ನಂಜನಗೂಡಿನಲ್ಲಿ ಜಿಲ್ಲಾಡಳಿತದಿಂದ ದೇವಸ್ಥಾನವನ್ನು ನೆಲಸಮಗೊಳಿಸಿದ ವಿಚಾರವಾಗಿ ಇಂದು ನಂಜನಗೂಡಿನ ಮಾಜಿ ಶಾಸಕ ಕಳಲೆ ಕೇಶವಮೂರ್ತಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರುಗಳು ಮತ್ತು ಮಾಜಿ ಶಾಸಕರಿಂದ ಬೃಹತ್ ಪ್ರತಿಭಟನೆಯನ್ನು ನಡೆಸಲಾಯಿತು.
ಹುಚ್ಚಗಣಿ ಗ್ರಾಮದ ಶ್ರೀ ಶಕ್ತಿ ಮಹಾದೇವಿ ದೇವಾಲಯವು ನೂರಾರು ವರ್ಷಗಳ ಪುರಾತನ ದೇವಾಲಯವಾಗಿತ್ತು 33 ಹಳ್ಳಿಗಳ ಸಾವಿರಾರು ಭಕ್ತರು ದಿನನಿತ್ಯ ಶ್ರೀ ಶಕ್ತಿ ಮಹಾದೇವಿ ದೇವಾಲಯದಲ್ಲಿ ಪೂಜೆ ಪುನಸ್ಕಾರ ಸಲ್ಲಿಸುತ್ತಿದ್ದರು. ಇದರಿಂದ, ನಂಜನಗೂಡು ತಾಲ್ಲೂಕಿನ ಹುಚ್ಚ ಗಣಿ ಮತ್ತು ಸುತ್ತಮುತ್ತಲ 33ಹಳ್ಳಿಗಳ ಭಕ್ತರ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ .
ಬಿಜೆಪಿ ಸರ್ಕಾರದ ಧೋರಣೆ ಮತ್ತು ನಿರ್ಲಕ್ಷ್ಯತನದಿಂದ ಈಗ ಮಹಾದೇವಿ ದೇವಾಲಯ ನೆಲಸಮವಾಗಿದೆ ಸರ್ಕಾರ ಅಧಿಕಾರಿಗಳಿಗೆ ಕುಮ್ಮಕ್ಕು ನೀಡಿ ದೇವಸ್ಥಾನವನ್ನು ನೆಲಸಮಗೊಳಿಸಿರುವುದು ಅಕ್ಷಮ್ಯ ಅಪರಾಧ ಹಾಗೂ ಖಂಡನೀಯ ಕೂಡಲೇ ರಾಜ್ಯ ಸರ್ಕಾರ ಎಚ್ಚೆತ್ತು ಸಂಬಂಧಪಟ್ಟ ಅಧಿಕಾರಿಗಳ ತಲೆದಂಡ ಆಗಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದ್ದಾರೆ.
![](https://pratidhvani.com/wp-content/uploads/2021/09/WhatsApp-Image-2021-09-14-at-4.14.31-PM-1024x461.jpeg)
ಈಗ ಹುಚ್ಚಗಣಿ ಗ್ರಾಮದ ಭಕ್ತರೊಬ್ಬರು 5ಗುಂಟೆ ಜಮೀನನ್ನು ದೇವಾಲಯ ನಿರ್ಮಾಣಕ್ಕೆ ದಾನವಾಗಿ ನೀಡಿದ್ದಾರೆ ಆ 5ಗುಂಟೆ ಜಮೀನಿನಲ್ಲಿ ದೇವಾಲಯದ ನಿರ್ಮಾಣ ಕಾರ್ಯವನ್ನು ಸರ್ಕಾರವೇ ಭರಿಸಿ ಕೊಡಬೇಕು ಸುಸಜ್ಜಿತವಾಗಿ 1ಕೋಟಿ ರೂ ಮೊತ್ತದಲ್ಲಿ ದೇವಾಲಯ ಪುನರ್ ನಿರ್ಮಾಣವನ್ನು ಸರ್ಕಾರವೇ ನೆರವೇರಿಸಬೇಕು ಎಂಬ ಆಗ್ರಹ ಕೇಳಿ ಬಂದಿದೆ.
ರಾಜ್ಯಾದ್ಯಂತ ದೇವಾಲಯಗಳನ್ನು ನೆಲಸಮ ಮಾಡಿ ಬಿಜೆಪಿ ಪಕ್ಷ ಭಕ್ತರ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡುತ್ತಿದೆ ಬಿಜೆಪಿ ಪಕ್ಷದ ಸಂಸದರು ಮತ್ತು ಶಾಸಕರ ವಿರುದ್ಧ ಈ ವೇಳೆ ಕಾಂಗ್ರೆಸ್ ಮುಖಂಡರು ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇವಾಲಯ ನೆಲಸಮ ಮಾಡಲು ನೇತೃತ್ವ ವಹಿಸಿದ ತಹಸೀಲ್ದಾರ್ ಮತ್ತು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಈ ವೇಳೆ ಕಾಂಗ್ರೆಸ್ ಮುಖಂಡರು ದೇವಸ್ಥಾನವನ್ನು ಪುನರ್ ಸ್ಥಾಪಿಸುವಂತೆ ಮನವಿ ಪತ್ರ ಸಲ್ಲಿಸಿದ್ದಾರೆ.