
ಸಿ.ಟಿ ರವಿ ಸದನದಲ್ಲಿ ಆಶ್ಲೀಲ ಮಾತಿನ ವಿರುದ್ಧ ಸಭಾಪತಿಗೆ ದೂರು ಕೊಟ್ಟಿದ್ದಾರೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್. ಶನಿವಾರ ಬೆಳಗಾವಿಯಲ್ಲಿ ನೀಡಲಾಗಿದೆ. ಆ ಬಳಿಕ ಪ್ರತಿಕ್ರಿಯೆ ನೀಡಿದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಪರಿಷತ್ನಲ್ಲಿ ಸಿಐಡಿ ತನಿಖೆಗೆ ಸ್ಥಳ ಮಹಜರಿಗೆ ಅನುಮತಿ ಕೊಡ್ತೀರಾ ಎಂಬ ಪ್ರಶ್ನೆಗೆ ಸಿಐಡಿಯವರು ಯಾವ ರೀತಿ ಸ್ಥಳ ಮಹಜರು ಮಾಡ್ತಾರೆ ಎಂದು ಹೇಳಬೇಕಾಗುತ್ತದೆ. ಅಲ್ಲೇನು ಕುರ್ಚಿ ಅಥವಾ ಟೇಬಲ್ ಸ್ಥಳ ಮಹಜರು ಮಾಡ್ತಾರೋ..? ಅಥವಾ ಸದನಕ್ಕೆ ಕರೆದುಕೊಂಡು ಬಂದು ಮಹಜರು ಮಾಡ್ತಾರೋ ಅನ್ನೋದನ್ನ ಹೇಳಬೇಕು. ಯಾವ ರೀತಿ ಪಂಚನಾಮೆ ಮಾಡ್ತಾರೆ ಅನೋದನ್ನ ಮೊದಲು ಸಿಐಡಿ ಹೇಳಲಿ ಎಂದಿದ್ದರು.

ಸಿ.ಟಿ ರವಿ ಮತ್ತು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ನಡುವೆ ಸಂಧಾನ ಮಾಡ್ತೇನೆ ಎಂದಿರುವ ಸಭಾಪತಿ, ಇವತ್ತು ನಮ್ಮ ಕಾರ್ಯದರ್ಶಿಗೆ ಹೇಳಿದ್ದೇನೆ. ನಾಳೆ ಅಥವಾ ನಾಡಿದ್ದು ಇಬ್ಬರಿಗೂ ಪತ್ರ ಬರೆಯಲು ನಿರ್ಧಾರ ಮಾಡಿದ್ದೇನೆ. ಈಗ ಇಬ್ಬರನ್ನ ನೋಡಿದ್ರೆ ಸಂಧಾನ ಆಗೋ ರೀತಿ ಕಾಣ್ತಿಲ್ಲ. ಯಾಕೆಂದರೆ ಈಗ ಪ್ರಕರಣ ಪೊಲಿಟಿಕಲ್ ತಿರುವು ಪಡೆದುಕೊಂಡಿದೆ. ಆದರೂ ಇಬ್ಬರಿಗೂ ಪೋನ್ ಮಾಡಿ ಸಂಧಾನ ಮಾಡಲು ಪ್ರಯತ್ನಿಸುತ್ತೇನೆ. ಆದರೆ ಶೇಕಡ 99 ರಷ್ಟು ಸಂಧಾನ ಆಗಲ್ಲ ಎಂದಿದ್ದಾರೆ ಸಭಾಪತಿ. ಸದನ ಮುಂದೂಡಿಕೆ ಆದ ಬಳಿಕ ನಮ್ಮ ಕ್ಯಾಮೆರಾ, ಆಡಿಯೋ, ವಿಡಿಯೋ ಆಟೋಮ್ಯಾಟಿಕ್ ಆಗಿ ಬಂದ್ ಆಗುತ್ತವೆ. ಸದನ ಮುಂದೂಡಲಾಗಿದೆ ಎಂದು ಹೇಳಿ ನಾನು ಒಂದು ಹೆಜ್ಜೆ ಮುಂದಿಟ್ರು ವಿಡಿಯೋ ಆಡಿಯೋ ಬಂದ್ ಆಗುತ್ತದೆ. ಹಾಗಾಗಿ ನಮಗೆ ಆ ವಿಡಿಯೋ ಆಡಿಯೋ ಸಿಕ್ಕಿಲ್ಲ ಎಂದಿದ್ದಾರೆ.
ಲಕ್ಷ್ಮೀ ಹೆಬ್ಬಾಳ್ಕರ್ ಕೊಟ್ಟಿರುವ ದೂರನ್ನು ಸೋಮವಾರ ಪರಿಶೀಲನೆ ಮಾಡುತ್ತೇನೆ. ಸೋಮವಾರ ಮತ್ತು ಮಂಗಳವಾರ ಮತ್ತೊಮ್ಮೆ ವಿಡಿಯೋ ಆಡಿಯೋ ನೋಡುತ್ತೇವೆ. FSLಗೆ ಕಳುಹಿಸುವ ಹಾಗೆ ಇದ್ರೆ ಕಳುಹಿಸುತ್ತೆವೆ. ವರದಿ ಬಂದ ನಂತರ ತೀರ್ಮಾನ ಮಾಡ್ತೇನೆ ಎಂದಿದ್ದಾರೆ. ಸಂಧಾನದ ಬಗ್ಗೆ ನಾನು ರವಿನ ಕೇಳಿದ್ರೆ ನಮ್ಮ ಅಧ್ಯಕ್ಷರನ್ನ ಕೇಳಿ ಅಂತಾನೆ. ಲಕ್ಷ್ಮೀ ಹೆಬ್ಬಾಳ್ಕರ್ ಕೇಳಿದ್ರೆ ಸಿಎಂ ಕೇಳು ಅಂತಾರೆ. ಹೆಬ್ಬಾಳ್ಕರ್ ಒಬ್ರು ರಾಜಕಾರಣಿ, ಅವರನ್ನು ನಾನು ಶಾಸಕಿ, ಮಂತ್ರಿ ಅಂತಾ ಕನ್ಸಿಡರ್ ಮಾಡಿಲ್ಲ. ನಮ್ಮ ಮನೆಯಲ್ಲೂ ಹೆಣ್ಣುಮಗಳು ಇದ್ದಾರೆ. ಮರ್ಯಾದೆಯಿಂದ ಬಂದರೆ ನಾನು ಜವಾಬ್ದಾರಿ ಆಗುತ್ತೇನೆ, ಕಾಳಜಿ ವಹಿಸುತ್ತೇನೆ. ಇತಿಹಾಸದಲ್ಲಿ ಇದೊಂದು ದಾಖಲೆ ಆಗುತ್ತದೆ ಎಂದಿದ್ದಾರೆ.

ಹುಬ್ಬಳ್ಳಿಯಲ್ಲಿ ಭಾನುವಾರ ಮಾತನಾಡಿರುವ ಸಭಾಪತಿ ಬಸವರಾಜ ಹೊರಟ್ಟಿ, ಪರಿಷತ್ನಲ್ಲಿ ಸಿಐಡಿ ಸ್ಥಳ ಮಹಜರಿಗೆ ಅವಕಾಶ ನೀಡಲ್ಲ ಎಂದಿದ್ದಾರೆ. ಸದ್ಯಕ್ಕೆ ಸದನದಲ್ಲಿ ಸಿಐಡಿಗೆ ಸ್ಥಳ ಮಹಜರಗೆ ಅನುಮತಿ ನೀಡುವುದಿಲ್ಲ. ಸ್ಥಳ ಮಹಜರ್ ಹೇಗೆ ಮಾಡುತ್ತಾರೆ..? ಕುರ್ಚಿ, ಟೇಬಲ್ ಪಂಚನಾಮೆ ಮಾಡುತ್ತಾರೆಯೇ…? ಪಂಚನಾಮೆಗೆ ನಮ್ಮಲ್ಲಿ ವಿಡಿಯೋ ಇದ್ದರೆ ಮಾಡಬಹುದು. ವಿಡಿಯೋ ಕೊಟ್ಟಿದ್ದಾರೆ ಚೆಕ್ ಮಾಡುತ್ತಿದ್ದೇನೆ. ಅದರಲ್ಲಿ ಯಾವುದು ಕ್ಲಿಯರ್ ಇಲ್ಲ. ಯಾವ ತರಹ ಪಂಚನಾಮೆ ಮಾಡುತ್ತಾರೆ ಅಂತಾ ತಿಳಿಸಲಿ. ಸಿಟಿ ರವಿ ಬಂಧನ ಸುವರ್ಣಸೌಧದ ಕಾಂಪೌಂಡ್ನಲ್ಲಿ ಮಾಡಿದ್ದಾರೆ. ವಿಧಾನಸೌಧದಲ್ಲಿ ಬಂಧನ ಮಾಡಿಲ್ಲ ಎನ್ನುವುದು ಅವರ ವಾದ. ಸಿಐಡಿ ಅವರಿಗೆ ಸ್ಥಳ ಮಹಜರ್ಗೆ ಅನುಮತಿ ಕೇಳಿದ್ದರು. ಅನುಮತಿ ಕೊಡುವುದಿಲ್ಲ ಎಂದು ಹೇಳಿದ್ದೇನೆ. ವಿಧಾನಸೌಧದಲ್ಲಿ ಯಾರಿಗೂ ಬರಲು ಅಧಿಕಾರವಿಲ್ಲ. ನಾವು FSL ಗೆ ವಿಡಿಯೋ ಕೊಡುತ್ತಿದ್ದೇವೆ. ಆ ವರದಿ ಬಂದ ನಂತರ ಮುಂದೆ ವಿಚಾರ ಮಾಡುತ್ತೇವೆ ಎಂದಿದ್ದಾರೆ.