![](https://pratidhvani.com/wp-content/uploads/2024/07/WhatsApp-Image-2024-07-02-at-2.07.44-PM-1-1024x768.jpeg)
ಮಳೆಗಾಲ ಪ್ರಾರಂಭವಾಗಿರುವುದರಿಂದ ಗ್ರಾಮೀಣ ಪ್ರದೇಶದಲ್ಲಿ ಕಲುಷಿತ ನೀರುಗಳಿಂದ ದುಷ್ಟಪರಿಣಾಮ ಬೀರುವ ಸಾಧ್ಯತೆಗಳು ಹೆಚ್ಚಾಗಿರುವುದರಿಂದ ಗ್ರಾಮೀಣ ಪ್ರದೇಶದಲ್ಲಿ Field Test kit ಹಾಗೂ Vials ಮೂಲಕ ಕುಡಿಯುವ ನೀರನ್ನು ಪಂಚಾಯಿತಿ ಹಂತದಲ್ಲಿ ಪರಿಕ್ಷಿಸಕೊಳ್ಳಬಹುದು ಎಂದು ಬೀದರನ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಸಂಜೀವ ಕುಮಾರ ಶೆಳಕೆ ಅವರು ತಿಳಿಸಿದರು.
ಅವರು ಸೋಮವಾರ ಬೀದರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಲ ಜೀವನ್ ಮಿಷನ್ (JJM) ಮತ್ತು ಸ್ವಚ್ಛ ಭಾರತ ಮಿಷನ್ (ಗ್ರಾ), (SBM) ಯೋಜನೆಗಳಡಿಯಲ್ಲಿ ಮಾಹಿತಿ, ಶಿಕ್ಷಣ ಮತ್ತು ಸಂವಹನ ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿ ಕಾರ್ಯಗಳ ಕುರಿತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ Field Test kit (FTK) ಹಾಗೂ H2S Vialsಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಲುಷಿತ ನೀರು ಕಂಡುಬಂದರೆ ಕೂಡಲೆ ಅಂತಹ ಜಲ ಮೂಲಗಳನ್ನು ಸ್ಥಗಿತಗೊಳಿಸಬೇಕು ಎಂದು ಅವರು ಎಲ್ಲಾ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.
![](https://pratidhvani.com/wp-content/uploads/2024/07/WhatsApp-Image-2024-07-02-at-2.07.44-PM-1024x768.jpeg)
ಜಿಲ್ಲಾ ಕುಡಿಯುವ ನೀರು ತಪಾಸಣಾ ಪ್ರಯೋಗಾಲಯದ ಸಿಬ್ಬಂದಿಗಳಿಂದ Field Test kit ಹಾಗೂ H2S Vials ಬಳಸುವ ವಿಧಾನ ಹಾಗೂ ಕಲುಷಿತ ನೀರು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ವಿವರವಾದ ಮಾಹಿತಿಯನ್ನು ಎಲ್ಲಾ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ನೀಡಿದರು. ಈ ಸಂದರ್ಭದಲ್ಲಿ ಕಲುಷಿತ ನೀರಿನಿಂದ ಆಗುವ ದುಷ್ಪರಿಣಾಮಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಪೋಷ್ಟರ್ಗಳು ಹಾಗೂ ಪೊಕೇಟ್ ಹ್ಯಾಂಡ್ ಬುಕ್ಗಳನ್ನು ವಿತರಿಸಲಾಯಿತು.
![](https://pratidhvani.com/wp-content/uploads/2024/07/WhatsApp-Image-2024-07-02-at-2.07.44-PM-2-1024x554.jpeg)
ಈ ತರಬೇತಿ ಕಾರ್ಯಕ್ರಮದಲ್ಲಿ ಜಲ್ ಜೀವನ ಮಿಷನ್ ಯೋಜನೆಯ ಜಿಲ್ಲಾ ಯೋಜನಾ ವ್ಯಸ್ಥಾಪಕರಾದ ಪೇತ್ರು ಜೈವಂತ, ಪ್ರಯೋಗಾಲಯದ ಕ್ವಾಲಿಟಿ ಮ್ಯಾನೇಜರ್ ಆದ ಪ್ರದೀಪ ಪಾಟೀಲ್, ಭೂವಿಜ್ಞಾನಿಗಳಾದ ರಾಜೇಂದ್ರ ವಡೆಯರ ಸೇರಿದಂತೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಐ.ಎಸ್.ಎ ಮತ್ತು ಐ.ಎಸ್.ಆರ್.ಐ ಸಿಬ್ಬಂದಿಗಳು ಉಪಸ್ಥಿತರಿದ್ದರು.