ಮಂಡ್ಯದ ನಾಗಮಂಗಲದಲ್ಲಿ (Nagamangala) ನಡೆದ ಘಟನೆ ಬಗ್ಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ (Dr.G.Parameshwar) ಲಗುವಾಗಿ ಪ್ರತಿಕ್ರಿಯಿದ್ದಾರೆ. ಈ ರೀತಿ ಆಗಬಾರದಿತ್ತು, ನಡೆದು ಹೋಗಿದೆ. ಆದ್ರೆ ಪೋಲಿಸರು ತಕ್ಷಣ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ ಎಂದು ತಮ್ಮ ಇಲಾಖೆಯ ಬೆನ್ನು ತಟ್ಟಿಕೊಂಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಗೃಹಸಿವರು, ಈ ಗಟನೆ ಸಣ್ಣದಾಗಿ ಆರಂಭವಾಗಿದೆ, ಆದ್ರೆ ಅದನ್ನು ದೊಡ್ಡದಾಗಲು ಬಿಡದೆ ಪೋಲಿಸರು ಕ್ರಮ (Police) ಕೈಗೊಂಡಿದ್ದಾರೆ ಎಂದು ಹೇಳಿದ ಮಾತು ಮೈತ್ರಿ ನಾಯಕರನ್ನು ಕೆರಳಿಸಿದೆ. ಹೀಗಾಗಿ ವಿರೋಧ ಪಕ್ಷದ ನಾಯಕ ಆರ್.ಅಶೋಕ್ (R ashok) ಗೃಹ ಸಚಿವರ ವಿರುದ್ಧ ಕಿಡಿಕಾರಿದ್ದಾರೆ.
ಇದನ್ನು ಸಣ್ಣ ಘಟನೆ ಎಂದ ಗೃಹ ಸಚಿವರ ಹೇಳಿಕೆ ಅರ್ಥವೇನು ? ಹಾಗಿದ್ರೆ ಈ ಘಟನೆ ಇನ್ನೂ ದೊಡ್ಡದಾಗಬೇಕಿತ್ತಾ ಎಂದು ಆರ್ ಅಶೋಕ್ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ನಾಯಕರು (congress) ಮೊದಲು ಈ ಓಲೈಕೆ ಮತ್ತು ತುಷ್ಟಿಕರಣದ ರಾಜಕಾತಣ ಮಾಡುವುದನ್ನು ಬಿಡಬೇಕು ಎಂದು ಬಿಜೆಪಿ ನಾಯಕರು ಹರಿಹಾಯ್ದಿದ್ದಾರೆ.