• Home
  • About Us
  • ಕರ್ನಾಟಕ
Friday, June 27, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಲಾಭಕೋರ ಆರ್ಥಿಕತೆಯೂ ಅಮಾಯಕ ಜೀವಗಳೂ

ನಾ ದಿವಾಕರ by ನಾ ದಿವಾಕರ
February 1, 2025
in Top Story, ಕರ್ನಾಟಕ, ವಾಣಿಜ್ಯ, ವಿಶೇಷ, ಶೋಧ
0
ಲಾಭಕೋರ ಆರ್ಥಿಕತೆಯೂ ಅಮಾಯಕ ಜೀವಗಳೂ
Share on WhatsAppShare on FacebookShare on Telegram

ಮೈಕ್ರೋಫೈನಾನ್ಸ್‌ ಕಂಪನಿಗಳು ತಳಸ್ತರದ ಜನತೆಯ ಬದುಕನ್ನು ಮತ್ತಷ್ಟು ದುರ್ಭರಗೊಳಿಸುತ್ತಿವೆ 

ADVERTISEMENT

ನಾ ದಿವಾಕರ

ಭಾಗ 1

1990ರ ದಶಕದಲ್ಲಿ ಭಾರತವನ್ನು ಪ್ರವೇಶಿಸಿದ ಜಾಗತೀಕರಣದ ಆರ್ಥಿಕ ನೀತಿಗಳು ದೇಶದ ಬಂಡವಾಳಶಾಹಿ ಮಾರುಕಟ್ಟೆ ಮತ್ತು ಕಾರ್ಪೋರೇಟ್‌ ಔದ್ಯಮಿಕ ವಲಯವನ್ನು ವಿಶ್ವದರ್ಜೆಗೆ ಏರಿಸಿದೆ.   ಇದರ ಫಲಾನುಭವಿಗಳು ನವ ಆರ್ಥಿಕತೆಯ ಎಲ್ಲ ವಲಯಗಳಲ್ಲೂ ಹರಡಿದ್ದು, ಇದರಿಂದ ಉತ್ಪತ್ತಿಯಾಗುವ  ಲಾಭವನ್ನು ಬಾಚಿಕೊಳ್ಳುವಲ್ಲಿ ಸಫಲರಾಗಿದ್ದಾರೆ. ವರ್ತಮಾನದ ಭಾರತವನ್ನು ನಿಯಂತ್ರಿಸುತ್ತಿರುವ ಹಾಗೂ ಆಡಳಿತಾತ್ಮಕವಾಗಿ ಪ್ರಭಾವಿಸುತ್ತಿರುವ ಒಂದು ಸಮಾಜವು ಬಂಡವಾಳಶಾಹಿ ಅಭಿವೃದ್ಧಿ ಪಥದ  ಎಲ್ಲ ಮಜಲುಗಳನ್ನೂ ಆಕ್ರಮಿಸುತ್ತಲೇ, ತಳಸ್ತರ ಸಮಾಜದ ಬಹುಸಂಖ್ಯಾತ  ಜನತೆಯನ್ನು ಪರಾವಲಂಬಿಗಳನ್ನಾಗಿ ಮಾಡುತ್ತಿರುವುದು ವಾಸ್ತವ. ಕಳೆದ ಹತ್ತು ವರ್ಷಗಳ ಆರ್ಥಿಕ ಬೆಳವಣಿಗೆಯಲ್ಲಿ ಈ ಗಣ್ಯ ವರ್ಗದ (Elite Class) ಹಿತಾಸಕ್ತಿಗಳೇ ಆರ್ಥಿಕ ನೀತಿಗಳನ್ನು ನಿರ್ದೇಶಿಸುತ್ತಿದ್ದು, ಇದು ಅಸಮಾನತೆಯನ್ನು ಹೆಚ್ಚಿಸುತ್ತಲೇ ಬಂದಿದೆ.

ಇದರ ಒಂದು ಪರಿಣಾಮವನ್ನು ದೇಶದ ಜನಸಾಮಾನ್ಯರಿಗೆ ಜೀವನಾವಶ್ಯ ಹಣಕಾಸು ನೆರವು ಒದಗಿಸುವ ಬ್ಯಾಂಕಿಂಗ್‌ ವಲಯದಲ್ಲಿ ಸ್ಪಷ್ಟವಾಗಿ ಗುರುತಿಸಬಹುದು. ಜಾಗತೀಕರಣದೊಂದಿಗೇ ಚಾಲನೆ ಪಡೆದುಕೊಂಡ ಬ್ಯಾಂಕಿಂಗ್‌ ಸುಧಾರಣಾ ಕ್ರಮಗಳು, ಸಾರ್ವಜನಿಕ ಬ್ಯಾಂಕುಗಳನ್ನೂ ತಳಸಮಾಜದಿಂದ ದೂರ ಮಾಡಿದ್ದು, ತಮ್ಮ ನಿತ್ಯ ಬದುಕಿನ ಅವಶ್ಯಕತೆಗಳಿಗಾಗಿ ಜನರು ಖಾಸಗಿ ಹಣಕಾಸು ಮೂಲಗಳನ್ನೇ ಅವಲಂಬಿಸುವಂತೆ ಮಾಡಿದೆ. ಮೂರು ನಾಲ್ಕು ದಶಕಗಳ ಕಾಲ ಸಮಾಜದ ಕೆಳಸ್ತರದ ಜೀವನವನ್ನು ಸುಗಮಗೊಳಿಸುವಂತಹ ಆರ್ಥಿಕ ನೀತಿಗಳನ್ನು ಅನುಸರಿಸಿದ ಭಾರತದ ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ಸಾರ್ವಜನಿಕ ಬ್ಯಾಂಕುಗಳಿಗೆ ಪ್ರತಿಸ್ಪರ್ಧಿಯಾಗಿ ಖಾಸಗಿ ಬ್ಯಾಂಕ್‌ ಮತ್ತು ಹಣಕಾಸು ಸಂಸ್ಥೆಗಳಿಗೆ ಮುಕ್ತ ಪ್ರವೇಶ ನೀಡಿದ ಕಾರಣ  ಇಂದು ಬಡ ಜನತೆಯ ಚಕ್ರಬಡ್ಡಿಯ ಸುಳಿಯಲ್ಲಿ ಸಿಲುಕುವಂತಾಗಿದೆ.

ತಮ್ಮ ನಿತ್ಯ ಜೀವನದ ಅಗತ್ಯಗಳಿಗೆ ಹಣಕಾಸು ನೆರವು ಕೋರಿ ಸಾರ್ವಜನಿಕ ಬ್ಯಾಂಕುಗಳ ಕದ ತಟ್ಟುವ ಆಯ್ಕೆಯನ್ನು ತಳಸಮಾಜ ಕಳೆದುಕೊಂಡಿದೆ. ಔದ್ಯಮಿಕ ಪ್ರಗತಿ ಮತ್ತು ಬಂಡವಾಳ ಪ್ರೇರಿತ ವಾಣಿಜ್ಯೋದ್ಯಮದ ಅಭಿವೃದ್ಧಿಯನ್ನೇ ಆರ್ಥಿಕ ಅಭಿವೃದ್ಧಿಯ ಮಾನದಂಡವಾಗಿ ಪರಿಗಣಿಸುವ ನವ ಉದಾರವಾದಿ ನೀತಿಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡುವ ಮೂಲಕ ಮಾರುಕಟ್ಟೆ ಆರ್ಥಿಕತೆಯು ಬಡಜನತೆಗೆ ಲಾಭಕೋರ ಸ್ಥಳೀಯ ಬಂಡವಾಳಿಗರನ್ನೇ ಅವಲಂಬಿಸುವಂತೆ ಮಾಡಿದೆ. ಖಾಸಗಿ ಲೇವಾದೇವಿ ವ್ಯವಹಾರಗಳು ಇಂದಿಗೂ ವ್ಯಾಪಕವಾಗಿ ಚಾಲ್ತಿಯಲ್ಲಿರುವ ಭಾರತದ ಕೆಳಸ್ತರದ ಆರ್ಥಿಕತೆಯಲ್ಲಿ, ಇದರ ಸಾಂಸ್ಥಿಕ ಸ್ವರೂಪವನ್ನು ಈಗ ಸಮಾಜವನ್ನು ಕಾಡುತ್ತಿರುವ ಮೈಕ್ರೋ ಫೈನಾನ್ಸ್‌ ಅಥವಾ ಕಿರು ಸಾಲದ ಹಾವಳಿಯಲ್ಲಿ ಗುರುತಿಸಬಹುದು.

ಖಾಸಗಿ ಲೇವಾದೇವಿ ಮತ್ತು ಬ್ಯಾಂಕಿಂಗ್

ದೇಶದ ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ನಗರಗಳಲ್ಲೂ ಸಹ ಖಾಸಗಿ ಲೇವಾದೇವಿ ವ್ಯವಹಾರಗಳು ಅನಿಯಂತ್ರಿತವಾಗಿ ನಡೆಯುತ್ತಲೇ ಇವೆ. ಮೀಟರ್‌ ಬಡ್ಡಿ ಎಂದೇ ಕರೆಯಲಾಗುವ ಈ ವಹಿವಾಟುಗಳಲ್ಲಿ ಸಿಲುಕುವ ಜನರು ಬಹುಮಟ್ಟಿಗೆ ಸಣ್ಣ ವ್ಯಾಪಾರ ವಲಯವನ್ನು ಪ್ರತಿನಿಧಿಸುತ್ತಾರೆ. ತಳಸ್ತರದ ಸಮಾಜದಲ್ಲಿ ತಮ್ಮ ಕೌಟುಂಬಿಕ ನಿರ್ವಹಣೆಗಾಗಿ ಹಣಕಾಸು ನೆರವನ್ನು ಆಶ್ರಯಿಸುವ ಕೆಳಮಧ್ಯಮ ವರ್ಗಗಳು ಹಾಗೂ ಬಡ ಜನತೆ ಈ ದಂಧೆಯ ಮುಖ್ಯ ಗುರಿಯಾಗಿರುತ್ತಾರೆ. ತಮ್ಮ ವ್ಯಾಪಾರ ಅಥವಾ ಉದ್ಯೋಗದಿಂದ ಗಳಿಸುವ ವರಮಾನವು ಸುಸ್ಥಿರ ಬದುಕು ನಡೆಸಲು ಸಾಲದೆ ಹೋದಾಗ, ಸಹಜವಾಗಿಯೇ ಬಾಹ್ಯ ಮಾರುಕಟ್ಟೆಯನ್ನು ಆಶ್ರಯಿಸಬೇಕಾಗುತ್ತದೆ. ಸಾರ್ವಜನಿಕ ಬ್ಯಾಂಕುಗಳು ಮುಖ್ಯವಾಹಿನಿಯನ್ನು ಪ್ರತಿನಿಧಿಸುತ್ತಿದ್ದ ಕಾಲಘಟ್ಟದಲ್ಲಿ ಈ ಅವಶ್ಯಕತೆಗಳನ್ನು ನೀಗುವ ಹಣಕಾಸು ಸೌಲಭ್ಯಗಳನ್ನು ಒದಗಿಸಲು ಮುಂದಾಗುತ್ತಿದ್ದವು. ತುರ್ತುಪರಿಸ್ಥಿತಿ ಸಂದರ್ಭದ 20 ಅಂಶಗಳ ಕಾರ್ಯಕ್ರಮ ಇಂತಹ ಒಂದು ಉಪಯುಕ್ತ ಯೋಜನೆಯಾಗಿತ್ತು.

ಆದರೆ ಬ್ಯಾಂಕಿಂಗ್‌ ಸುಧಾರಣಾ ಕ್ರಮಗಳು ಸಾರ್ವಜನಿಕ ಬ್ಯಾಂಕುಗಳನ್ನೂ ಸಹ ಸ್ಪರ್ಧಾತ್ಮಕ ಮಾರುಕಟ್ಟೆಯ ಒಂದು ಭಾಗವನ್ನಾಗಿ ಮಾಡಿದ್ದು, ಬ್ಯಾಂಕಿಂಗ್‌ ವಲಯವು ತನ್ನ ಜನೋಪಯೋಗಿ ರೂಪವನ್ನು ಸಂಪೂರ್ಣವಾಗಿ ಕಳೆದುಕೊಂಡಿದೆ. ಹಾಗಾಗಿಯೇ ಖಾಸಗಿ ಬ್ಯಾಂಕುಗಳಿಗೆ ಸಮಾನಾಂತರವಾಗಿ ಸಾಲ ಸೌಲಭ್ಯಗಳನ್ನು ಒದಗಿಸುವ ʼ ಮೈಕ್ರೋ ಫೈನಾನ್ಸ್‌ ʼ ಕಂಪನಿಗಳು ನಾಯಿಕೊಡೆಗಳಂತೆ ಹುಟ್ಟಿಕೊಂಡಿವೆ. ಕರ್ನಾಟಕದಲ್ಲಿ ಮೈಕ್ರೋಫೈನಾನ್ಸ್‌ ಹಾವಳಿಯಿಂದ ಸಂಭವಿಸುತ್ತಿರುವ ಆತ್ಮಹತ್ಯೆ ಪ್ರಕರಣಗಳು ಈ ಬೆಳವಣಿಗೆಗಗಳ ಕರಾಳ ಮುಖವನ್ನು ಪರಿಚಯಿಸುತ್ತಿದೆ. ಸಾಮಾನ್ಯ ಕೆಳ ಮಧ್ಯಮ ವರ್ಗಗಳು ಏಕೆ ಖಾಸಗಿ ಸಾಲಗಳಿಗೆ ದುಂಬಾಲು ಬೀಳುತ್ತಾರೆ ಎನ್ನುವ ಪ್ರಶ್ನೆ ನಮ್ಮನ್ನು ಕಾಡಬೇಕಿದೆ. ಒಂದೆಡೆ ಸರ್ಕಾರಿ ಸಾಂಸ್ಥಿಕ ವಲಯವು ಈ ಜವಾಬ್ದಾರಿಯಿಂದ ನುಣುಚಿಕೊಂಡಿದ್ದರೆ ಮತ್ತೊಂದೆಡೆ ಖಾಸಗಿ ಸ್ಥಳೀಯ ಸಣ್ಣ ಬಂಡವಾಳಿಗರು ಈ ಅವಕಾಶವನ್ನು ಬಳಸಿಕೊಳ್ಳುತ್ತಿರುವುದನ್ನು ಗಮನಿಸಬೇಕಿದೆ.

ಈಗ ಅಧಿಕೃತವಾಗಿ ನೋಂದಾಯಿತವಾಗಿರುವ ಅಥವಾ ಅಕ್ರಮವಾಗಿ ನಡೆಸಲಾಗುತ್ತಿರುವ ಮೈಕ್ರೋ ಫೈನಾನ್ಸ್‌ ಕಂಪನಿಗಳು ಒದಗಿಸುತ್ತಿದ್ದ ಹಣಕಾಸು ಸಾಲ, ಭಾರತದ ತಳಸ್ತರದ ಆರ್ಥಿಕತೆಯಲ್ಲಿ ಖಾಸಗಿ ಲೇವಾದೇವಿಯ ರೂಪದಲ್ಲಿ ಮೊದಲಿನಿಂದಲೂ ಚಾಲ್ತಿಯಲ್ಲಿದೆ. ಲೇವಾದೇವಿ ವ್ಯವಹಾರವನ್ನು ನಿಯಂತ್ರಿಸುವ ಕಾಯ್ದೆಯು ಜಾರಿಯಲ್ಲಿದ್ದರೂ, ಗ್ರಾಮೀಣ ಪ್ರದೇಶಗಳಲ್ಲಿ ಇದು ತೆರೆಮರೆಯಲ್ಲೇ ಅಕ್ರಮವಾಗಿ ನಡೆಯುತ್ತಿದ್ದು, ನಗರ ಪ್ರದೇಶಗಳಲ್ಲೂ ವ್ಯಾಪಿಸಿದೆ. ಪ್ರತಿದಿನ ಮುಂಜಾನೆ ಸಾಲ ನೀಡಿ ಸಂಜೆಗೆ ವಸೂಲಿ ಮಾಡುವ ಒಂದು ದಂಧೆ ಎಲ್ಲ ಮಾರುಕಟ್ಟೆಗಳಲ್ಲೂ ಕಂಡುಬರುತ್ತದೆ. ಈ ಕರಾಳ ಆರ್ಥಿಕತೆ (Black Economy)ಯ ಹಿಂದಿರುವ ರಿಯಲ್‌ ಎಸ್ಟೇಟ್‌, ಔದ್ಯಮಿಕ ಹಿತಾಸಕ್ತಿಗಳು ಹಾಗೂ ಸಿರಿವಂತರ ಕೂಟ ತಮ್ಮ ರಾಜಕೀಯ ಪ್ರಾಬಲ್ಯದಿಂದಲೇ ಕಾನೂನು ಕುಣಿಕೆಯಿಂದ ತಪ್ಪಿಸಿಕೊಳ್ಳುತ್ತಿವೆ. ಈವರೆಗೂ ಯಾವುದೇ ಸರ್ಕಾರವೂ ತಳಸ್ತರದ ಸಮಾಜವನ್ನು ಕಾಡುವ ಈ ಹಣಕಾಸು ವ್ಯವಹಾರಗಳ ಸಮೀಕ್ಷೆಯನ್ನೂ ಕೈಗೊಂಡಿಲ್ಲ.

Union Budget 2025: ಕೇಂದ್ರ ಬಜೆಟ್ ಕಂಪ್ಲೀಟ್ ಡಿಟೇಲ್ಸ್ #pratidhvani

ಬಂಡವಾಳ ಕ್ರೋಢೀಕರಣ-ಉತ್ಪಾದನೆಯಲ್ಲ

ಈ ಶತಮಾನದ ಆರಂಭದಲ್ಲಿ ತಳಸ್ತರದ ಜನರ ಜೀವನ ನಿರ್ವಹಣೆಗಾಗಿ ಕ್ರಿಯಾಶೀಲವಾಗಿ ಚಾಲ್ತಿಯಲ್ಲಿದ್ದ ಸ್ವ ಸಹಾಯ ಗುಂಪುಗಳು (SHG) , ಜಂಟಿ ಬಾಧ್ಯತಾ ಗುಂಪುಗಳು (JLG) ಮೊದಲಾದ ಜನೋಪಯೋಗಿ ಯೋಜನೆಗಳು ಈ ತಳಸ್ತರದ ಜನರ ಬೇಕುಬೇಡಗಳನ್ನು ಜವಾಬ್ದಾರಿಯುತವಾಗಿ  ಪೂರೈಸುವುದರಲ್ಲಿ ಯಶಸ್ವಿಯಾಗಿದ್ದವು. ಸಾರ್ವಜನಿಕ ಹಾಗೂ ಖಾಸಗಿ ಬ್ಯಾಂಕುಗಳೂ ಸಹ ಈ ಸಾಲ ಸೌಲಭ್ಯಗಳನ್ನು ಒದಗಿಸುವ ಮೂಲಕ, ಸಾಮಾನ್ಯ ಜನರನ್ನು ಮಾರುಕಟ್ಟೆಯ ಚಕ್ರಬಡ್ಡಿ ವಿಷವರ್ತುಲದಿಂದ ಕಾಪಾಡಲು ನೆರವಾಗಿದ್ದವು. ಆದರೆ ಭಾರತ ನವ ಉದಾರವಾದಿ ಕಾರ್ಪೊರೇಟ್‌ ಆರ್ಥಿಕತೆಗೆ ತೆರೆದುಕೊಳ್ಳುತ್ತಿರುವಂತೆ ಮಾರುಕಟ್ಟೆ ಪ್ರವೇಶಿಸಿದ ಖಾಸಗಿ ಹಣಕಾಸು ಸಂಸ್ಥೆಗಳು, ಈ ಜಾಗವನ್ನು ಆಕ್ರಮಿಸುವುದಕ್ಕೆ ನೆರವಾದದ್ದು ಯುಪಿಎ-ಎನ್‌ಡಿಎ ಸರ್ಕಾರಗಳ ಮೈಕ್ರೋಫೈನಾನ್ಸ್‌ ಕಂಪನಿಗಳ ಪರಿಕಲ್ಪನೆ.

ಮೈಕ್ರೋ ಫೈನಾನ್ಸ್‌ ಕಂಪನಿಗಳಷ್ಟೇ ಅಲ್ಲದೆ ಖಾಸಗಿ ಬ್ಯಾಂಕುಗಳೂ ಸಹ ಉತ್ಪಾದಕೀಯತೆಯನ್ನು ಆಧರಿಸಿದ, ಗ್ರಾಹಕರ ಆದಾಯವನ್ನು ಅವಲಂಬಿಸಿದ ಸಾಲ ಯೋಜನೆಗಳನ್ನು ರೂಪಿಸುವುದಿಲ್ಲ. ಸಹಜವಾಗಿಯೇ ಈ ಬೃಹತ್‌ ಸಾಲದ ಮೊತ್ತಗಳು ಅನುತ್ಪಾದಕೀಯವಾಗಿ ಬೆಳೆಯುತ್ತವೆ. ಇತ್ತ ಜನಜೀವನದ ಮಟ್ಟವನ್ನೂ ಹೆಚ್ಚಿಸದೆ ಕೇವಲ ಸಾಂಸ್ಥಿಕ ಲಾಭವನ್ನು ಹೆಚ್ಚಿಸುವ ಸಾಧನಗಳಾಗಿ ಪರಿಣಮಿಸುತ್ತವೆ. ಹಾಗಾಗಿಯೇ ಕೋಟ್ಯಂತರ ರೂಗಳು ಈ ʼ ಸಾಲದ ಮಾರುಕಟ್ಟೆ ʼಯಲ್ಲಿ ಹರಿದಾಡಿದರೂ, ಇದು ಅಂತಿಮವಾಗಿ ಬಂಡವಾಳ ಉತ್ಪಾದನೆ ಅಥವಾ ಮರುಉತ್ಪಾದನೆಗೆ (Capital Generation-Re generation) ಕಾರಣವಾಗುವುದಿಲ್ಲ. ಬದಲಾಗಿ ಕೆಲವೇ ಉದ್ಯಮಿಗಳ ಬಳಿ ಕ್ರೋಢೀಕರಣಕ್ಕೊಳಗಾಗುತ್ತದೆ (Accumulation) ̤ ಈ ಕ್ರೋಢೀಕೃತ ಬಂಡವಾಳ ರಿಯಲ್‌ ಎಸ್ಟೇಟ್‌ ಒಳಗೊಂಡಂತೆ ಮಾರುಕಟ್ಟೆಯಲ್ಲಿ ಹೂಡಿಕೆಯಾಗುತ್ತದೆಯೇ ಹೊರತು, ಉತ್ಪಾದಕತೆಯನ್ನು ಹೆಚ್ಚಿಸುವುದಿಲ್ಲ.

ಸಾಮಾನ್ಯವಾಗಿ ಅಭಿವೃದ್ಧಿಶೀಲ ದೇಶಗಳಲ್ಲಿ ತಳಸ್ತರದ ಆರ್ಥಿಕತೆಯಲ್ಲಿ ಜೀವನೋಪಾಯದ ಮಾರ್ಗಗಳು ದುರ್ಭರವಾಗಿರುವ ಜನತೆಗೆ, ನಿತ್ಯ ಬದುಕು ಸಾಗಿಸಲು ನೆರವಾಗುವ ಒಂದು ಕಲ್ಪನೆಯಾಗಿ ಮೈಕ್ರೋಫೈನಾನ್ಸ್‌ ಜನ್ಮ ತಾಳಿತ್ತು. ಬಾಂಗ್ಲಾದೇಶದ ನೊಬೆಲ್‌ ಪ್ರಶಸ್ತಿ ವಿಜೇತ ಮೊಹಮ್ಮದ್‌ ಯೂನುಸ್‌ ಈ ʼ ಕಿರು ಸಾಲ ʼಯೋಜನೆಯ ಹರಿಕಾರ ಎಂದೇ ಖ್ಯಾತಿ ಪಡೆದಿದ್ದಾರೆ. ಕಡಿಮೆ ಆದಾಯ ಇರುವ ಕುಟುಂಬಗಳಿಗೆ ಯಾವುದೇ ಭದ್ರತಾ ನಿಯಮಗಳಿಲ್ಲದೆ, ಸುಲಭ ರೀತಿಯಲ್ಲಿ ಸಾಲ ಒದಗಿಸುವ ಈ ಕಲ್ಪನೆ ಹೊಸತೇನೂ ಅಲ್ಲವಾದರೂ, 2011ರಲ್ಲಿ ಬ್ಯಾಂಕಿಂಗೇತರ ಹಣಕಾಸು ಸಂಸ್ಥೆ-ಸಣ್ಣ ಪ್ರಮಾಣದ ಹಣಕಾಸು ಸಾಲ ಸಂಸ್ಥೆ (NBFC-MFI) ಗಳು ಈ ಜವಾಬ್ದಾರಿಯನ್ನು ಸಾರ್ವಜನಿಕ ಬ್ಯಾಂಕುಗಳಿಂದ ಖಾಸಗಿ ಮಾರುಕಟ್ಟೆಗೆ ವಹಿಸುವುದರಲ್ಲಿ ನೆರವಾಯಿತು. 1970ರ ದಶಕದಲ್ಲಿ ಈ ಬ್ಯಾಂಕುಗಳು ಒದಗಿಸುತ್ತಿದ್ದ DIR (ವಾರ್ಷಿಕ 4% ಬಡ್ಡಿ) ಮತ್ತು IRDP ಸೌಲಭ್ಯಗಳು ಕಡಿಮೆ ಆದಾಯದ ಕುಟುಂಬಗಳಿಗೆ ನೆರವಾಗುತ್ತಿದ್ದವು.

ಕಾರ್ಪೋರೇಟ್‌ ಮಾರುಕಟ್ಟೆ ಆರ್ಥಿಕತೆಯಲ್ಲಿ

2016ರ ನೋಟು ಅಮಾನ್ಯೀಕರಣ ಭಾರತದ ತಳಸಮಾಜದ ಆರ್ಥಿಕ ಬೆನ್ನೆಲುಬು ಮುರಿದ ನಂತರದಲ್ಲಿ ತಮ್ಮ ಕುಟುಂಬ ನಿರ್ವಹಣೆಗೆ ಅಗತ್ಯವಾದ ಆರ್ಥಿಕ ಬುನಾದಿಯನ್ನೇ ಕಳೆದುಕೊಂಡ ಅಸಂಖ್ಯಾತ ಜನತೆಗೆ ಕೋವಿದ್‌ 19 ಮತ್ತೊಂದು ಮಾರಣಾಂತಿಕ ಪ್ರಹಾರವಾಗಿತ್ತು. ಇದೇ ಅವಧಿಯಲ್ಲಿ ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳು ಕಾರ್ಪೋರೇಟಿಕರಣಕ್ಕೊಳಗಾಗುತ್ತಿರುವಂತೆ,  ತಳಸಮಾಜದ ಖರೀದಿ ಸಾಮರ್ಥ್ಯ  (purchasing power ) ಮತ್ತು ಹಣಕಾಸು ನಮ್ಯತೆ ( Financial Flexibility) ಎರಡೂ ಕ್ಷೀಣಿಸತೊಡಗಿತ್ತು. ಪೂರೈಕೆ ಆಧಾರಿತ ಆರ್ಥಿಕ ನೀತಿಗಳು (Supply side economic policies) ತಳಸಮಾಜದಲ್ಲಿ ಜನರ ಬಳಿ ನಗದು ಕೊರತೆ ಹೆಚ್ಚಾಗುವಂತೆ ಮಾಡಿದ್ದೇ ಅಲ್ಲದೆ, ಸ್ಥಳೀಯ ಮಾರುಕಟ್ಟೆಯಲ್ಲಿ ಬೇಡಿಕೆ ಪ್ರಮಾಣವನ್ನೂ ಕಡಿಮೆ ಮಾಡತೊಡಗಿತ್ತು. ಇದರ ಮತ್ತೊಂದು ಕಾರಣವನ್ನು ಉತ್ಪಾದನಾ ವಲಯದ ಕೈಗಾರಿಕೆಗಳ (Manufacturing Sector Industries) ನಿರ್ಲಕ್ಷ್ಯದಲ್ಲಿ ಗುರುತಿಸಬಹುದು.

ತತ್ಪರಿಣಾಮವಾಗಿ ತಳಸ್ತರದ ಆರ್ಥಿಕತೆಯಲ್ಲಿ ಉದ್ಯೋಗಾವಕಾಶಗಳು ಕುಂಠಿತವಾದವು. ನಿತ್ಯ ದುಡಿಮೆಯನ್ನೇ ಆಧರಿಸಿ ಬದುಕುವ ಕೋಟ್ಯಂತರ ಕುಟುಂಬಗಳಿಗೆ ವಲಸೆ ಒಂದು ಸಾಧನವಾಯಿತು.  ಈ ವಲಸೆ ಕಾರ್ಮಿಕರ ದುರಂತ ಬದುಕಿನ ಒಂದು ಆಯಾಮವನ್ನು ಕೋವಿದ್‌ ಸಂದರ್ಭದಲ್ಲಿ ನೋಡಬಹುದಾಗಿತ್ತು. ಈ ಹಿನ್ನಡೆಗಳನ್ನು ಮತ್ತಷ್ಟು ಕಠಿಣಗೊಳಿಸುವ ರೀತಿಯಲ್ಲಿ ಕೇಂದ್ರ ಬಿಜೆಪಿ ಸರ್ಕಾರದ ಆರ್ಥಿಕ ನೀತಿಗಳೂ, ವಾರ್ಷಿಕ ಬಜೆಟ್‌ಗಳೂ ರೂಪುಗೊಂಡಿದ್ದನ್ನು ಕಳೆದ 7 ವರ್ಷಗಳಲ್ಲಿ ಗುರುತಿಸಬಹುದು. ಸಾಮಾಜಿಕ ವಲಯಗಳಿಗೆ ಬಜೆಟ್‌ನಲ್ಲಿ ಒದಗಿಸಲಾಗುವ ಹಣಕಾಸು ಸೌಲಭ್ಯಗಳು ಸತತವಾಗಿ ಕುಸಿಯುತ್ತಲೇ ಇರುವುದನ್ನು ಗಮನಿಸಬಹುದು. 2018 ರಿಂದ 2025ರ ಹಣಕಾಸು ವರ್ಷದ ಬಜೆಟ್ ಅನುದಾನವನ್ನು ಗಮನಿಸಿದಾಗ ಆರೋಗ್ಯ ವಲಯದಲ್ಲಿ ಶೇಕಡಾ 2.47 ರಿಂದ ಶೇಕಡಾ 1.85ಕ್ಕೆ,  ಗ್ರಾಮೀಣಾಭಿವೃದ್ಧಿಯಲ್ಲಿ ಶೇ. 6.3 ರಿಂದ ಶೇ. 5.1ಕ್ಕೆ, ಶಾಲಾ ಶಿಕ್ಷಣದಲ್ಲಿ ಶೇ. 2.18 ರಿಂದ ಶೇ. 1.51ಕ್ಕೆ, ಸಮಾಜ ಕಲ್ಯಾಣ ಕ್ಷೇತ್ರದಲ್ಲಿ ಶೇ.1.75 ರಿಂದ ಶೇ. 1.17ಕ್ಕೆ ಕುಸಿದಿರುವುದು ಕಂಡುಬರುತ್ತದೆ. ಕೋಷ್ಟಕ ನೋಡಿ – ದ ಹಿಂದೂ ಪತ್ರಿಕೆ 28 ಜನವರಿ 2025)

ತಳಸಮಾಜವನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವ ಹಾಗೂ ದೇಶದ ಒಟ್ಟು ಉತ್ಪಾದನೆಗೆ ಅತಿ ಹೆಚ್ಚು ಕೊಡುಗೆ ನೀಡುವ ಕೋಟ್ಯಂತರ ಶ್ರಮಿಕರನ್ನು ಪೂರೈಸುವ ಸಾಮಾಜಿಕ ವಲಯದ ಈ ನಿರ್ಲಕ್ಷ್ಯದ ಪರಿಣಾಮವನ್ನು, ಈ ಸಮಾಜದ ಖರೀದಿ ಸಾಮರ್ಥ್ಯ ಮತ್ತು ವೆಚ್ಚದ ಶಕ್ತಿಯ ಕುಸಿತದಲ್ಲಿ ಗುರುತಿಸಬಹುದು. ಈ ಆರ್ಥಿಕ ಕಾರಣಗಳೇ ತಳಸಮಾಜದ ಶ್ರಮಿಕ ವರ್ಗಗಳನ್ನು, ವಿಶೇಷವಾಗಿ ಮಹಿಳೆಯರನ್ನು ಮತ್ತು ಅನೌಪಚಾರಿಕ ದುಡಿಮೆಗಾರರನ್ನು ಖಾಸಗಿ ಲೇವಾದೇವಿ, ಮೀಟರ್‌ ಬಡ್ಡಿಯ ದಂಧೆ ಮತ್ತು ಮೈಕ್ರೋಫೈನಾನ್ಸ್‌ ಕಂಪನಿಗಳು ಕೂಪಕ್ಕೆ ದೂಡಿದೆ. ಮೂರು ಲಕ್ಷಕ್ಕೂ ಕಡಿಮೆ ಆದಾಯ ಇರುವ ಕುಟುಂಬಗಳಿಗೆ ಸುಲಭ ಸಾಲ ಒದಗಿಸುವ ಮೈಕ್ರೋಫೈನಾನ್ಸ್‌ ಕಂಪನಿಗಳ ನಿಯಂತ್ರಣಕ್ಕಾಗಿ ಆರ್‌ಬಿಐ ಹಲವು ನಿಯಮಗಳನ್ನು ರೂಪಿಸಿದೆ. ಆದರೆ 2022ರ ಆದೇಶದ ಮೂಲಕ ಈ ಕಂಪನಿಗಳು ಸಾಲಕ್ಕೆ ವಿಧಿಸುವ ಬಡ್ಡಿ ದರದ ಗರಿಷ್ಠ ಮಿತಿಯನ್ನು ತೆಗೆದುಹಾಕಿದೆ.

ಮುಂದುವರೆಯುತ್ತದೆ,,,,,,

Tags: govt action against micro finance firmsgovt plans separate bill for micro finance firmsgovt puts brake to micro finance harassmentkarnataka micro finance casesmicro financemicro finance companiesmicro finance companies torturemicro finance companymicro finance firms harassmentmicro finance newsmicro finance problemmicro finance scammicro finance torturemicro finance torture casemicro finance torture in karnataka
Previous Post

ಕಾಂಗ್ರೆಸ್ ಸೇರಲು ಸಜ್ಜಾದ….? ಶ್ರೀ ರಾಮುಲು

Next Post

ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್ ಕೇಂದ್ರ ಸರ್ಕಾರ..!

Related Posts

ಕಾಂಗ್ರೆಸ್ ಒಳಗೆ ಸೆಪ್ಟೆಂಬರ್‌ನಲ್ಲಿ ಕ್ರಾಂತಿಯಾಗಲಿದೆ..?! – ಗೃಹ ಸಚಿವ ಪರಮೇಶ್ವರ್ ಏನಂದ್ರು ..?! 
Top Story

ಕಾಂಗ್ರೆಸ್ ಒಳಗೆ ಸೆಪ್ಟೆಂಬರ್‌ನಲ್ಲಿ ಕ್ರಾಂತಿಯಾಗಲಿದೆ..?! – ಗೃಹ ಸಚಿವ ಪರಮೇಶ್ವರ್ ಏನಂದ್ರು ..?! 

by Chetan
June 27, 2025
0

ರಾಜ್ಯ ರಾಜಕಾರಣದಲ್ಲಿ ಸೆಪ್ಟೆಂಬರ್‌ನಲ್ಲಿ ಕ್ರಾಂತಿಯಾಗಲಿದೆ ಎಂಬ ಸಚಿವ ಕೆ‌. ಎನ್. ರಾಜಣ್ಣ (KN Rajanna) ಹೇಳಿಕೆ ವಿಚಾರಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಡಿಸಿಎಂ ಡಿಕೆ ಶಿವಕುಮಾರ್ (Dcm Dk...

Read moreDetails
ಕಾಂಗ್ರೆಸ್ ಸರ್ಕಾರ ಗಂಧದ ಗುಡಿಯನ್ನು ಕಸಾಯಿಖಾನೆ ಮಾಡುತ್ತಿದೆ – ಹುಲಿಗಳ ಸಾವಿಗೆ ಆರ್.ಅಶೋಕ್ ಆಕ್ರೋಶ 

ಕಾಂಗ್ರೆಸ್ ಸರ್ಕಾರ ಗಂಧದ ಗುಡಿಯನ್ನು ಕಸಾಯಿಖಾನೆ ಮಾಡುತ್ತಿದೆ – ಹುಲಿಗಳ ಸಾವಿಗೆ ಆರ್.ಅಶೋಕ್ ಆಕ್ರೋಶ 

June 27, 2025
ಮಲೆ ಮಹದೇಶ್ವರ ಬೆಟ್ಟದ ವನ್ಯಧಾಮದಲ್ಲಿ 5 ಹುಲಿಗಳ ಕಳೇಬರ ಪತ್ತೆ – ವಿಷ ಹಾಕಿ ಹುಲಿ ಕೊಂದ್ರಾ..?! 

ಮಲೆ ಮಹದೇಶ್ವರ ಬೆಟ್ಟದ ವನ್ಯಧಾಮದಲ್ಲಿ 5 ಹುಲಿಗಳ ಕಳೇಬರ ಪತ್ತೆ – ವಿಷ ಹಾಕಿ ಹುಲಿ ಕೊಂದ್ರಾ..?! 

June 27, 2025
ತಲೆಗೆ ಪೆಟ್ಟಾಗುವುದನ್ನು , ಮೆದುಳಿಗೆ ಹಾನಿಯುಂಟಾಗುವುದನ್ನು ತಪ್ಪಿಸುವ ಉದ್ದೇಶ

ತಲೆಗೆ ಪೆಟ್ಟಾಗುವುದನ್ನು , ಮೆದುಳಿಗೆ ಹಾನಿಯುಂಟಾಗುವುದನ್ನು ತಪ್ಪಿಸುವ ಉದ್ದೇಶ

June 27, 2025
ಉಕ್ಕು ಮತ್ತು ಕೈಗಾರಿಕೆ ಕ್ಷೇತ್ರದಲ್ಲಿ ಇಂಗಾಲ ಹೊರಸೂಸುವಿಕೆ ಶೂನ್ಯಕ್ಕೆ

ಉಕ್ಕು ಮತ್ತು ಕೈಗಾರಿಕೆ ಕ್ಷೇತ್ರದಲ್ಲಿ ಇಂಗಾಲ ಹೊರಸೂಸುವಿಕೆ ಶೂನ್ಯಕ್ಕೆ

June 26, 2025
Next Post

ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್ ಕೇಂದ್ರ ಸರ್ಕಾರ..!

Recent News

ಕಾಂಗ್ರೆಸ್ ಒಳಗೆ ಸೆಪ್ಟೆಂಬರ್‌ನಲ್ಲಿ ಕ್ರಾಂತಿಯಾಗಲಿದೆ..?! – ಗೃಹ ಸಚಿವ ಪರಮೇಶ್ವರ್ ಏನಂದ್ರು ..?! 
Top Story

ಕಾಂಗ್ರೆಸ್ ಒಳಗೆ ಸೆಪ್ಟೆಂಬರ್‌ನಲ್ಲಿ ಕ್ರಾಂತಿಯಾಗಲಿದೆ..?! – ಗೃಹ ಸಚಿವ ಪರಮೇಶ್ವರ್ ಏನಂದ್ರು ..?! 

by Chetan
June 27, 2025
ಕಾಂಗ್ರೆಸ್ ಸರ್ಕಾರ ಗಂಧದ ಗುಡಿಯನ್ನು ಕಸಾಯಿಖಾನೆ ಮಾಡುತ್ತಿದೆ – ಹುಲಿಗಳ ಸಾವಿಗೆ ಆರ್.ಅಶೋಕ್ ಆಕ್ರೋಶ 
Top Story

ಕಾಂಗ್ರೆಸ್ ಸರ್ಕಾರ ಗಂಧದ ಗುಡಿಯನ್ನು ಕಸಾಯಿಖಾನೆ ಮಾಡುತ್ತಿದೆ – ಹುಲಿಗಳ ಸಾವಿಗೆ ಆರ್.ಅಶೋಕ್ ಆಕ್ರೋಶ 

by Chetan
June 27, 2025
ಮಲೆ ಮಹದೇಶ್ವರ ಬೆಟ್ಟದ ವನ್ಯಧಾಮದಲ್ಲಿ 5 ಹುಲಿಗಳ ಕಳೇಬರ ಪತ್ತೆ – ವಿಷ ಹಾಕಿ ಹುಲಿ ಕೊಂದ್ರಾ..?! 
Top Story

ಮಲೆ ಮಹದೇಶ್ವರ ಬೆಟ್ಟದ ವನ್ಯಧಾಮದಲ್ಲಿ 5 ಹುಲಿಗಳ ಕಳೇಬರ ಪತ್ತೆ – ವಿಷ ಹಾಕಿ ಹುಲಿ ಕೊಂದ್ರಾ..?! 

by Chetan
June 27, 2025
ತಲೆಗೆ ಪೆಟ್ಟಾಗುವುದನ್ನು , ಮೆದುಳಿಗೆ ಹಾನಿಯುಂಟಾಗುವುದನ್ನು ತಪ್ಪಿಸುವ ಉದ್ದೇಶ
Top Story

ತಲೆಗೆ ಪೆಟ್ಟಾಗುವುದನ್ನು , ಮೆದುಳಿಗೆ ಹಾನಿಯುಂಟಾಗುವುದನ್ನು ತಪ್ಪಿಸುವ ಉದ್ದೇಶ

by ಪ್ರತಿಧ್ವನಿ
June 27, 2025
ಉಕ್ಕು ಮತ್ತು ಕೈಗಾರಿಕೆ ಕ್ಷೇತ್ರದಲ್ಲಿ ಇಂಗಾಲ ಹೊರಸೂಸುವಿಕೆ ಶೂನ್ಯಕ್ಕೆ
Top Story

ಉಕ್ಕು ಮತ್ತು ಕೈಗಾರಿಕೆ ಕ್ಷೇತ್ರದಲ್ಲಿ ಇಂಗಾಲ ಹೊರಸೂಸುವಿಕೆ ಶೂನ್ಯಕ್ಕೆ

by ಪ್ರತಿಧ್ವನಿ
June 26, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಕಾಂಗ್ರೆಸ್ ಒಳಗೆ ಸೆಪ್ಟೆಂಬರ್‌ನಲ್ಲಿ ಕ್ರಾಂತಿಯಾಗಲಿದೆ..?! – ಗೃಹ ಸಚಿವ ಪರಮೇಶ್ವರ್ ಏನಂದ್ರು ..?! 

ಕಾಂಗ್ರೆಸ್ ಒಳಗೆ ಸೆಪ್ಟೆಂಬರ್‌ನಲ್ಲಿ ಕ್ರಾಂತಿಯಾಗಲಿದೆ..?! – ಗೃಹ ಸಚಿವ ಪರಮೇಶ್ವರ್ ಏನಂದ್ರು ..?! 

June 27, 2025
ಕಾಂಗ್ರೆಸ್ ಸರ್ಕಾರ ಗಂಧದ ಗುಡಿಯನ್ನು ಕಸಾಯಿಖಾನೆ ಮಾಡುತ್ತಿದೆ – ಹುಲಿಗಳ ಸಾವಿಗೆ ಆರ್.ಅಶೋಕ್ ಆಕ್ರೋಶ 

ಕಾಂಗ್ರೆಸ್ ಸರ್ಕಾರ ಗಂಧದ ಗುಡಿಯನ್ನು ಕಸಾಯಿಖಾನೆ ಮಾಡುತ್ತಿದೆ – ಹುಲಿಗಳ ಸಾವಿಗೆ ಆರ್.ಅಶೋಕ್ ಆಕ್ರೋಶ 

June 27, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada