• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, February 6, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಇದೀಗ

ಕಂದಾಯ ಇಲಾಖೆ ನೋಟಿಸ್: ರಾಜಕಾಲುವೆ ಹೂಳೆತ್ತಿ ತಾವೇ ರೆಡಿ ಮಾಡಿಸಿಕೊಳ್ಳುತ್ತಿದೆ ರೈನ್ ಬೋ ಡ್ರೈವ್ ಲೇಔಟ್ !!

Any Mind by Any Mind
September 20, 2022
in ಇದೀಗ, ಕರ್ನಾಟಕ
0
ಮಹಾದೇವಪುರದಲ್ಲಿ ಬಿಬಿಎಂಪಿಯಿಂದ ಆಪರೇಷನ್ ಬುಲ್ಡೋಜರ್!
Share on WhatsAppShare on FacebookShare on Telegram

ಬಿಬಿಎಂಪಿ ಹಾಗೂ ಕಂದಾಯ ಇಲಾಖೆಯವರು ಪಾಲಿಸಿರೋದು ದ್ವಂದ್ವ ನೀತಿ ಅನ್ನೋದು ಮೊದಲಿನಿಂದಲೂ ಗೊತ್ತಿರೋ ಸತ್ಯವೇ. ಆದ್ರೆ ಇತ್ತೀಚಿಗಂತೂ ಸಾಕ್ಷಿ ಸಮೇತ ಅವರ ದ್ವಂದ್ವ ನಿಲುವು ಸಾಬೀತಾಗ್ತಿವೆ. ಇದಕ್ಕೆ ಹೊಸ ನಿದರ್ಶನ ಅಂದ್ರೆ, ಮಹದೇವಪುರದಲ್ಲಿರೋ ರೈನ್‌ಬೋ ಡ್ರೈವ್ ಒತ್ತುವರಿ ವಿಚಾರ. 

ADVERTISEMENT

ಕೆಟ್ಟ ಮೇಲೆ ಬುದ್ದಿ ಕಲಿತ ರೈನ್‌ಬೋ ಡ್ರೈವ್ !!

ಸೆಪ್ಟೆಂಬರ್ ಮೊದಲ ವಾರದಲ್ಲಿ ಸುರಿದ ಧಾರಾಕಾರ ಮಳೆಗೆ ಮಹದೇವಪುರದ ರೈನ್‌ಬೋ ಡ್ರೈವ್ ಅಕ್ಷರಶಃ ಈಜುಕೊಳವಾಗಿತ್ತು. 3 ರಿಂದ 4 ಅಡಿ ನೀರು ಈ ಲೇಔಟ್‌ನಲ್ಲಿ ನಿಲ್ಲೋದಕ್ಕೆ ರಾಜಕಾಲುವೆ ಒತ್ತುವರಿಯೇ ಕಾರಣ ಅನ್ನೋದು ಸರ್ವೇಯಲ್ಲೂ ಸಾಬೀತಾಗಿತ್ತು. ಸುಮಾರು 30 ಅಡಿಯ ರಾಜಕಾಲುವೆಯನ್ನು ಕೇವಲ 3 ಅಡಿಗೆ ಇಳಿಸಲಾಗಿತ್ತು. ಉಳಿದ ಜಾಗವನ್ನು ಕಬಳಿಸಿಕೊಂಡು ತನ್ನ ಅನುಕೂಲಕ್ಕೆ ಲೇಔಟ್ ರೆಡಿಮಾಡಿಕೊಳ್ಳಲಾಗಿತ್ತು. ಅಕ್ರಮವಾಗಿ ಒತ್ತುವರಿ ಮಾಡಲಾಗಿರುವ ಜಾಗವನ್ನು ತೆರವು ಮಾಡುವ ವಿಚಾರವಾಗಿ ರೈನ್‌ಬೋ ಡ್ರೈವ್‌ಗೆ ನೊಟೀಸ್ ನೀಡಿದ್ದ ಕಂದಾಯ ಇಲಾಖೆಯ ಗಡುವು ನಿನ್ನೆಗೆ ಅಂತ್ಯವಾಗಿದೆ.

ಇಂದು ತೆರವು ಮಾಡಬೇಕಿದ್ದ ಸರ್ಕಾರಿ ಇಲಾಖೆಗಳು ಗಪ್‌ಚುಪ್ ಆಗಿದೆ. ಯಾಕಂದ್ರೆ ತಮ್ಮ ಸ್ವಂತ ಹಣದಲ್ಲೇ ನಾವೇ ತೆರವನ್ನು ಮಾಡಿಕೊಳ್ತೇವೆ. ಒತ್ತುವರಿಯಾಗಿರೋ ರಾಜಕಾಲವೆಯನ್ನು ನಾವೇ ಸರಿಪಡಿಸಿಕೊಳ್ತೇವೆ. ಬಿಬಿಎಂಪಿ ಹಾಗು ಕಂದಾಯ ಇಲಾಖೆಯ ನಿಯಮಗಳನ್ನು ಪಾಲಿಸುತ್ತೇವೆ ಅಂತ ರೈನ್‌ಬೋ ಡ್ರೈವ್ ನಿವಾಸಿಗಳು ಮನವಿ ಮಾಡಿದ್ರಂತೆ. ಇನ್ನು, ಇದು ಕಾನೂನಾತ್ಮಕವಾಗಿ ಸಾಧ್ಯವೇ ಅಂತ ನೊಟೀಸ್ ಜಾರಿಗೊಳಿಸಿದ್ದ ತಹಶೀಲ್ದಾರ್‌ರನ್ನು ಪ್ರಶ್ನಿಸಿದ್ರೆ ಅವರು ಹೇಳೋದು ಹೀಗೆ.

ಕಂದಾಯ ಇಲಾಖೆ ನೋಟಿಸ್ ನಾಟಕಕ್ಕೆ ಹೊಸ ತಿರುವು!

ಸೆಪ್ಟೆಂಬರ್ 12ರಂದು ಒಂದು ವಾರದ ಗಡುವು ಕೊಟ್ಟು ನೊಟೀಸ್ ಜಾರಿಗೊಳಿಸಲಾಗಿತ್ತು. ನಿನ್ನೆಗೆ ಅಂದ್ರೆ ಸೆಪ್ಟೆಂಬರ್ 18ಕ್ಕೆ ಗಡುವು ಮುಗಿದಿತ್ತು. ಇನ್ನೂ ಯಾಕೆ ತೆರವು ಮಾಡಿಲ್ಲ ಅಂತ ಬೆಂಗಳೂರು ಪೂರ್ವ ತಾಲೂಕಿನ ತಹಶೀಲ್ದಾರ್ ಅಜಿತ್ ರೈರನ್ನು ಪ್ರಶ್ನಿಸಿದ್ರೆ, ಕೇಸ್ ಈಗ ಕೋರ್ಟ್ ಮೆಟ್ಟಿಲೇರಿದೆ. ನಾವು ನಮ್ಮ ಕೆಲಸ ಮಾಡೋದು ಗೊತ್ತಿದೆ. ನೀವು ಆತಂಕಕ್ಕೆ ಒಳಗಾಗಬೇಡಿ ಅಂತ ಮಾಧ್ಯಮಗಳ ಮುಂದೆ ಹೀರೋಯಿಸಂ ಪ್ರದರ್ಶಿಸಿದ್ರು.

ಒಪ್ಪಂದವೇ? ಒತ್ತಡವೇ? ಅಥವಾ ಲೆಕ್ಕಾಚಾರವೇ?

ಬಡವರ ಮನೆಗಳನ್ನು ಮುಲಾಜಿಲ್ಲದೇ ಕೆಡವೋ ಅಧಿಕಾರಿಗಳು, ಶ್ರೀಮಂತರ ಹಾಗೂ ಪ್ರಭಾವಿಗಳ ವಿಚಾರಕ್ಕೆ ಬಂದಾಗ ಮಾತ್ರ 10 ಹೆಜ್ಜೆ ಹಿಂದೆಯೇ ಇರ್ತಾರೆ. ಒಂದು ಶ್ರೀಮಂತರ ಒತ್ತಡ ಇರಬಹುದು ಅಥವಾ ಒಪ್ಪಂದ ಆಗಿರಬಹುದು ಅನ್ನೋ ಸಾರ್ವಜನಿಕರ ಅಭಿಪ್ರಾಯ ಅಕ್ಷರಶಃ ನಿಜ ಎನಿಸುವಂತೆ ವರ್ತಿಸುತ್ತಿದ್ದಾರೆ ಈಗ.

Previous Post

ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ನಮೀಬಿಯಾ ಚೀತಾ: ಹೊಸ ಆತಂಕದಲ್ಲಿ ಸ್ಥಳೀಯ ಆದಿವಾಸಿಗಳು,ಗ್ರಾಮಸ್ಥರು

Next Post

ಅಪಾರ್ಟ್‌ ಮೆಂಟ್‌ ಕಟ್ಟಡದ ಗೋಡೆ ಕುಸಿದು ನಾಲ್ವರು ಕಾರ್ಮಿಕರು ಸಾವು

Related Posts

ಇಂಗ್ಲೆಂಡ್‌ ಬಗ್ಗು ಬಡೆದ “ಮರಿಹುಲಿಗಳು” : U19 ವಿಶ್ವಕಪ್‌ ಮುಡಿಗೇರಿಸಿಕೊಂಡ ಭಾರತ..
Top Story

ಇಂಗ್ಲೆಂಡ್‌ ಬಗ್ಗು ಬಡೆದ “ಮರಿಹುಲಿಗಳು” : U19 ವಿಶ್ವಕಪ್‌ ಮುಡಿಗೇರಿಸಿಕೊಂಡ ಭಾರತ..

by ಪ್ರತಿಧ್ವನಿ
February 6, 2026
0

ಬೆಂಗಳೂರು : ಜಿಂಬಾಬ್ವೆಯ ಪರಾರೆಯಲ್ಲಿ ನಡೆದ ಅಂಡರ್‌-19 ಕ್ರಿಕೆಟ್‌ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ ಭಾರತ ತಂಡ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಯುವ ಭಾರತ ತಂಡ...

Read moreDetails

ನಾವು ರಕ್ಷಣೆಗೆ ಬರಲ್ಲ, ನೀವಾಗಿಯೇ ಇರಾನ್‌ ಬಿಟ್ಟು ಬನ್ನಿ, : ಮುಸ್ಲಿಂ ರಾಷ್ಟ್ರದಲ್ಲಿನ ಅಮೆರಿಕನ್ನರಿಗೆ ಟ್ರಂಪ್‌ ಶಾಕ್..!

February 6, 2026
ಮಸೀದಿಯಲ್ಲಿ ಆತ್ಮಾಹುತಿ ಬಾಂಬ್‌ ಸ್ಫೋಟ : 30 ಜನರ ಬ**ಲಿ, ನೂರಾರು ಜನರಿಗೆ ಗಾಯ..!

ಮಸೀದಿಯಲ್ಲಿ ಆತ್ಮಾಹುತಿ ಬಾಂಬ್‌ ಸ್ಫೋಟ : 30 ಜನರ ಬ**ಲಿ, ನೂರಾರು ಜನರಿಗೆ ಗಾಯ..!

February 6, 2026
“ನಮ್ಮ ಮೆಟ್ರೋ” ದರ ಏರಿಕೆ: ಸಿಎಂ ಸಿದ್ದರಾಮಯ್ಯ ಹೇಳಿದ್ದೇನು..?

“ನಮ್ಮ ಮೆಟ್ರೋ” ದರ ಏರಿಕೆ: ಸಿಎಂ ಸಿದ್ದರಾಮಯ್ಯ ಹೇಳಿದ್ದೇನು..?

February 6, 2026
Supreme Court: ಮಗುವಿನ ಹಕ್ಕಿಗಿಂತ ತಾಯಿ ಹಕ್ಕು ಮುಖ್ಯ: 30ನೇ ವಾರದಲ್ಲೂ ಗರ್ಭಪಾ**ಕ್ಕೆ ಸುಪ್ರೀಂ ಅನುಮತಿ

Supreme Court: ಮಗುವಿನ ಹಕ್ಕಿಗಿಂತ ತಾಯಿ ಹಕ್ಕು ಮುಖ್ಯ: 30ನೇ ವಾರದಲ್ಲೂ ಗರ್ಭಪಾ**ಕ್ಕೆ ಸುಪ್ರೀಂ ಅನುಮತಿ

February 6, 2026
Next Post
ಅಪಾರ್ಟ್‌ ಮೆಂಟ್‌ ಕಟ್ಟಡದ ಗೋಡೆ ಕುಸಿದು ನಾಲ್ವರು ಕಾರ್ಮಿಕರು ಸಾವು

ಅಪಾರ್ಟ್‌ ಮೆಂಟ್‌ ಕಟ್ಟಡದ ಗೋಡೆ ಕುಸಿದು ನಾಲ್ವರು ಕಾರ್ಮಿಕರು ಸಾವು

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada