![](https://pratidhvani.com/wp-content/uploads/2024/04/Prajwal-Revanna-1.webp)
ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋ ಕೇಸ್ ಬಗೆದಷ್ಟು ಬಯಲಾಗ್ತಿದೆ.ಇನ್ನೊಂದೆಡೆ ಮಾಜಿ ಸಚಿವ ರೇವಣ್ಣಗಂತೂ ಮೇಲಿಂದ ಮೇಲೆ ಸಂಕಷ್ಟ ಎದುರಾಗಿದೆ. ಹಾಸನದಲ್ಲಿ ಅಶ್ಲೀಲ ವಿಡಿಯೋ ವೈರಲ್ ಆಗಿರುವ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರಿಗೆ ಅಗ್ನಿ ಪರೀಕ್ಷೆ ಎದುರಾಗಿದೆ. ಬಂಧನದ ಭೀತಿಯಲ್ಲಿರುವ ಮಾಜಿ ಸಚಿವ ರೇವಣ್ಣ ಜಾಮೀನು ಕೋರಿ ಕೋರ್ಟ್ ಮೊರೆ ಹೋಗಿದ್ದಾರೆ. ಕೆಲವೇ ಕ್ಷಣಗಳಲ್ಲಿ ಹೆಚ್.ಡಿ ರೇವಣ್ಣ ಬೇಲ್ ಭವಿಷ್ಯ ನಿರ್ಧಾರವಾಗಲಿದೆ. ನಿನ್ನೆ ಹೆಚ್.ಡಿ ರೇವಣ್ಣ ಪರ ಸಿನಿಯರ್ ಕೌನ್ಸಿಲ್ ಮೂರ್ತಿ ಡಿ. ನಾಯ್ಕ್ ಅವರು ಬೆಂಗಳೂರು ಜನಪ್ರತಿನಿಧಿ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಈ ವೇಳೆ ಹಾಸನ ಪ್ರಕರಣದಲ್ಲಿ 376 ಸೇರಿಸಲು SIT ಮನವಿ ಬಗ್ಗೆ ಉಲ್ಲೇಖಿಸಿದ್ದರು. ಅದಕ್ಕೆ ಸಂಬಂಧಿಸಿದ ದಾಖಲೆ ಒದಗಿಸಲು ಕೋರ್ಟ್ ಹೇಳಿತ್ತು. ಇದರ ಜೊತೆ SIT ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸೂಚಿಸಿತ್ತು. ಅದರಂತೆ ಇಂದು ಕೋರ್ಟ್ನಲ್ಲಿ ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರ ಜಾಮೀನು ಅರ್ಜಿ ವಿಚಾರಣೆ ಕುತೂಹಲ ಕೆರಳಿಸಿದೆ. ಬೆಂಗಳೂರು ಜನಪ್ರತಿನಿಧಿ ನ್ಯಾಯಾಲಯದಲ್ಲಿ ಇಂದು ಮೊದಲಿಗೆ ರೇವಣ್ಣ ಪರ ವಕೀಲರು ವಾದಿಸಲಿದ್ದಾರೆ. ಹೊಳೆನರಸೀಪುರ ಕೇಸ್ನಲ್ಲಿ ಸೆಕ್ಷನ್ 376 ಸೇರ್ಪಡೆ ಬಗ್ಗೆ ವಾದ ಮಂಡಿಸಲಿದ್ದಾರೆ. ರೇವಣ್ಣ ವಿರುದ್ಧ ಆರೋಪಕ್ಕೂ 376ಗೂ ಸಂಬಂಧ ಇಲ್ಲ ಎನ್ನಬಹುದು. ಅಲ್ಲದೇ ದುರುದ್ದೇಶಪೂರ್ವಕ FIR ಹಾಕಲಾಗಿದೆ ಎಂದು ವಾದಿಸಬಹುದು.ರೇವಣ್ಣ ಅವರ ವಕೀಲರ ವಾದಕ್ಕೆ SIT ಪರ SP ಜಗದೀಶ್ ಅವರು ಪ್ರತಿವಾದ ಮಂಡಿಸಲಿದ್ದಾರೆ. ಹಾಸನ ಅಶ್ಲೀಲ ವಿಡಿಯೋ ವೈರಲ್ ಪ್ರಕರಣದಲ್ಲಿ ಈಗಾಗಲೇ ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರ ವಿರುದ್ಧ ಸಾಲು, ಸಾಲು ಪ್ರಕರಣಗಳು ದಾಖಲಾಗಿವೆ. ಈ ಹಿನ್ನೆಲೆಯಲ್ಲಿ ಅತ್ಯಾಚಾರದಂತ ಗಂಭೀರ ಆರೋಪ ಕೇಳಿ ಬಂದಿದೆ. ಜನಪ್ರತಿನಿಧಿ ಕೋರ್ಟ್ನಲ್ಲಿ ಜಾಮೀನು ಸಿಗದೇ ಇದ್ದರೆ ಹೆಚ್.ಡಿ ರೇವಣ್ಣ ಅವರು ವಿಚಾರಣೆಗೆ ಹಾಜರಾಗಬೇಕಿದೆ. ಈ ವೇಳೆ ಹೆಚ್.ಡಿ ರೇವಣ್ಣ ಅವರಿಗೆ ಬಂಧನದ ಭೀತಿ ಎದುರಾಗಿದೆ.