ಮಹಿಷಾ ದಸರಾ (Mahisha dasara) ಆಚರಣಾ ಸಮತಿಯಿಂದ ಇಂದು ಮಹಿಷ ಮಂಡಲೋತ್ಸವ ಕಾರ್ಯಕ್ರಮ ನಡೆಯಲಿದೆ. ಕಳೆದ ವರ್ಷ ಮಹಿಷಾ ದಸರಾ ಆಚರಣೆ ಸಾಕಷ್ಟು ಹೈಡ್ರಾಮಾಗೆ ಕಾರಣವಾಗಿತ್ತು. ಹೀಗಾಗಿ ಈ ವರ್ಷ ಅಲರ್ಟ್ ಆಗಿರೋ ಜಿಲ್ಲಾಡಳಿತ ನಿಶೇಧಾಜ್ಞೆ ಜಾರಿ ಮಾಡಿದೆ. ಮಹಿಷಾ ದಸರಾಗೂ ಪರ್ಮಿಷನ್ ಕೊಡದ ಜಿಲ್ಲಾಡಳಿತ ಕೇಲವ ಮಂಡಲೋತ್ಸವಕ್ಕೆ ಮಾತ್ರ ಅವಕಾಶ ಮಾಡಿಕೊಟ್ಟಿದೆ.
ಇಂದು ಮಹಿಷ ಮಂಡಲ ಉತ್ಸವ ಹಿನ್ನೆಲೆ ಮೈಸೂರು ಜಿಲ್ಲಾಡಳಿತ (Mysuru district administration) ನಿಷೇಧಾಜ್ಞೆ ಜಾರಿ ಮಾಡಿದ್ದು ಮಾಜಿ ಸಂಸದ ಪ್ರತಾಪ್ ಸಿಂಹ (Prathap simha) ಚಾಮುಂಡಿ ಚಲೋ ಕೈ ಬಿಟ್ಟಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು ಜಿಲ್ಲಾಡಳಿತದ ಮೇಲೆ ನಂಬಿಕೆ ಇಟ್ಟು ಚಾಮುಂಡಿ ಚಲೋ ಕೈ ಬಿಟ್ಟಿದ್ದೇವೆ. ಇಂದು ಏನಾದರೂ ಚಾಮುಂಡಿ ಬೆಟ್ಟದಲ್ಲಿನ (chamundi hill) ಮಹಿಷ ಮೂರ್ತಿಗೆ ಪುಷ್ಪಾರ್ಚನೆ ನಡೆದರೆ ನಾವು ಸುಮ್ಮನೆ ಇರುವುದಿಲ್ಲ. ದಸರಾ ದಿನ ಪ್ರತಿಭಟಿಸುವುದಾಗಿ ಖಡಕ್ ಎಚ್ಚರಿಕೆ ನೀಡಿದ್ರು.
ಒಂದೊಡೆ ಮಹಿಷ ಮಂಡಲೋತ್ಸವಕ್ಕೆ ಅನುಮತಿ ಕೊಟ್ಟಿರೋ ಜಿಲ್ಲಾಡಳಿತ, ಮತ್ತೊಂಡೆ ಮಹಿಷ ಪ್ರತಿಮೆ ಕಾಣದಂತೆ ಕ್ಲೋಸ್ ಮಾಡಿದೆ. ಮಹಿಷಾ ದಸರಾ ಆಚರಣ ಸಮಿತಿ ಮಹಿಷ ಪ್ರತಿಮೆಗೆ ಪುಷ್ಪಾರ್ಚನೆ ನಡೆಸಲು ಪ್ಲಾನ್ ಮಾಡಿತ್ತು. ಪುಷ್ಪಾರ್ಚನೆ ಮಾಡಿದ್ರೆ ಹೋರಾಟ ಮಾಡ್ತೀವಿ ಅಂತ ಪ್ರತಾಪ್ ಸಿಂಹ ಗುಡುಗಿದ್ದು. ಈ ಹಿನ್ನೆಲೆ ಪ್ರತಿಮೆ ಕಾಣದಂತೆ ಟಾರ್ಪಾಲ್ ಮೂಲಕ ಮುಚ್ಚಲಾಗಿದೆ. ಪ್ರತಿಮೆ ಸುತ್ತಲೂ ಬ್ಯಾರಿಕೇಡ್ ಅಳವಡಿಸಿ ಸ್ಥಳದಲ್ಲಿ ನೂರಾರು ಪೊಲೀಸ್ ಸಿಬ್ಬಂದಿಯನ್ನ ನಿಯೋಜಿಸಲಾಗಿದೆ.