• Home
  • About Us
  • ಕರ್ನಾಟಕ
Saturday, July 5, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Uncategorized

ಯೋಗಿ ಸರ್ಕಾರದ ಷಡ್ಯಂತ್ರವನ್ನೇ ಬುಡಮೇಲುಗೊಳಿಸಿದ ರೈತ ನಾಯಕನ ಕಣ್ಣೀರು!

ಫೈಝ್ by ಫೈಝ್
April 21, 2021
in Uncategorized
0
ಯೋಗಿ ಸರ್ಕಾರದ ಷಡ್ಯಂತ್ರವನ್ನೇ ಬುಡಮೇಲುಗೊಳಿಸಿದ ರೈತ ನಾಯಕನ ಕಣ್ಣೀರು!
Share on WhatsAppShare on FacebookShare on Telegram

ರೈತರು ಪ್ರತಿಭಟನೆ ನಡೆಸುತ್ತಿರುವ ದೆಹಲಿ-ಉತ್ತರ ಪ್ರದೇಶ ಗಡಿ ಗಾಝೀಪುರದಲ್ಲಿ ನಡೆದ ಸಿನಿಮೀಯ ಮಾದರಿ ತಿರುವುಗಳು ರೈತ ಪ್ರತಿಭಟನೆಯನ್ನು ಹತ್ತಿಕ್ಕುವ ಸರ್ಕಾರದ ರೂಪುರೇಷೆಯನ್ನೇ ಬುಡಮೇಲುಗೊಳಿಸಿದೆ. ಗುರುವಾರ ತಡರಾತ್ರಿ ಸಶಸ್ತ್ರ ಪಡೆಗಳು ರೈತರು ಪ್ರತಿಭಟನೆ ನಡೆಸುವಲ್ಲಿ ನುಗ್ಗಿದ್ದು, ಪ್ರತಿಭಟನಾಕಾರರನ್ನು ಹಿಮ್ಮಟ್ಟಿಸಲು ಪ್ರಯತ್ನಿಸಿದೆ.

ADVERTISEMENT

ಎನ್‌ಡಿಟಿವಿ ವರದಿ ಪ್ರಕಾರ, ಕೇಂದ್ರೀಯ ಸಶಸ್ತ್ರ ಪಡೆಯ 300 ಸಿಬ್ಬಂದಿ, ಪಿಎಸಿಯ 600 ಟ್ರೂಪ್ಸ್‌ ಹಾಗೂ 1000 ಕ್ಕೂ ಹೆಚ್ಚು ಸ್ಥಳೀಯ ಪೊಲೀಸರು ರೈತರು ಪ್ರತಿಭಟನೆ ನಡೆಸುವ ಕಡೆಗೆ ನುಗ್ಗಿದ್ದಾರೆ. ಮೊದಲಿಗೆ, ರೈತ ಮುಖಂಡರು ತಣ್ಣಗಿದ್ದು, ಶಾಂತಿಯುತವಾಗಿ ಬಂಧನಕ್ಕೊಳಗಾಗಲು ಸನ್ನದ್ಧರಾಗಿದ್ದರು. ಆದರೆ ಯಾವಾಗ ಸ್ಥಳೀಯ ಬಿಜೆಪಿ ಎಮ್‌ಎಲ್‌ಎ ಹಾಗೂ ಆತನ ಬೆಂಬಲಿಗರು ಭದ್ರತಾ ಸಿಬ್ಬಂದಿಯೊಂದಿಗೆ ಸೇರಿ ನೇರವಾಗಿ ಪ್ರತಿಭಟನಾಕಾರರನ್ನು ಎಬ್ಬಿಸಲು ಪ್ರಯತ್ನಿಸಿದರೋ, ಪರಿಸ್ಥಿತಿ ಬಿಗಡಾಯಿಸಿತು. ಅದುವರೆಗೂ ಪೊಲೀಸರೊಂದಿಗೆ ತೆರಳಲು ಹೊರಟಿದ್ದ ರೈತ ನಾಯಕರು ಸ್ಥಳದಿಂದ ನಿರ್ಗಮಿಸಿ, ಪೊಲೀಸರೊಂದಿಗೆ ತೆರಳಲು ನಿರಾಕರಿಸಿದ್ದಾರೆ. ಇದು ಉದ್ವಿಗ್ನ ಪರಿಸ್ಥಿತಿಗೆ ಕಾರಣವಾಗಿದೆ.

ಈ ವೇಳೆ, ಮಾಧ್ಯಮಗಳೆದುರು ಬಹಿರಂಗವಾಗಿ ಮಾತನಾಡಿದ ಭಾರತೀಯ ಕಿಸಾನ್‌ ಯುನಿಯನ್‌ ಮುಖಂಡ ರಾಕೇಶ್‌ ಟಿಕಾಯತ್‌, ಅವರು ನಮ್ಮ ಮೇಲೆ ಗುಂಡು ಹಾರಿಸಲಿ. ನಾನಿಲ್ಲೇ ಇರುತ್ತೇನೆ. ನೇಣು ಹಾಕಿಕೊಂಡರೂ, ಸತ್ಯಾಗ್ರಹದ ಜಾಗ ಖಾಲಿ ಮಾಡುವುದಿಲ್ಲ ಎಂದು ಭಾವನಾತ್ಮಕವಾಗಿ ಮಾತನಾಡಿದ್ದಾರೆ.

ಒಂದು ಹಂತದಲ್ಲಿ, ಪ್ರತಿಭಟನೆಯನ್ನು ಸರ್ಕಾರ ಇನ್ನೇನು ಮಟ್ಟ ಹಾಕಿಯೇ ತೀರುತ್ತದೆಂಬ ಪ್ರಾಮಾಣಿಕ ನೋವು ಟಿಕಾಯತ್‌ ಅವರನ್ನು ಕಾಡುತ್ತಿತ್ತು ಎಂದು ಟೀಕಾಯತ್‌ ಸಹವರ್ತಿಗಳು ಹೇಳಿರುವುದಾಗಿ ದಿ ಕ್ವಿಂಟ್‌ ವರದಿ ಮಾಡಿದೆ. ಇದೇ ನೋವು ಅವರ ಮಾತಿನಲ್ಲಿ ಪ್ರತಿಫಲಿಸಿತ್ತು. ಸುಮಾರು ಅರ್ಧಗಂಟೆಯಷ್ಟು ನಿರಂತರ ಮಾತನಾಡಿದ ಟಿಕಾಯತ್‌, “ಸರ್ಕಾರ ನಮ್ಮನ್ನು (ರೈತರನ್ನು) ನಾಶ ಮಾಡಲು ನೋಡುತ್ತಿದೆ. ನಾವಿದಕ್ಕೆ ಅನುವು ಮಾಡಿಕೊಡುವುದಿಲ್ಲ. ಒಂದೋ ಕೃಷಿ ಕಾನೂನುಗಳನ್ನು ಹಿಂಪಡೆಯಬೇಕು ಅಥವಾ ಟೀಕಾಯತ್‌ ನೇಣು ಹಾಕಿಕೊಳ್ಳುತ್ತಾನೆ. ರೈತರ ವಿರುದ್ಧ ಷಡ್ಯಂತ್ರಗಳನ್ನು ನಡೆಸಲಾಗುತ್ತಿದೆ” ಎಂದು ಕಣ್ಣಿರಿನೊಂದಿಗೆ ದುಖತಪ್ತ ಭಾಷಣ ಮಾಡಿದ್ದಾರೆ.

ರಾಕೇಶ್‌ ಟೀಕಾಯತ್‌ರ ಈ ಮಾತುಗಳು ನಿಮಿಷಗಳಲ್ಲೇ ಸಾಕಷ್ಟು ವೈರಲ್‌ ಆಗಿದೆ. ಈ ಭಾಷಣವು ರಾಕೇಶ್‌ ಟೀಕಾಯತ್‌ ಇರುವಲ್ಲಿಗೆ ಹಳ್ಳಿ ಹಳ್ಳಿಗಳಿಂದ ರೈತ ಗುಂಪುಗಳನ್ನು ಬಂದ ತಲುಪುವಂತೆ ಪ್ರಚೋದಿಸಿದೆ. ರಾತ್ರೋರಾತ್ರಿ ತಂಡೋಪತಂಡವಾಗಿ ಬಂದು ಸೇರಿದ ರೈತರ ದಂಡನ್ನು ಕಂಡು ಸರ್ಕಾರ ನಿಯೋಜಿತ ಸಶಸ್ತ್ರ ಪಡೆ ಕ್ರಮೇಣ ಹಿಂದೆ ಸರಿದಿದೆ.

ಜೊತೆಗೆ, ಶುಕ್ರವಾರ ಬೆಳಿಗ್ಗೆ, ರಾಷ್ಟ್ರೀಯ ಲೋಕ ದಳದ (ಆರ್‌ಎಲ್‌ಡಿ) ಮಾಜಿ ಕೇಂದ್ರ ಸಚಿವ ಅಜಿತ್ ಸಿಂಗ್ ಭಾರತೀಯ ಕಿಸಾನ್‌ ಒಕ್ಕೂಟದ ಜೊತೆ ಮಾತನಾಡಿ ತಮ್ಮ ಪಕ್ಷದ ಬೆಂಬಲವನ್ನು ವಿಸ್ತರಿಸಿದ್ದಾರೆ.

“ಇದು ರೈತರಿಗೆ ಸಾವು-ಬದುಕಿನ ವಿಷಯವಾಗಿದೆ, ಆದರೆ ಚಿಂತಿಸಬೇಡಿ. ಎಲ್ಲರೂ ಒಟ್ಟಾಗಿರಬೇಕು, ಇದರಲ್ಲಿ ಒಂದಾಗಬೇಕು” ಎಂದು ಅಜಿತ್ ಸಿಂಗ್ ಅವರ ಪುತ್ರ ಜಯಂತ್ ಚೌಧರಿ ಪ್ರತಿಭಟನಾ ನಿರತ ರೈತರಿಗೆ ಭರವಸೆ ನೀಡಿದ್ದಾರೆ.

ದೆಹಲಿ ಟ್ರಾಕ್ಟರ್‌ ಪರೇಡ್‌ ಹಿಂಸಾಚಾರದ ನೆಪದಲ್ಲಿ, ಗಾಜೀಪುರದ ರೈತ ಹೋರಾಟಗಾರರಿಗೆ ವಿದ್ಯುತ್‌ ಕಡಿತಗೊಳಿಸಿ, ನೀರಿನ ಸರಬರಾಜನ್ನು ತಡೆದ ಉತ್ತರಪ್ರದೇಶ ಯೋಗಿ ಸರ್ಕಾರ, ರೈತ ಹೋರಾಟವನ್ನು ಮಟ್ಟ ಹಾಕಲು ಯಶಸ್ವಿಯಾಯಿತೆಂದು ಭಾವಿಸಿಕೊಳ್ಳುತ್ತಿರುವಾಗಲೇ, ರೈತ ಹೋರಾಟಕ್ಕೆ ಇನ್ನಷ್ಟು ಹುರುಪು ಬಂದಿದೆ. ರೈತ ಹೋರಾಟದ ಸಾಗರಕ್ಕೆ ಹೊಸ ನದಿಗಳು ಸೇರಿಕೊಂಡಿವೆ.

Previous Post

ಕೃಷಿ ಕಾಯ್ದೆಯ ಕುರಿತು ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಗೌರವಿಸುತ್ತೇವೆ –‌ ರಾಮನಾಥ್‌ ಕೋವಿಂದ್

Next Post

ಪರಿಷತ್‌ ಗಲಾಟೆ: ಮಾಧುಸ್ವಾಮಿ, ಅಶ್ವತ್ಥ ನಾರಾಯಣ ಸೇರಿ ಹಲವರ ನಿರ್ಬಂಧಕ್ಕೆ ಸದನ ಸಮಿತಿ ಶಿಫಾರಸ್ಸು

Related Posts

ಇಂದಿನಿಂದ ಆರಂಭ ಅಮರನಾಥ ಯಾತ್ರೆ – ಉಗ್ರರ ದಾಳಿಯ ಆತಂಕ..ಭದ್ರತೆ ಹೆಚ್ಚಿಸಿದ ಕೇಂದ್ರ !! 
Uncategorized

ಇಂದಿನಿಂದ ಆರಂಭ ಅಮರನಾಥ ಯಾತ್ರೆ – ಉಗ್ರರ ದಾಳಿಯ ಆತಂಕ..ಭದ್ರತೆ ಹೆಚ್ಚಿಸಿದ ಕೇಂದ್ರ !! 

by Chetan
July 3, 2025
0

ಇಂದಿನಿಂದ ಜಮ್ಮು ಕಾಶ್ಮೀರದಲ್ಲಿ (Jammu Kashmir) ಅಮರನಾಥ ಯಾತ್ರೆ (Amaranatha yatra) ಆರಂಭವಾಗಲಿದೆ. ಈ ಯಾತ್ರೆಯ ಯಾತ್ರಾರ್ಥಿಗಳು ಕಾಶ್ಮೀರದ ಪಹಲ್ಗಾಮ್ (Pahalgam) ಮೂಲಕವೇ ಸಾಗಿ ಹೋಗಬೇಕಿದೆ. ಹೀಗಾಗಿ...

Read moreDetails
ರಾಜ್ಯ ಭ್ರಷ್ಟಾಚಾರ, ಕಮೀಶನ್ ಹಾವಳಿಯಿಂದ ತತ್ತರಿಸುತ್ತಿದೆ; ಹೆಚ್.ಡಿ. ಕುಮಾರಸ್ವಾಮಿ

ರಾಜ್ಯ ಭ್ರಷ್ಟಾಚಾರ, ಕಮೀಶನ್ ಹಾವಳಿಯಿಂದ ತತ್ತರಿಸುತ್ತಿದೆ; ಹೆಚ್.ಡಿ. ಕುಮಾರಸ್ವಾಮಿ

June 20, 2025
ಕೆಪಿಟಿಸಿಎಲ್ ನೌಕರರ ಸಂಘದ ವಜ್ರಮಹೋತ್ಸವ ಸಮಾರಂಭ*

ಕೆಪಿಟಿಸಿಎಲ್ ನೌಕರರ ಸಂಘದ ವಜ್ರಮಹೋತ್ಸವ ಸಮಾರಂಭ*

June 18, 2025

ಮೈಷುಗರ್ ಪ್ರೌಢಶಾಲೆಯ ಅಮೃತ ಮಹೋತ್ಸವ ಕಾರ್ಯಕ್ರಮದ ನೇರಪ್ರಸಾರ

June 7, 2025
ಕೆಲವೇ ಕ್ಷಣದಲ್ಲಿ ಬೆಂಗಳೂರಿಗೆ RCB ಬಾಯ್ಸ್ – ಓಪನ್ ವಿಕ್ಟರಿ ಪರೇಡ್ ಕ್ಯಾನ್ಸಲ್ ಆಗಿದ್ದೇಕೆ .?! 

ಕೆಲವೇ ಕ್ಷಣದಲ್ಲಿ ಬೆಂಗಳೂರಿಗೆ RCB ಬಾಯ್ಸ್ – ಓಪನ್ ವಿಕ್ಟರಿ ಪರೇಡ್ ಕ್ಯಾನ್ಸಲ್ ಆಗಿದ್ದೇಕೆ .?! 

June 4, 2025
Next Post
ಪರಿಷತ್‌ ಗಲಾಟೆ: ಮಾಧುಸ್ವಾಮಿ, ಅಶ್ವತ್ಥ ನಾರಾಯಣ ಸೇರಿ ಹಲವರ ನಿರ್ಬಂಧಕ್ಕೆ ಸದನ ಸಮಿತಿ ಶಿಫಾರಸ್ಸು

ಪರಿಷತ್‌ ಗಲಾಟೆ: ಮಾಧುಸ್ವಾಮಿ, ಅಶ್ವತ್ಥ ನಾರಾಯಣ ಸೇರಿ ಹಲವರ ನಿರ್ಬಂಧಕ್ಕೆ ಸದನ ಸಮಿತಿ ಶಿಫಾರಸ್ಸು

Please login to join discussion

Recent News

Top Story

HD Kumarswamy: ಮೇಕೆದಾಟು; ತಮಿಳುನಾಡು ಸರ್ಕಾರವನ್ನು ಒಪ್ಪಿಸುವ ತಾಕತ್ತು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲ

by ಪ್ರತಿಧ್ವನಿ
July 5, 2025
Top Story

DK Shivakumar: ಕುಣಿಗಲ್ ಮಾತ್ರವಲ್ಲ, ತುಮಕೂರಿನ ಎಲ್ಲಾ ತಾಲೂಕು ನನಗೆ ಮುಖ್ಯ: ಡಿಸಿಎಂ ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
July 5, 2025
Top Story

Vijay Raghavendra: ಸಿನಿಮಾ ವಿಭಾಗದಲ್ಲಿ ಪ್ರಕಟಿಸಲು ಕೋರಿಜುಲೈ 25ಕ್ಕೆ ‘ಸ್ವಪ್ನಮಂಟಪ’ ಬಿಡುಗಡೆ

by ಪ್ರತಿಧ್ವನಿ
July 5, 2025
Top Story

Mallikarjuna Kharge: ರಾಜ್ಯದಲ್ಲಿ ಅರಣ್ಯ ಪ್ರದೇಶ ಬೆಳಸಿ ಪರಿಸರ ಉಳಿಸಿ: ಮಲ್ಲಿಕಾರ್ಜುನ ಖರ್ಗೆ ಒತ್ತಾಸೆ.

by ಪ್ರತಿಧ್ವನಿ
July 5, 2025
Top Story

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಯಾದಗಿರಿ..!

by ಪ್ರತಿಧ್ವನಿ
July 5, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

HD Kumarswamy: ಮೇಕೆದಾಟು; ತಮಿಳುನಾಡು ಸರ್ಕಾರವನ್ನು ಒಪ್ಪಿಸುವ ತಾಕತ್ತು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲ

July 5, 2025

DK Shivakumar: ಕುಣಿಗಲ್ ಮಾತ್ರವಲ್ಲ, ತುಮಕೂರಿನ ಎಲ್ಲಾ ತಾಲೂಕು ನನಗೆ ಮುಖ್ಯ: ಡಿಸಿಎಂ ಡಿ.ಕೆ. ಶಿವಕುಮಾರ್

July 5, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada