೆರೆಗೆ ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ಬಹು‌ ನಿರೀಕ್ಷಿತ ಚಿತ್ರ “ತಪಸ್ಸಿ”

July 1, 2025
Next Post
BJP ಪಕ್ಷಕ್ಕೆ ಮಾಜಿ ಸಿಎಂ ಜಗದೀಶ್​ ಶೆಟ್ಟರ್​ ಡೆಡ್​​ಲೈನ್​.. ದಾರಿ ಎತ್ತಣ..?

BJP ಪಕ್ಷಕ್ಕೆ ಮಾಜಿ ಸಿಎಂ ಜಗದೀಶ್​ ಶೆಟ್ಟರ್​ ಡೆಡ್​​ಲೈನ್​.. ದಾರಿ ಎತ್ತಣ..?

Please login to join discussion

Recent News

Top Story

CM Siddaramaiah: ಬಿಜೆಪಿ ಹಗಲುಗನಸು ಕಾಣುತ್ತಿದೆ: ಸಿ.ಎಂ.ಸಿದ್ದರಾಮಯ್ಯ

by ಪ್ರತಿಧ್ವನಿ
July 2, 2025
‘I have no other option’ – ಸಿಎಂ ಬದಲಾವಣೆ ಬಗ್ಗೆ ಹಿಂಗಂದಿದ್ದ್ಯಾಕೆ ಡಿಕೆ ಶಿವಕುಮಾರ್ ..?! 
Top Story

‘I have no other option’ – ಸಿಎಂ ಬದಲಾವಣೆ ಬಗ್ಗೆ ಹಿಂಗಂದಿದ್ದ್ಯಾಕೆ ಡಿಕೆ ಶಿವಕುಮಾರ್ ..?! 

by Chetan
July 2, 2025
ಹೃದಯಾಘಾತ ಪ್ರಕರಣಗಳಿಗೂ ಕೋವಿಡ್ ವಾಕ್ಸಿನ್ ಗೂ ಯಾವುದೇ ಸಂಬಂಧವಿಲ್ಲ : ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟನೆ 
Top Story

ಹೃದಯಾಘಾತ ಪ್ರಕರಣಗಳಿಗೂ ಕೋವಿಡ್ ವಾಕ್ಸಿನ್ ಗೂ ಯಾವುದೇ ಸಂಬಂಧವಿಲ್ಲ : ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟನೆ 

by Chetan
July 2, 2025
Top Story

Mitra: “ಮಹಾನ್” ಚಿತ್ರದಲ್ಲಿ ಮಿತ್ರ. .

by ಪ್ರತಿಧ್ವನಿ
July 2, 2025
Top Story

Kannada Cinema: ಯಶೋಧರ ನಿರ್ದೇಶನದದಲ್ಲಿ ಅಭಿಮನ್ಯು ನಾಯಕನಾಗಿ ನಟಿಸಿರುವ ನೂತನ ಚಿತ್ರದ ಶೀರ್ಷಿಕೆ ಅನಾವರಣ .

by ಪ್ರತಿಧ್ವನಿ
July 2, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

CM Siddaramaiah: ಬಿಜೆಪಿ ಹಗಲುಗನಸು ಕಾಣುತ್ತಿದೆ: ಸಿ.ಎಂ.ಸಿದ್ದರಾಮಯ್ಯ

July 2, 2025
‘I have no other option’ – ಸಿಎಂ ಬದಲಾವಣೆ ಬಗ್ಗೆ ಹಿಂಗಂದಿದ್ದ್ಯಾಕೆ ಡಿಕೆ ಶಿವಕುಮಾರ್ ..?! 

‘I have no other option’ – ಸಿಎಂ ಬದಲಾವಣೆ ಬಗ್ಗೆ ಹಿಂಗಂದಿದ್ದ್ಯಾಕೆ ಡಿಕೆ ಶಿವಕುಮಾರ್ ..?! 

July 2, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada