ರಾಜ್ಯದಲ್ಲಿ, ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್ ಅವರು ರೋಹಿಣಿ ಸಿಂಧೂರಿ ವಿರುದ್ಧ ಮಾಡಿರುವ ಗಂಭೀರ ಆರೋಪಗಳ ಬೆನ್ನಲ್ಲೇ ದಿವಂಗತ ಐಎಎಸ್ ಅಧಿಕಾರಿ ಡಿಕೆ ರವಿ ಅವರ ಪತ್ನಿ ಕುಸುಮಾ ಹನುಮಂತರಾಯಪ್ಪ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
“ಐಎಎಸ್ ಮತ್ತ ಐಪಿಎಸ್ ವಾರ್ ಮಧ್ಯೆ ನಾನು ಬರೋದಿಲ್ಲ. ರವಿಯವರ ಹೆಸರು ಬಂದಿರೋದ್ರಿಂದ ನಾನು ಪ್ರತಿಕ್ರಿಯೆ ನೀಡುತ್ತಿದ್ದೇನೆ. ನಾನು ಅನುಭವಿಸರುವ ನೋವು, ಕಷ್ಟ ಯಾವ ಹೆಣ್ಣಿಗೂ ಆಗಬಾರದು. ಸಿಬಿಐ ರಿಪೋರ್ಟ ನಲ್ಲಿ ಮೆಸೆಜ್ ಚಾಟ್ ಮಾಡಿರೋ ವಿಚಾರ ಸ್ಪಷ್ಟವಾಗಿದೆ. ನನಗೆ ಸಿಬಿಐ ರಿಪೊರ್ಟ್ ಬಂದಮೇಲೆ ಯಾರೂ ಡಿಸ್ಕರ್ಸ್ ಮಾಡಲೇ ಇಲ್ಲ. ತನಿಖೆ ಮಾಡಿದ ಮೇಲೆ ಯಾವ ಅಂಶಗಳಿವೆ ಅನ್ನೋದು ಯಾರೂ ಡಿಸ್ಕಸ್ ಮಾಡಿಲ್ಲ. ಡಿ ರೂಪ ಅವರ ಮಾಡ್ತಿರೋ ಹೋರಾಟ ಗಮನಸಿಕೊಂಡು ಬರುತ್ತಿದ್ದೇನೆ. ಕರ್ಮ ಯಾರನ್ನೂ ಬಿಡೊದಿಲ್ಲ ಹಾಗಾಗಿ ತಪ್ಪು ಮಾಡಿದವರು. ಉಪ್ಪು ತಿಂದವರು ನೀರು ಕುಡಿಯಲೇ ಬೇಕು. ಜವಬ್ದಾರಿಯುತ ಸ್ಥಾನದಲ್ಲಿರುವವರು ಈ ರೀತಿ ಮಾಡಬಾರದು. ಡಿಕೆ ರವಿಗೆ ಮಾನಸಿಕ ಅಸ್ವಸ್ಥತನ ಇರಲಿಲ್ಲ.ಬೇರೆ ಅಧಿಕಾರಿಗಳಿಗೆ ಏನು ಕಳಿಸಿದ್ದಾರೆ ನನಗೆ ಗೊತ್ತಿಲ್ಲ. ಆದರೆ ನನಗೆ ಆದ ನೋವು ಯಾರಿಗೂ ಆಗಬಾರದು” ಎಂದು ಕುಸುಮಾ ಹೇಳಿದ್ದಾರೆ.

ಜವಬ್ದಾರಿಯುತ ಸ್ಥಾನದಲ್ಲಿರುವವರು ಈ ರೀತಿ ಮಾಡಬಾರದು, ಇನ್ನೊಬ್ಬರ ಜೀವಕ್ಕೆ ಹಾನಿಯಗುತ್ತೆ ಅನ್ನೋ ಕನಿಷ್ಠ ಜ್ಞಾನ ಇರಬೇಕಾಗುತ್ತದೆ. ಯಾರೇ ತಪ್ಪು ಮಾಡಿದರೂ ಆದು ಕ್ಷಣಿಕ, ಶಾಸ್ವತವಾಗಿ ಯಾವುದು ಮುಚ್ಚಿ ಹಾಕಲು ಆಗುವುದಿಲ್ಲ. ಸತ್ಯ ಆಚೆ ಬರಲು ಕಾಯಬೇಕು ಸತ್ಯ ಯಾವಗಲೂ ಆಚೆ ಬಂದೆ ಬುರುತ್ತದೆ. ಆ ವಿಶ್ವಾಸ ನಂಗೆ ಇದೆ. ಡಿಕೆ ರವಿಗೆ ಮಾನಸಿಕ ಅಸ್ವಸ್ಥತನ ಇರಲಿಲ್ಲ. ಬೇರೆ ಅಧಿಕಾರಿಗಳಿಗೆ ಏನು ಕಳಿಸಿದ್ದಾರೆ ನನಗೆ ಗೊತ್ತಿಲ್ಲ. ಆದರೆ ನನಗೆ ಆದ ನೋವು ಯಾರಿಗೂ ಆಗಬಾರದು. ಸದ್ಯ ಈಗ ನನಗೆ ಅನಿಸಿರುವುದನ್ನು ನಾನು ಹೇಳಿದ್ದೇನೆ ಅಷ್ಟೇ. ದೇವರ ಮೇಲೆ ನಾನು ಅಪಾರ ನಂಬಿಕೆ ಇಟ್ಟಿಕೊಂಡಿರುವವಳು. ತಪ್ಪು ಸರಿ ಏನು ಮಾಡಿದರೂ ಇದೇ ಜನ್ಮದಲ್ಲಿ ಅನುಭವಿಸುತ್ತೇವೆ ಎಂದರು.