ಈ ಹಿಂದೆ ರಾಹುಲ್ ಗಾಂಧಿ ಅರೆಹುಚ್ಚ ಎಂಬ ಹೇಳಿಕೆ ನೀಡಿದ್ದ ಬಸನಗೌಡ ಯತ್ನಾಳ್ ಪಾಟೀಲ್, ತಮ್ಮ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ. ಗದಗ ಜಿಲ್ಲೆಯಲ್ಲಿ ಮಾತನಾಡಿದ ಅವರು, ʻಬಟಾಟಿಯಿಂದ ಬಂಗಾರ ತೆಗೆದರೆ ಶಾಣ್ಯಾ ಅಂತಾರೆಯೇ?, ಒಂದು ಲೀಟರ್ ಗೋಧಿ ಅಂದ್ರೆ ಶಾಣ್ಯಾ ಅಂತಾರೆಯೇ? 200 ಲೀಟರ್ ಕರೆಂಟ್ ಕೊಡ್ತೀನಿ ಅಂದ್ರೆ ಶಾಣ್ಯಾ ಅಂತಾರೆನ್ರಿ…?ರಾಹುಲ್ ಗಾಂಧಿಯಂಥ ಬುದ್ಧಿವಂತ ರಾಜಕಾರಣಿ ಇಡೀ ವಿಶ್ವದಲ್ಲೇ ಹುಟ್ಟಿಲ್ಲ ಅಂತ ಬರೆಯಿರಿ. ನಮಗೇನಾಬೇಕು? ಅಂತ ಬಸನಗೌಡ ಯತ್ನಾಳ್ ಪಾಟೀಲ್ ತಮ್ಮ ಹೇಳಿಕೆಗೆ ತೇಪೆ ಹಚ್ಚಿದರು. ಅಲ್ಲದೇ ಸೋನಿಯಾ ಗಾಂಧಿ ವಿಷ ಕನ್ಯೆ ಎಂಬ ಹೇಳಿಕೆ ನೀಡಿದ್ದ ಯತ್ನಾಳ್, ಇದೀಗ ʻನಾನು ಸೋನಿಯಾ ಗಾಂಧಿ ವಿಷಕನ್ಯೆಯೇ ಅಂತಾ ಕ್ವಷನ್ ಮಾರ್ಕ್ ಇಟ್ಟಿದ್ದೇನೆ. ಪ್ರಧಾನಿಗಳು ವಿಷ ಸರ್ಪ ಅಂದಾಗ, ಸೋನಿಯಾ ಗಾಂಧಿ ವಿಷಕನ್ಯೆಯೇ? ಅಂತ ಪ್ರಶ್ನೆ ಹಾಕಿದ್ದೇನೆ. ಹೌದೋ ಅಲ್ಲವೋ ಅನ್ನೋದನ್ನ ಖರ್ಗೆ ಹೇಳಬೇಕು, ರಾಹುಲ್ ಗಾಂಧಿ ಹೇಳಬೇಕು ಅಂತ ಹೇಳಿದ್ರು.
![](https://pratidhvani.com/wp-content/uploads/2023/05/llefbhag_sonia-gandhi-rahul-gandhi-cwc-pti-_625x300_10_August_19.webp)
ಪ್ರಧಾನಿ ಮೋದಿಗೆ ಪ್ರಿಯಾಂಕ್ ಖರ್ಗೆ ನಾಲಾಯಕ್ ಎಂಬ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಯತ್ನಾಳ್, ʻನಾವು ಅವರಿಗೆ ಗೌರವ ಕೊಡ್ತಿದ್ದೇವೆ. ದಲಿತ ಮುಖಂಡರಿದ್ದಾರೆಂದು ಇಷ್ಟು ದಿನ ಗೌರವ ಕೊಡ್ತಿದ್ದೇವೆ. ಏನಾದರು ಅಂದ ತಕ್ಷಣ ಅದನ್ನ ಒಯ್ದು ದಲಿತರಿಗೆ ಹಚ್ಚತಾರೆ. ಈಗಿನ ರಾಜಕಾರಣ ಜಾತಿಗೆ ಒಯ್ದು ಹಚ್ಚುತ್ತಾರೆ. ಹಾಗಂತ ಸುಮ್ಮನೇ ಕೂತಿದ್ದೇವೆ ಅಂದ್ರೆ, ಅದರರ್ಥ,ಅವರಾಗಿಯೇ ಸತ್ಯಾನಾಶ ಆಗುತ್ತಿದ್ದಾರೆ. ಸುಮ್ಮನೇ ಪಾಪ ಖರ್ಗೆ ಬಗ್ಗೆ ಯಾಕೆ ಮಾತನಾಡಬೇಕು. ಪ್ರಿಯಾಂಕ್ ಖರ್ಗೆಗೆ ಇನ್ನೂ ಸಹ ಮ್ಯಾಚುರಿಟಿ ಇಲ್ಲ. ಇವರಿಗೆಲ್ಲ ಹಿಂದೂಗಳ ವಿರುದ್ಧ ಮಾತನಾಡಿದರೆ ಖುಷಿʼ ಅಂತ ಹೇಳಿದ್ರು.
![](https://pratidhvani.com/wp-content/uploads/2023/05/23bgyatnal-1-1024x576.jpg)
ʻಸಿದ್ಧಗಂಗಾ ಸ್ವಾಮಿಗಳು ಲಿಂಗೈಕ್ಯರಾದಾಗ AIMM ನ ಒಎಸಿ ಕಾನ್ಫುರೆನ್ಸ್ ಮಾಡ್ತಾರೆ. ಬೆಂಗಳೂರಿನ ಸ್ಟಾರ್ ಹೋಟೆಲ್ನಲ್ಲಿ ದಲಿತ ಹಾಗೂ ಮುಸ್ಲಿಮರ ಕಾನ್ಫುರೆನ್ಸ್ ಮಾಡ್ತಾರೆ. ಸಿದ್ಧಗಂಗಾ ಮಠದ ಶ್ರೀಗಳು ಲಿಂಗೈಕ್ಯರಾದಾಗ ಪ್ರಿಯಾಂಕ್ ಖರ್ಗೆ ಇದನ್ನ ಮಾಡುತ್ತಾರೆ. ಮಾತಿಗೊಮ್ಮೆ ಬಾಬಾಸಾಹೇಬ ಅಂಬೇಡ್ಕರ್ರವರನ್ನ ತೆಗೆದುಕೊಳ್ತಾರೆ. ಕಾಂಗ್ರೆಸ್ ಅನ್ನುವದು ನಮ್ಮ ದಲಿತರ ಮಾರಣಹೋಮ ಮಾಡುವಂಥದ್ದು ಅಂತಾ ಅಂಬೇಡ್ಕರ್ ಹೇಳಿದ್ದರು. ಅದಕ್ಕೆ ಯಾರೂ ಹೋಗಬೇಡಿ ಅಂತ ಹೇಳಿದ್ದರು. ಹಾಗಾದ್ರೆ ಬಾಬಾಸಾಹೇಬ ಅಂಬೇಡ್ಕರ್ ಹೇಳಿದಂತೆ ಖರ್ಗೆ ನಡೆಯಬೇಕಿತ್ತು. ಅಂಬೇಡ್ಕರವರನ್ನ ಕಾಂಗ್ರೆಸ್ ನವರು ಸಾಕಷ್ಟುಅವಮಾನ ಮಾಡಿದ್ದಾರೆ. ವೀರಸಾವರ್ಕರ್ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ದೇಶದ ಪ್ರಧಾನಿಗಳ ಬಗ್ಗೆ ಬಾಯಿಗೆ ಬಂದಂತೆ ಮಾತಾಡಿದ್ದಾರೆ. ರಾಹುಲ್ ಗಾಂಧಿ, ಸೋನಿಯಾ ಗಾಂಧಿಗೆ ನೈತಿಕತೆಯೇ ಇಲ್ಲ. ಅವ್ರು ಯಾರೋ? ಯಾರಿಗೆ ಯಾರೋ? ಅವರು ಯಾರ ಉತ್ಪಾದನೇಯೋ, ಯಾವ ಪ್ರೊಡಕ್ಷನ್ ಇದೆಯೋ ಗೊತ್ತಿಲ್ಲ. ಮೈಕೋ ಅಥವಾ ಎಮ್ ಎಸ್ ಆಫೀಸ್ ಒನ್ ಇದೆಯೋ ಗೊತ್ತಿಲ್ಲ. ಅದು ಇಂಡಿಯನ್ ಕೂಡ ಅಲ್ಲ. ಇಂಡಿಯನ್ ತಲೆ ಇದ್ರೆ ಈ ರೀತಿ ಆಗುವದೂ ಇಲ್ಲ ಅಂತ ಗದಗನಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದ್ರು.
![](https://pratidhvani.com/wp-content/uploads/2023/05/48f35854-65b1-4c4e-8c2d-9e4348c5debb-4-1024x143.jpg)