ದೀಪಾವಳಿ ಹಬ್ಬದ ಒಳಗೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಉರುಳಿ ಹೋಗುತ್ತೆ ಎಂಬ ಸಿಟಿ ರವಿ ಹೇಳಿಕೆಗೆ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಕೌಂಟರ್ ಕೊಟ್ಟಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಪ್ರದೀಪ್ ಈಶ್ವರ್, ಮುಂದಿನ 10 ರಿಂದ 20 ವರ್ಷ ಪ್ರತಿ ದೀಪಾವಳಿಗೆ ಕಾಂಗ್ರೆಸ್ನವರೇ ಪಟಾಕಿ ಹೊಡಿಯೋದು ಎಂದಿದ್ದಾರೆ.
ಮೊದಲು ಬಿಜೆಪಿಯವರು ಇಂತಹ ಹೇಳಿಕೆ ಕೊಡೋದು ನಿಲ್ಲಿಸಿ ಅಂತ ಸಿಟಿ ರವಿಗೆ ಹೇಳಲು ಬಯಸುತ್ತೇನೆ. ಸರ್ಕಾರವನ್ನ ಯಾವುದೇ ಕಾರಣಕ್ಕೂ ಯಾರಿಂದಲೂ ಅಲುಗಾಡಿಸಲು ಸಾಧ್ಯವಿಲ್ಲ. ಕೇಂದ್ರ ಬಿಜೆಪಿಯವರು ತಲೆಕೆಡಿಸಿಕೊಂಡು ಏನೇನೋ ಷಡ್ಯಂತರ ಮಾಡ್ತಿದ್ದಾರೆ ಎಂದು ಪ್ರದೀಪ್ ಆರೋಪಿಸಿದ್ದಾರೆ.
ಈ ರೀತಿಯ ಯಾವ ಕುತಂತ್ರಗಳಿಗೂ ನಮ್ಮ ಶಾಸಕರು ಬಲಿಯಾಗಲ್ಲ, ಕೇವಲ ಈ ಐದು ವರ್ಷ ಮಾತ್ರವಲ್ಲ, ಮೊಂದಿನ 10-20 ವರ್ಷಗಳಿಗೆ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುತ್ತೆ ಎಮದು ಹೇಳಿದ್ದಾರೆ