ಸದ್ಯ ಸಕ್ರಿಯ ರಾಜಕಾರಣದಿಂದ ದೂರ ಉಳಿದಿರುವ ಮಾಜಿ ಸಿಎಂ ಎಸ್.ಎಂ.ಕೃಷ್ಣ (SM krishna) ಅವರ ಆರೋಗ್ಯದಲ್ಲಿ ವ್ಯತ್ಯಯವಾಗಿದ್ದು ಬೆಂಗಳೂರಿನ (Bangalore) ಮಣಿಪಾಲ್ ಆಸ್ಪತ್ರೆಗೆ (Manipal hospital) ದಾಖಲಿಸಲಾಗಿದೆ. ವಯೋಸಹಜ ಆರೋಗ್ಯ ಸಮಸ್ಯೆ ಎದುರಾಗಿದ್ದು ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಎಸ್.ಎಂ.ಕೃಷ್ಣ ಅವರ ಆರೋಗ್ಯ ಕೊಂಚ ಕ್ಷೀಣಿಸಿದ್ದು, ಅವರ ಬಿಪಿ (BP) ಮತ್ತು ಶುಗರ್ (Sugar) ಲೆವಲ್ನಲ್ಲಿ ಏರುಪೇರಾಗಿತ್ತು. ಆದ್ರೆ ಚಿಕಿತ್ಸೆಯ ನಂತರ ಇದೀಗ ಶುಗರ್ ಸದ್ಯ ಸ್ಥಿರವಾಗಿದ್ದು, ಐಸಿಯು (ICU) ನಲ್ಲಿ ಚಿಕಿತ್ಸೆ ಮುಂದುವರೆದಿದೆ. ಸದ್ಯ ಚಿಕಿತ್ಸೆಗೆ ಎಸ್.ಎಂ.ಕೃಷ್ಣ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.
ಈ ಮಾಹಿತಿ ತಿಳಿದ ಹಿನ್ನಲೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ (Basavaraj bommai) ಹಾಗೂ ವಿಪಕ್ಷ ನಾಯಕ ಆರ್.ಅಶೋಕ್ (R ashok) ಮಣಿಪಾಲ್ ಆಸ್ಪತ್ರೆಗೆ ಭೇಟಿ ಕೊಟ್ಟು ಎಸ್ ಎಮ್ ಕೃಷ್ಣ ಆರೋಗ್ಯ ವಿಚಾರಿಸಿದ್ರು. ಎಸ್.ಎಂ.ಕೃಷ್ಣರವರು ತಮ್ಮಿಷ್ಟದ ರಾಜಕಾರಣಿ, ದೇವರು ಆದಷ್ಟು ಬೇಗ ಅವರನ್ನು ಗುಣಮುಖರನ್ನಾಗಿಸಲಿ ಎಂದು ಆರ್..ಅಶೋಕ್ ಆಶಿಸಿದ್ದಾರೆ.