ಬೆಂಗಳೂರು : ಮಾ.21: ಸ್ಯಾಂಡಲ್ವುಡ್ನಲ್ಲಿ ಮತ್ತೊಂದು ಹೊಸಬರ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ದತ್ತಾತ್ರೇಯ ನಿರ್ದೇಶನದ ʻಪ್ರಣಯಂʼ ಚಿತ್ರ ರಿಲೀಸ್ಗೆ ರೆಡಿಯಾಗಿದ್ದು, ಈಗಾಗಲೇ ಈ ಸಿನಿಮಾದ ಟೀಸರ್ ಕೂಡ ಬಿಡುಗಡೆಯಾಗಿದೆ. ಇಂದು ಬೆಂಗಳೂರಿನ ಮಲ್ವೇಶ್ವರಂ ಬಳಿ ಇರುವ ರೇಣುಕಾಂಬ ಚಿತ್ರಮಂದಿರದಲ್ಲಿ ʻಪ್ರಣಯಂʼ ಚಿತ್ರದ ಲಿರಿಕಲ್ ಸಾಂಗ್ಅನ್ನ ಬಿಡುಗಡೆ ಮಾಡಲಾಯ್ತು. ʻಪ್ರಣಯಂʼ ಸಿನಿಮಾದಲ್ಲಿ ರಾಜವರ್ಧನ್ ನಾಯಕನಾಗಿ ಕಾಣಿಸಿಕೊಂಡಿದ್ದು, ನೈನಾ ಗಂಗೂಲಿ ರಾಜವರ್ಧನ್ಗೆ ಜೋಡಿಯಾಗಿದ್ದಾರೆ.
ಇನ್ನು ಈ ಚಿತ್ರಕ್ಕೆ ನಿರ್ದೇಶಕ ದತ್ತಾತ್ರೇಯ ಆಕ್ಷನ್ ಕಟ್ ಹೇಳಿದ್ದು, ಪರಮೇಶ್ ಪ್ರಣಯಂ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಇಂದು ಪ್ರಣಯಂ ಸಿನಿಮಾದ ʼಮಳೆಗಾಲ ಬಂತು ಸನಿಹʼ ಎಂಬ ಲಿರಿಕಲ್ ಗೀತೆಯನ್ನ ಬಿಡುಗಡೆ ಮಾಡಲಾಯ್ತು. ಅಶ್ವಿನಿ ಪುನೀತ್ ರಾಜ್ಕುಮಾರ್ರವರು ಕಾರ್ಯಕ್ರಮಕ್ಕೆ ಆಗಮಿಸಿ, ಆಡಿಯೋ ಲಾಂಚ್ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭಕೋರಿದ್ರು. ʼಮಳೆಗಾಲ ಬಂತು ಸನಿಹʼ ಗೀತೆಗೆ ಜಯಂತ್ ಕಾಯ್ಕಿಣಿ ಸಾಹಿತ್ಯ ಬರೆದಿದ್ದು, ಮನುಮೂರ್ತಿ ಸಂಗೀತ ನಿರ್ದೇಶನ ಮಾಡಿದ್ದಾರೆ. ಗಾಯಕ ಸೋನು ನಿಗಮ್ ಈ ಹಾಡಿಗೆ ಧ್ವನಿಯಾಗಿದ್ದಾರೆ. ಇನ್ನು ಕಾರ್ಯಕ್ರಮದಲ್ಲಿ ಅಶ್ವಿನಿ ಪುನೀತ್ರಾಜ್ಕುಮಾರ್, ನಿರ್ಮಾಪಕ ಪರಮೇಶ್, ನಿರ್ದೇಶಕ ದತ್ತಾತ್ರೇಯ, ಜಯಂತ್ ಕಾಯ್ಕಿಣಿ, ಹಾಗೂ ಮುಂತಾದವರು ಭಾಗಿಯಾಗಿದ್ರು.