ಜಾಗತಿಕವಾಗಿ ಗಮನ ಸೆಳೆಯುತ್ತಿರುವ Dhurandhar The Revenge( ಧುರಂಧರ್ 2) ಚಿತ್ರದ ಬಗ್ಗೆ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚಿತ್ರ ನೋಡಿದ ನಂತರ ತಮ್ಮ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, “ಈ ಸಿನಿಮಾ ನೋಡಲು ನಿಮ್ಮ ಸಮಯ ಮತ್ತು ಹಣ ವ್ಯರ್ಥ ಮಾಡಬೇಡಿ” ಎಂದು ಹೇಳಿದ್ದಾರೆ.

ಚಿತ್ರವು ಬಹಳ ನೀರಸವಾಗಿದ್ದು, ಸಹನೆ ಪರೀಕ್ಷಿಸುವಂತಿದೆ ಎಂದು ರಮ್ಯಾ ಅಭಿಪ್ರಾಯಪಟ್ಟಿದ್ದಾರೆ. “ಕಥೆ, ನಿರ್ದೇಶನ, ಸಂಭಾಷಣೆ, ಹಿನ್ನೆಲೆ ಸಂಗೀತ ಮತ್ತು ನಟನೆಯೆಲ್ಲವೂ ನಿರಾಶೆ ಮೂಡಿಸುತ್ತದೆ” ಎಂದು ಅವರು ಹೇಳಿದ್ದಾರೆ.ಚಿತ್ರ ನೋಡಲೇಬೇಕೆಂದರೆ ಥಿಯೇಟರ್ನಲ್ಲಿ ನೋಡಬೇಡಿ, ನಂತರ ಸ್ಟ್ರೀಮಿಂಗ್ನಲ್ಲಿ ನೋಡಿದರೆ ಸಾಕು ಎಂದು ಸಲಹೆ ನೀಡಿದ್ದಾರೆ. “ಥಿಯೇಟರ್ಗೆ ಹೋಗಿ ಹಣ, ಸಮಯ ಖರ್ಚು ಮಾಡಬೇಡಿ” ಎಂದು ಹೇಳಿದ್ದಾರೆ.

ಮೊದಲ ಭಾಗದಲ್ಲಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿತ್ತು. ಆದರೆ ಎರಡನೇ ಭಾಗದಲ್ಲಿ ಆ ಉತ್ಸಾಹ ಕಾಣುತ್ತಿಲ್ಲ ಎಂದು ಅವರು ಹೇಳಿದ್ದಾರೆ. ಚಿತ್ರಮಂದಿರದಲ್ಲೇ ಪ್ರೇಕ್ಷಕರ ನಿರಾಶೆ ಉಂಟಾಗಿದೆ. ಎಂದು ತಿಳಿಸಿದ್ದಾರೆ.ಚಿತ್ರದ ನಾಯಕ ರಣವೀರ್ ಸಿಂಗ್ ಕುರಿತು ಮಾತನಾಡಿದ ರಮ್ಯಾ, “ಚಿತ್ರವನ್ನು ಅವರು ನಟಿಸಿದ್ದಾರೆ, ಆದರೆ ಅದರಲ್ಲಿ ವಿಶೇಷವಾಗಿ ಕಾಣಿಸುವುದು ಅವರ ಕೂದಲು ಮಾತ್ರ ನಟನೆಯಲ್ಲ” ಎಂದು ವ್ಯಂಗ್ಯವಾಡಿದ್ದಾರೆ.

ಚಿತ್ರದಲ್ಲಿ ಅತಿಯಾದ ಹಿಂಸೆ ತೋರಿಸಲಾಗಿದೆ ಎಂದು ರಮ್ಯಾ ಟೀಕಿಸಿದ್ದಾರೆ. “ಇದು ಸಿನಿಮಾ ಅಲ್ಲ, ಹಿಂಸೆ ತೋರಿಸುವ ಮಾರ್ಗದರ್ಶಿಯಂತಿದೆ” ಎಂದು ಹೇಳಿದ್ದಾರೆ. ರಮ್ಯಾ ಅವರ ಈ ವಿಮರ್ಶೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಚಿತ್ರದ ಬಗ್ಗೆ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ಇದನ್ನು ಓದಿದ ಕೆಲ ಜನರು ರಮ್ಯಾ ಕನ್ನಡ ನಟಿಯಾಗಿದ್ದು, ಇತ್ತೀಚಿಗೆ ಬಿಡುಗಡೆಯಾದ ಕನ್ನಡ ಸಿನಿಮಾ ನೋಡಿ ವಿಮರ್ಶೆ ಮಾಡುವ ಬದಲು ಹಿಂದಿ ಸಿನಿಮಾ ನೋಡಿದ್ದಾರೆ. ಕನ್ನಡ ಸಿನಿಮಾ ನೋಡಿ, ಅಭಿಪ್ರಾಯ ಬರೆಯಲು ಇವರ ಬಳಿ ಸಮಯವಿಲ್ಲವೇ ? ಹಿಂದಿ ಮಾತ್ರ ನೋಡುತ್ತಾರೆಯೇ ಕನ್ನಡ ನಟಿ ರಮ್ಯಾ ಎಂದು ಹೇಳುತ್ತಿದ್ದಾರೆ.

ಕನ್ನಡದಲ್ಲಿ ಸಾಮಾಜಿಕ ಸಂದೇಶ ಹೇಳುವ ಕಾಟೇರ, ಲ್ಯಾಂಡ್ ಲಾರ್ಡ್ ನಂತಹ ಎಷ್ಟೋ ಸಿನಿಮಾ ಗಳು ಬಂದಿದ್ದಾಗ ಅಂತಹ ಸಿನಿಮಾಗಳನ್ನು ನಟಿ ರಮ್ಯಾ ನೋಡಲಿಲ್ಲವೇ ? ಇತ್ತೀಚಿಗೆ ನಟಿ ರಮ್ಯಾ ಕನ್ನಡ ಸಿನಿಮಾ ಏಕೆ ನೋಡಿ ಅಭಿಪ್ರಾಯ ಎಲ್ಲೂ ತಿಳಿಸಲಿಲ್ಲ ಎಂದು ಸಮಾಜಿಕ ಮಾಧ್ಯಮದಲ್ಲಿ ಚರ್ಚೆ ಪ್ರಾರಂಭವಾಗಿದೆ. ಹಲವಾರು ವಿಷಯಗಳ ಬಗ್ಗೆ ಆಕ್ಷೇಪ ಎತ್ತುವ ರಮ್ಯಾ ಕನ್ನಡ ಚಿತ್ರರಂಗದ ವಿಷಯದಿಂದ ಏಕೆ ದೂರ ಉಳಿದಿದ್ದಾರೆ? ಹಾಗಾದರೆ ಕನ್ನಡ ಸಿನಿಮಾ ನೋಡುವುದನ್ನೇ ನಟಿ ನಿಲ್ಲಿಸಿದ್ದಾರೆಯೇ? ಎಂದು ಕೆಲ ಕನ್ನಡ ಜನರು ಪ್ರಶ್ನೆ ಮಾಡುತ್ತಿದ್ದಾರೆ.






