ಹಾವೇರಿ ಜಿಲ್ಲೆ ಶಿಗ್ಗಾವಿ ಬೈ ಎಲೆಕ್ಷನ್ ಅಖಾಡ ಜೋರಾಗಿದೆ. ಬಿಜೆಪಿಯಿಂದ ಭರತ್ ಬೊಮ್ಮಾಯಿಗೆ ಟಿಕೆಟ್ ಸಿಕ್ಕ ಬೆನ್ನಲ್ಲೇ ಕ್ಷೇತ್ರದಲ್ಲಿ ಅಸಮಾಧಾನದ ಹೊಗೆ ಆಡ್ತಿದೆ. ಪ್ರಮುಖ ಆಕಾಂಕ್ಷಿಯಾಗಿದ್ದ ಶ್ರೀಕಾಂತ್ ದುಂಡಿಗೌಡರ ಅಮಾಧಾನ ಹೊರ ಹಾಕಿದ್ದು, ಬೆಂಬಲಿಗರ ಜೊತೆ ಸಭೆ ನಡೆಸಿದ್ದಾರೆ. ಟಿಕೆಟ್ ಕೊಡದ ಹಿನ್ನೆಲೆ ಬೆಂಬಲಿಗರ ಬಳಿ ನೋವು ತೋಡಿಕೊಂಡಿದ್ದು, ಮುಂದಿನ ನಡೆ ಬಗ್ಗೆ ಚರ್ಚಿಸಿದ್ದಾರೆ.
ಭರತ್ ಬೊಮ್ಮಾಯಿಗೆ ಸಪೋರ್ಟ್ ಮಾಡೋದಾ..? ಅಥವಾ ಬಿಜೆಪಿ ಬಿಡೋದಾ..? ಎಂಬುವುದರ ಬಗ್ಗೆ ಮಹತ್ವದ ಮಾತುಕತೆ ನಡೆಸಿದ್ದಾರೆ. ಮಗನಿಗೆ ರಾಜಕೀಯ ಇಚ್ಛೆ ಇಲ್ಲ ಎನ್ನುತ್ತಿದ್ದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ತೆರೆಮರೆಯ ರಾಜಕೀಯದಲ್ಲಿ ಯಶಸ್ಸು ಸಾಧಿಸಿ, ಮಗನಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಮಗನನ್ನು ಗೆಲ್ಲಿಸಿಕೊಂಡು ಮೂರನೇ ತಲೆಮಾರಿನ ರಾಜಕೀಯಕ್ಕೆ ಅಖಾಡ ಸಜ್ಜು ಮಾಡುತ್ತಿದ್ದಾರೆ.