ಬಿಗ್ ಬಾಸ್ ಕನ್ನಡ(Bigg Boss Kannada) ಸೀಸನ್ 12ರ ನಿನ್ನೆಯ ವಾರಾಂತ್ಯ ಸಂಚಿಕೆಯಲ್ಲಿ ರಕ್ಷಿತಾ ಶೆಟ್ಟಿ(Rakshitha Shetty) ಹಾಗೂ ಧ್ರುವಂತ್ (Druvanth) ಫೇಕ್ ಎಲಿಮಿನೇಷನ್ ಮೂಲಕ ಹೊರಕ್ಕೆ ಬಂದು ಸೀಕ್ರೆಟ್ ರೂಂ ಸೇರಿದ್ದಾರೆ.

ರಕ್ಷಿತಾ ಎಲಿಮಿನೇಟ್ ಎಂದು ಗೊತ್ತಾಗುತ್ತಿದ್ದಂತೆ ಗಿಲ್ಲಿ, ಅಶ್ವಿನಿ ಗೌಡ, ರಘು, ರಜತ್ ಸೇರಿದಂತೆ ಬಹುತೇಕರು ಕಣ್ಣೀರು ಹಾಕಿದ್ದಾರೆ. ಅಶ್ವಿನಿ ಗೌಡ, ರಕ್ಷಿತಾ ಬಳಿ ಅನೇಕ ಬಾರಿ ಕ್ಷಮೆ ಕೇಳಿದ್ದಾರೆ. ರಕ್ಷಿತಾ ಶೆಟ್ಟಿ ಮನೆಯಿಂದ ಹೊರಬರುವ ಕ್ಷಣ ಬಹಳ ಭಾವುಕವಾಗಿದ್ದು, ರಕ್ಷಿತಾ ತಾವು ಹೆಚ್ಚು ಸಮಯ ಕಳೆಯುತ್ತಿದ್ದ ಅಡುಗೆ ಮನೆಗೆ ಹೋದಾಗ ಎಲ್ಲರೂ ಭಾವುಕರಾಗಿದ್ದಾರೆ.

ಆದರೆ ನಿನ್ನೆ ಫೇಕ್ ಎಲಿಮಿನೇಷನ್ ಮಾಡಲಾಗಿದ್ದು, ರಕ್ಷಿತಾ ಶೆಟ್ಟಿ ಹಾಗೂ ಧ್ರುವಂತ್ ಅವರನ್ನು ಸೀಕ್ರೆಟ್ ರೂಂನಲ್ಲಿ ಇರಿಸಲಾಗಿದೆ. ಎಲಿಮಿನೇಟ್ ಆಗದೇ ಸೀಕ್ರೆಟ್ ರೂಂ ಸೇರಿರುವ ರಕ್ಷಿತಾ ಶೆಟ್ಟಿಗೆ ಈಗ ಹೊಸ ಟೆನ್ಷನ್ ಶುರುವಾಗಿದೆ. ಈ ಬಗ್ಗೆ ಇಂದಿನ ಪ್ರೋಮೋದಲ್ಲಿ ತಿಳಿಸಲಾಗಿದೆ. ಸೀಕ್ರೆಟ್ ರೂಂನಲ್ಲಿರುವ ಸ್ಪರ್ಧಿಗಳಿಗೆ ಮನೆಯೊಳಗೆ ಇರುವ ಇತರ ಸ್ಪರ್ಧಿಗಳನ್ನು ತೋರಿಸಲಾಗುತ್ತಿದ್ದು, ತಮ್ಮನ್ನು ಮಿಸ್ ಮಾಡಿಕೊಳ್ಳುತ್ತಿರುವ ಮನೆಯ ಇತರ ಸ್ಪರ್ಧಿಗಳನ್ನು ನೋಡಿ ರಕ್ಷಿತಾ ಕಣ್ಣೀರು ಹಾಕಿದ್ದಾರೆ.

ಇನ್ನು ಧ್ರುವಂತ್ ಕೂಡ ರಕ್ಷಿತಾ ಜೊತೆಗಿದ್ದು, ಧ್ರುವಂತ್ ಆಡುವ ಮಾತು ನಡೆದುಕೊಳ್ಳುತ್ತಿರುವ ರೀತಿ ನೋಡಿ ರಕ್ಷಿತಾ ಮತ್ತಷ್ಟು ಬೇಸರಗೊಂಡಿದ್ದಾರೆ. ಅಯ್ಯೋ ದೇವರೇ ಇವರ ಜೊತೆ ಒಂದೇ ರೂಮ್ನಲ್ಲಿ ಇರುವುದು ಹೇಗೆ ಎಂದು ತಲೆ ಮೇಲೆ ಕೈಯಿಟ್ಟುಗೊಂಡಿದ್ದಾರೆ. ಸದ್ಯ ಪ್ರೋಮೋದಲ್ಲಿ ಈ ವಿಚಾರಗಳನ್ನು ತೋರಿಸಲಾಗಿದ್ದು, ಮುಂದೇನಾಗಲಿದೆ ಎನ್ನುವುದನ್ನು ಇಂದಿನ ಸಂಚಿಕೆಯಲ್ಲಿ ವೀಕ್ಷಿಸಬೇಕಾಗಿದೆ.






