ಬೆಂಗಳೂರು : ಬಿಜೆಪಿ ವರಿಷ್ಠರು ನನಗೆ ಪಕ್ಷಕ್ಕೆ ಆಹ್ವಾನಿಸಿದ್ದಾರೆ. ಬಿಜೆಪಿಗೆ ನಾಳೆಯೇ ಬಂದರೆ ನಿಮ್ಮನ್ನು ಮಂತ್ರಿ ಮಾಡುತ್ತೇನೆ ಎಂದು ಹೇಳಿದ್ದರು ಅಂತಾ ಸ್ವತಃ ನಟಿ ರಮ್ಯಾ ಬಹಿರಂಗ ಹೇಳಿಕೆ ನೀಡಿದ್ದರು. ಈ ವಿಚಾರಬಾಗಿ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಸಚಿವ ಆರ್. ಅಶೋಕ್ ರಮ್ಯಾರನ್ನು ಪಕ್ಷಕ್ಕೆ ಆಹ್ವಾನಿಸುವಷ್ಟು ನಮ್ಮ ಪಕ್ಷ ಬರಗೆಟ್ಟಿಲ್ಲ ಎಂದು ಟಾಂಗ್ ನೀಡಿದ್ದಾರೆ .
![](https://pratidhvani.com/wp-content/uploads/2023/04/Ramya-Ashoka-1024x576.jpg)
ಮಾಜಿ ಸಿಎಂ ಜಗದೀಶ್ ಶೆಟ್ಟರ್, ಮಾಜಿ ಡಿಸಿಎಂ ಲಕ್ಷ್ಮಣ ಸವದಿಯಂತವರಿಗೆ ಬಿಜೆಪಿಯಲ್ಲಿ ಟಿಕೆಟ್ ಸಿಕ್ಕಿಲ್ಲ. ಅಂತದ್ರಲ್ಲಿ ರಮ್ಯಾರಿಗೆ ಸಚಿವ ಸ್ಥಾನ ನಾವ್ಯಾಕೆ ಕೊಡ್ತೇವೆ ಎಂದು ಆರ್. ಅಶೋಕ್ ಪ್ರಶ್ನೆ ಮಾಡಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ನಟಿ ರಮ್ಯಾ, ಬಿಜೆಪಿಯಿಂದ ನನಗೆ ಆಫರ್ ಬಂದಿತ್ತು. ನನಗೆ ಬಿಜೆಪಿ ಮೇಲೆ ದ್ವೇಷವಿಲ್ಲ. ಆದರೆ ಅವರ ಕೆಲವು ಸಿದ್ಧಾಂತಗಳಿಗೆ ನನ್ನ ಒಪ್ಪಿಗೆಯಿಲ್ಲ ಎಂದಿದ್ದರು.ಇದರ ಜೊತೆ ಮಾಜಿ ಸಿಎಂ ಹೆಚ್ಡಿಕೆ ಕೂಡ ಜೆಡಿಎಸ್ಗೆ ಆಹ್ವಾನ ನೀಡಿದ್ದರು ಎಂದು ಹೇಳಿಕೊಂಡಿದ್ದರು.