ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಯಾನಾಡ್ ಕಚೇರಿಯಲ್ಲಿ ಮಹಾತ್ಮ ಗಾಂಧಿ ಭಾವಚಿತ್ರ ಧ್ವಂಸ ಪ್ರಕರನಕ್ಕೆ ದೊಡ್ಡ ಟ್ವಿಸ್ಟ್ ಸಿಕ್ಕಿದ್ದು ಪ್ರಕರಣದ ಸಂಬಂಧ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ಘಟನೆ ಸಂಬಂಧ ಪೊಲೀಸರು ರಾಹುಲ್ ಗಾಂಧಿ ಕಚೇರಿ ಸಿಬ್ಬಂದಿ ಸೇರಿದಂತೆ ಇನ್ನಿಬ್ಬರನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ಆದರೆ, ಈ ವಿಚಾರವನ್ನ ಖಂಡಿಸಿರುವ ಕೇರಳ ಕಾಂಗ್ರೆಸ್ ನಾಯಕರು ಇದು ಆಡಳಿತ ಸರ್ಕಾರದ ಕುತಂತ್ರ ನೀತಿ ಎಂದು ಕಿಡಿಕಾರಿದ್ದಾರೆ.
ಸದ್ಯ ಪೊಲೀಸರು ರಾಹುಲ್ ಗಾಂಧಿ ಆಪ್ತ ಸಹಾಯಕ ರತೀಶ್ ಕುಮಾರ್, ಕಚೇರಿ ಸಿಬ್ಬಂದಿ ರಾಹುಲ್, ಕಾಂಗ್ರೆಸ್ ಕಾರ್ಯಕರ್ತರಾದ ನೌಶಾದ್, ಮುಜೀಬ್ ಬಂಧಿತರು.
ಜೂನ್ 24ರಂದು ವಯಾನಾಡ್ ಸಂರಕ್ಷಿತ ಅರಣ್ಯ ಪ್ರದೇಶವನ್ನ ಕೇಂದ್ರ ಸರ್ಕಾರ ಭಫರ್ ಜೋನ್ ಎಂದು ಘೋಷಿಸಿತ್ತು ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು ಬಫರ್ ಜೋನ್ ಎಂದು ಘೋಷಿಸಿದರೆ ಉದ್ಯೋಗ ಸೃಷ್ಟಿಯಾಗುವುದಿಲ್ಲ ಎಂದು ಸ್ಥಳೀಯರು ಹಾಗೂ ರಾಜಕೀಯ ಪಕ್ಷಗಳು ಆರೋಪಿಸಿದ್ದವು.
ಸ್ಥಳೀಯ ಸಂಸದರಾದ ರಾಹುಲ್ ಗಾಂಧಿ ಈ ಬಗ್ಗೆ ಧ್ವನಿ ಎತ್ತಬೇಕು ಮತ್ತು ಬಫರ್ ಜೋನ್ನಿಂದ ತೆಗೆಸಿಹಾಕಬೇಕು ಎಂದು ಆಗ್ರಹಿಸಿ SFI ಸಂಘಟನೆಯವರು ರಾಹುಲ್ ಗಾಂಧಿ ಕಚೇರಿ ಮುತ್ತಿಗೆ ಹಾಕಿ ಧ್ವಂಸ ಮಾಡಿದ್ದರು.
ಘಟನೆ ಕುರಿತು ಮಾತನಾಡಿದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ SFI ಕಾರ್ಯಕರ್ತರು ಗಾಂಧೀಜಿ ಪೋಟೋವನ್ನು ಒಡೆದು ಹಾಕಿಲ್ಲ ಪೋಟೋಗೆ ಹಾನಿಯಾದ ಸಮಯದಲ್ಲಿ ಅಲ್ಲಿದಿದ್ದು ಕಾಂಗ್ರೆಸ್ ಕಾರ್ಯಕರ್ತರು ಎಂದು ಆರೋಪಿಸಿದ್ದರು.