ದೇಶದಲ್ಲಿ ಲೋಕಸಭಾ ಚುನಾವಣೆ(Lokasabha Election) ಮುಕ್ತಾಯದ ಘಟ್ಟ ತಲುಪಿದೆ. ಜೂನ್ 1ರಂದು ನಡೆಯುವ ಮತದಾನಕ್ಕೆ ಇಂದು ಬಹಿರಂಗ ಪ್ರಚಾರಕ್ಕೆ ಕಡೇ ದಿನ. ಇಂದು ಸಂಜೆ ದೇಶಾದ್ಯಂತ ಲೋಕಸಭೆ ಚುನಾವಣೆ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ. ಇಂದಿನ ಪ್ರಚಾರ ಮುಗಿಸಿ ಪ್ರಧಾನಿ ನರೇಂದ್ರ ಮೋದಿ(Narendra Modi) ಕನ್ಯಾಕುಮಾರಿಯಲ್ಲಿ 3 ದಿನ ಧ್ಯಾನ ಮಾಡುವ ಕಾರ್ಯಕ್ರಮಕ್ಕೆ ಹೊರಡಲಿದ್ದಾರೆ. ಈ ನಡುವೆ ಪ್ರಧಾನಿ ಮೌನ ವ್ರತ ಮಾಡ್ತಿರೋದು ನೀತಿ ಸಂಹಿತೆ ಉಲ್ಲಂಘನೆ ಎಂದಿರುವ ಕಾಂಗ್ರೆಸ್ ನೇತೃತ್ವದ INDIA ಒಕ್ಕೂಟ ಚುನಾವಣಾ ಆಯೋಗದ ಮೊರೆ ಹೋಗಿದೆ..

ಬರೋಬ್ಬರಿ 2 ತಿಂಗಳ ಕಾಲ ನಡೆದ ಚುನಾವಣಾ ಸಮರದಲ್ಲಿ ಇಂದು ಬಹಿರಂಗ ಪ್ರಚಾರಕ್ಕೆ ತೆರೆ ಬೀಳುತ್ತಿದೆ. ಇಡೀ ದೇಶದಲ್ಲಿ ಲೋಕಸಭೆ ಚುನಾವಣೆ ಅಬ್ಬರ.. ಘಟಾನುಘಟಿ ನಾಯಕರು(Leaders) ಜನರ ಮನಸ್ಸು ಗೆಲ್ಲಲು ಮಾಡಿದ ಪ್ರಚಾರದ ವೈಖರಿ, ಸಾಕಷ್ಟು ಗಮನ ಸೆಳೆದಿತ್ತು. ಇದೀಗ ಎಲ್ಲಾ ನಾಯಕರು ಸಾರ್ವಜನಿಕ ಪ್ರಚಾರ ಮುಗಿಸಿ ವಿಶ್ರಾಂತಿಗೆ ತೆರಳುವ ವೇಳೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕನ್ಯಾಕುಮಾರಿಯಲ್ಲಿ(Kanyakumari) ವಾಸ್ತವ್ಯ ಹೂಡ್ತಿದ್ದು ಜೂನ್ ಒಂದರ ತನಕ ಧ್ಯಾನಕ್ಕೆ ಶರಣಾಗ್ತಿದ್ದಾರೆ. ಮತದಾನದ ಕೊನೇ ಹಂತ ಮುಗಿಯೋವರೆಗೂ ಪ್ರಧಾನಿ ನರೇಂದ್ರ ಮೋದಿ ಧ್ಯಾನ ಮಾಡಲಿದ್ದಾರೆ. ತಮಿಳುನಾಡಿನ(Tamilnadu) ಕನ್ಯಾಕುಮಾರಿಯ ವಿವೇಕಾನಂದ ರಾಕ್ ಸ್ಮಾರಕದ ಧ್ಯಾನ ಮಂಟಪದಲ್ಲಿ ಹಗಲು ರಾತ್ರಿ ಧ್ಯಾನ ಮಾಡಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಧ್ಯಾನ ಮಾಡುವ ಸ್ಥಳದಲ್ಲಿ ಈಗಾಗಲೇ 2 ಸಾವಿರ ಭದ್ರತಾ ಸಿಬ್ಬಂದಿ, ಎಸ್ಪಿಜಿ(SPG), ಎನ್ಎಸ್ಜಿ ಪಡೆಗಳನ್ನೂ ನಿಯೋಜನೆ ಮಾಡಲಾಗಿದೆ. ಪ್ರವಾಸಿಗರನ್ನು ನಿಷೇಧ ಮಾಡಲಾಗಿದೆ. ಚುನಾವಣಾ ಬಹಿರಂಗ ಪ್ರಚಾರ ಅಂತ್ಯವಾದ ಬಳಿಕ ನರೇಂದ್ರ ಮೋದಿ ಧ್ಯಾನಕ್ಕೆ ತೆರಳ್ತಿರೋದು ಕೂಡ ಪ್ರಚಾರ ಎಂದು ಕಾಂಗ್ರೆಸ್(Congress) ಆರೋಪ ಮಾಡಿದೆ. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆಗಿದ್ದು, ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯ ಮಾಡಿದೆ. ಪ್ರಧಾನಿ ಚುನಾವಣಾ ಪ್ರಚಾರಕ್ಕಾಗಿಯೇ ಧ್ಯಾನ ಮಾಡ್ತಿದ್ದಾರೆ ಎಂದು ಚುನಾವಣಾ ಆಯೋಗಕ್ಕೂ ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟದ ನಾಯಕರು ದೂರು ನೀಡಿದ್ದಾರೆ.

ಈ ಬಗ್ಗೆ ಎಐಸಿಸಿ(APCC) ನಾಯಕ ಅಭಿಷೇಕ್ ಮನುಸಿಂಘ್ವಿ ಮಾತನಾಡಿ, ಮೇ 30ರ ಸಂಜೆಯಿಂದ ಮೋದಿ ಮೌನವ್ರತ ಘೋಷಿಸಿದ್ದಾರೆ. ಮೌನ ಅವಧಿಯಲ್ಲಿ ಪ್ರತ್ಯಕ್ಷ ಹಾಗು ಪರೋಕ್ಷವಾಗಿ ಪ್ರಚಾರ ಮಾಡುವಂತಿಲ್ಲ. ಇದು ಮಾದರಿ ನೀತಿ ಸಂಹಿತೆ ಉಲ್ಲಂಘನೆ ಎಂಬುದು ಗೊತ್ತಿದೆ. ಅದಕ್ಕೆ ಕ್ರಮ ಕೈಗೊಳ್ಳಬೇಕು ಅಂತ ಆಯೋಗಕ್ಕೆ ದೂರು ಕೊಟ್ಟಿದ್ದೇವೆ. ಬಿಜೆಪಿಯ ಅಧಿಕೃತ ಸಾಮಾಜಿಕ ಮಾಧ್ಯಮಗಳನ್ನ ನಿಷೇಧಿಸಬೇಕು ಎಂದಿದ್ದಾರೆ. ಇನ್ನು ಧ್ಯಾನಕ್ಕೆ(Meditation) ಹೋಗುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಕ್ಯಾಮೆರಾಗಳು(Camera) ಯಾಕೆ ಬೇಕು..? ಮೌನವ್ರತ ಆಚರಿಸೋ ಮೋದಿಯವರಿಗೆ ಪ್ರಚಾರ ಯಾಕೆ ಬೇಕು ಅಂತಾನೂ ಮಮತಾ ಬ್ಯಾನರ್ಜಿ(Banerji) ಪ್ರಶ್ನೆ ಮಾಡಿದ್ದಾರೆ.
ಎಐಸಿಸಿ ನಾಯಕ ರಾಹುಲ್ ಗಾಂಧಿ ಮಾತನಾಡಿ, ಇಂದು ಸಂವಿಧಾನ ಉಳಿಸುವ ಹೋರಾಟ ನಡೆಯುತ್ತಿದೆ. ಒಂದು ಕಡೆ ಸಂವಿಧಾನವನ್ನು ರಕ್ಷಿಸುವ ಭಾರತದ ಮೈತ್ರಿ ಇದೆ. ಮತ್ತೊಂದೆಡೆ, ಬಿಜೆಪಿ-RSS ಸಂವಿಧಾನ ರದ್ದು ಬಯಸುತ್ತಿವೆ. ಇಲ್ಲಿನ ಧರ್ಮ, ಜಾತಿಗೆ ಗೌರವ ಸಿಕ್ಕರೆ ಅದಕ್ಕೆ ಸಂವಿಧಾನ ಕಾರಣ ಎಂದಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ನರೇಂದ್ರ ಮೋದಿ ಕಪ್ಪುಹಣ ವಾಪಸ್ ತರುತ್ತೇವೆ. ಎಲ್ಲರಿಗೂ 15-15 ಲಕ್ಷ ರೂಪಾಯಿ ಕೊಟ್ಟು ಬಿಡ್ತೀನಿ ಎಂದಿದ್ದರು. ಯುವಕರಿಗೆ 2 ಕೋಟಿ ಉದ್ಯೋಗ (Employment) ಒದಗಿಸುತ್ತೇವೆ. ರೈತರ ಆದಾಯವನ್ನು ದ್ವಿಗುಣಗೊಳಿಸುತ್ತೇನೆ ಎಂದಿದ್ದರು. ಆದರೆ ಮೋದಿ ಹಾಗೆ ಏನನ್ನೂ ಮಾಡಲಿಲ್ಲ. ಯಾಕಂದ್ರೆ ನರೇಂದ್ರ ಮೋದಿ ‘ಸುಳ್ಳಿನ ಪ್ರಭು’ ಎಂದಿದ್ದಾರೆ.