ಬಿಜೆಪಿ ಪಕ್ಷದಿಂದ ಬಿಡಿಸಲು ಕಿರುಕುಳ ನೀಡಲಾಗುತ್ತಿದೆ ಎಂದು ಶಾಸಕ ರಾಮದಾಸ್ ಹೇಳಿಕೆ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಸಂಸದ ಪ್ರತಾಪ್ ಸಿಂಹ ಟಿಪ್ಪು ಅನುಯಾಯಿಗಳಿಗೆ ಕಿರುಕುಳ ಆಗಬೇಕೆ ಹೊರತು ಶಿವಾಜಿ ಮಹಾರಾಜರ ಅನುಯಾಯಿಗಳಿಗಲ್ಲ ಎಂದಿದ್ದಾರೆ.
ರಾಮದಾಸ್ 29 ವರ್ಷಗಳ ಹಿಂದೆನೇ ಶಾಸಕರಾದವರು ಮೋದಿಜೀ ಅವರಿಂದಲೇ ಮೆಚ್ಚುಗೆ ಪಡೆದುಕೊಂಡವರು ಅವರಿಗೆ ಕಿರುಕುಳ ಕೊಡುವಷ್ಟು ದೊಡ್ಡವನಲ್ಲ ಅಮೇಲೆ ಮೈಸೂರಿನಲ್ಲಿ ಬಹಳಷ್ಟು ಜನ ರಾಜಕಾರಣಿಗಳು ಯಾರು ಇದಾರೆ ಅವರು ಮಾಡಿರುವಂತ ದುಡ್ಡಿನಲ್ಲೇ ನನ್ನ ಸುಟ್ಟಾಕುವಂತ ಶಕ್ತಿ ಅವರಿಗಿದೆ ಅವರಿಗೆ ಕಿರುಕುಳ ಕೊಡುವಷ್ಟು ದೊಡ್ಡ ವ್ಯಕ್ತಿ ನಾನಲ್ಲ ಎಂದು ಹೇಳಿದ್ದಾರೆ.

ಅವರು ಯಾವ ಕಾರಣಕ್ಕಾಗಿ ಹೇಳಿದ್ದಾರೋ ಗೊತ್ತಿಲ್ಲ ಅದಕ್ಕೆ ಸಮರ್ಥನೆ ಕೊಡಲಿಕ್ಕೆ ಸಾಧ್ಯವಿಲ್ಲ ಬಹುಶಃ ಅವರನ್ನೇ ಕೇಳಿಕೊಳ್ಳಿ ಇನ್ನೂ 10,15 ಬಸ್ ನಿಲ್ದಾಣ ಕಟ್ಟಲಿ ಆದರೆ ಮೂಲ ವಿನ್ಯಾಸಕ್ಕನುಗುಣವಾಗಿ ಕಟ್ಟಲಿ ನನ್ನದೇನು ತಕರಾರಿಲ್ಲ ಎಂದು ತಿಳಿಸಿದ್ದಾರೆ.
ಇಲ್ಲಿನ ಎಲ್ಲಾ ಅಭಿವೃದ್ಧಿ ಜೋತಕಗಳೂ ಕೂಡ ಮಹಾರಾಜರ ಹೆಸರಲ್ಲಿವೆ ಅದು ಮಹಾರಾಜರ ಪರಂಪರೆಗೆ ಪೂರಕವಾಗಿರಬೇಕು ಗುಂಬಜ್ಗೂ, ಇಂಡೋ ಸಾರ್ಸೆನಿಕ್ ಕಲೆಗೂ ತುಂಬ ವ್ಯಾತ್ಯಾಸವಿದೆ ಅದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.