Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಸಚಿವೆ ಶಶಿಕಲಾ ಜೊಲ್ಲೆ ನಿವಾಸದೆದುರು ರೌಡಿಶೀಟರ್​ ಹತ್ಯೆಗೆ ಯತ್ನ

ಮಂಜುನಾಥ ಬಿ

ಮಂಜುನಾಥ ಬಿ

March 22, 2023
Share on FacebookShare on Twitter

ಬೆಂಗಳೂರು : ಸಚಿವೆ ಶಶಿಕಲಾ ಜೊಲ್ಲೆ ನಿವಾಸದ ಎದುರೇ ರೌಡಿಶೀಟರ್​ ಮೇಲೆ ಕೊಲೆ ಯತ್ನ ನಡೆದಂತಹ ಆಘಾತಕಾರಿ ಘಟನೆಯೊಂದು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಂಭವಿಸಿದೆ .ರೌಡಿಶೀಟರ್​ ಮೇಲೆ ಆತನ ಸ್ನೇಹಿತರೇ ಮೂರ್ನಾಲ್ಕು ಬಾರಿ ಕಾರನ್ನು ಹತ್ತಿಸಿ ಕೊಲೆಗೆ ಯತ್ನಿಸಿದ್ದಾರೆ . ಸಾವು ಬದುಕಿನ ನಡುವೆ ಹೋರಾಡುತ್ತಿರುವ ರೌಡಿಶೀಟರ್​ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ಹೆಚ್ಚು ಓದಿದ ಸ್ಟೋರಿಗಳು

Chetan Ahimsa : ಕುಸ್ತಿಪಟುಗಳ ಬಗ್ಗೆ ಏಕಿಷ್ಟು ಮೌನ?

Anil Kumble stands in support of wrestlers : ಕುಸ್ತಿಪಟುಗಳ ಬೆಂಬಲಕ್ಕೆ ನಿಂತ ಅನಿಲ್‌ ಕುಂಬ್ಳೆ..!

Minister HC Mahadevappa : ನಮ್ಮ ʼಗ್ಯಾರೆಂಟಿʼಯನ್ನು ನೋಡಿ ಜನ ಕಾಂಗ್ರೆಸ್ ಗೆ ಬಹುಮತ ನೀಡಿದ್ದಾರೆ ; ಸಚಿವ .ಹೆಚ್.ಸಿ.ಮಹದೇವಪ್ಪ


ಮಾರ್ಚ್​ 21ರ ಬೆಳಗ್ಗೆ 5:30ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಹೌಗ್ರೌಂಡ್​​​ ಠಾಣೆಯ ರೌಡಿಶೀಟರ್​​ ಗಗನ್​ ಶರ್ಮಾ ಎಂಬಾತನ ಮೇಲೆ ಸುನೀಲ್​​ ಕುಮಾರ್​, ಅರುಣ್​ ಹಾಗೂ ಕೃಷ್ಣ ಕಾರು ಹತ್ತಿಸಿ ಕೊಲೆಗೆ ಯತ್ನಿಸಿದ್ದಾರೆ. ರೌಡಿಶೀಟರ್​ ಗಗನ್​ ಹಾಗೂ ಆರೋಪಿ ಸುನೀಲ್​ ಕುಮಾರ್​ ಮೊದಲಿನಿಂದಲೂ ಸ್ನೇಹಿತರು. ವೃತ್ತಿಯಲ್ಲಿ ಬಿಬಿಎಂಪಿ ಟ್ಯಾಕ್ಸ್​ ಕಲೆಕ್ಟರ್​ ಆಗಿದ್ದ ಸುನೀಲ್​ ಕುಮಾರ್​ ಹಾಗೂ ಗಗನ್​ ನಡುವೆ ಆಸ್ತಿ ವಿಚಾರಕ್ಕೆ ಕಲಹ ಏರ್ಪಟ್ಟಿತ್ತು. ಇದೇ ವಿಚಾರವಾಗಿ ಮಾತನಾಡಬೇಕು ಅಂತಾ ಗಗನ್​​ಗೆ ಸುನೀಲ್​ ಬುಲಾವ್​ ನೀಡಿದ್ದ.

ಆರೋಪಿ ಸುನೀಲ್​


20ನೇ ತಾರೀಖು ರಾತ್ರಿ ಗಗನ್​ ಸುನೀಲ್​ ಭೇಟಿ ಮಾಡಲು ಫ್ರೇಜರ್​ ಟೌನ್​ಗೆ ಬಂದಿದ್ದ. ಕಾರಿನಲ್ಲಿ ಕೂತು ಸ್ನೇಹಿತರು ಸಿಟಿ ರೌಂಡ್ಸ್​ ಹಾಕಿದ್ದಾರೆ. ಕಾರಿನ ಒಳಗೆ ಇವರ ನಡುವೆ ಜಗಳ ಏರ್ಪಟ್ಟಿದೆ. ಸುನೀಲ್​ ಹಾಗೂ ಆತನ ಸ್ನೇಹಿತರು ಗಗನ್​ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೇ 21ನೇ ತಾರೀಖು ಮುಂಜಾನೆ ಸುಮಾರಿಗೆ ಗಗನ್​ನನ್ನು ಕಾರಿನಿಂಧ ತಳ್ಳಿ ಆತನ ಮೇಲೆ ಕಾರು ಹತ್ತಿಸಿ ಕೊಲೆಗೆ ಯತ್ನಿಸಿದ್ದಾರೆ.


ಸ್ಥಳೀಯರು ನೀಡಿದ ಮಾಹಿತಿ ಆಧರಿಸಿದ ಜೆಸಿ ನಗರ ಠಾಣಾ ಪೊಲೀಸರು ಗಾಯಾಳು ಗಗನ್​ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಅಪಘಾತದಲ್ಲಿ ಗಗನ್​​ ಕಾಲು ಹಾಗೂ ಪಕ್ಕೆಲುಬು ತುಂಡಾಗಿದೆ. ಕಣ್ಣು, ಮುಖಗಳಿಗೂ ಗಂಭೀರ ಗಾಯಗಳಾಗಿದೆ. ಆರೋಪಿ ಸುನೀಲ್​ನನ್ನು ಬಂಧಿಸಿದ ಪೊಲೀಸರು ಕೊಲೆ ಯತ್ನ ಪ್ರಕರಣ ದಾಖಲಿಸಿದ್ದಾರೆ. ನಾಪತ್ತೆಯಾಗಿರುವ ಇನ್ನಿಬ್ಬರಿಗೆ ಶೋಧ ಕಾರ್ಯ ಮುಂದುವರಿದಿದೆ.

RS 500
RS 1500

SCAN HERE

Pratidhvani Youtube

Sorry, there was a YouTube error.

don't miss it !

Congress MLA  HD Tammanna ; ನಾನು ಕಾಂಗ್ರೆಸ್ ಶಾಸಕನಾದರು.. ಸಂಘದ ಸ್ವಯಂ ಸೇವಕ ; ಹೆಚ್.ಡಿ.ತಮ್ಮಣ್ಣ..!
Top Story

Congress MLA HD Tammanna ; ನಾನು ಕಾಂಗ್ರೆಸ್ ಶಾಸಕನಾದರು.. ಸಂಘದ ಸ್ವಯಂ ಸೇವಕ ; ಹೆಚ್.ಡಿ.ತಮ್ಮಣ್ಣ..!

by ಪ್ರತಿಧ್ವನಿ
May 27, 2023
Jagadish Shettar : ಸಿಎಂ ಸಿದ್ದರಾಮಯ್ಯ ನೂತನ ಸಚಿವರ ಪಟ್ಟಿ ಸಿದ್ಧ, ಜಗದೀಶ್​ ಶೆಟ್ಟರ್ ಎಂಟ್ರಿಗೆ ಕೊನೆ ಕ್ಷಣದಲ್ಲಿ ಬ್ರೇಕ್​..!
Top Story

Jagadish Shettar : ಸಿಎಂ ಸಿದ್ದರಾಮಯ್ಯ ನೂತನ ಸಚಿವರ ಪಟ್ಟಿ ಸಿದ್ಧ, ಜಗದೀಶ್​ ಶೆಟ್ಟರ್ ಎಂಟ್ರಿಗೆ ಕೊನೆ ಕ್ಷಣದಲ್ಲಿ ಬ್ರೇಕ್​..!

by ಪ್ರತಿಧ್ವನಿ
May 26, 2023
CM Siddaramaiah ; ದ್ವೇಷದ ರಾಜಕಾರಣವನ್ನು ಕೊನೆಗಾಣಿಸ್ತೀವಿ ;  ಕಾನೂನು ಕೈಗೆತ್ತಿಕೊಂಡು ಕೋಮು ಪುಂಡಾಟ ನಡೆಸುವವರಿಗೆ ತಕ್ಕ ಶಾಸ್ತಿ ; ಸಿಎಂ
Top Story

CM Siddaramaiah ; ದ್ವೇಷದ ರಾಜಕಾರಣವನ್ನು ಕೊನೆಗಾಣಿಸ್ತೀವಿ ; ಕಾನೂನು ಕೈಗೆತ್ತಿಕೊಂಡು ಕೋಮು ಪುಂಡಾಟ ನಡೆಸುವವರಿಗೆ ತಕ್ಕ ಶಾಸ್ತಿ ; ಸಿಎಂ

by ಪ್ರತಿಧ್ವನಿ
May 29, 2023
Mandya Government Schools : ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಲು  ಕ್ಯೂ ನಿಂತ ಪೋಷಕರು
Top Story

Mandya Government Schools : ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಲು  ಕ್ಯೂ ನಿಂತ ಪೋಷಕರು

by ಪ್ರತಿಧ್ವನಿ
May 30, 2023
ಬೀದರ್ : ಪೌರಾಯುಕ್ತ ಸೇರಿ ಎಂಟು ಮಂದಿ ಅಮಾನತು
ಕರ್ನಾಟಕ

ಬೀದರ್ : ಪೌರಾಯುಕ್ತ ಸೇರಿ ಎಂಟು ಮಂದಿ ಅಮಾನತು

by Prathidhvani
May 24, 2023
Next Post
ಒಕ್ಕಲಿಗ-ಮುಸ್ಲಿಮರನ್ನು ಎತ್ತಿ ಕಟ್ಟುವ ಹುನ್ನಾರವೇ? ನಟ ಕಿಶೋರ್‌ ಪ್ರಶ್ನೆ

ಒಕ್ಕಲಿಗ-ಮುಸ್ಲಿಮರನ್ನು ಎತ್ತಿ ಕಟ್ಟುವ ಹುನ್ನಾರವೇ? ನಟ ಕಿಶೋರ್‌ ಪ್ರಶ್ನೆ

ಕಿರುತೆರೆಯಲ್ಲಿ ಬರ್ತಿದೆ ʻವೀಕೆಂಡ್‌ ವಿತ್‌ ರಮೇಶ್‌ʼ… ಮೊದಲ ಸಾಧಕರು ಯಾರು..?

ʻವೀಕೆಂಡ್‌ ವಿತ್‌ ರಮೇಶ್‌ʼ ಸೀಸನ್‌ 5ರ ಮೊದಲ ಅತಿಥಿ ಯಾರ್‌ ಗೊತ್ತಾ..?

ತಂದೆ ಮಗನ ಜಗಳ ಇದ್ದೇ ಇರುತ್ತದೆ: ಖರ್ಗೆ ಜೊತೆಗಿನ ಜಗಳದ ಬಗ್ಗೆ ಬಾಬುರಾವ್ ಚಿಂಚನಸೂರು ಪ್ರತಿಕ್ರಿಯೆ

ತಂದೆ ಮಗನ ಜಗಳ ಇದ್ದೇ ಇರುತ್ತದೆ: ಖರ್ಗೆ ಜೊತೆಗಿನ ಜಗಳದ ಬಗ್ಗೆ ಬಾಬುರಾವ್ ಚಿಂಚನಸೂರು ಪ್ರತಿಕ್ರಿಯೆ

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist