• Home
  • About Us
  • ಕರ್ನಾಟಕ
Friday, July 4, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಸಿನಿಮಾ

ಭೂಗತ ಜಗತ್ತಿನ ‘ವಾಸ್ತವ್’ ಚಿತ್ರಣ

Any Mind by Any Mind
January 9, 2022
in ಸಿನಿಮಾ
0
ಭೂಗತ ಜಗತ್ತಿನ ‘ವಾಸ್ತವ್’ ಚಿತ್ರಣ
Share on WhatsAppShare on FacebookShare on Telegram

ಸಲ್ಮಾನ್ ಖಾನ್ ತಮ್ಮ ಬಾವಮೈದುನ ಆಯುಶ್ ಶರ್ಮಾ ಜೊತೆ ಅಭಿನಯಿಸಿರೋ ‘ಅಂತಿಮ್- ದಿ ಫೈನಲ್ ಟ್ರುಥ್’ ಹಿಂದಿ ಚಿತ್ರ ಝೀ 5 ಓಟಿಟಿಯಲ್ಲಿ ಬಿಡುಗಡೆ ಆಗಿದೆ.

ADVERTISEMENT

ಈ ಸಿನಿಮಾ ನೋಡಿ ಮುಗಿಸಿದ ಮೇಲೆ ನಿಮಗೆ 1999ರಲ್ಲಿ ತೆರೆಕಂಡಿದ್ದ ಸಂಜಯ್ ದತ್ ಅಭಿನಯದ ‘ವಾಸ್ತವ್’ ಚಿತ್ರ ನೆನಪಾದರೆ ಅಚ್ಚರಿ ಏನಿಲ್ಲ. ಸಾಮಾನ್ಯ ಕುಟುಂಬದ ಹುಡುಗನೊಬ್ಬ ತನಗಾದ ಅನ್ಯಾಯದಿಂದ ದೊಡ್ಡವರ ವಿರುದ್ಧ ತಿರುಗಿ ಬಿದ್ದು ಭೂಗತ ಲೋಕದ ದೊಡ್ಡ ಪಾತಕಿ ಆಗುವ ಈ ಕಥೆಯನ್ನು ತಿರುಗಿ ಇನ್ನೊಮ್ಮೆ 2 ದಶಕಗಳ ನಂತರವೂ ಸಿನಿಮಾ ಮಾಡಲಾಗಿದೆ. ಇದರಲ್ಲಿ ಅಚ್ಚರಿ ಯಾಕಿಲ್ಲ ಅಂದ್ರೆ ಅದಕ್ಕೆ ಕಾರಣ, “ವಾಸ್ತವ್” ಮತ್ತು “ಅಂತಿಮ್” ಈ ಎರಡೂ ಚಿತ್ರಗಳ ನಿರ್ದೇಶಕ ಮಹೇಶ್ ಮಂಜ್ರೇಕರ್ ಅವರೇ ಆಗಿರೋದು. ಆಗ “ವಾಸ್ತವ್ – ದಿ ರಿಯಾಲಿಟಿ” ಎಂಬ ಹೆಸರಿನಲ್ಲಿ ಈ ಕತೆ ಹೇಳಿದ್ದ ಮಹೇಶ್ ಮಂಜ್ರೇಕರ್ ಈಗ “ಅಂತಿಮ್ – ದಿ ಫೈನಲ್ ಟ್ರುಥ್” ಎಂಬ ಹೆಸರಿನಲ್ಲಿ ಅದನ್ನು ರಿಪೀಟ್ ಮಾಡಿದ್ದಾರೆ.

ಚಿತ್ರದ ಕಥೆ ಎಂದಿನಂತೆ ನಿರೀಕ್ಷಿತ. ಬಡವರ್ಗದ ಹುಡುಗನೊಬ್ಬನ ಕುಟುಂಬದ ಮೇಲೆ ದೊಡ್ಡವರು ಎನಿಸಿಕೊಂಡವರಿಂದ ದೌರ್ಜನ್ಯ ನಡೆಯುತ್ತದೆ. ಅದನ್ನು ವಿರೋಧಿಸಿ ಹಳ್ಳಿ ಬಿಟ್ಟು ಪಟ್ಟಣಕ್ಕೆ ಬರುವ ನಾಯಕನ ಕುಟುಂಬದ ನಿಯತ್ತಿನ ಮತ್ತು ಕಷ್ಟದ ಜೀವನ ಇವನಿಗೆ ಇಷ್ಟ ಆಗೋದಿಲ್ಲ. ಹಾಗಾಗಿ ನಾಯಕ ದುಡ್ಡು ಮಾಡುವ ಸುಲಭ ಮಾರ್ಗಕ್ಕೆ ಕೈ ಹಾಕುತ್ತಾನೆ. ಅದಕ್ಕೆ ಅಡ್ಡ ಬಂದವರ, ಕೈಯಷ್ಟೇ ಅಲ್ಲ, ತಲೆಯನ್ನೂ ತೆಗೆಯುತ್ತಾನೆ. ಮಗ ರೌಡಿ ಆಗಿದ್ದಕ್ಕೆ, ಅಪ್ಪ, ಅಮ್ಮ ಈ ಸಮಾಜದಲ್ಲಿ ತಲೆ ಎತ್ತಿಕೊಂಡು ಓಡಾಡೋದು ಹೇಗೆ ಎಂಬ ಚಿಂತೆಯಲ್ಲಿದ್ದರೆ, ಮಗ ಮಾತ್ರ ಕಂಡ ಕಂಡವರ ತಲೆ ಎತ್ತಿಕೊಂಡೇ ತನ್ನ ಜೀವನ ನಡೆಸುತ್ತಿರುತ್ತಾನೆ. ಚಿತ್ರದಲ್ಲೊಂದು ಪಾತ್ರ ಮಾಡಿರುವ ನಿರ್ದೇಶಕ ಮಹೇಶ್ ಮಂಜ್ರೇಕರ್, ಆಗಾಗ ನಾಯಕನಿಗೆ ನಿನ್ನ ಎಕ್ಸ್ ಪೈರಿ ಡೇಟ್ ಮುಗಿಯುತ್ತಾ ಬರುತ್ತಿದೆ ಎಂದು ಹೇಳುವ ಮೂಲಕ ತಾನು ಈ ಚಿತ್ರದ ನಿರ್ದೇಶಕ ಎಂಬುದನ್ನು ನಿರೂಪಿಸುತ್ತಾರೆ. ಉಳಿದಂತೆ ನಾಯಕ ಜೀವನದಲ್ಲಿ ಅಡ್ಡದಾರಿ ಹಿಡಿದರೂ ಸಿನಿಮಾ ಮಾತ್ರ ನಿರೀಕ್ಷಿತ ಹಾದಿಯಲ್ಲೇ ಸಾಗುತ್ತದೆ. ನಾಯಕನಿಗೊಬ್ಬಳು ಹುಡುಗಿ, ಮುರಿದು ಬೀಳುವ ಅವರಿಬ್ಬರ ಪ್ರೇಮ ಕಥೆ, ನಾಯಕನ ತಂದೆ ತಾಯಿಯೊಂದಿಗಿನ ಆದರ್ಶಗಳ ಘರ್ಷಣೆ, ಜೀವನದಲ್ಲಿ ಬಹಳ ಬೇಗ ಬೆಳೆದುಬಿಡಬೇಕು ಎಂಬ ನಾಯಕನ ದುರಾಸೆ ಇವೆಲ್ಲ ಕಮರ್ಷಿಯಲ್ ಅಂಶಗಳನ್ನು ಇಟ್ಟುಕೊಂಡೇ ಅಂತಿಮ್ ಚಿತ್ರ ಮುಂದುವರಿಯುತ್ತದೆ.

ಅಂತಿಮ್ ಚಿತ್ರದಲ್ಲಿರುವ ಒಂದೇ ಒಂದು ವಿಶೇಷ ಅಂಶ ಅಂದ್ರೆ ಸಲ್ಮಾನ್ ಖಾನ್ ಅವರ ಪೊಲೀಸ್ ಪಾತ್ರ. ತನ್ನ ಸಾಕು ತಂಗಿಯ ಗಂಡನಾದ ಆಯುಶ್ ಶರ್ಮಾಗೆ ಬಾಲಿವುಡ್ ನಲ್ಲಿ ಒಂದು ನೆಲೆ ಕಟ್ಟಿಕೊಡಬೇಕು ಎಂಬ ಆಸೆಯಲ್ಲಿ ಸಲ್ಮಾನ್ ಖಾನ್ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಚಿತ್ರದಲ್ಲಿನ ಅವರ ಅಭಿನಯದ ಬಗ್ಗೆ ಎರಡು ಮಾತಲ್ಲ, ಒಂದೇ ಮಾತು ಹೇಳೋಕೆ ಸಾಧ್ಯ ಆಗೋದು. ಸಲ್ಮಾನ್ ಖಾನ್ ಅವರಿಂದ ಅಭಿನಯ ತೆಗೆಸೋಕೆ ನಿರ್ದೇಶಕರಿಂದ ಆಗಲ್ಲ, ಅದಕ್ಕೆ ಶಿಲ್ಪಿಗಳೇ ಬೇಕು ಎನ್ನಿಸಿದರೆ ಅದಕ್ಕೆ ಕಾರಣ ಪ್ರತಿ ದೃಶ್ಯದಲ್ಲೂ ಕಲ್ಲಿನಂಥ ಎಕ್ಸ್ ಪ್ರೆಷನ್ ಕೊಡುವ ಅವರ ಮುಖಭಾವ. ಹಾಗಾಗಿ ಸಲ್ಮಾನ್ ಖಾನ್ ಅವರ ಅಭಿನಯ ಚೆನ್ನಾಗಿಲ್ಲವೇ ಅಂತ ಯಾರಾದ್ರೂ ಕೇಳಿದರೆ, ಅಭಿನಯ ಮಾಡಿದ್ರೆ ತಾನೇ, ಚೆನ್ನಾಗಿದೆ ಅಥವಾ ಚೆನ್ನಾಗಿಲ್ಲ ಅಂತ ಹೇಳೋಕೆ ಸಾಧ್ಯ ಎಂಬುದೇ ಉತ್ತರವಾಗುತ್ತದೆ.

ಅದೇ ಭೂಗತ ಲೋಕದ ಡಾನ್ ನ ಕಥೆಯ ಚಿತ್ರಕಥೆ ಮಾತ್ರ ಅಡಿಗಡಿಗೂ ವಾಸ್ತವ್ ಚಿತ್ರವನ್ನೇ ನೆನಪಿಸುತ್ತದೆ. ಆದರೆ ಚಿತ್ರದ ನಿರೂಪಣೆ ಸಾಕಷ್ಟು ಬಾರಿ ಹಿಟ್ ಎನಿಸಿಕೊಂಡಿರುವ ಫಾರ್ಮುಲಾವನ್ನೇ ಅನುಸರಿಸುವುದರಿಂದ ಚಿತ್ರ ಎಲ್ಲಿಯೂ ಬೋರ್ ಹೊಡೆಸುವುದಿಲ್ಲ.

ಸಂಗೀತ ಮತ್ತು ಆಕ್ಷನ್ ದೃಶ್ಯಗಳು ಇಂಥ ಚಿತ್ರಕ್ಕೆ ಹೇಳಿಮಾಡಿಸಿದಂತಿವೆ. ಜೊತೆಗೆ ಇಂಥದೊಂದು ಕಥೆಗೆ ಬೇಕಾದ ಕೆಲವೊಂದು ವಿಲಕ್ಷಣ ಪಾತ್ರಗಳನ್ನೂ ನಿರ್ದೇಶಕ ಮಹೇಶ್ ಮಂಜ್ರೇಕರ್ ಸೃಷ್ಠಿಸಿದ್ದಾರೆ. ಹಾಗಾಗಿ ಅಂತಿಮ್  ಪಕ್ಕಾ ಕಮರ್ಷಿಯಲ್ ಚಿತ್ರ ಅನ್ನೋದರಲ್ಲಿ ಎರಡು ಮಾತಿಲ್ಲ.

ವಾಸ್ತವ್ ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಹೈಲೆಟ್ ಆಗೋದು ಭೂಗತ ಲೋಕದ ಡಾನ್ ಆಗಿರುವ ಸಂಜಯ್ ದತ್ ತಾಯಿ ಪಾತ್ರವಾದರೆ, ಇಲ್ಲಿ ನಾಯಕ ತಾಯಿಯಂತೆ ಸಾಕಿರುವ ಪುಟ್ಟ ಹುಡುಗನ ಪಾತ್ರವೊಂದು, ಚಿತ್ರಕ್ಕೆ ಅಂಥದ್ದೇ ಕ್ಲೈಮ್ಯಾಕ್ಸ್ ಒದಗಿಸಲು ಸಹಾಯ ಮಾಡಿದೆ. ವಾಸ್ತವ್ ಚಿತ್ರದ ಇಂಥ ಅನೇಕ ದೃಶ್ಯಗಳು ಮತ್ತು ಪಾತ್ರಗಳು ಅಂತಿಮ್ ಚಿತ್ರದಲ್ಲೂ ಇವೆ. ಹಾಗಾಗಿ ಅದೇ ವಾಸ್ತವ್ ಚಿತ್ರದ ಇನ್ನೊಂದು ಹೊಸ, ಅಪ್ ಡೇಟೆಡ್ ಅವತರಣಿಕೆಯಂತಿರುವ ‘ಅಂತಿಮ್’ ಚಿತ್ರವನ್ನು, “ಭೂಗತ ಜಗತ್ತಿನ ‘ವಾಸ್ತವ್’ ಚಿತ್ರಣ” ಎಂದರೆ ತಪ್ಪಿಲ್ಲ.

Tags: ಅಂತಿಮ್- ದಿ ಫೈನಲ್ ಟ್ರುಥ್ಆಯುಶ್ ಶರ್ಮಾಝೀ 5 ಓಟಿಟಿಭೂಗತ ಜಗತ್ತುವಾಸ್ತವ್ಸಲ್ಮಾನ್ ಖಾನ್
Previous Post

ಓಮಿಕ್ರಾನ್ ಅಲೆ: ನಾವು ಕಲಿಯಬೇಕಾಗಿದ್ದ ದಕ್ಷಿಣ ಆಫ್ರಿಕಾದ ಪಾಠ

Next Post

ಕಳೆದೆರಡು ವರ್ಷಗಳಲ್ಲಿ ಹಾರ್ಟ್ ಅಟ್ಯಾಕ್ ಆಗಿ ತೀರಿಕೊಂಡವರೆಷ್ಟು ಮಂದಿ?

Related Posts

Top Story

Capital City: ಈ ವಾರ ತೆರೆಗೆ ಆರ್ ಅನಂತರಾಜು ನಿರ್ದೇಶನದ ಹಾಗೂ ರಾಜೀವ್ ರೆಡ್ಡಿ ಅಭಿನಯದ “ಕ್ಯಾಪಿಟಲ್ ಸಿಟಿ” . .

by ಪ್ರತಿಧ್ವನಿ
July 3, 2025
0

"ಇನಿಫಿನಿಟಿ ಕ್ರಿಯೇಷನ್ಸ್" ಸಂಸ್ಥೆ ಲಾಂಛನದಲ್ಲಿ ನಿರ್ಮಾಣವಾಗಿರುವ, "ಅಪ್ಪು‌ ಪಪ್ಪು"(Appu Pappu), " ಮಸ್ತ್ ಮಜಾ ಮಾಡಿ"(Mast Maja Madi), "ನಂದ(Nanda)" ಸೂಪರ್ ಹಿಟ್ ಚಿತ್ರಗಳ ನಿರ್ದೇಶಕ ಆರ್...

Read moreDetails

S/o Muttanna Kannada Movi: ಅಪ್ಪ-ಮಗನ ಬಾಂಧವ್ಯಧ ಬಹು ನಿರೀಕ್ಷಿತ “S\O ಮುತ್ತಣ್ಣ” ಚಿತ್ರ ಆಗಸ್ಟ್ 22 ತೆರೆಗೆ.

July 3, 2025

Pratham: ಪ್ರಥಮ್ ಅಭಿನಯದ “ಫಸ್ಟ್ ನೈಟ್ ವಿತ್ ದೆವ್ವ” ಚಿತ್ರದಿಂದ ರೊಮ್ಯಾಂಟಿಕ್ ಹಾಡು ಬಿಡುಗಡೆ .

July 3, 2025
ದರ್ಶನ್ ಅಭಿಮಾನಿಗಳಿಗೆ ಪ್ರಥಮ್ ವಾರ್ನಿಂಗ್ – ಅತಿರೇಕದ ಅವಹೇಳನ ಮಾಡಿದ್ರೆ ಕಾನೂನು ಹೋರಾಟದ ಎಚ್ಚರಿಕೆ

ದರ್ಶನ್ ಅಭಿಮಾನಿಗಳಿಗೆ ಪ್ರಥಮ್ ವಾರ್ನಿಂಗ್ – ಅತಿರೇಕದ ಅವಹೇಳನ ಮಾಡಿದ್ರೆ ಕಾನೂನು ಹೋರಾಟದ ಎಚ್ಚರಿಕೆ

July 3, 2025

Khushi Mukherjee: ನಾನು ಬಂಗಾಳಿ ಬ್ರಾಹ್ಮಣ ಕುಟುಂಬದವಳು, ಸಂಸ್ಕೃತಿಯ ಅರಿವಿದೆ..!

July 2, 2025
Next Post
ಕಳೆದೆರಡು ವರ್ಷಗಳಲ್ಲಿ ಹಾರ್ಟ್ ಅಟ್ಯಾಕ್ ಆಗಿ ತೀರಿಕೊಂಡವರೆಷ್ಟು ಮಂದಿ?

ಕಳೆದೆರಡು ವರ್ಷಗಳಲ್ಲಿ ಹಾರ್ಟ್ ಅಟ್ಯಾಕ್ ಆಗಿ ತೀರಿಕೊಂಡವರೆಷ್ಟು ಮಂದಿ?

Please login to join discussion

Recent News

ಮಾಜಿ ಡಿಸಿಎಂ ಈಶ್ವರಪ್ಪಗೆ ಲೋಕಾ ಶಾಕ್ ! – ಆಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದಾಖಲಾಯ್ತು F.I.R
Top Story

ಮಾಜಿ ಡಿಸಿಎಂ ಈಶ್ವರಪ್ಪಗೆ ಲೋಕಾ ಶಾಕ್ ! – ಆಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದಾಖಲಾಯ್ತು F.I.R

by Chetan
July 4, 2025
ಶಾಲಿನಿ ರಜನೀಶ್ ಬಗ್ಗೆ ಎನ್.ರವಿಕುಮಾರ್ ಇದೆಂಥಾ ಹೇಳಿಕೆ..?! ಬಿಜೆಪಿ ಎಂಎಲ್ಸಿ ಸಮರ್ಥನೆ ಏನು ಗೊತ್ತಾ..?!
Top Story

ಶಾಲಿನಿ ರಜನೀಶ್ ಬಗ್ಗೆ ಎನ್.ರವಿಕುಮಾರ್ ಇದೆಂಥಾ ಹೇಳಿಕೆ..?! ಬಿಜೆಪಿ ಎಂಎಲ್ಸಿ ಸಮರ್ಥನೆ ಏನು ಗೊತ್ತಾ..?!

by Chetan
July 4, 2025
Top Story

Bangalore Airport: 10 ಜಾಗತಿಕ ಪ್ರಶಸ್ತಿ ಪಡೆದ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ..!!

by ಪ್ರತಿಧ್ವನಿ
July 3, 2025
Top Story

Dr Sharana Prakash Patil: ಡಸೆಲ್ಡಾರ್ಫ್‌ನಲ್ಲಿ ಸಚಿವ ಡಾ. ಶರಣಪ್ರಕಾಶ್‌ ಪಾಟೀಲ್‌ ನಿಯೋಗ..!

by ಪ್ರತಿಧ್ವನಿ
July 3, 2025
Top Story

Capital City: ಈ ವಾರ ತೆರೆಗೆ ಆರ್ ಅನಂತರಾಜು ನಿರ್ದೇಶನದ ಹಾಗೂ ರಾಜೀವ್ ರೆಡ್ಡಿ ಅಭಿನಯದ “ಕ್ಯಾಪಿಟಲ್ ಸಿಟಿ” . .

by ಪ್ರತಿಧ್ವನಿ
July 3, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಮಾಜಿ ಡಿಸಿಎಂ ಈಶ್ವರಪ್ಪಗೆ ಲೋಕಾ ಶಾಕ್ ! – ಆಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದಾಖಲಾಯ್ತು F.I.R

ಮಾಜಿ ಡಿಸಿಎಂ ಈಶ್ವರಪ್ಪಗೆ ಲೋಕಾ ಶಾಕ್ ! – ಆಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದಾಖಲಾಯ್ತು F.I.R

July 4, 2025
ಶಾಲಿನಿ ರಜನೀಶ್ ಬಗ್ಗೆ ಎನ್.ರವಿಕುಮಾರ್ ಇದೆಂಥಾ ಹೇಳಿಕೆ..?! ಬಿಜೆಪಿ ಎಂಎಲ್ಸಿ ಸಮರ್ಥನೆ ಏನು ಗೊತ್ತಾ..?!

ಶಾಲಿನಿ ರಜನೀಶ್ ಬಗ್ಗೆ ಎನ್.ರವಿಕುಮಾರ್ ಇದೆಂಥಾ ಹೇಳಿಕೆ..?! ಬಿಜೆಪಿ ಎಂಎಲ್ಸಿ ಸಮರ್ಥನೆ ಏನು ಗೊತ್ತಾ..?!

July 4, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada